ಸಂಬಂಧಗಳು
ಮನುಷ್ಯ ಸಂಬಂಧಗಳ ಹೊರತಾಗಿ ಬಾಳಲು ಸಾಧ್ಯನಾ, ಬದುಕು ನಿರ್ಮಾಣ ಆಗೋದೆ, ಸಂಬಂಧಗಳ ಪೋಣೆಸಿಟ್ಟ ಎಳೆಯಿಂದಲ್ಲವಾ, ಆ ಎಳೆ ನಿರ್ಮಾಣ ಆಗಿರೋದು ದೈವದತ್ತ ಆಗಿರ ಬಹುದು, ಪ್ರಕೃತಿ ಇರಬಹುದು, ಅಥವಾ ಯಾವುದೋ ಕಾಣದ ಕೈ ಇರಬಹುದು. ಮನುಷ್ಯ ಸಂಬಂದಗಳನ್ನು ತೊರೆದು ಬದುಕಲು ಸಾಧ್ಯಾನಾ,
ತೊರೆದು ಬದುಕ ಬಹುದು ಅನ್ನೋದಾದರೆ, ನೋವಿನ ಎಳೆಯೊಂದು ಅಲ್ಲಿ ಕಾಡೊಲ್ಲವಾ.
" ಜಗತ್ತೆಲ್ಲಾ ಅಳಿದು ನಾನೊಬ್ಬನೇ ಉಳಿದರೆ, " ಆಗ ಸಂಬಂದಗಳೆಲ್ಲಿರುತ್ತವೆ,
ಅದಕ್ಕೆ ಮನುಷ್ಯ ಎಲ್ಲವನ್ನೂ ತೊರೆದು ಬದುಕುವುದನ್ನು ಕಲಿಬೇಕು ಎಂದ, ಗುರೂಜೀ ಮಾತು ಎಷ್ಟು ಸೂಕ್ತ.
(ಗುರೂಜೀ ಹೆಸರು ಅಪ್ರಸ್ತುತ)

- Login or register to post comments
- 234 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಸಂಬಂಧಗಳು
ನಮ್ಮ ಹಿಂದೂ ಧರ್ಮದ ಕೆಲ ಲಕ್ಷಣಗಳು ನನಗೆ ತುಂಬಾ ಆಶ್ಚರ್ಯ ತರಿಸುತ್ತವೆ. ಅಂತಹ ಕೆಲ ಚಿಂತನೆಗಳಲ್ಲಿ ಇದೂ ಒಂದು.
>ಎಲ್ಲೋ ಹೇಗೋ ಇರುವ ( ಇಲ್ಲದಿರುವ!) ದೇವರಿಗಾಗಿ ಏನೆಲ್ಲಾ ಸರ್ಕಸ್ ಮಾಡೋದು..
>ಆ ದೇವರಿಗಾಗಿ / ಸ್ವರ್ಗಕ್ಕಾಗಿ / ಮೋಕ್ಷಕ್ಕಾಗಿ / ಮನೆ-ಬಂಧು-ಬಳಗ-ಸಂಸಾರಗಳನ್ನು ತ್ಯಜಿಸುವುದು.
>ಸಮಾಜದಿಂದ ದೂರವಾಗಿ ಒಬ್ಬನೇ ಬದುಕುವುದು..
>ಅದೇನೋ ಸಾದನೆ ಮಾಡ್ತೀನಿ ಅನ್ನೋ ಭ್ರಮೆಯಲ್ಲಿ ಕೆಲ ಸೀಮಿತ ಉತ್ಪತ್ತಿಯ ಕೆಲಸಗಳನ್ನು ಮತ್ತೆ ಮತ್ತೆ ಮಾಡ್ತಾ ಸಮಾಜದಿಂದ ದೂರ ಇದ್ದು ಬಿಡೋದು....
>ಜೆನ್ನತ್ಗಾಗಿ ಜನಬಲಿ ತೆಗೆದುಕೊಳ್ಳುವುದು.....
.....ಇಂತ ಅನೇಕ ಆಚರಣೆಗಳನ್ನು ಇಲ್ಲಿ ಸೇರಿಸಬಹುದು
ಇವೆಲ್ಲ ನನಗೆ ತುಂಬ ಬಾಲಿಶ ಚಿಂತನೆಗಳು ಅನ್ನಿಸುತ್ತವೆ.
ನನಗೆ ಬಸವಣ್ಣ ನ "ಇಲ್ಲಿ ಸಲ್ಲುವನು ಅಲ್ಲಿಯೂ ಸಲ್ಲುವನಯ್ಯ" ಅನ್ನೋ ಮಹಾ ವಾಕ್ಯದಲ್ಲೇ ನಂಬಿಕೆ.
ಸವಿತೃ
ಉ: ಸಂಬಂಧಗಳು
"ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು".. ತುಂಬ ಒಳ್ಳೇ ಮಾತು.
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಸಂಬಂಧಗಳು
ಸಲ್ಲುವುದು ಅಂದರೇನು?
ಇಲ್ಲಿ ಮತ್ತು ಅಲ್ಲಿ ಗಳ ಇರುವು ಹೇಗೆ ನಿಶ್ಚಿತ?
ಉ: ಸಂಬಂಧಗಳು
ಜಗತ್ತೆಲ್ಲಾ ಅಳಿದು ನಾನೊಬ್ಬನೇ ಉಳಿದರೆ, ಆಗ ಕೂಡಾ ಜಗದ ಕೊನೆಯನೆಂಬ ಸಂಬಂದ ಜಗದೊಂದಿಗೆ ಉಳಿಯುತ್ತದೆ.
"ಮನುಷ್ಯ ಎಲ್ಲವನ್ನೂ ತೊರೆದು ಬದುಕುವುದು" ಎಲ್ಲವನ್ನೂ ಅಂದರೆ? ವಸ್ತುಗಳಾ, ವಿಷಯಗಳಾ, ವಾಸನೆಗಳಾ?
ಬರಿಯೆ ಎಲ್ಲವನ್ನು ತೊರೆದು ಬದುಕುವುದು... ಸಾದ್ಯವಲ್ಲದ ಮಾತು...ಅಂತ ನನ್ನ ಅನಿಸಿಕೆ.
ಸವಿತ
ಉ: ಸಂಬಂಧಗಳು
`ಮೋಕ್ಷ’ವನ್ನೂ ಒಂದು ಗುರಿಯನ್ನಾಗಿ ಇಟ್ಟುಕೊಂಡು ಅದನ್ನು ಸಾಧಿಸ ಹೊರಡುವುದು ಬೇರೆಲ್ಲಾ ಲೌಕಿಕ ಸಾಧನೆಗಳಷ್ಟೇ ಶ್ರೇಷ್ಠವಾದದ್ದು. ಅದಕ್ಕಿಂತ ಹೆಚ್ಚಿನ ಸ್ಥಾನಮಾನನ್ನು ಅದಕ್ಕೆ ಕಲ್ಪಿಸಬೇಕಾದ ಅಗತ್ಯವಿಲ್ಲ. ಬಿಡುಗಡೆ ಹೊಂದುವುದು ಎನ್ನುವುದಕ್ಕೂ ಪಲಾಯನವಾದಕ್ಕೂ ಬಹಳ ವ್ಯತ್ಯಾಸವಿದೆ. ಮಾನವೀಯ ಸಂಬಂಧಗಳನ್ನು, ಅವುಗಳ ಪರಿಸ್ಥಿತಿಯನ್ನು ಎದುರಿಸದೇ ಕಾಡಿಗೆ ಹೋದವನು ಅದು ಹೇಗೆ ಸಂಬಂಧಗಳಿಂದ ಮುಕ್ತಿ ಪಡೆದವನಾಗುತ್ತಾನೆ? ಆತ ಇಲ್ಲೇ ಸಂಬಂಧಗಳಲ್ಲಿ ಮುಳುಗಿ, ಪರದಾಡುತ್ತಾ, ಸಂಬಂಧ ಕೊಡುವ ಸವಿಯನ್ನು ಉಣ್ಣುತ್ತಾ ಬದುಕುವವನಿಗಿಂತ ನಿಷ್ಕೃಷ್ಟನಾದವನು. ಆತ ಪಲಾಯನಾವಾದಿ ಅಷ್ಟೇ.
(ನೀವು ಹೆಸರಿಸದ ಗುರೂಜಿಯ ಮೇಲಿನ ಗೌರವ ಇಟ್ಟುಕೊಂಡೇ ಹೀಗೆ ಹೇಳಿರುವೆ)
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com