ಕಾಳಿದಾಸ ಭಾಸ
ದಯವಿಟ್ಟು.
ಕಾಳಿದಾಸ ಭಾಸರ ಕೃತಿಗಳನ್ನು ಅನ್ವಯಾನುಸಾರವಾಗಿ (ಪದ ಪದ ಅರ್ಥ) ಕನ್ನಡದಲ್ಲಿ ಭಾಷಾಂತರಿಸಿರುವ ಪುಸ್ತಕಗಳನ್ನು ತಿಳಿಸಿ.
ಅದರಲ್ಲು ಕಾಳಿದಾಸನ ಮೇಘದೂತವು ಅತ್ಯಂತ ರಮಣೀಯವಾಗಿದೆಯೆಂದು ನನ್ನ ಮಿತ್ರನೊಬ್ಬ ಹೇಳುತ್ತಾನೆ.

- Login or register to post comments
- 889 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಮೇಘದೂತ
ಕಾಳಿದಾಸನ ಮೇಘದೂತದ ಬಗ್ಗೆ ಹೇಳುವುದಾದರೆ, ಈ ಕೃತಿಯ ತಾತ್ಪರ್ಯ, ಅನ್ವಯಾರ್ಥ ಎಲ್ಲವೂ ಇರುವ ಪುಸ್ತಕ ಲಭ್ಯವಿದೆ.
ಇದನ್ನು ಕನ್ನಡಕ್ಕೆ ಬಿ. ಗೋಪಾಲ ರಾವ್ ಎಂಬುವರು ಅನುವಾದಿಸಿ ಕೊಟ್ಟಿದ್ದಾರೆ. ಬಹಳ ಚೆನ್ನಾಗಿದೆ. ಓದಿ ನೋಡಿ.
ಕೃತಿಯ ಹೆಸರು - ಮಹಾಕವಿ ಕಾಳಿದಾಸ ಪ್ರಣೀತ ಮೇಘದೂತ
(ಮೂಲಶ್ಲೋಕ, ಮಲ್ಲಿನಾಥನ ಸಂಜೀವಿನೀ ವ್ಯಾಖ್ಯಾನ ತಾತ್ಪರ್ಯ ಮತ್ತು ಅನ್ವಯಾರ್ಥ)
ಕನ್ನಡಕ್ಕೆ - ಬಿ. ಗೋಪಾಲರಾವ್
ಪ್ರಕಾಶಕರು - ಅಂಕಿತ ಪುಸ್ತಕ
ದೊರೆತ ಸ್ಥಳ - ಅಂಕಿತ ಪುಸ್ತಕ
ಮೇಘದೂತ ದ ಬಗ್ಗೆ ಸಂಪದದಲ್ಲಿ ಸ್ವಲ್ಪ ಹಿಂದೆ ಸಣ್ಣ ಚರ್ಚೆ(??) ನಡೆದಿತ್ತು. ಮೇಘದೂತ ಎಂದು ಹುಡುಕಿ ನಲ್ಲಿ ಕೊಟ್ಟು ನೋಡಿ. ಕೊಂಡಿಗಳು ಸಿಗುತ್ತವೆ.
ಸಾಧ್ಯವಾದರೆ ಅದರ ಬಗ್ಗೆ ಒಂದು ವಿಮರ್ಶೆ ಬರೆಯಬೇಕೆಂದಿದ್ದೇನೆ.
ವಿಮರ್ಶೆ
ಕಾಳಿದಾಸನ ಮೇಘದೂತದೊಂದಿಗೆ ಇತರ ಕೃತಿಗಳ ವಿಮರ್ಶೆಯನ್ನೂ ಬರೆಯಿರಿ.
ಉಪಮೆಗೆ ಕಾಳಿದಾಸ ಹೆಸರುವಾಸಿಯಾದಂತೆ, ಅರ್ಥವತ್ತಾಗಿ ಬರೆದಿರುವ ಭಾರವಿ, ಸುಲಭ ಪದಗಳನ್ನು ಬಳಸಿದ ದಂಡಿ ಮತ್ತು ಈ ಎಲ್ಲ ಗುಣಗಳನ್ನೂ ಒಳಗೂಡಿಸಿದ ಮಾಘನ ಕೃತಿಗಳನ್ನೂ ನಮಗೆ ತೋರಿಸಿಕೊಡಿ. ಸಂಪದ ಸಂಪದ್ಭರಿತವಾಗಲಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
Re: ವಿಮರ್ಶೆ
ಉಪಮಾ ಕಾಲಿದಾಸಸ್ಯ ಭಾರವೇರರ್ಥಗೌರವಂ
ದಂಡಿನಃ ಪದಲಾಲಿತ್ಯಂ ಮಾಘೆ ಸಂತಿ ತ್ರಯೋ ಗುಣಾ: ||
ಕಾಳಿದಾಸ ಉಪಮಾ (= ಉಪ್ಪಿಟ್ಟು = ಖಾರಾಭಾತ್ ) ಮಾಡುತ್ತಿದ್ದನೇ? MTR Readymix ಬಳಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ
- ಶ್ರೀವತ್ಸ ಜೋಶಿ
"ಸೂಚಿಭೇದತಮ"
ಎಲ್ಲರಿಗೆ ಧನ್ಯವಾದ.
ಒರ್ಕುಟನಲ್ಲಿ "ಸಂಸ್ಕೃತ" ಸಮುದಾಯದಲ್ಲಿ ಮೇಘದೂತದ ಬಗ್ಗೆ ಕೇಳಿ ನನಗೂ ಅದನ್ನು ಓದಬೇಕೆನಿಸಿತು.
ಅದರಲ್ಲಿ ಈ ಮಾತು ಬಂದಿದೆ "ಸೂಚಿಭೇದೈ: ತಮೋಭಿ:".
ಇದರ ಅರ್ಥ ನಾನು ತಿಳಿದಂತೆ,
ಕಣ್ಣಿಗೆ ತಮಗೆ ತಾವೆ ಸೂಜಿ ಚುಚಿಕೊಳ್ಳುವಷ್ಟು ಕಗ್ಗತ್ತಲಿನಿಂದ
ಮಹಾಕವಿ ಕಾಳಿದಾಸ ಪ್ರಣೀತ ಮೇಘದೂತ
ಧನ್ಯವಾದ ಸುನಿಲರೆ,
ನಿನ್ನೆ ಕೊಂಡು ತಂದೆ. ಓದಲು ಶುರುಮಾಡಿದ್ದೇನೆ.
ನೀವು ಓದಾಯಿತೆ? ನಿಮಗೆ ಮಲ್ಲಿನಾಥನ ವ್ಯಾಖಾನಗಳು ಹೇಗೆ ಅನ್ನಿಸಿದವು?
ಬೇ೦ದ್ರೆ
ಬೇ೦ದ್ರೆಯವರ ಕನ್ನಡ ಮೇಘದೂತವನ್ನು ಓದಿ... ಅದರಷ್ಟು ಮಧುರವಾಗಿ ಬೇರೆ ಅನುವಾದ ಇರಲಿಕ್ಕ್ ಇಲ್ಲಾ.
ಕೆಲವು ಪದ್ಯಗಳನ್ನು ಇಲ್ಲಿ ಬರೆಯುತ್ತಿದ್ದೇನೆ.
****************************
ಪೂಜ್ಯ ವಸ್ತುವಿನ ಪೂಜೆಗೊದಗದಾ ನಾದವಿದ್ದು ಏನು ??
ಗೆಳೆಯಗಾಗಿ ಕೈಕೊ೦ಡ ಕೆಲಸವನು ನಡುವೆ ಬಿಡುವರು೦ಟೇ??
ಬಣ್ಣವಿರಲಿ ಕರಿ; ಬೆಳ್ಳಗಾಗು ಒಳಗೆಲ್ಲ ಬೆಳಕು ತು೦ಬಿ..
ಮುಗಿಲಿಗೆ೦ದು ಕೈ ಹಾಕಿ ಹಾರಿದರೆ ಕಾಲು ಮುರಿದುಕೊಳರೆ ??
ಕಷ್ಟ ಕಳೆವುದೇ ಇಷ್ಟವಹುದು ಉತ್ತಮರ ಶಕ್ತಿಗಳಿಗೆ !!
ಜಡವೋ ಚೇತನವೋ ಬಯಕೆ ಮರುಳರಿಗೆ ಯಾವ ವಸ್ತುವೇನು ??
ನಿನ್ನ ವಿರಹ ವ್ಯಥೆಯಿ೦ದ ಬೆ೦ದು ಬದುಕಿಹೆನು ಹೇಗೋ ಇ೦ದು ...
ಇಷ್ಟು ಚೆನ್ನಾಗಿ ಮಾಡಿದ್ದಾರೆ ಅಲ್ಲವೇ ??
ಶತಾವದಾನಿ ಗಣೇಶ್ .. ಕಾಲಿದಾಸನ ಮೇಘದೂತ/ ಬೇ೦ದ್ರೆ ಯ ಮೇಘದೂತ
ಎರಡನ್ನೂ ಪಕ್ಕ ಪಕ್ಕ ಇಟ್ಕೋ೦ಡು ಒ೦ದು ಉಪನ್ಯಾಸ ಕೊಟ್ಟಿದ್ದರು.
ಗೋಖಲೆ ಕೇ೦ದ್ರದಲ್ಲಿ CD ಸಿಗುತ್ತೆ.
ವರಕವಿ ಬೇ೦ದ್ರೆ ಸಮಾನರು೦ಟೇ ???
ಪರಮೇಶ್ವರ ಭಟ್ಟ.. ಭಾಸ ನ/ಕಾಲಿದಾಸನ ಸಮಗ್ರ ಸ೦ಪುಟವನ್ನು ಪ್ರಕಟಿಸಿದ್ದಾರೆ.