ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

September 26, 2008 - 2:28pm — Chetan.Jeeral

ನಮಸ್ಕಾರ ಗೆಳೆಯರೇ,
ನಿನ್ನೆ ವಿಜಯ ಕರ್ನಾಟಕ ಪತ್ರಿಕೆಯ ಒಂದು ಅಂಕಣ ಓದುತ್ತಿದ್ದೆ, ಕನ್ನಡದಲ್ಲಿರುವ ಬ್ಲಾಗ್ ಗಳ ಬಗ್ಗೆ ಒಂದು ವರದಿ ಬಂದಿತ್ತು, ಕನ್ನಡದಲ್ಲಿರುವ ಬ್ಲಾಗ್ ಗಳ ಸ್ಥಿತಿ ಗತಿಯ ಬಗ್ಗೆ ಒಂದು ಸ್ಥೂಲ ಚಿತ್ರಣ ಅದರಲ್ಲಿ ಕೊಟ್ಟಿದ್ರು. ನಿಜಕ್ಕೂ ಸಂತೋಷ ಪಡಬೇಕಾದ ವಿಷಯ ಏನೆಂದರೆ ಕನ್ನಡದಲ್ಲಿ ಸುಮಾರು ೧೦೦೦ ಕ್ಕೂ ಹೆಚ್ಚು ಬ್ಲಾಗ್ ಗಳಿವೆ, ಸಂತೋಷ. ಹಾಗೇನೇ ಇನ್ನೊಂದು ವಿಷಯ ಅವರು ಹೇಳೋದು ಏನೆಂದರೆ productive ಅನ್ನುವಂತಹ ಕೆಲಸಗಳು ಬ್ಲಾಗ್ ಗಳಲ್ಲಿ ಬರ್ತಿಲ್ಲ ಅನ್ನುವ ದೂರು. ಕೇವಲ ಕವನ, ಕಥೆ, ಹರಟೆ ಹೀಗೆ ಎಲ್ಲ ತಮ್ಮ ಪರಿಮಿತಿಯೋಳಗಿರುವ ವಸ್ತುಗಳನ್ನೇ ತೆಗೆದುಕೊಂಡು ಅಲ್ಲಲ್ಲಿ ಚರ್ಚೆ ಆಗುತ್ತೆ ಅನ್ನೋದು.
ಇದು ಸರಿ ಅನ್ನಿಸೋಲ್ವ ನಿಮಗೆ?
ಒಂದು ಬ್ಲಾಗ್ ಒಬ್ಬ ವ್ಯಕ್ತಿ ಬರಿತಾನೆ ಅಂದ್ರೆ ಮತ್ತು ಜನ ಅದನ್ನ ಓದುತ್ತಾರೆ ಅಂದ್ರೆ ಇದರ ಅರ್ಥ ಅವನಲ್ಲಿ ಏನೋ stuff ಇರಬೇಕು ಅಂತ ಅರ್ಥ. ಆದ್ರೆ ಅದು ಕೇವಲ ಕಥೆಗಳನ್ನ, ಕವನಗಳನ್ನ ಬರೆಯೋದರಲ್ಲೇ ಖರ್ಚು ಮಾಡಿದ್ರೆ ನಮ್ಮ ಕರ್ನಾಟಕದ ಏಳಿಗೆಗೆ ಅವನ ಪಾತ್ರ ಏನು.
ಸರಿ ನಾನು ಕನ್ನಡ ಸಾಹಿತ್ಯ ಲೋಕದಲ್ಲಿ ನನ್ನ ಅಂಬೆಗಾಲು ಇಡ್ತಿದಿನಿ ಅದಕ್ಕೆ ಈ ಬ್ಲಾಗ್ ಒಂದು ವೇದಿಕೆ ಅಂತ ಹೇಳಬಹುದು. ಅದು ೧೦೦% ನಿಜ. ಆದ್ರೆ ಒಮ್ಮೆ ಎಲ್ಲ ಸಾಹಿತಿಗಳನ್ನ ಕೇಳಿ ನೋಡಿ ಅವರಲ್ಲಿರುವುದು ಅಪಾರ ಜ್ನ್ಯಾನ ಭಂಡಾರ ಅದರ ಜೊತೆಗೇನೆ ಒಂದು ದೇಶ ಮತ್ತು ರಾಜ್ಯ ಉಧ್ಧಾರ ಆಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಚಿಂತನೆ ಗಳು. ಕೇವಲ ನಾನು ಮತ್ತು ನನ್ನ ಸಾಹಿತ್ಯ ಅನ್ನೋನು ಬೆಲಿಯೋಕೆ ಸಾಧ್ಯಾನ ಯೋಚನೆ ಮಾಡಿ.
ನಿಮಗೆ ಒಂದು ಉದಾಹರಣೆ ಕೊಡ್ತೀನಿ:
ನಮ್ಮ ಕರ್ನಾಟಕದಲ್ಲಿ ಯಾವುದೇ ಘಟನೆ ನಡೆಯಿತು ಅಂತ ಅಂದ್ರೆ ನಮ್ಮ media ಟಾರ್ಗೆಟ್ ಮಾಡೋದು ಒಂದು ರಾಜಕಾರಣಿಗಳನ್ನ ಮತ್ತು ಸಾಹಿತಿಗಳನ್ನ. ಕಾರಣ ಅವರಲ್ಲಿರುವ ಸಾಮಾಜಿಕ ಕಳಕಳಿ. ಇದು ನಮ್ಮ ಯುವ ಕವಿ ಮತ್ತು ಕವಯತ್ರಿಯರಲ್ಲು ಇರಬೇಕು ಅಂತ ನಿಮಗೆ ಅನ್ನಿಸೋಲ್ವ, ನಮ್ಮದೇ ಉದಾಹರಣೆ ತೊಗೊಳ್ಳೋಣ ನಾವು ಸಾಹಿತ್ಯ ಓದ್ತಿವಿ, ಬರಿತಿವಿ ಕೂಡ. ಆದ್ರೆ ಅಷ್ಟೇನಾ ನಮ್ಮ ಹೊಣೆಗಾರಿಕೆ, ನಮ್ಮ ನಾಡಿಗೆ ನಾವು ಇಟ್ಟು ಕೊಳ್ಳಬೇಕಾದ commitment?
ಇವತ್ತು ಒಂದು ಅನ್ಯಾಯ ನಡೀತಿದೆ ಅಂದ್ರೆ ನಮ್ಮಲ್ಲಿ ಎಷ್ಟು ಜನ ಅದನ್ನ ಪ್ರತಿಭಟಿಸೋಕೆ ತಯಾರಗ್ತಾರೆ.
ಹಾಗೇನೇ ಬ್ಲಾಗ್ಗ್ ಗಳ ವಿಷಯಕ್ಕೆ ಬರೋಣ, ಇವತ್ತು ನಾನು ಓದೋದು ಕೆಲವೇ ಬ್ಲಾಗ್ ಗಳನ್ನ. ಅದರಲ್ಲಿ ಸಂಪದ ಕೂಡ ಒಂದು. ನಿಜಕ್ಕೂ ಸಂಪದ ಸಂಪತ್ಭರಿತವಾಗಿದೆ. ಇಲ್ಲಿ ವೈವಿಧ್ಯಮಯ ವಿಷಯಗಳು ಕಾಣಸಿಗುತ್ತಿವೆ, ಸಂತೋಷ. ಇಲ್ಲಿ ನಿಜಕ್ಕೂ ಕೆಲವು ಒಳ್ಳೆಯ ಸಾಹಿತ್ಯ ಬರೆಯುವವರಿದ್ದಾರೆ. ಆದ್ರೆ ಕರ್ನಾಟಕ, ಕನ್ನಡಕ್ಕೆ ಸಂಭಂದಿಸಿದಂತೆ ಇಲ್ಲಿ ಯಾವತ್ತು ಒಂದು ಬಿಸಿಯಾದ ಅಥವಾ ಸತ್ವಯುತ ಚರ್ಚೆಯನ್ನು ನಾನು ಸಂಪದ ಓದಲು ಶುರು ಮಾಡಿದಾಗಿನಿಂದಲೂ ನಡೆದಿಲ್ಲ.
ನನ್ನ ಅನಿಸಿಕೆ ಪ್ರಕಾರ ಸಂಪದದಲ್ಲಿ ಸುಮಾರು ೩೦೦೦ ಕ್ಕೂ ಮಿಕ್ಕಿದ ಜನರು ಇಲ್ಲಿ ಇದ್ದರೆ. ಇಷ್ಟು ಜನ ಇದ್ರೂ ನಮ್ಮ ನಾಡು ಕಟ್ಟಲು ಸಹಾಯಕ ವಾಗುವಂತಹ ಯಾವುದೇ ನಡೆಗಳಿಲ್ಲ ಅಂದ್ರೆ ಮನಸ್ಸಿಗೆ ಬೇಜಾರಾಗುತ್ತೆ. ಇರ್ಲಿ ನಾವೇನು ಇಲ್ಲಿರುವವರೆಲ್ಲ ಪಂಡಿತರಾಗಿರಬೇಕಿಲ್ಲ ಒಂದು ವಿಷಯ ಮತ್ತು ಅದರ ಬಗ್ಗೆ ಚರ್ಚಿಸಲು ಸಾಮಾನ್ಯ ಜ್ಞಾನ ಇದ್ರೆ ಸಾಕು ಅಂದೊಕೊತಿನಿ.
ನಿಜಕ್ಕೂ ಒಳ್ಳೆಯ ಬರಹಗಾರರು ಇಲ್ಲಿ ನಮಗೆ ಕಾಣ ಸಿಗುತ್ತಾರೆ ಆದ್ರೆ ಅದನ್ನ ತಮ್ಮ ಶಕ್ತಿಯನ್ನು ಚಿಂತನೆ ಮತ್ತು ಜಿಜ್ಞಾಸೆಗೆ ಹಚ್ಚಿದರೆ ಇನ್ನು ಹೆಚ್ಚಿನ ಒಳ್ಳೆಯ ವಿಷಯಗಳು ಸಿಗಬಹುದು. ನಾಡು ಕಟ್ಟಲು ಸಹಾಯಕವಾಗಬಹುದು.
ನೀವೆನಂತಿರಾ???????? Smiling

