ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಳೆಗನ್ನಡ

ಕೇಶಿರಾಜನ ಶಬ್ದಮಣಿ ದರ್‍ಪಣಂ

March 6, 2006 - 6:15pm — ಮಹೇಶ ಭೋಗಾದಿ

ಸಂಸ್ಕೃತ ವ್ಯಾಕರಣವು ಪಾಣಿನಿಯ "ಅಷ್ಟಾಧ್ಯಾಯೀ"ಯನ್ನು ಸಂಪೂರ್‍ಣವಾಗಿ ಪಾಲಿಸುವಂತೆ,

 ಕನ್ನಡವು ಕೇಶಿರಾಜನ "ಶಬ್ದಮಣಿ ದರ್‍ಪಣಂ"ವನ್ನು ಪಾಲಿಸುವುದೆ?

‹ ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ ಚಾಳುಕ್ಯನೇ ಚಾಣುಕ್ಯನೇ? ›
  • ಹಳೆಗನ್ನಡ
~.~
  • Login or register to post comments
  • 1413 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 11, 2006 - 12:11pm — ismail

ಶಬ್ದಮಣಿ ದರ್ಪಣ

ismail's picture

ಕನ್ನಡವು ಕೇಶಿರಾಜನ ಶಬ್ದಮಣಿ ದರ್ಪಣವನ್ನು ಪಾಲಿಸುವುದಿಲ್ಲ. ಪಾಲಿಸಬೇಕಾಗಿಲ್ಲ.
ಇದು ಏಕೆ ಎಂಬುದಕ್ಕೆ ಹೆಚ್ಚಿನ ವಿವರಗಳನ್ನು ತಿಳಿಯಬೇಕಿದ್ದರೆ ಡಿ. ಎನ್‌. ಶಂಕರಭಟ್‌ ಅವರ `ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಪುಸ್ತಕವನ್ನು ಓದಬಹುದು. ಹಾಗೆಯೇ ಸಂಸ್ಕೃತ ಪಾಣಿನಿಯ ಅಷ್ಟಾಧ್ಯಾಯಿಯನ್ನು ಈಗಲೂ ಪಾಲಿಸುತ್ತಿರುವುದಕ್ಕೆ ಮುಖ್ಯ ಕಾರಣ ಆ ಭಾಷೆಯ ಬೆಳವಣಿಗೆ ಸ್ಥಗಿತಗೊಂಡಿರುವುದು. ಅಂದರೆ ಅದು ಸಾಮಾನ್ಯ ಬಳಕೆಯ ಅಥವಾ ನಿತ್ಯ ಬಳಕೆಯ ಭಾಷೆಯಾಗಿ ಉಳಿಯದೆ ಕೇವಲ ಗ್ರಂಥಗಳಲ್ಲಿ ಮಾತ್ರ ಉಳಿದುಕೊಂಡಿರುವುದರಿಂದ ಅದು ಹೊಸ ಪ್ರಯೋಗಗಳಿಗೆ ಒಳಗಾಗದೆ ಉಳಿದಿದೆ.
ಇನ್ನು ಕನ್ನಡದ ವಿಷಯಕ್ಕೆ ಬಂದರೆ ಕೇಶಿರಾಜನ ಕಾಲದಲ್ಲಿಯೂ ಕನ್ನಡವು ಶಬ್ದಮಣಿದರ್ಪಣವನ್ನು ಪಾಲಿಸುತ್ತಿರಲಿಲ್ಲ. ಜೀವಂತ ಭಾಷೆಗಳ್ಯಾವೂ ನಿರ್ದಿಷ್ಟ ವ್ಯಾಕರಣ ನಿಯಮಗಳೊಳಗೆ ಉಳಿಯುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 13, 2006 - 11:22am — ಮಹೇಶ ಭೋಗಾದಿ

ಪಾಣಿನಿ

ಮಹೇಶ ಭೋಗಾದಿ's picture

ಹಾಗೆಯೇ ಸಂಸ್ಕೃತ ಪಾಣಿನಿಯ ಅಷ್ಟಾಧ್ಯಾಯಿಯನ್ನು ಈಗಲೂ ಪಾಲಿಸುತ್ತಿರುವುದಕ್ಕೆ ಮುಖ್ಯ ಕಾರಣ ಆ ಭಾಷೆಯ ಬೆಳವಣಿಗೆ ಸ್ಥಗಿತಗೊಂಡಿರುವುದು. 

ಪಾಣಿನಿಯ ವ್ಯಾಕರಣಸೂತ್ರೆಗಳನ್ನು ಕನ್ನಡವು ಪಾಲಿಸುತ್ತದೆ.

ನಿದರ್ಶನಗಳು:

೧) ಕನ್ನಡದ ವರ್ಣಮಾಲೆ ಸಂಸ್ಕೃತದ ವರ್ಣಮಾಲೆಯನ್ನು ಅನುಸರಿಸುತ್ತದೆ. ಸಂಸ್ಕೃತದ ವರ್ಣಮಾಲೆ ಪಾಣಿನಿಯ ವ್ಯಾಕರಣ ಸೂತ್ರಗಳನ್ನು ಪಾಲಿಸುತ್ತದೆ. ಆದ್ದರಿಂದ ಕನ್ನಡದ ಅಕ್ಷರಮಾಲೆಯು ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.

