ಆಯ್ದ ಲೇಖನಗಳು
|
ಲೇಖಕರು: hema hebbagodi
May 19, 2013
2
184
“ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರುವ ವಸುಧೇಂದ್ರ ನಮ್ಮ ನಡುವಿನ ಮುಖ್ಯ ಕತೆಗಾರ. ಈ ಸಂಕಲನದ ಕತೆಗಳಲ್ಲಿ ಸಾಫ್ಟ್ವೇರ್ ಲೋಕದ ತಲ್ಲಣಗಳು, ಜಾಗತೀಕರಣದ ಪ್ರಭಾವಗಳು ಹೇಗೆ ಬದುಕನ್ನು ಆವರಿಸಿವೆ ಎಂಬುದನ್ನು ಕಟ್ಟಿಕೊಡುತ್ತಾರೆ. ಮೊದಲ ಕತೆ ‘ಚೇಳು’ ವೆಂಕಮ್ಮ ಎಂಬ ಹೆಣ್ಣೊಬ್ಬಳ ಬದುಕಿನ ಪಲ್ಲಟಗಳನ್ನು, ಪಾರಂಪರಿಕ ಜ್ಞಾನಗಳು ಜಾಗತೀಕರಣದ ಭರಾಟೆಯಲ್ಲಿ ಮೂಲೆಗುಂಪಾಗುವುದನ್ನು ಹೇಳುತ್ತವೆ. ಮದುವೆಯಾಗಿ ಕೆಲ ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಅವಳ ಗಂಡ ಕೋಮಣ್ಣ ಹೇಳಿದ, ಮಾಡಿಸಿದ ವ್ರತ,ಪೂಜೆಗಳನ್ನೆಲ್ಲ ಮಾಡಿದರೂ ಪ್ರಯೋಜನವಾಗುವುದಿಲ್ಲ. ಕಡೆಗೆ ತನ್ನೂರಿಗೆ ಬಂದ ಭೈರಾಗಿಯೊಬ್ಬನನ್ನು ಕೋಮಣ್ಣ ತನ್ನ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳುತ್ತಾನೆ. ಮೊದಲಿಗೆ... |
ಲೇಖಕರು: nageshamysore
May 18, 2013
8
291
ಕನ್ನಡ ಸಾಹಿತ್ಯದ ಮಟ್ಟಿಗೆ ಗಮನಾರ್ಹವಾದ ವಿಶೇಷ ಕೆಲಸವೊಂದನ್ನು ಈ ಪುಸ್ತಕದ ಮೂಲಕ ಸಾಧಿಸಿದ್ದಾರೆ ಶ್ರೀಮತಿ ಜಯಶ್ರೀ ಭಟ್ - ನಮಗೆ ಸಾಕಷ್ಟು ಅಪರಿಚಿತವಾದ, ಒಂದು ರೀತಿಯಲ್ಲಿ ಊಹಪೋಹದ ಮಟ್ಟದಲ್ಲಿ ಮಾತ್ರ ಅರಿವಿರುವ ಚೀಣಿ ಸಂಸ್ಖೃತಿಯ ಬೇರುಗಳನ್ನು ಅದರದೆ ಆದ ಸಸಿಗಳ ಬಾಯಿಂದ ಪರಿಚಯಿಸುವ ಮೂಲಕ. ಚೀಣಿ ಜೀವನದ ಕುರಿತು ನಮಗಿರುವ ಸೀಮಿತ ಅರಿವು, ಪರಿಜ್ಞಾನ, ಮತ್ತು ಗುರುತೆ ಸಿಗದಂತೆ ಬದಲಾಗಿ ಹೋದ ಈಗಿನ ಚೀನದ ಆರ್ಥಿಕ, ಸಾರ್ವಜನಿಕ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಕಣ್ಮರೆಯಾಗಿ, ಮುಚ್ಚಿದ ಬಾಗಿಲ ನೀತಿಯಿಂದ ಕಳೆದು / ಬದಲಾಗಿ ಹೋದ ಆಚಾರ, ವಿಚಾರ, ಸಂಪ್ರದಾಯಗಳ ತುಣುಕುಗಳು ಹೇರಳವಾಗಿ ಸಿಗುವ ಈ ಕಥಾನಕ ಆ ಮಟ್ಟಿಗೆ ಕನ್ನಡಕ್ಕೆ ವಿಶಿಷ್ಟ ಕೊಡುಗೆಯೆಂದೆ ಹೇಳಬೇಕು. |
