ಆಳ್ ಮತ್ತು ಆೞ್
ಆಳ್ ಮತ್ತು ಆೞ್ ಈ ಎರಡೂ ಬೇಱೆ ಬೇಱೆ ಅರ್ಥಗಳಲ್ಲಿ ಬೞಸಲ್ಪಡುವ ಪದಗಳು
ಆಳ್=ನಾಮಪದವಾದಾಗ ಸೇವಕ ಆಳು. ಕ್ರಿಯಾಪದವಾದಾಗ ಅಧಿಕಾರವಹಿಸು, ರಾಜ್ಯಭಾರ ನಡೆಸು. ಅವನ ಮನೆಯಲ್ಲಿ ಮನೆಯಾಳ್ತನ ಅವನ ಹೆಂಡತಿಯದೇ ಇತ್ಯಾದಿ. ಭೂತಕಾಲದ ರೂಪ ಆಳ್ದು (ಹೞಗನ್ನಡ) ಆಳಿ=ಹೊಸಗನ್ನಡ. ಭವಿಷ್ಯದ್ರೂಪ=ಆಳ್ವ/ಆಳುವ.
ಎರಡನೆಯ ಆೞ್=ಮುೞು(೦)ಗು. ನೀರಿನಲ್ಲಿ /ದ್ರವದಲ್ಲಿ ಮುೞುಗು. ಭೂತರೂಪ ಹೞಗನ್ನಡದಲ್ಲಿ ಅೞ್ದು. ನಡುಗನ್ನಡ/ಹೊಸಗನ್ನಡದಲ್ಲಿ ಅದ್ದು. ರಾಘವಾಂಕನ ಹರಿಶ್ಚಂದ್ರನ ಕಾವ್ಯದಲ್ಲಿ ಕಾಡಿಗೆ ಹೋದ ಲೋಹಿತಾಶ್ವ ಬಾರದಿದ್ದಾಗ ಆತನ ತಾಯಿ ಚಂದ್ರಮತಿ ಮಗನ ಕುಱಿತು ಚಿಂತಿಸುವಾಗ "ನೀರೊಳದ್ದನೊ"=ನೀರಲ್ಲಿ ಮುೞುಗಿದನೋ ಎಂದು ಹಲುಬುತ್ತಾಳೆ. ಭವಿಷ್ಯದ್ರೂಪ: ಆೞ್ವ/ಆೞುವ(ಹೊಸಗನ್ನಡದಲ್ಲಿ ಆಗಬಹುದೇನೋ).
ಇದಱ ಕೃದಂತ ಭಾವನಾಮ=ಆೞ=ಮುೞುಗುವಷ್ಟು ಆೞ. (ಆೞ=depth).
ತಮಿೞರಲ್ಲಿ "ಆೞ್ವಾರ್ " ಎಂಬ ವಿಷ್ಣುಭಕ್ತರ ಪರಂಪರೆಯೇ ಇದೆ. ಇವರೂ ಭಗವದ್ಭಕ್ತಿಯಲ್ಲಿ ಮುೞುಗುವವರು.
ಆೞ್ವಾರ್=ಕನ್ನಡದಲ್ಲಿ ಆೞ್ವರ್=ಆೞ್ವೊರ್

- Login or register to post comments
- 165 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಆಳ್ ಮತ್ತು ಆೞ್
ಕೊೞಚೆ ನೀರೊಳಗಾೞುತೇೞುತ
ಜಲಧಿ ಕಾಲ್ವೊೞೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬೞಿಕ ಭೀಮಾರ್ಜುನರ ಬಯಸುವು-
ದೆಲೆ ಮರುಳೆ ನಿನ್ನೊಡಲ ಸೀೞಿಯೆ
ತಿಳಿರಕುತದಲಿ ತಾಯ ತುರುಬನು ನಾದಿಸುವೆನೆಂದ||
ಇದು ಕುಮಾರವ್ಯಾಸಭಾರತದ ಒಂದು ಪದ್ಯ. ಇಲ್ಲಿ ಆೞುತೇೞುತ ಎಂಬಲ್ಲಿ ಮುೞುಗುತ ಏೞುತ ಎಂಬರ್ಥದಲ್ಲಿ ಬೞಕೆಯಾಗಿರುವುದು ಕಂಡುಬರುತ್ತದೆ.
ವಿ. ಸೂ.: ನಡುಗನ್ನಡದಲ್ಲಿ ೞಕಾರ ಬೞಕೆಯಲ್ಲಿರದಿದ್ದರೂ ಭಾಷಾಧ್ಯಯನ ದೃಷ್ಟಿಯಿಂದ ಇಲ್ಲಿ ಬೞಸಲಾಗಿದೆ.
ಉ: ಆಳ್ ಮತ್ತು ಆೞ್
ತಪ್ಪೊಪ್ಪೋಲೆ:
ಕೊೞಚೆ ನೀರೊಳಗಾೞುತೇೞುತ
ಜಲಧಿ ಕಾಲ್ವೊೞೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬೞಿಕ ಭೀಮಾರ್ಜುನರ ಬಯಸುವು-
ದೆಲೆ ಮರುಳೆ ನಿನ್ನೊಡಲ ಸೀೞಿಯೆ
ತಿಳಿರಕುತದಲಿ ತಾಯ ತುಱುಬನು ನಾದಿಸುವೆನೆಂದ||