ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಅನಿಲ್ ರಮೇಶ್
ಪರಿಚಯ
ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ.
ತ.ರಾ.ಸು. ಹಾಗೂ ಪೂಚಂತೇ ಅವರುಗಳ ಬರಹಗಳು ಇಷ್ಟ ಆಗತ್ತೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇಷ್ಟ.
ಛಾಯಾಗ್ರಹಣ, ಚಾರಣ, ಪ್ರವಾಸ ಮೆಚ್ಚಿನ ಹವ್ಯಾಸ.
ಕರ್ನಾಟಕದಲ್ಲಿರುವ ಎಲ್ಲಾ ಸುಂದರ ತಾಣಗಳನ್ನು ನೋಡುವ ಅಸೆ.
ನನ್ನ ಕನ್ನಡ ಬ್ಲಾಗ್: ಅನವರತ
ನನ್ನ ಫೋಟೋ ಆಲ್ಬಮ್: ಫ್ಲಿಕರ್ ಅಲ್ಲಿ
ಜನನಿ-ಜನ್ಮಭೂಮಿ
"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ..."
ಈ ಮಾತಿನ ಅರ್ಥ: ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು...
ಅಂದರೆ, ನಮ್ಮನ್ನು ಹೆತ್ತ ತಾಯಿ ಮತ್ತು ನಾವು ಹುಟ್ಟಿರುವ ಈ ದೇಶ ಸ್ವರ್ಗಕ್ಕಿಂತಲೂ ದೊಡ್ಡದು...
ನಮ್ಮ ತಾಯಿಗೆ ಹಾಗೂ ನಮ್ಮ ದೇಶಕ್ಕೆ ನಾವು ಸದಾ ಚಿರಋಣಿಯಾಗಿರಬೇಕು...
ಇದು ನನಗೆ ಅನಿಸಿದ್ದು...
ನಿಮ್ಮ ಅನಿಸಿಕೆ ಏನು?
ಪ್ರತಿಕ್ರಿಯೆ ರೂಪದಲ್ಲಿ ದಯವಿಟ್ಟು ತಿಳಿಸಿ...
ಆನಿಲ್ ರಮೇಶ್.
- Login or register to post comments
- 536 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಜನನಿ-ಜನ್ಮಭೂಮಿ
ಸ್ವರ್ಗ ಹೇಗಿದೆ ನೋಡಿಲ್ಲವಲ್ಲ..ಹೇಗೆ ಹೇಳಲಿ? :)
*ಅಶೋಕ್
ಉ: ಜನನಿ-ಜನ್ಮಭೂಮಿ
ಸ್ವರ್ಗವನ್ನು ನಾನೂ ನೋಡಿಲ್ಲ... ಆದರೆ ಈ ದೇಶದಲ್ಲಿ ಹುಟ್ಟಿರುವುದೇ ಒಂದು ಭಾಗ್ಯ... ತಾನೇ?
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಜನನಿ-ಜನ್ಮಭೂಮಿ
ಆ ಒಂದು ಭಾಗ್ಯ ಯಾವುದು? :)
ನಮ್ಮದೇನು ದೊಡ್ಡ ಗ್ರೇಟ್ ದೇಶ ಅಲ್ಲ ಬಿಡಿ.. !
ಉ: ಜನನಿ-ಜನ್ಮಭೂಮಿ
ರಾಮಾಯಣದ ಶ್ಲೋಕವಿದು. ರಾಮ ಲಂಕೆ ಗೆದ್ದಾಗ ಅಲ್ಲಿಯ ಜನ ರಾಮನೇ ತಮ್ಮ ರಾಜ್ಯದ ರಾಜನಾಗಲಿ ಎಂದಾಗ ಅದನ್ನು ನಯವಾಗಿ ನಿರಾಕರಿಸಿದ ರಾಮ ಲಕ್ಷ್ಮಣನಿಗೆಂದದ್ದು:
ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ|
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ||
ಲಕ್ಷ್ಮಣಾ, ಲಂಕೆಯು ಬಂಗಾರದಿಂದ ಕೂಡಿದ್ದರೂ ನನಗೆ ಅದು ಇಷ್ಟವಾಗುವುದಿಲ್ಲ. ಜನನಿ ಮತ್ತು ಜನ್ಮಭೂಮಿಗಳೆರಡು ಸ್ವರ್ಗಕ್ಕಿಂತ ಮಿಗಿಲು.
ಉ: ಜನನಿ-ಜನ್ಮಭೂಮಿ
ಕನ್ನಡಕಂದರೇ,
ಈ ಶ್ಲೋಕದ ಉತ್ತರಾರ್ಧ ಗೊತ್ತಿತ್ತು...
ಶ್ಲೋಕದ ಪೂರ್ವಾರ್ಧ ತಿಳಿಸಿದ್ದಕ್ಕೆ ನಿಮಗೆ ನನ್ನಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.