೨) ಕನ್ನಡದ ಸಂಧಿ, ಸಮಾಸ ಕ್ರಿಯೆಗಳು ಸಂಸ್ಕೃತದ ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.

೩)ಅವ್ಯಯಗಳು ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.

ಆದ್ದರಿಂದ ಕನ್ನಡವು ಸಂಪೂರ್ಣವಾಗಲ್ಲದಿದ್ದರೂ, ಭಾಗಶಃ ವಾಗಿ ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.

ಇನ್ನೊಂದು ಮಾತು ಕನ್ನಡವು ಸಂಸ್ಕೃತವನ್ನು ಬಹಳವಾಗಿ ಅವಲಂಬಿಸಿದೆ. ಸಂಸ್ಕೃತಪದಗಳ ಹೊರತು ಕನ್ನಡವು ಬಹಳ ದುರ್ಬಲ ಮತ್ತು ಸೀಮಿತ ಭಾಷೆಯಾಗುವುದು.  ವ್ಯಾಕರಣ, ವೈದ್ಯಕೀಯ, ನ್ಯಾಯಾಂಗ, ವಿಜ್ಙಾನ, ಸಾಹಿತ್ತ, ಧಾರ್ಮಿಕ, ಸಾಮಾಜಿಕ, ಶಿಕ್ಷಣ, ಆಡಳಿತ, ಸಮೂಹಮಾಧ್ಯಮ ಮುಂತಾದ ಎಲ್ಲ ವಿಭಾಗಗಳಲ್ಲು ಕನ್ನಡವು ಸಂಸ್ಕೃತಪದಗಳನ್ನೆ ಶೇಕಡ ೯೦ರಷ್ಟು ಉಪಯೋಗಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 13, 2006 - 12:03pm — shreekant.mishrikoti

ಕನ್ನಡ ಮತ್ತು ಸಂಸ್ಕೃತ

shreekant.mishrikoti's picture
  •  ಕನ್ನಡದ ವರ್ಣಮಾಲೆ ಸಂಸ್ಕೃತದ ವರ್ಣಮಾಲೆಯನ್ನು ಅನುಸರಿಸುತ್ತದೆ. ಸಂಸ್ಕೃತದ ವರ್ಣಮಾಲೆ ಪಾಣಿನಿಯ ವ್ಯಾಕರಣ ಸೂತ್ರಗಳನ್ನು ಪಾಲಿಸುತ್ತದೆ. ಆದ್ದರಿಂದ ಕನ್ನಡದ ಅಕ್ಷರಮಾಲೆಯು ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.

ಋ , ಲೃ ಮುಂತಾದ ಶಬ್ದಗಳನ್ನು ಈಗಾಗಲೇ ಕೈಬಿಟ್ಟಾಗಿದೆ. ಮಹಾಪ್ರಾಣಗಳನ್ನು , 'ಷ'  ಮುಂತಾದವನ್ನು  ಕೈಬಿಡುವ ಯೋಚನೆಯನ್ನು ಕೆಲವರು ಮಾಡುತ್ತಿದ್ದಾರೆ.! ( 'ಕನ್ನಡ ಬರಹವನ್ನು ಸರಿಪಡಿಸೋಣ'- ಶಂಕರಭಟ್ಟರ ಪುಸ್ತಕ ನೋಡಿ)

 

  • ೨) ಕನ್ನಡದ ಸಂಧಿ, ಸಮಾಸ ಕ್ರಿಯೆಗಳು ಸಂಸ್ಕೃತದ ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.
  • ೩)ಅವ್ಯಯಗಳು ಪಾಣಿನಿಯ ವ್ಯಾಕರಣಸೂತ್ರಗಳನ್ನೆ ಪಾಲಿಸುವುದು.

ಕನ್ನಡದಲ್ಲಿರುವ  ಸಂಸ್ಕೃತ ಶಬ್ದಗಳು ಮಾತ್ರ ಸಂಧಿ -ಸಮಾಸ ವಿಷಯಗಳಲ್ಲಿ ಸಂಸ್ಕೃತ ನಿಯಮ ಪಾಲಿಸುವವು . ( ನೋಡಿ - ಶಂಕರಭಟ್ಟರ ' ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ')

  •  ....ಮುಂತಾದ ಎಲ್ಲ ವಿಭಾಗಗಳಲ್ಲು ಕನ್ನಡವು ಸಂಸ್ಕೃತಪದಗಳನ್ನೆ ಶೇಕಡ ೯೦ರಷ್ಟು ಉಪಯೋಗಿಸುತ್ತದೆ.

ಸಂಸ್ಕೃತ ಶಬ್ದಗಳ ಬದಲು  ಸಾಧ್ಯವಿದ್ದಲ್ಲಿ ಅಚ್ಚ ಕನ್ನಡ ಶಬ್ದಗಳ ಬಳಕೆಯ ಯತ್ನವನ್ನು ಕೆಲವರು ಮಾಡುತ್ತಿದ್ದಾರೆ.   ಮತ್ತು ಹೆಚ್ಚು ಸಂಸ್ಕೃತ ಶಬ್ದಗಳನ್ನು ಶಿಷ್ಟ ಸಾಹಿತ್ಯದಲ್ಲಿ, ಪುಸ್ತಕದ ಭಾಷೆಯಲ್ಲಿ , ಇಂಗ್ಲೀಷಿನ ಶಬ್ದಗಳ ಬದಲಾಗಿ ಹೊಸಪದಗಳನ್ನು  ಚಲಾವಣೆಗೆ ತರುವಲ್ಲಿ ಮಾತ್ರ ನೋಡಬಹುದು ಅಂತ ನನಗೆ ಅನಿಸುತ್ತದೆ.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 13, 2006 - 12:24pm — ಮಹೇಶ ಭೋಗಾದಿ

ಕನ್ನಡ ಸಂಸ್ಕೃತ

ಮಹೇಶ ಭೋಗಾದಿ's picture

"ೠ" ಕಾರವನ್ನು ಸರಕಾರ ಬಿಟ್ಟಿರಬಹುದು ಆದರೆ.

ಮಾತೃ+ಋಣ = ಮಾತೄಣ ವಾಗುವುದು, ಹೀಗೆ

ಪಿತೃ+ಋಣ = ಪಿತೄಣ

ಆದ್ದರಿಂದ "ೠ"ಕಾರವು ಕನ್ನಡದಲ್ಲು ಅವಶ್ಯಕವೆ.

ಇನ್ನು ಲೃ.. ಕನ್ನಡದಲ್ಲಿ ಸಂಸ್ಕೃತ ಶ್ಲೋಕಗಳನ್ನು ಮತ್ತು ವೇದ ಮಂತ್ರಗಳನ್ನು ಮುದ್ರಿಸುವಾಗ "ಲೃ"ಕಾರವು ಬೇಕು.

ಕನ್ನಡದಲ್ಲಿ ಕೇವಲ, ಆದೇಶ, ಲೋಪ ಮತ್ತು ಆಗಮ ಗಳೆಂಬ ಮೂರು ಸಂಧಿಗಳು ಕನ್ನಡ ಸಂಧಿಗಳು. ಹಾಗು ಸವರ್ಣಧೀರ್ಘ, ಗುಣ, ಯಣ್, ವೃದ್ಧಿ, ಅನುನಾಸಿಕ, ವಿಸರ್ಗ, ಇತ್ಯಾದಿಗಳು ಸಂಸ್ಕೃತದ ಸಂಧಿಗಳು.

ಆದರೆ ಕಿಸು+ಪೊೞಲ್ = ಕಿಸುವೊೞಲ್ ("ಕವಿ ರಾಜ ಮಾರ್ಗ") ಇದು ಯಾವ ಸಂಧಿ, ಹಾಗೆ

ಕಿರು + ಮಕ್ಕಳ್ = ಕಿರುವಕ್ಕಳ್("ಕವಿ ರಾಜ ಮಾರ್ಗ")?

ಇನ್ನು ಸಮಾಸಗಳಲ್ಲಿ ಗಮಕ ಮತ್ತು ಅರಿ ಸಮಾಸಗಳನ್ನು ಬಿಟ್ಟು ಮಿಕ್ಕೆಲ್ಲ ಸಮಾಸಗಳು ಸಂಸ್ಕೃತದ್ದೆ.

ನಮ್ಮ ನಾಡ ಗೀತೆಯ ಮೊದಲ ಸಾಲಾದ

"ಜಯ ಭಾರತ ಜನನಿಯ ತನುಜಾತೆ, ಜಯ ಹೆ ಕರ್ಣಾಟಕ ಮಾತೆ" ಯಲ್ಲಿ ಒಂದೂ ಅಚ್ಚಗನ್ನಡ ಪದವಿಲ್ಲ ಎಲ್ಲವು ಸಂಸ್ಖೃತದ ಪದಗಳು.

ಹೀಗೆ ಇತ್ಯಾದಿ

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 4:08pm — kannadakanda

ಉ: ಕನ್ನಡ ಸಂಸ್ಕೃತ

kannadakanda's picture

ಕನ್ನಡದ ನಿಘಂಟುಗಳಲ್ಲಿರುವ ऌಕಾರ ಶಬ್ದ कॢप्त ಕನ್ನಡ ನಿಘಂಟುವಿನಲ್ಲೂ ಇರುವ ಒಂದೇ ಶಬ್ದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ನನ್ನ ಕಾವ್ಯ
  • ರಾಜಕೀಯ
  • "ವಿಧಿ"
  • "ಪ್ರೀತಿಯ ಗೆಳೆಯ"
Syndicate content

ಲೇಖಕರು

ಮಹೇಶ ಭೋಗಾದಿ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator