~
ಪಂಚಬಾಣಗಳು ಎಂದರೆ ಆವುವು ?
ಶ್ಯಾಮಲಾ ದಂಡಕದಲ್ಲಿ ಹೀಗೊಂದು ಪದ್ಯ ಬರುತ್ತದೆ.
ಭೈರವೀ ಸಂವೃತೇ | ಪಂಚಬಾಣೇನ ರತ್ಯಾ ಚ ಸಂಭಾವಿತೇ |
ಪ್ರೀತಿ ಶಕ್ತ್ಯಾವಸಂತೇನ ಚಾನಂದಿತೇ ||
ಪಂಚಭೂತ ಕೇಳಿದ್ದೆ, ಈ ಪಂಚಬಾಣಗಳಾವುವು ?

- Login or register to post comments
- 403 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಪಂಚಬಾಣಗಳು ಎಂದರೆ ಆವುವು ?
ಅರವಿಂದ,ಅಶೋಕ,ಚೂತ,ಮಲ್ಲಿಕಾ, ನೀಲೋತ್ಪಲ-ಇವು ಮನ್ಮಥನ ಪಂಚ ಬಾಣಗಳು.
ಉ: ಪಂಚಬಾಣಗಳು ಎಂದರೆ ಆವುವು ?
ಪರಮೇಶ್ವರ(ಶಿವ) ಯಾವ ಬಾಣಕ್ಕೆ ತನ್ನ ಮೂರನೇ ಕಣ್ಣು ಬಿಟ್ಟಿದ್ದು?
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಪಂಚಬಾಣಗಳು ಎಂದರೆ ಆವುವು ?
ಕೊನೆಯದೇ ಇರಬಹುದು.ಕೊನೆಯದು ಯಾವಗಲೂ ಪವರ್ಫುಲ್ ಆಗಿರುತ್ತೆ ಅಲ್ವ?
ಉ: ಪಂಚಬಾಣಗಳು ಎಂದರೆ ಆವುವು ?
ಇದ್ರೂ ಇರಬಹುದು... ಕೊನೆಯದು ಯಾವಾಗಲೂ ಬ್ರಹ್ಮಾಸ್ತ್ರದ ಟೈಪ್ ಅನ್ಸುತ್ತೆ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಪಂಚಬಾಣಗಳು ಎಂದರೆ ಆವುವು ?
ಅಹುದಹುದು. ಕನ್ನೈದಿಲೆಯದು. ಬ್ರಹ್ಮಾಂಡದ ಕಪ್ಪುತೂತಿನ (Blackhole) ತೆಱ ಎಲ್ಲರನ್ನು ತನ್ನತ್ತ ಸೆಳೆವ ಮಹಾಬಾಣವದು.
ಉ: ಪಂಚಬಾಣಗಳು ಎಂದರೆ ಆವುವು ?
ಆದರೆ ಇಲ್ಲಿ ಪಂಚಬಾಣೇನ ಎಂದು ಏಕವಚನದಲ್ಲಿರುವುದಱಿಂದ ಮನ್ಮಥನೆಂದೇ ಅರ್ಥ
ಅರವಿಂದಮಶೋಕಂ ಚ ಚೂತಂ ಚ ನವಮಲ್ಲಿಕಾ
ನೀಲೋತ್ಪಲಂ ಚ ಪಂಚೈತೇ ಪಂಚಬಾಣಸ್ಯ ಸಾಯಕಾಃ||
ಎನ್ನುತ್ತದೆ ಅಮರಕೋಶ. ಅರವಿಂದ=ಕೆಂಪು ಕಮಲ, ಅಶೋಕ, ಮಾವಿನ ಹೂ, ಹೊಸಮಲ್ಲಿಗೆ, ಕನ್ನೈದಿಲೆ ಇವು ಮನ್ಮಥನ(ಪಂಚಬಾಣನ) ಬಾಣಗಳು. ಪ್ರಾಯಶಃ ಇವೆಲ್ಲ ವಸಂತರ್ತುವಿನಲ್ಲಿ ಬಿಡುವ ಹೂಗಳು.
ಉ: ಪಂಚಬಾಣಗಳು ಎಂದರೆ ಆವುವು ?
ನೀಲೋತ್ಪಲಂಚ ಪಂಚೈತೆ ಪಂಚ ಬಾಣಸ್ಯ ಸಾಯಕಾ:
ಅರವಿಂದಂ ಅಶೋಕಂ ಚ ಚೂತಂ ಚ ನವಮಲ್ಲಿಕಾ
-ಅಮರಕೋಶ
ಉ: ಪಂಚಬಾಣಗಳು ಎಂದರೆ ಆವುವು ?
ನಾರಾಯಣ ಅವರೇ, ನಿಮ್ಮ ಪ್ರತಿಕ್ರಿಯೆಯಲ್ಲಿ ಅಮರಕೋಶದ ಶ್ಲೋಕದ ಸಾಲುಗಳು ಹಿಂದುಮುಂದಾಗಿವೆ. ನನ್ನ ಪ್ರತಿಕ್ರಿಯೆಯಲ್ಲಿ ಅದನ್ನು ಸರಿಪಡಿಸಿದ್ದೇನೆ. ನನ್ನಿ.
ಉ: ಪಂಚಬಾಣಗಳು ಎಂದರೆ ಆವುವು ?
ಉತ್ತರಿಸಿದ ಎಲ್ಲರಿಗೂ ನನ್ನಿ. ಪಂಚಬಾಣ -> ಐದು ಬಾಣ -> ಅವುಗಳನ್ನು ಹೊಂದಿರತಕ್ಕ ಮನ್ಮಥ ಅಂತೇನೋ ಆಯ್ತು.
ಆದರೆ ಈ "ಮನ್ಮಥ ಹಾಗು ರತಿಯಿಂದ ಸಂಭಾವಿತಳಾದವಳು" ಅಂತ ಶ್ಯಾಮಲೆಯನ್ನು ಏಕೆ ಕರೆದಿದ್ದಾರೆ ?
ಉ: ಪಂಚಬಾಣಗಳು ಎಂದರೆ ಆವುವು ?
ಭೈರವೀ ಸಂವೃತೇ | ಪಂಚಬಾಣೇನ ರತ್ಯಾ ಚ ಸಂಭಾವಿತೇ |
ಪ್ರೀತಿ ಶಕ್ತ್ಯಾವಸಂತೇನ ಚಾನಂದಿತೇ ||
ವಸಂತರ್ತುವಿನ ಆಗಮನದಲ್ಲಿ ಎಲ್ಲಾ ಕಡೆಗೂ ಹೊಸ ಜೀವನ ಕಾಣುವುದು (ಕಾಮಕೇಳಿಯಿಂದ). ಹಾಗಾಗಿ ಮನ್ಮಥ ಮತ್ತು ರತಿಯರಿಂದ ಸಂಭಾವನೆಗೊಳಗಾಗಿ (ಲಂಚಕ್ಕೊಳಗಾಗಿ ಆಮಿಷಕ್ಕೊಳಗಾಗಿ ಲಂಚ=ಆಮಿಷ) ಸಂತೋಷಪಡುವವಳೇ ಎಂದಿರಬಹುದೇನೋ?
ಉ: ಪಂಚಬಾಣಗಳು ಎಂದರೆ ಆವುವು ?
ಇದು ಸ್ವಲ್ಪ ವೈದಿಕ ತಂತ್ರಶಾಸ್ತ್ರಕ್ಕೆ ಸಂಬಂಧಿಸಿದ್ದು!
"ಪಂಚಬಾಣೇನ ರತ್ಯಾ ಚ ಸಂಭಾವಿತೇ"
ಎಂದರೆ, ಕನ್ನಡಕಂದರು ಹೇಳಿದಂತೆ, ಮದನ ಹಾಗೂ ಅವನ ಸತಿ-ರತಿ ಇಬ್ಬರಿಂದಲೂ ಸಂಭಾವಿತಳು ಈ ದೇವಿ.
