ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಸಂಪದ ಆರ್ಕೈವಿನಿಂದ

ಲೇಖಕರು

bhasip's picture

ಪೂರ್ಣ ಹೆಸರು
ಭಾಸ್ಕರ ಮೈಸೂರು

ಪರಿಚಯ

ನೆಟ್ ವರ್ಕ್ ಕಂಪನಿಯಲ್ಲಿ ಉದ್ಯೋಗಿ. ಪುಸ್ಥಕ ಓದುವುದು , ಊರು ತಿರುಗುವುದು ನನ್ನ ಹವ್ಯಾಸ. ಭೈರಪ್ಪ, ಕಾರಂತರು ನನ್ನ ನೆಚ್ಚಿನ ಲೇಖಕರು.

ಕನ್ನಡದ ಪರವಾಗಿ ದನ್ನಿ ಎತ್ತಕ್ಕೇ ಜನ ಬೇಕಂತೆ!

ಕ ರ ವೆ ನಡೆಸಿದ ವಿಶ್ವ ಕನ್ನಡಿಗರ ಸಮ್ಮೇಳನದಲ್ಲಿ ರಾಜಕಾರಣಿಯೊಬ್ಬರು ಹೇಳಿದ್ದಾರೆ.. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾರಯಣ ಗೌಡರನ್ನ ಎಮ್.ಎಲ್.ಸಿ ಮಾಡುವರಂತೆ.. ಕನ್ನಡದ ಪರ ಧ್ವನಿ ಎತ್ತಲು ಶಕ್ತಿ ಬೇಕಂತೆ..

ಎಂತ ಹೀನಾಯ ಸ್ಥಿತಿ... ಕರ್ನಾಟಕದ ವಿಧಾನಸಭೆಯಲ್ಲಿ ಕನ್ನಡದ ಪರ ಧ್ವನಿ ಎತ್ತಕ್ಕೆ ಶಕ್ತಿ ಇಲ್ಲ.. ನಮಗೆ ಜನ ಬೇಕು ಅಂತ ರಾಜಕಾರಣಿಗಳು ಕೇಳೊ ಮಟ್ಟಕ್ಕೆ ಬಂದಿದಾರೆ , ಯಾಕೆ ಇವರು ಯಾರಿಗೂ ಶಕ್ತಿ ಇಲ್ಲವಾ? ರಾಜಕೀಯದ ಮಧ್ಯೆ ಬಾಷೆಯನ್ನ ಸಂಪೂರ್ಣ ಮರೆತಿರುವ ಇವರಿಗೆ ಮುಂದಿನ ಬಾರಿ ಸರಿಯಾಗಿ ಬುದ್ದಿ ಕಲಿಸಬೇಕು..

ಸಂಸತ್ತಿನಲ್ಲಿ ಕನ್ನಡ , ಕರ್ನಾಟಕದ ಪರ ಮಾತಡಲ್ಲ.. ಹೋಗಲಿ.. ವಿಧಾನಸೌದದಲ್ಲಿ?.....

 

 

 

No votes yet