|
ಲೇಖಕರು: latha anand
May 16, 2013
3
243
ಇದು ಸಸ್ಯಕಾಶಿ, ಕೈಮುಗಿದು ಒಳಗೆ ಬಾ, ಈ ಸಾಲು ಲಾಲ್ಬಾಗ್ ಪ್ರವೇಶದ್ವಾರದಲ್ಲಿ ಕಾಣಸಿಗುವುದು. ಹಾಗೆ ಮರ ಬೆಳೆಸಿ ನಾಡು ಉಳಿಸಿ, ಮನೆಗೊಂದು ಮರ ಈ ರೀತಿಯ ಮಾತುಗಳು ಎಲ್ಲರಿಗೂ ಚಿರಪರಿಚಿತ. ಇದನ್ನು ಗಮನಿಸಿದಾಗ ನಮಗೆ ಸಸ್ಯಸಂಪತ್ತಿನ ಅವಶ್ಯಕತೆ ಎಷ್ಟಿದೇ ಎಂಬುದು ಮನವರಿಕೆಯಾಗುತ್ತದೆ. ಮಾನವ ತನ್ನ ಅನುಕೂಲಕ್ಕಾಗಿ ಅರಣ್ಯಸಂಪತ್ತನ್ನು ಹಲವು ವಿಧದಲ್ಲಿ ಬಳಸಿಕೊಳ್ಳುತ್ತಾ ಬಂದಿದ್ದಾನೆ. ಆಹಾರ, ವಸತಿ, ಉಡುಗೆ, ಔಷಧಿ ಇತ್ಯಾದಿ, ಶುಭಕಾರ್ಯದಿಂದ ಹಿಡಿದು ಅಶುಭ ಕ್ರಿಯೆಯವರೆಗೂ ಒಂದೊಂದು ವಿಧದಲ್ಲಿ ಸಸ್ಯಗಳ ಬಳಕೆ ನಡೆದಿದೆ. ತನ್ನ ಬದುಕಿನ ಒಳಿತಿಗೆ ನೆರವಾದ ಈ ಸಂಪತ್ತನ್ನು ಬೆಳೆಸುವ ಮತ್ತು ಉಳಿಸುವ ಕಾರ್ಯ ನಿಜವಾಗಿಯೂ ಪ್ರಾಮಾಣಿಕವಾಗಿ ನಡೆಯುತ್ತಿದೆಯೇ? ಸಮಾಜದ ಅಭಿವೃಧ್ದಿ, ಜಾಗತೀಕರಣ, ಆಧುನೀಕರಣ ಮುಂತಾದ ಹೆಸರಿನಲ್ಲಿ ನಡೆಯುತ್ತಿರುವ ಸಸ್ಯಸಂಪತ್ತಿನ ನಾಶ ಒಪ್ಪಿಕೊಳ್ಳಲು ಸಾಧ್ಯವೇ? ನಾವು ಪರಿಸರವನ್ನು ಉಳಿಸುವ ಬಗೆಗೆ ಎಷ್ಟೇ ಜಾಗೃತಿ ಪಡೆದರೂ ಇನ್ನೂ ಸರಿಯಾದ... |
ಲೇಖಕರು: Mohan V Kollegal
May 16, 2013
7
467
ಅಪರಾಹ್ನದ ಹೊತ್ತಿನಲ್ಲಿ ಲಾಗೋಸ್ ಪಟ್ಟಣದ ಕಸಂಗ ಬೀದಿಯ ತನ್ನ ಕೊಠಡಿಯಲ್ಲಿ ಪಕ್ಕ ಕುಳಿತಿದ್ದ ನಾಮೇಕಾನಿಗೆ ನೇನೆ ಕೇಳಿದಳು – ‘ನಿಮ್ಮ ತಂದೆಗೆ ಇನ್ನೂ ಪತ್ರ ಬರೆದಿಲ್ಲವೇ?’ ... |
|
ಲೇಖಕರು: hema hebbagodi
May 14, 2013
3
251
ಹೇಳತೇವ ಕೇಳ.... “ಮುಂದೊಂದು ದಿನ ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.” ಅವಧಿಯ ಸಂಪಾದಕರಾದ ಜಿ.ಎನ್.ಮೋಹನ್ ಮುನ್ನುಡಿಯಲ್ಲಿ ಹೇಳಿರುವ ಮಾತಿದು. ಹೌದು ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಕಾಡುವ ಅಸಹನೀಯ ಮೌನದಲ್ಲಿ ಮನಸ್ಸು ಬಿಕ್ಕುತ್ತದೆ. ಇನ್ನಾದರೂ ‘ಈ ಜಗತ್ತು ಬದಲಾಗಬಾರದೇ..’ ಎನ್ನಿಸುತ್ತದೆ. ಇದರ ಸಂಪಾದಕಿ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಮತ್ತು ಇದರಲ್ಲಿನ ಲೇಖನಗಳ ಸಂಯೋಜಕಿ ಶ್ರೀಮತಿ ಎನ್. ಸಂಧ್ಯಾರಾಣಿ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರತಿಭಟನೆಯ ಸಂದರ್ಭದಲ್ಲಿ ಅವಧಿಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಿದು. ಹಲವು ಮಂದಿ ಮಹಿಳೆಯರು ಬಚ್ಚಿಟ್ಟ ತಮ್ಮ ನೋವನ್ನು ಇಲ್ಲಿ ತೆರೆದಿದ್ದಾರೆ. ಇದರಲ್ಲಿ ‘ಹೀಗಾಯ್ತು.., ಬೇಡ.., ಬಿಕ್ಕು..,ಮತ್ತು ಬೆಳಕಿಗಾಗಿ’ ಎಂಬ ನಾಲ್ಕು ಭಾಗಗಳಿವೆ. ‘ಹೀಗಾಯ್ತು..’ ಭಾಗದಲ್ಲಿ ಹಲವರು ತಮ್ಮ ಅನುಭವಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.... |
ಲೇಖಕರು: addoor
May 13, 2013
5
445
"ನಮ್ಮ ಹಳ್ಳಿಗೆ ಐಟಿ ಕಂಪೆನಿಗಳು ೨೦೦೮ರಲ್ಲಿ ಬಂದು ಮಾಡಿದ್ದೇನು? ರೈತರ ಜಮೀನು ಖರೀದಿಸಿದ್ದು. ಯಾವ ರೇಟಿಗೆ ಅಂತೀರಾ? ಒಂದು ಎಕ್ರೆಗೆ ಐದು ಕೋಟಿ ರೂಪಾಯಿಗೆ. ಐವತ್ತಮೂರು ರೈತರು ಐಟಿ ಕಂಪೆನಿಗಳಿಗೆ ಜಮೀನು ಮಾರಿದ್ರು. ಅವರಿಗೆ ಸಿಕ್ಕಿದ್ದು ೮೩ ಕೋಟಿ ರೂಪಾಯಿ. ಅನಂತರ ಏನಾಯಿತು? ಅಪ್ಪ ಐಟಿ ಕಂಪೆನಿಯ ಸೆಕ್ಯುರಿಟಿವಾಲಾ, ಮಗ ಗಾರ್ಡನ್ವಾಲಾ ಆಗಬೇಕಾಯಿತು. ಈಗ, ನಾಲ್ಕು ವರುಷದಲ್ಲಿ ಕೈಗೆ ಬಂದ ಹಣವೆಲ್ಲ ಖರ್ಚಾಗಿದೆ. ಇನ್ನೇನು ಮಾಡೋದಂತ ಅವರಿಗೆ ಗೊತ್ತಿಲ್ಲ. ಅವರಲ್ಲಿ ೩೫ ಜನರಿಗೆ ಈ ಚಿಂತೆಯೂ ಇಲ್ಲ. ಯಾಕೆಂದರೆ ಅವರೀಗ ಬದುಕಿಯೇ ಇಲ್ಲ. ದಿನದಿನವೂ ಮದ್ಯಪಾನ ಮಾಡಿ, ಲಿವರ್ ಫೈಲ್ ಆಗಿ ಸತ್ತೇ ಹೋದರು." ಹೀಗಂತ ಪುಣೆ ಹತ್ತಿರದ ಹಳ್ಳಿಯೊಂದರ ಕತೆಯನ್ನು ಕೆಲವೇ ಮಾತುಗಳಲ್ಲಿ ಕಟ್ಟಿ ಕೊಟ್ಟವರು ಜ್ನಾನೇಶ್ವರ ಬೋಡ್ಕೆ - ಪುಣೆಯಲ್ಲಿರುವ ರಿಜರ್ವ್ ಬ್ಯಾಂಕಿನ "ಕೃಷಿ ಬ್ಯಾಂಕಿಂಗ್ ಕಾಲೇಜಿ"ನಲ್ಲಿ ಜುಲಾಯಿ ೨೦೧೨ರಲ್ಲೊಂದು ದಿನ ಮುಖಾಮುಖಿಯಾದಾಗ. ... |