‹ ಕನ್ನಡಕ್ಕೂ ಸಂದ ಗೌರವ: ತುಂಗಾ ಫಾಂಟನ್ನು ಪರಿಷ್ಕರಿಸಲು ಮುಂದೆ ಬಂದಿರುವ ಮೈಕ್ರೋಸಾಫ್ಟ್ ದ್ರಾವಿಡ್ ವಿಕ್ರಮ ›
  • ಅರಳಿ ಕಟ್ಟೆ
~.~
  • Login or register to post comments
  • 176 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?
  • ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?
  • ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
  • ಇದು ಕರ್ನಾಟಕವಲ್ಲ ಕಾಣಿರೋ
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
Syndicate content

ಲೇಖಕರು

Chetan.Jeeral's picture

ಪೂರ್ಣ ಹೆಸರು
ಚೇತನ್ ಜೀರಾಳ

ಪರಿಚಯ

ಹಾಯ್
ನಾನು ವೃತ್ತಿಯಿಂದ ಒಬ್ಬ ಇಂಜಿನಿಯರ್ . ಪ್ರವೃತ್ತಿಯಿಂದ ಲೇಖಕ, ಆದ್ರೆ ಕನ್ನಡ ನನ್ನ ಪ್ರಾಣ. ನನ್ನ ಬಗ್ಗೆ ಉಳಿದೆಲ್ಲ ವಿವರ ಆನ್ ಇಂಟ್ರೆಸ್ಟಿಂಗ್.
ನನ್ನ ಇನ್ನೊಂದು ಬ್ಲಾಗ್
http://aatadabayalu.blogspot.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator