SEZನಿಂದ ಉಂಟಾಗುವ ಸಮಸ್ಯೆ
ಈ ದಿನ ಎರಡು ಬರಹ ಓದಿದೆ. SEZ ಕವನ ಮತ್ತೊಂದು ಭಾರತ ಒಲಿಂಪಿಕ್ಸ್ ಆಯೋಜಿಸಬೇಕೇ?. ಎರಡನೆಯದರಲ್ಲಿ "ಸಾಮಾಜಿಕ ನ್ಯಾಯದ ಮರೀಚಿಕೆ" ಎಂಬ ಪುಂಜವನ್ನು ಬಳಕೆ ಮಾಡಿದೆ. ಅದನ್ನು ಬಳಸುತ್ತಿದ್ದಾಗ ನಿಮ್ಮೆಲ್ಲರಿಗೂ ಇದನ್ನು ಕೇಳಲೇಬೇಕೆನಿಸಿತು.
೧. ಈಗ ನೋಡಿ, ಒಬ್ಬ ರೈತನ ಹತ್ತಿರ ಪೊಗದಸ್ತಾದ ಕೃಷಿ ಭೂಮಿ ಇದೆ ಅಂತಿಟ್ಕೊಳ್ಳೋಣ.
೨. ಸರ್ಕಾರ ಅಲ್ಲಿ ಆ ರೈತನ ಭೂಮಿಯನ್ನು ಒಳಗೊಂಡಂತೆ SEZ ಮಾಡಲು ಮನಸ್ಸಾಗತ್ತೆ.
೩. ಸರ್ಕಾರ ಆ ಭೂಮಿಯನ್ನು ತನ್ನ ತೆಕ್ಕೆಗೆ ತೊಗೊಳತ್ತೆ.
೪. ರೈತನಿಗೆ ಪರಿಹಾರ ಅಂತ ಒಂದಷ್ಟು ದುಡ್ಡು ಕೊಡತ್ತೆ.
೫. ಜನ ಗಲಾಟೆ ಮಾಡಿದ್ರು ಅಂತ ಆ sezನಲ್ಲಿ ಆ ಕುಟುಂಬದ ಒಬ್ಬರಿಗೆ ಕೆಲಸ ಕೊಡುವ ಭರವಸೆ ನೀಡತ್ತೆ.
ಈಗ ನೋಡಿ ಎಲ್ಲವೂ ಪೊಲಿಟಿಕಲಿ ಕರೆಕ್ಟಾಗಿಯೇ ಇದೆ. ಆದರೆ ೫ನೇ ಪಾಯಿಂಟ್ ಗಮನಿಸಿ, ಆ ಕುಟುಂಬದ ಒಬ್ಬರಿಗೆ ಕೆಲಸ. ಏನು ಕೆಲಸ. ಕಸಗುಡಿಸೋದು, ಟಾಯ್ಲೆಟ್ ಕ್ಲೀನ್ ಮಾಡೋದು ಹೀಗಾ !!!!! ಭೂಮಿಯ ಒಡೆನಾಗಿದ್ದ ಒಬ್ಬ ರೈತನಿಗೆ ನೀನು ಸಾಧಿಸಿದ್ದು ಸಾಕು ಇನ್ನು ಮುಂದೆ ಕಸಗುಡಿಸಿಕೊಂಡಿರು ಅಂದ್ರೆ ಹೊಟ್ಟೆ ಉರಿಯಲ್ವಾ. ನಿಯತ್ತಿದ್ರೆ, ಒಕ್ಕಲೆಬ್ಬಿಸಲಾದವರಿಗೆ, ಆ ಕ್ಷಣದ ಪರಿಹಾರವಲ್ಲದೆ, ಅವರಿಂದ ವಶಪಡಿಸಿಕೊಳ್ಳಲಾದ ಭೂಮಿಗೆ ತಕ್ಕನಾಗಿ ಆಯಾ sezಇನ ಆದಾಯದ ಶೇರ್ ಹೋಲ್ಡರುಗಳನ್ನಾಗಿ ಮಾಡಬೇಕು. ಈ ವಿಚಾರದಲ್ಲಿ ನಿಮ್ಮ ಅನಿಸಿಕೆ ಏನು ?

- Login or register to post comments
- 197 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: SEZನಿಂದ ಉಂಟಾಗುವ ಸಮಸ್ಯೆ
ಹೌದು,ನೀವನ್ನೋದು ಸರಿ. ಕೊಡುವ ಪರಿಹಾರ ಹಣ,ನೌಕರಿಯ ಜತೆಗೆ ವಿಆವದ(SEZ) ಪಾಲುದಾರnU ಆದರೆ, ರೈತನ ಹಿತ ಕಾಯ್ದಂತೆ ಆಗುತ್ತದೆ.ಈ ಮಾದರಿಯನ್ನು ಕೆಲವೆಡೆ ಅನುಸರಿಸಲು ಆರಂಭಿಸುವುದರಲ್ಲಿದ್ದಾರೆ.
ಪಲವತ್ತಾದ ಭೂಮಿಯನ್ನು ಇಂತಹ ವಲಯಗಳಿಂದ ಹೊರಗಿಡಲು ಪ್ರಯತ್ನಿಸಬೇಕು.
ವಿ.ಆ.ವಲಯಗಳು ಬಂಜರು ಭೂಮಿ ಇರುವಲ್ಲಿ ಬಂದರೆ ಒಳಿತು.
*ಅಶೋಕ್
ಉ: SEZನಿಂದ ಉಂಟಾಗುವ ಸಮಸ್ಯೆ
sezಇನ ಆದಾಯದ ಶೇರ್ ಹೋಲ್ಡರುಗಳನ್ನಾಗಿ ಮಾಡಬೇಕೆನ್ನುವುದು ಸರಿಯಾಗೇ ಇದೆ.
ಆದರೆ ಅಲ್ಲಿನ ಕೃಷಿಭೂಮಿ, ಕೃಷಿಕ ಎಲ್ಲಾ ಹಾಳಾಗಿ ಹೋಗುತ್ತದಲ್ಲ! ಅವನಿಗೆ ಎಲ್ಲೇ ಕೆಲಸ ಕೊಟ್ಟರೂ ಇದನ್ನು ಸರಿದೂಗಿಸಲಾಗುವುದಿಲ್ಲ ಎಂದನಿಸುತ್ತದೆ.
ದಿನೇ ದಿನೇ ಭಾರತದಲ್ಲಿ ಕೆಲಸದ ಅವಕಾಶಗಳು ಹೆಚ್ಚುತ್ತಿದ್ದರೂ ಕೊನೆಗೆ ನಾವು ಆಹಾರಕ್ಕೆ ಬೇರೆ ದೇಶಗಳೆಡೆಗೆ ಮುಖ ಮಾಡಬೇಕಾಗುತ್ತೇನೋ !
**************************
http://vikasavada.blogspot.com/
**************************