ಆದರೆ 'ಸಂಭಾವಿತಾ' ಎಂಬುದಕ್ಕೆ ಟೀಕಾಕಾರರು 'ಸಂಭವಿಸುವವಳು' ಎಂಬರ್ಥ ನೀಡಿದಾಗ ಬೇರೆಯೇ ಅರ್ಥ ಬರುತ್ತದೆ!
ಅಂದರೆ ರತಿ-ಮದನರಿಂದ 'ಸಂಭವಿಸುವವಳು', ಪ್ರತ್ಯಕ್ಷವಾಗುವವಳು, ಅಥವಾ ಕನ್ನಡದಲ್ಲಿ ಮೈದೋರುವವಳು, ಮೈದಳೆಯುವವಳು!
ಇದೇ ಸಂಸ್ಕೃತಭಾಷೆಯ ನಾನಾರ್ಥ ವೈಶಿಷ್ಟ್ಯ!
ಶಾಕ್ತರು ಅಥವಾ ದೇವಿಯ ಉಪಾಸಕರು ಅತ್ಯಂತ ಶಕ್ತಿಶಾಲಿಯೆಂದು ನಂಬುವ ಮಂತ್ರವೊಂದಿದೆ; ಅದೇ ಪಂಚದಶಾಕ್ಷರೀ - ಹದಿನೈದಕ್ಕರದ ಶ್ರೀವಿದ್ಯಾ ಮಂತ್ರ. ಇದರಲ್ಲಿ ೬೪ ವಿಧಗಳಿದ್ದು, ಅವುಗಳಲ್ಲಿಯೂ ಮಹತ್ತರವಾದ ಹನ್ನೆರಡು [ಮನು, ಚಂದ್ರ, ಕುಬೇರ, ಲೋಪಾಮುದ್ರಾ, ಮನ್ಮಥ,ಅಗಸ್ತ್ಯ, ಅಗ್ನಿ, ಸೂರ್ಯ,ಇಂದ್ರ, ಸ್ಕಂದ, ಶಿವ, ಕ್ರೋಧಭಟ್ಟಾರಕ(ದೂರ್ವಾಸ)] ಪ್ರಸಿದ್ಧವಾಗಿವೆ. ಆ ಒಂದೊಂದೂ ಒಬ್ಬೊಬ್ಬ ಋಷಿ, ಮುನಿ, ದೇವತೆಗಳಿಂದ ಉಪಾಸಿಸಲ್ಪಟ್ಟು, ಅವರದೇ ಹೆಸರಿನಿಂದ ಪ್ರಸಿದ್ಧ ಕೂಡ. ಅವುಗಳಲ್ಲಿ 'ಮದನ' ಹಾಗೂ 'ರತಿ' ಕೂಡ ಸೇರಿದ್ದು, "ಪಂಚಬಾಣೇನ ರತ್ಯಾ ಚ ಸಂಭಾವಿತೇ" ಎಂದರೆ, ಆ ಎರಡು ಮಂತ್ರಗಳಿಂದ ಸಾಕ್ಷಾತ್ಕಾರಗೊಳ್ಳುವವಳೇ, ಎಂದರ್ಥ!
ಕಾದಿ(ಮದನ)ವಿದ್ಯೆಯಲ್ಲಿ ಹಯಗ್ರೀವ, ಅಗಸ್ತ್ಯ, ಶಂಕರಾಚಾರ್ಯ, ಮುತ್ತುಸ್ವಾಮಿ ದೀಕ್ಷಿತರು ಖ್ಯಾತರು.
ಹಾದಿ(ಲೋಪಾಮುದ್ರಾ)ವಿದ್ಯೆಯಲ್ಲಿ ಲೋಪಾಮುದ್ರಾ, ಕಾಲತಾಪನಾನಂದನಾಥರು ಖ್ಯಾತರು.
ಸಾದಿ(ಕ್ರೋಧಭಟ್ಟಾರಕ)ವಿದ್ಯೆಯಲ್ಲಿ ದೂರ್ವಾಸ, ಧರ್ಮಾಚಾರ್ಯರು ಖ್ಯಾತರು.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಪಂಚಬಾಣಗಳು ಎಂದರೆ ಆವುವು ?
Hats off for ur interpretation....