ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

'ಬಡಗನಾಡು ಸಂಘ,' ಶೇಶಾದ್ರಿಪುರಂ, ಬೆಂಗಳೂರು, ತನ್ನ '[[ವಜ್ರಮಹೋತ್ಸವ]],' ವನ್ನು ಆಚರಿಸಿಕೊಳ್ಳುತ್ತಿದೆ !

June 5, 2008 - 6:56am — venkatesh
Jul 6 2008 - 7:11am
Asia/Calcutta

ಸಾವಿರಾರು ವಿದ್ಯಾರ್ಥಿಗಳಿಗೆ, ವಸತಿ-ಊಟಗಳ ಸೌಕರ್ಯವನ್ನು ಅತ್ಯಂತ ಕಡಿಮೆಬೆಲೆಯಲ್ಲಿ, ನೀಡುತ್ತಾ ಬಂದಿರುವ, ಬಡಗನಾಡು ಸಂಘ, ದ ಸ್ಥಾಪನೆಯಾದದ್ದು, ೧೯೪೩ ರಲ್ಲಿ. ದಕ್ಷಿಣಬೆಂಗಳೂರಿನ, ಬಸವನಗುಡಿಯ ಯಲ್ಲಿರುವ, ಬೆಣ್ಣೆಗೋವಿಂದಪ್ಪನವರಛತ್ರ , ದಲ್ಲಿ ಬಡಗನಾಡುಸಂಘವು ಪ್ರಾರಂಭವಾಯಿತು. ಅಂದಿನ ಮೈಸೂರಿನ ಅರಸರಾಗಿದ್ದ, ಶ್ರೀ. ಜಯಚಾಮರಾಜೆಂದ್ರ ಒಡೆಯರ್, ರವರಿಂದ ಸ್ಥಳವನ್ನು ಪಡೆದು, ಹಾಲಿ ಇರುವ 'ಕುಮಾರಾಪಾರ್ಕ್' ಸ್ಥಳದಲ್ಲಿ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಲಾಯಿತು. ಇದೆಲ್ಲದರ ಹಿಂದೆ ಬಡಗನಾಡು ಜನಾಂಗದ ಹಿರಿಯರ ದೂರದೃಷ್ಟಿ ಮತ್ತು ಮುಂದಲೋಚನೆಯೇ ಪ್ರಮುಖವಾಗಿದೆ. ಗ್ರಾಮೀಣಭಾಗದ ವಿಧ್ಯಾರ್ಥಿಗಳಿಗೆ ಬೆಂಗಳೂರಿನಂಥ ಮಹಾನಗರಲ್ಲಿ ವ್ಯಾಸಂಗಮಾಡಲು ಅನುಕೂಲತೆಗಳನ್ನು ಕಲ್ಪಿಸುವುದೇ ಅವರ ಗುರಿಯಾಗಿತ್ತು.

ಬಡಗನಾಡುಸಂಘ ಮೊದಲಿನಿಂದಲೂ ವಿದ್ಯಾರ್ಥಿಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು, ಅವರ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಟ್ಟು, ಮನೆಯಿಂದ ದೂರದಲ್ಲಿ ಓದುತ್ತಿರುವ ಮಕ್ಕಳಿಗೆ, ಮಾನಸಿಕ ತೊಳಲಾಟ ಬರದಂತೆ ನೋಡಿಕೊಳ್ಳುತ್ತಾ ಬಂದಿದೆ. ಈಗ, ಜಾಗದ ಕೊರತೆಯಿಂದಾಗಿ ಹೊರಾಂಗಣದ ಆಟದ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. (ಎರಡು ದಶಕಗಳ ಹಿಂದೆ, ವಾಲೀಬಾಲ್ ಮುಂತಾದ ಆಟಗಳನ್ನು ವಿದ್ಯಾರ್ಥಿಗಳು ಅಂಘದ ಮೈದಾನದಲ್ಲಿ ಆಡುತ್ತಿದ್ದರು. ಆಗ ಹೆಚ್ಚಿಗೆ ಕಟ್ಟಡಗಳು ಇನ್ನೂ ಬಂದಿರಲಿಲ್ಲ. ಈಗ, ಸಂಘದ ಒಳಾಂಗಣದ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹವನ್ನು ಕೊಡಲಾಗಿದೆ. ಬಡಗನಾಡು ಸಂಘವು ಒಳ್ಳೆಯ ಪುಸ್ತಕ-ಭಂಡಾರ ಇತ್ಯಾದಿಗಳನ್ನು ಹೊಂದಿದೆ.

ಮಲ್ಲೇಶ್ವರ ಬಡಾವಣೆಯಲ್ಲಿ, ’ಬಡಗನಾಡು ಭವನ”, ದ ಸ್ಥಾಪನೆ :

ಒಂದು ದಶಕದ ಹಿಂದೆ, ಮಲ್ಲೇಶ್ವರ ಬಡಾವಣೆಯಲ್ಲಿ ದಾನವಾಗಿ ಬಂದ ಜಾಗದಲ್ಲಿ 'ಬಡಗನಾಡು ಭವನ' ನಿರ್ಮಿಸಿ ಬಡಗನಾಡು ಬಾಂಧವರಿಗೆ ರಿಯಾಯಿತಿ ದರದಲ್ಲಿ ಶುಭಸಮಾರಂಭಗಳಿಗೆ ಬಾಡಿಗೆ ಕೊಡುವ ಮೂಲಕ ಮತ್ತೊಂದು ಸಾಧನೆಯ ಗರಿಯನ್ನು ಸಂಘ ತನ್ನ ಮುಡಿಗೇರಿಸಿಕೊಂಡಿದೆ.

ಬಡಗನಾಡು ಸಂಘದ ಮುಂದಿರುವಹಲವು ಯೋಜನೆಗಳು :

* ಕುಮಾರಪಾರ್ಕನಲ್ಲಿರುವ ಕಟ್ಟಡದ ಅಭಿವೃದ್ಧಿ,

* ಹೆಚ್ಚುಹೆಚ್ಚು ವಿದ್ಯಾರ್ಥಿಗಳಿಗೆ ಸ್ಥಳಾವಕಾಶ,

* 'ವಿದ್ಯಾರ್ಥಿನಿಯರ ವಸತಿ-ನಿಲಯ' ದ ಸ್ಥಾಪನೆ.

* ವೃದ್ಧಾಶ್ರಮ, ಹಾಗೂ

* ಸದಸ್ಯರ ಕಲ್ಯಾಣ ನಿಧಿ ಸ್ಥಾಪನೆ, ಮುಂತಾದವುಗಳು.

ಒಟ್ಟಿನಲ್ಲಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಾ ಬೆಳೆಯುತ್ತಾ ಸಾಗುವ ಪ್ರಕ್ರಿಯೆ ಎಲ್ಲರಿಗೂ ಮಾದರಿಯಾಗಿರುವಂತಿರಬೇಕಾಗಿದೆ.
ವಜ್ರಮಹೋತ್ಸವದ ವಿಶೇಷತೆಗಳು :

** ಜುಲೈ, ೬, ಮತ್ತು ೭ ರಂದು ವಜ್ರಮಹೋತ್ಸವದ ವಿಧಿಗಳು ವಿಜೃಂಭಣೆಯಿಂದ ನೆರೆವೇರಿಸಲು ಎಲ್ಲಾ ಏರ್ಪಾಟುಗಳನ್ನೂ ಮಾಡಿಕೊಳ್ಳಲಾಗಿದೆ. ವಜ್ರಮಹೋತ್ಸವ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ನೆರೆವೇರಿಸಲು, ಹಲವಾರು ಕಾರ್ಯಕಾರಿ-ಸಮಿತಿಗಳನು ದಾಖಲಿಸಲಾಗಿದೆ. ಜುಲೈ ೬ ನೇ ತಾರೀಖಿನಂದು ಬಡಗನಾಡು ಭಾನದಲ್ಲಿ, ಸ್ವಾಮಿಗಳ ಸಮ್ಮುಖದಲ್ಲಿ ಹೋಮ, ಹವನಾದಿಗಳು, ಆಶೀರ್ವಚನ, ಸಾಮೂಹಿಕ ಭೋಜನ, ಸಂಜೆ ಪ್ರತಿಭಾಪುರಸ್ಕಾರ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

** ಜುಲೈ, ೭ ರಂದು, ಸಂಜೆ, " ಚೌಡಯ್ಯ ಮೆಮೋರಿಯಲ್ ಹಾಲ್," ವೈಯಾಲಿಕಾವಲ್, ಸಭಾಂಗಣದಲ್ಲಿ ಬಡಗನಾಡು ಸಾಧಕರಿಗೆ ಸನ್ಮಾನ, ವಜ್ರಮಹೋತ್ಸವ ಸಮಾರೋಪ ಸಮಾರಂಭ ; ’ವಜ್ರಪಥ ”, ಸ್ಮರಣ ಸಂಚಿಕೆಯ ಬಿಡುಗಡೆ ಹಾಗೂ ಸಾಸ್ಕೃತಿ ಕಾರ್ಯಕ್ರಮಗಳಿವೆ. ಈ ವಿಶೇಷ ಸಂಚಿಕೆಯಲ್ಲಿ ಸಮಾಜಕ್ಕೆ ಉಪಯುಕ್ತವಾಗುವಂತಹ ಅನೇಕ ಲೇಖನಗಳನ್ನು ಕವಿತೆಗಳನ್ನೂ, ಸಂಘಕ್ಕೆ ಶ್ರಮಿಸಿದ ಹಿರಿಯರ ಬಗ್ಗೆ, 'ನೆನೆಪಿನ ಸರಮಾಲೆ,' ಮುಂತಾದವುಗಳನ್ನು ಸಂಪಾದಿಸಿ, ರಚಿಸಲಾಗಿದೆ.

ಎಲ್ಲರಿಗೂ ಆದರದ ಸ್ವಾಗತ.

~.~
  • 222 hits
  • Calendar
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈಶ್ವರಚಂದ್ರರ ಸಾಹಿತ್ಯ ಸೇವೆ
  • ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
  • ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
  • 'ಕರ್ಣಾಟಕ ಭಾಗವತ’ ದ ’ವಿಶ್ವಾರ್ಪಣಾ ಸಮಾರಂಭ,” ಮೈಸೂರು ನಗರದಲ್ಲಿ. ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ !
  • ಮುಂಬೈವಿಶ್ವವಿದ್ಯಾಲಯದಲ್ಲಿ ವಸ್ತುಪ್ರದರ್ಶನ- ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳ ೧೫೦ ವರ್ಷಗಳ ಸುಮಧುರ ಕ್ಷಣಗಳ ಸವಿನೆನಪು !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anamadheya
    ಉ: ....ಬಾರದು ಎಂದುಕೊಂಡರೆ!
    August 21, 2008 - 5:40pm
  • Sunil Jayaprakash
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 5:33pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • madhava_hs
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • kannadakanda
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:50pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:45pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:30pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:27pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:23pm
ಇನ್ನಷ್ಟು


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator