ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?

August 11, 2008 - 7:52pm — agilenag

ಪ್ರಿಯ ಸಂಪದ್ಬಾಂಧವರೇ,
ನಾನು ಈ ಕೆಳಗೆ ಕೊಟ್ಟಿರುವುದು ಪುರಂದರದಾಸರು ರಚಿಸಿರುವ ಒಂದು ಅತ್ಯಂತ ಜನಪ್ರಿಯ ಆದರೆ ಜಟಿಲ ಕೀರ್ತನೆ. ನನಗಂತೂ ಅದರ ಅರ್ಥವೇ ತಿಳಿಯುತ್ತಿಲ್ಲ. ತಮ್ಮಲ್ಲಿ ಯಾರಾದರೂ ಅರ್ಥ ವಿವರಿಸುವಿರಾ?

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ||
ಎರಡು ಬರಿದು ಒಂದು ತುಂಬಲಿಲ್ಲ || ೧ ||

ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ||
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ || ೨ ||

ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ||
ಎರಡು ಬರಡು ಒಂದಕ್ಕೆ ಕರುವೇ ಇಲ್ಲ || ೩ ||

ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ||
ಎರಡು ಸವಕಲು ಒಂದು ಸಲ್ಲಲೇ ಇಲ್ಲ || ೪ ||

ಸಲ್ಲದಾ ಹೊನ್ನುಗಳಿಗೆ ಬಂದರು ಮೂರು ನೋಟಗರು ||
ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ || ೫ ||

ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ||
ಎರಡು ಹಾಳು ಒಂದಕೆ ಒಕ್ಕಲೇ ಇಲ್ಲ || ೬ ||

ಒಕ್ಕಲಿಲ್ಲದ ಊರಿಗೆ ಬಂದರು ಮೂರು ಕುಂಬಾರರು ||
ಇಬ್ಬರು ಚೊಂಟರು ಒಬ್ಬನಿಗೆ ಕೈಯೇ ಇಲ್ಲ || ೭ ||

ಕೈಯಿಲ್ಲದ ಕುಂಬಾರರು ಮಾಡ್ಯಾರು ಮೂರು ಮಡಿಕೆಗಳ ||
ಎರಡು ಒಡಕು ಒಂದಕೆ ಬುಡವೇ ಇಲ್ಲ || ೮ ||

ಬುಡವಿಲ್ಲದ ಗಡಿಗೆಗೆ ಹಾಕಿದರು ಮೂರು ಅಕ್ಕಿಗಳ ||
ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ || ೯ ||

ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ||
ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ || ೧೦ ||

ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣಪೆಗಳ ||
ಎರಡು ಸೋಂಕವು ಒಂದು ತಾಕಲೇ ಇಲ್ಲ || ೧೧ ||

ಇನ್ನು ಈ ಅರ್ಥಗಳೆಲ್ಲ ಪುರಂದರವಿಠಲ ಬಲ್ಲ ||
ಅನ್ಯರಾರೂ ತಿಳಿದವರಿಲ್ಲ || ೧೨ ||

ದಾಸವರೇಣ್ಯರೇನೋ ಅನ್ಯಾರಾರೂ ತಿಳಿದವರಿಲ್ಲ ಎಂದಿದ್ದಾರೆ. ಹಾಗಾದರೆ ಈ ಒಗಟಿನ ಅರ್ಥ?

‹ ವ್ಯಂಗ್ಯಚಿತ್ರವೆನ್ನಬೇಡಿ ನಗೆಚಿತ್ರವನ್ನಿ ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು ›
  • ಸಾಹಿತ್ಯ, ಭಾಷೆ
~.~
  • Login or register to post comments
  • 259 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 11, 2008 - 7:57pm — agilenag

ಉ: ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?

agilenag's picture

ಕ್ಷಮಿಸಿ ಶ್ರೀಯುತ ಹಂಸಾನಂದಿಯವರು ಈ ಪ್ರಶ್ನೆಯನ್ನು ಈಗಾಗಲೇ ಮೇ ೨೦೦೭ರಲ್ಲಿ ಕೇಳಿದ್ದಾರೆ. ಆಗ ನಾನು ಸಂಪದದ ಸದಸ್ಯನಾಗಿರಲಿಲ್ಲ. ಹಾಗಾಗಿ ಈ ಪುನರಾವರ್ತನೆ. ಆದಾಗ್ಯೂ ಯಾರಾದರೂ ಈ ಕೀರ್ತನೆಯ ಅರ್ಥವನ್ನು ಬಿಡಿಸಿ ಹೇಳಿದರೆ ಧನ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 7:39am — Sunil Jayaprakash

ಉ: ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?

Sunil Jayaprakash's picture

ಹೌದು ಅಗಿಲೆನಾಗರೆ, ಎಲ್ಲರಿಗೂ ಹಂಸಾನಂದಿಯವರು ಆ ಕೊಂಡಿ ಸಿಗಲಿ ಎಂಬ ಇಚ್ಚೆಯೊಂದಿಗೆ. ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 12:25am — kalpana

ಉ: ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?

kalpana's picture

ದಾಸರ ಪದ್ಯಗಳನ್ನು ಬಿಡಿಸಿ ಹೇಳುವಷ್ಟು ಜ್ಞಾನ ನನಗಿಲ್ಲವಾದರೂ ನನಗನ್ನಿಸಿದ್ದು, ದಾಸರು ಬದುಕನ್ನು ಅರ್ಥಪೂರ್ಣವಾಗಿ ಕಳೆಯಲು ಪ್ರೇರೇಪಿಸುತ್ತಿದ್ದಾರೇನೋ ಎಂದು. ಮೊದಲ ಸಾಲಿನಲ್ಲಿ ನಂಬಲಸಾಧ್ಯವಾದ ವಿಷಯವನ್ನು ಹೇಳಿ, ಎರಡನೆಯ ಸಾಲಿನಲ್ಲಿ ಅದಕ್ಕೆ ಕೊಕ್ಕೆ ಹಾಕಿ ಇನ್ನೊಂದು ಅಸಾಧ್ಯವಾದ ಮಾತನ್ನು ಬರೆದಿದ್ದಾರೆ Smiling ನಿಜಕ್ಕೂ ಒಳ್ಳೆಯ puzzling poem. ಕೆಲವೊಮ್ಮೆ ನಾವು ಅರ್ಥವಿಲ್ಲದ, ಗುರಿಯಿಲ್ಲದ ಕೆಲಸಗಳನ್ನು ಮಾಡುತ್ತಿರುತ್ತೀವಿ. ಕೆಲಸ ಮಾಡುವುದಕ್ಕೆ ಮುಂಚೆ ಇದು ಸಾಧ್ಯವೇ, ಸರಿಯೇ, ಉಚಿತವೇ ಎಂದೆಲ್ಲ ಯೋಚಿಸಿ ಮುನ್ನಡೆಯಬೇಕೆಂದು ತಿಳಿ ಹೇಳುತ್ತಿರಬಹುದು. ಅಥವ ನಾನು ಈಗ ಬರೆಯುತ್ತಿರುವುದೂ ಅರ್ಥವಿಲ್ಲದ್ದಿರಬಹುದು, ಆ ಪುರಂದರ ವಿಠಲನೇ ಬಲ್ಲ! Smiling

~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
  • ವಯಸ್ಸು
  • ನಿಜವಾಗಿಯೂ ಆದೆನೆ ನಾನಿಂದು ಮುಕ್ತ ಮುಕ್ತ ಮುಕ್ತಾ.ಆಆಆ....
  • ಮೊದಲ ಮದುದೀವಳಿಗೆ
  • ಝೆನ್ ೧೧: ವಾದದಲ್ಲಿ ಗೆದ್ದಿದ್ದು ಹೀಗೆ
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator