ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಯಕ್ಷ ಪ್ರಶ್ನೆ

March 7, 2006 - 7:30pm — Sunil Jayaprakash

ಯಕ್ಷ ಪ್ರಶ್ನೆ

ಇದು ನಿಜವೆ. ಅದ್ಹೇಗೆ ಸಾಧ್ಯ, ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರಿಗಿಂತ ಅವರು ಆ ಕೆಲಸದಲ್ಲಿ ದಕ್ಷರೇ..

ಇದು ಹೇಗೆ ಸಾಧ್ಯ.

ನೋಡಿ ಸ್ವಾಮಿ ಕಳೆದ ಶುಕ್ರವಾರ ಹೀಗೊಂದು ಪ್ರಸಂಗ ನಡೆಯಿತು. ಬೆಂಗಳೂರು ವಿಮಾನ ನಿಲ್ದಾನ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಹತ್ತಿರವಿರುವ ಅದ್ಯಾವುದೋ ಮೇಲ್ಸೇತುವೆ ಬಳಿ ಬಸ್ಸಿಗಾಗಿ ಕಾಯುತ್ತಿರಲಾಗಿ, ತಕ್ಷಣ ಒಂದು ಮಹಿಳಾ ನಿರ್ವಾಹಕರಿರುವ (ಕಂಡಕ್ಟರ್ – ಇಂಗ್ಲೀಷಿನಲ್ಲೂ ಏಕೆ ಹಾಕಿರುವೆನೆಂದು ನಂತರ ತಿಳಿಸುವೆ) ಬಸ್ ಬಂದು ನಿಂತಿತು. ಸರಿ ಎಂದು ಹತ್ತಿದೆ.

ಎಷ್ಟೋ ಬಸ್ಸುಗಳಲ್ಲಿ ಈಗ ನಿರ್ವಾಹಕಿಯರಿರುತ್ತಾರಾಗಿ,  ಹಾಗಾಗಿ ಇದೊಂದು ವಿಶೇಷ ಎನಿಸಲಿಲ್ಲ. ಆಕೆ ಹಣೆಗೆ ದಪ್ಪ ಕುಂಕುಮ ಇಟ್ಟುಕೊಂಡಿದ್ದರು. ನೋಡಿದರೆ ಸಾಕು ಪುಣ್ಯಾತ್ಮೆ ಎಂದು ಹೇಳಬಹುದು. ಆದರೆ ವಿಷಯ ಅದಲ್ಲ. ಸಾಮಾನ್ಯವಾಗಿ ನಿರ್ವಾಹಕರು ಕೇವಲ ಟಿಕೇಟು(ಇದಕ್ಕೆ ಕನ್ನಡ ಪದ ಏನು) ಕೊಟ್ಟು ತಮ್ಮ ಕರ್ತವ್ಯ ಮುಗಿಯಿತು ಎಂದು ತಿಳಿಯುತ್ತಾರೆ. ಆದರೆ ಈ ನಿರ್ವಾಹಕಿಯಲ್ಲಿ ಒಂದು ವಿಶೇಷ ಗುಣವಿತ್ತು. ಅದೇನೆಂದರೆ ಪ್ರಯಾಣಿಕರು ಎಲ್ಲಿ ಕುಳಿತುಕೊಳ್ಳಬೇಕು, ಎಲ್ಲಿ ನಿಂತುಕೊಳ್ಳಬೇಕು ಎಂದೂ ಸಹ ಗಮನವಿಡುತ್ತಿದ್ದಳು.

ಅವರವರು ಇಳಿಯುವ ನಿಲ್ದಾಗಳಿಗನುಗುಣವಾಗಿ ಹೀಗೆ ಹೇಳುತ್ತಿದ್ದರು.
ಪ್ರಸಂಗ ೧. ಸ್ವಾಮಿ ಇವರು ಜಂಕ್ಷನ್ ನಲ್ಲಿ ಇಳಿಯುತ್ತಾರೆ, ನೀವು ಮಡಿವಾಳ, ಹಾಗಾಗಿ ಸ್ವಲ್ಪ ಹಿಂದೆ ಹೋಗಿ ಕುಳಿತುಕೊಳ್ಳಿ ಇವರು ಇಲ್ಲಿ ಕುಳಿತುಕೊಳ್ಳಲಿ.

ಪ್ರಸಂಗ ೨.
ಯಾರೋ ಇಬ್ಬರು, ಮಾತನಾಡಿಕೊಂಡು ಮಡಿವಾಳ ಮಸೀದಿ ಎಂದರು,
ನಿ: .ಯಾಕೆ ಅನುಮಾನ ಯಾವ ಕಡೆ ಹೋಗ್ಬೇಕು.
ಪ್ರ: ಆಕ್ಚುಲಿ ನಾವು ಬನಶಂಕರಿ ಕಡೆ ಹೋಗ್ಬೇಕು.
ನಿ: ಸರಿ ಹಾಗಾದರೆ, ಮಡಿವಾಳ ಮಸೀದಿ ಬೇಡ, ಇನ್ನೊಂದು ನಿಲ್ದಾಣದ ಹೆಸರನ್ನು ಹೇಳಿದರು. (ಬಸವನಗುಡಿ ಹತ್ತಿರವಿದ್ದು ಬಸವನಗುಡಿಯನ್ನೇ ಸರಿಯಾಗಿ ನೋಡಿಲ್ಲದ ನನಗೆ ಆ ನಿಲ್ದಾಣದ ನೆನಪಿಲ್ಲ. ಅವರು ಇಳಿಯುತ್ತಿದ್ದಾಗ ನೋಡಿದೆ, ಮಹಾಯೋಗಿ ವೇಮನ ರಸ್ತೆ ಅಂತ ಬರೆದಿತ್ತು).

ಪ್ರಸಂಗ ೩
ಏ ಮರಿ, ನೀನು ಮಸೀದಿ ಹತ್ತಿರ ಅಲ್ವೇನೋ ಇಳಿಯೋದು, ಸ್ವಲ್ಪ ಆಕಡೆ ನಿಂತ್ಕೋ, ಇವರು ಈಕಡೆ ನಿಂತ್ಕೊಳ್ಲಿ, ಬೇಗ ಇಳೀತಾರೆ.
ಇನ್ನೂ ಕೆಲವು.

ಹೀಗೆ ಪ್ರಯಾಣಿಕರ ಅಗತ್ಯಗಳಿಗನುಗುಣವಾಗಿ ಕೇವಲ ಟಿಕೇಟಲ್ಲದೆ, ಪ್ರಯಾಣಿಕರ ಕ್ಷೇಮವನ್ನೂ ಗಮನಿಸುತ್ತಿದ್ದ ಆ ನಿರ್ವಾಹಕಿಯ ಬಗ್ಗೆ ಗೌರವ ಮೂಡಿತು.
ಅಂದಹಾಗೆ ನನ್ನ ಪ್ರಶ್ನೆ ನಿರ್ವಾಹಕಿಯದ್ದಲ್ಲ. ನಾಲ್ಕು ದಿನಗಳಿಂದ ಒಂದು ಪ್ರಶ್ನೆ ಕೊರಿತಾ ಇದೆ. ಇಷ್ಟು ಚೆನ್ನಾಗಿ(ಕೆಲವರಿಗೆ ನಾಜೂಕಾಗಿ ಪದ ಇಷ್ಟವಾಗಬಹುದು) ಕೆಲಸ ನಿರ್ವಹಿಸುತ್ತಿದ್ದ ಆ ಮಹಿಳೆಯನ್ನು ನೋಡಿ ಒಂದು ವಿಚಾರ ಚರ್ಚಿಸಬೇಕು ಎನಿಸುತ್ತಿದೆ. ಮಹಿಳೆಯರು ಪುರುಷರಿಗಿಂತ ಉತ್ತಮ ನಿರ್ವಾಹಕರಾಗಬಲ್ಲರೇ. ಇಲ್ಲಿ ನಿರ್ವಾಹಕ ಪದ ಇಂಗ್ಲೀಷಿನ ಮ್ಯಾನೇಜರ್ ಪದಕ್ಕೆ ಸಮನಾಗಿ ಬಳಸಿದ್ದೇನೆ. ಮೇಲಿನ ಪ್ರಸಂಗದಲ್ಲಿ ನಿರ್ವಾಹಕ ಕಂಡಕ್ಟರ್ ಆಗಿದ್ದ. ಅಂದರೆ ಒಬ್ಬ ಮಹಿಳಾ ಮ್ಯಾನೇಜರ್ ಪುರುಷ ಮ್ಯಾನೇಜರ್ ಗಿಂತ ಸಫಲವಾಗಬಲ್ಲಳೆ.
ಮಹಿಳೆಯರಿಗೆ ಈ ಮ್ಯಾನೇಜ್ ಮಾಡುವ ಕೆಲಸ ಹುಟ್ಟಿನಿಂದಲೇ ಪರಂಪರಾಗತವಾಗಿ ಬಂದಿರುವುದರಿಂದ ಅನೇಕ ಅವಕಾಶಗಳಿರುವ ಈ ಸ್ಪರ್ಧಾ ಪ್ರಪಂಚದಲ್ಲಿ ಇವರು (ಮಹಿಳೆಯರು) ಅವರನ್ನು(ಪುರುಷರನ್ನು) ಹಿಂದಿಕ್ಕುತ್ತಾರೆಯೆ.
ಆದರೆ ನೋಡಿ ಒಂದು ವಿಚಾರದಲ್ಲಿ, ಇವರು ಸ್ವಲ್ಪ ಹಿಂದೆ. ಸಂಪದದಲ್ಲಿ ಪ್ರಕಟವಾದ ವಿವಾಹದ ವಯಸ್ಸು ಲೇಖನಕ್ಕೆ ಒಬ್ಬ ಮಹಿಳೆಯೂ ಉತ್ತಿರಿಸಿಲ್ಲ.

‹ ಅಹಿರಾಮೃಗ - ಕೇಳಿದ್ದೀರಾ? ಮೊಬೈಲ್ ಫಿಲಾಸಫಿ ಭಾಗ ೧ ›
  • ಹರಟೆ ಕಟ್ಟೆ
~.~
  • Login or register to post comments
  • 577 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 8, 2006 - 7:17am — sinchanabhat

ಮಾನವೀಯ

sinchanabhat's picture

ಮಾನವೀಯ ಮೌಲ್ಯಗಳನ್ನು ಹೊಂದಿರುವ ಆ ನಿರ್ವಾಹಕಿಯ ಕುರಿತು ಕೇಳಿ ತುಂಬಾ ಸಂತಸವಾಯಿತು.ಅಂತಹ ಒತ್ತಡದಲ್ಲೂ ಅಷ್ಟು ಸಹನೆಯಿಂದ ಕೆಲಸಮಾಡುವುದು ಸುಲಭವಲ್ಲಾ.
ಇನ್ನು ನಿಮ್ಮ ಪ್ರಶ್ನೆಗೆ ನನ್ನ ಉತ್ತರ ಹೌದು ಎಂದು. ಮಹಿಳೆ ತನ್ನನ್ನು ತಾನು ಪೂರ್ತಿಯಾಗಿ ತೊಡಗಿಸಿಕೊಂಡು ಕೆಲಸವನ್ನು ಪ್ರೀತಿಸುತ್ತಾ ಮಾಡುತ್ತಾಳೆ(ಎರಡೂಕಡೆ ಕೆಲವು ಅಪರಾಧಗಳೂ ಇರುತ್ತವೆ).ಬುದ್ದಿಯನ್ನು ಉಪಯೋಗಿಸಿ ಮಾಡುವ ಯಾವಕೆಲಸದಲ್ಲಾದರೂ ಅವಳು ಅಷ್ಟೊಂದು ಪ್ರಯಾಸವಿಲ್ಲದೆ ಪುರುಷರನ್ನು ಮೀರಿಸ ಬಲ್ಲಳು ಅನ್ನುವುದಕ್ಕಿಂತ ಹೆಚ್ಚಿನ ಯಶಸ್ಸನ್ನು ಪಡೆಯಬಲ್ಲಳು.ಇನ್ನು ಮ್ಯಾನೇಜ್ ಮಾಡುವ ಗುಣವಂತೂ ಅವಳಲ್ಲಿ ಮೊದಲಿಂದಲೇ ಇದೆ,ಅಂದರೆ ಅವಳು ಉತ್ತಮ ಮ್ಯಾನೇಜರ್ ಖಂಡಿತ ಆಗಬಲ್ಲಳು.ಇನ್ನೊಂದು ವಿಷಯ ಮಹಿಳೆಯರ ಮುನ್ನಡೆಯನ್ನು ಪುರುಷರ ಹಿನ್ನೆಡೆ ಅಂದುಕೊಳ್ಳಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 8, 2006 - 10:41am — tvsrinivas41

ನನ್ನದೊಂದು ಮಾತು

tvsrinivas41's picture

ನನ್ನದೊಂದು ಮಾತನ್ನು ಇಲ್ಲಿ ತಿಳಿಸಬಯಸುವೆ.

೪೫ವರ್ಷಗಳಿಂದ ಇಲ್ಲಿಯವರೆವಿಗೆ ನನ್ನ ಜೀವನವನ್ನು ರೂಪಿಸಿದ ಮೂವರು ಹೆಂಗಸರಲ್ಲಿ ನಾ ಕಂಡದ್ದೇನೆಂದರೆ, ಹೆಂಗಸರಲ್ಲಿ ಕಷ್ಟ ಸಹಿಷ್ಣುತೆ ಜಾಸ್ತಿ ಇರುತ್ತದೆ.

ತಿಳಿದವರು ಹೇಳ್ತಾರೆ, ಕಷ್ಟ ಬಂದಷ್ಟೂ ಅದನ್ನು ತಡೆದುಕೊಳ್ಳುವ ಅಥವಾ ನಿವಾರಿಸುವ ಶಕ್ತಿ ಹೆಚ್ಚುವುದಂತೆ. ಇದು ಶತ:ಪ್ರತಿಶತ ಸತ್ಯ. ಗಂಡಸರಿಗಿಂತ ಹೆಚ್ಚಿನ ಕಷ್ಟಗಳು ಬರುವುದು ಹೆಣ್ಣುಮಕ್ಕಳಿಗೆ.

ಮೊದಲಿಗೆ ನನ್ನ ತಾಯಿ, ನಂತರ ನನ್ನ ಪತ್ನಿ ನನಗೆ ಪಾಠ ಕಲಿಸಿದವರು. ಈಗ ನನ್ನ ಮಗಳನ್ನೂ ನೋಡ್ತಿದ್ದೀನಿ, ಹಾಗೆಯೇ ನನ್ನ ಮಗನನ್ನೂ ನೋಡ್ತಿದ್ದೀನಿ. ಮಗಳಿಗಿರುವ ಶಕ್ತಿ ಮಗನಿಗಿಲ್ಲ. ಅಷ್ಟೇನು ನನ್ನಲ್ಲೇ ಇಲ್ಲ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮ ಕಛೇರಿಯಲ್ಲಿ ಹೀಗೊಂದು ಮಹಿಳಾ ದಿನಾಚರಣೆ
  • ತರಲೆ ಬ್ರೌಸರ್
  • 'ಜನಮತ' ಫಲಿತಾಂಶ
  • ಅ೦ತರ
  • ಅತ್ಯಾಧುನಿಕ ತಂತ್ರಜ್ಞಾನದ ಪಾಯಿಖಾನೆಗಳು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
ಇನ್ನಷ್ಟು


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator