ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಕನ್ನಡಿಗರೇಕೆ ಹೀಗೆ?

June 9, 2006 - 6:24pm — nmshyam

ನೀವು ಇದನ್ನು ಗಮನಿಸಿರುತ್ತೀರೋ ಇಲ್ಲವೋ ಗೊತ್ತಿಲ್ಲ. office ಗಳಲ್ಲಿ, ಅದರಲ್ಲೂ cosmopolitan ಆಗುತ್ತಿರುವ ಬೆಂಗಳೂರಿನಲ್ಲಂತೂ ಕನ್ನಡಕ್ಕೆ ಪ್ರಾಧಾನ್ಯತೆ ದೊರಕುತ್ತಿಲ್ಲ.

ಮೊದಲನೆಯದಾಗಿ, ಇದು ಬೇರೆ ಯಾವುದೇ ಭಾಷೆಯ ಬಗ್ಗೆ ಹೇಳುವುದಕ್ಕಲ್ಲ. ಏನಿದ್ದರೂ ಕನ್ನಡ ಜನರ ಬಗ್ಗೆ.

ನಾನು ಕೆಲಸ ಮಾಡುತ್ತಿರುವಲ್ಲಿ, ಭಾರತದ ಎಲ್ಲಾ ಕಡೆಗಳಿಂದ ಬಂದವರೂ ಇದ್ದಾರೆ. ಪಕ್ಕದ ಆಂಧ್ರ, ತಮಿಳುನಾಡಿನವರಿಂದ ದಿಲ್ಲಿಯವರೆಗೂ, ಕೇರಳದವರೆಗೂ ಇದ್ದಾರೆ. ನಾನು ನೋಡಿದ ಹಾಗೆ, ಕೆಲಸಕ್ಕೆ ಸೇರುವಾಗ ಸಾಮಾನ್ಯವಾಗಿ, ಒಬ್ಬರಿಗೊಬ್ಬರು ಗೊತ್ತೇ ಇರುವುದಿಲ್ಲ. ಆದರೆ, ಸೇರಿ ಒಂದು ತಿಂಗಳಾಗುವಷ್ತರಲ್ಲಿ, ಒಂದು ಪ್ರದೇಶದವರೆಲ್ಲ ತುಂಬಾ close ಆಗ್ಬಿಡ್ತಾರೆ.

ಆದ್ರೆ ನಮ್ಮ ಕನ್ನಡದವರೆಲ್ಲ ಯಾಕೆ ಹಾಗೋ ಗೊತ್ತಿಲ್ಲ. ಸೇರಿ ಎಷ್ತೋ ತಿಂಗಳಾದರೂ ಬಹಳಷ್ತು ಜನ ಪರಿಚಯವೇ ಆಗಿರಲ್ಲ.

ಜೊತೆಗೇ, ಬೇರೆಯವರೆಲ್ಲಾ ಅವರವರ ಭಾಷೆಯಲ್ಲಿ ಮಾತನಾಡಿಕೊಂಡರೆ, ನಮ್ಮವರು ಕನ್ನಡದಲ್ಲಿ ಮಾತಾಡಿದರೆ "ಚೆನ್ನಾಗಿರಲ್ಲವೇನೋ..." ಅನ್ನುವ ಹಾಗಾಡ್ತಾರೆ.

ಈ ಭಾವನೆ ಬದಲಾಗದಿದ್ದರೆ, ಮುಂದೆ ಕನ್ನಡಕ್ಕಾಗುವ ನಷ್ತ ದೊಡ್ಡ ಪ್ರಮಾಣದ್ದಾಗಿರುವುದು ಖಂಡಿತ.

ಸದಸ್ಯರು ತಮ್ಮ ತಮ್ಮ ಅಭಿಪ್ರಾಯ/ಅನುಭವಗಳನ್ನು ಹಂಚಿಕೊಂಡರೆ ಪ್ರಶಂಸನೀಯ.

-ಮೇಘಶ್ಯಾಂ

‹ ಭಾರತ ಮತ್ತು ಪಾಕ್ ನಡುವೆ ರೈಲು ಸಂಚಾರ ಸೂಕ್ತವೆ? ಇರ್ಫಾನ್ ಮತ್ತು ರಾಷ್ಟ್ರೀಯ ಚಲನಚಿತ್ರ ಮಾಧ್ಯಮಗಳು ›
  • ಸುದ್ದಿ, ಸಮಾಚಾರ
~.~
  • Login or register to post comments
  • 909 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 9, 2006 - 8:56pm — bhatpp

ನಮ್ಮಲ್ಲೇಕೆ ಈ ಕೀಳರಿಮೆ?

bhatpp's picture

ನನಗನ್ಸುತ್ತೆ, ನಾವು ಕನ್ನಡಿಗರು ಯಾಕ್ ಹೀಗೆ ಯಾಕ್ ಹೀಗಲ್ಲ ಅಂತ ಪದೇ ಪದೇ ವಿಚಾರ ಮಾಡ್ತಾ ಮಾಡ್ತಾ ನಮ್ ನಮ್ಮಲ್ಲೇ ಕೀಳರಿಮೆ ಬೆಳಸ್ಕೊಳ್ತಾ ಇದ್ದೀವಿ ಅಂತ! ನೀವೆಲ್ಲಾ ಏನ್ಹೇಳ್ತೀರಿ?

ಇದರರ್ಥ ನನಗೆ ಇರೋ ಸಂಗತಿ ಏನು ಅಂತ ಗೊತ್ತಿಲ್ಲ ಅಂತಲ್ಲ. ನಾನೊಪ್ಕೊತೀನಿ, ನಮ್ಮ ಜನರು ಹೊರಗಡೆ ಪರಸ್ಪರ ಮಾತಾಡ್ಕೊಳ್ಳೊವಾಗ ಕನ್ನಡ ಬಳಸೊದ್ ಬಹಳ ಕಮ್ಮಿ. ಆದರೆ, ನನ್ನ ಪ್ರಕಾರ, ಇದೆಲ್ಲಾ ನಮ್ ಮೇಲಿದೆ. ಅಂದರೆ, ಇ ಹೊತ್ನಿಂದ, ನಾವೆಲ್ಲಾ ಉಳಿದ್ ಕನ್ನಡ್ದೋರ್ ಹತ್ರ ಕನ್ನಡ್ದಲ್ಲೇ ಮಾತಾಡೋಣ (ಸ್ವಲ್ಪ ಇಂಗ್ಲಿಷ್ ಕಲಬೆರಕೆ ಆಗ್ಬಹುದು ಆದರೆ, ಆ ಮಟ್ಟಿಗೆ ಸ್ವಲ್ಪ ಸುಧಾರಿಸ್ಕೊಬೇಕು!!), ಮತ್ತು ಕನ್ನಡಿಗರೇ ಹೀಗೆ, ಹಾಗೆ, ಅಂತ ಹೇಳೋದನ್ನ ನಿಲ್ಲಿಸ್ ಬಿಡೋಣ. ಆಗ್ ನೋಡಿ ಹೇಗ್ ಈ ಭಾವನೆ ಬದಲಾಗುತ್ತೆ ಅಂತ!

ಇದು ನನ್ ಅಭಿಪ್ರಾಯ. ನಿಮ್ಮೆಲ್ಲರ ಅನಿಸಿಕೆ ಏನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2006 - 10:57pm — pradeepkishore

ಅಭಿಮಾನ್ಯ ಶೂನ್ಯತೆಯೇ ಎಲ್ಲದಕ್ಕೂ ಉತ್ತರವಲ್ಲ

pradeepkishore's picture

ನಮ್ಮವರ ಅಭಿಮಾನ್ಯಶೂನ್ಯತೆಯ ಬಗ್ಗೆ ಯಾವಾಗಲೂ ನಾವು ಮುಂದು.
ಆದರೆ,
೧. ಹೊರಗಿನಿಂದ ಬಂದವರು ತಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಪ್ರಯತ್ನ ಪಡುತ್ತಾರೆ. ಅದಕ್ಕಾಗಿ ತಮ್ಮವರನ್ನು ಮೊದಲು ಹುಡುಕುತ್ತಾರೆ. ಇದಕ್ಕೆ ನಾವು ಹೊರತಲ್ಲ. ಉದಾಹರೆಣೆಗೆ ನಾನು ಗೋವಾ ಪ್ರವಾಸಕ್ಕೆ ಹೋದಾಗ ಕನ್ನಡ ಅಕ್ಷರಗಳನ್ನು ನೋಡಿದಾಗಲೆಲ್ಲ ಹಲ್ಲು ಕಿರಿಯುವಷ್ಟು ಸಂತೋಷವಾಗುತ್ತಿತ್ತು. Eye-wink

೨. ಕನ್ನಡದಲ್ಲಿ ಖಂಡಿತ ಮಾತನಾಡಿ. ಬಹಳಷ್ಟು ಜನ ನಿಸಾರ್ ಅಹಮದ್ ಹೇಳಿದಂತೆ "ಕುರಿಗಳು ಸಾರ್ ಕುರಿಗಳು".. ನೀವು ಶುರು ಮಾಡಿದ್ರ ಅವರೂ "ಚೆನ್ನಾಗಿರಲ್ಲವೇನೋ..." ಅನ್ನೋ ಭಯ ಬಿಟ್ಟು ಮಾತಾಡ್ತಾರೆ. ಹಾಗಂತ, ಇದು ಒಂದೇ ದಿನದಲ್ಲಿ ಆಗೋ ಕೆಲಸ ಅಲ್ಲ. ಮಂದಸ್ಮಿತರಾಗಿಯೇ ಕನ್ನಡದಲ್ಲಿ ಮಾತನಾಡಿ. ಕನ್ನಡ ಮಾತಾಡೊಲ್ಲ ಅನ್ನೋ ಒಂದು ಮಾತಿಗೆ ನಿಷ್ಟುರ ಕಟ್ಟಿಕೊಳ್ಳೋದು ಬೇಡ ಅಲ್ವೆ?
ನಾನಂತೂ ನಮ್ಮ ಆಫೀಸಿನಲ್ಲಿ ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತನಾಡುವುದು. ಕನ್ನಡೇತರರಿಗೂ ಅವಕಾಶ ಸಿಕ್ಕಾಗಲೆಲ್ಲಾ ಸ್ವಲ್ಪ ಕನ್ನಡದ ಬಗ್ಗೆ ಉಪದೇಶ(ಕೊರೆತ) ಮಾಡುತ್ತೇನೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2006 - 2:41am — ಮಹೇಶ ಭೋಗಾದಿ

ಕನ್ನಡದ ಕೆಚ್ಚು

ಮಹೇಶ ಭೋಗಾದಿ's picture

ನಾವೆಲ್ಲ ಬಹುಶಃ ಬರಿ ಬೆಂಗಳೂರು ಅಥವಾ ಕರ್ನಾಟಕದಾಚೆ ಇರುವವರಿರಬೇಕು.

ನಾನೇ ನೋಡಿರವಂತೆ ನಮ್ಮೂರಿನಲ್ಲಿ ಯಾರಾದರು ಸಿಕ್ಕಾಬಟ್ಟೆ ಇಂಗ್ಲೀಷಿನಲ್ಲಿ ನಲಿದರೆ, ಅವರ ಮುಖಕ್ಕೆ ಹೊಡೆದಂತೆ "ನಿಮಗೆ ಕನ್ನಡ ಬರೋಲ್ವೆ?" ಎಂದು ನೇರವಾಗಿ ಕೇಳಿಬಿಡುತ್ತಾರೆ. ಮನೆಯವರಾದರೆ ಆಯಿತು!, ಉಗಿದು ಉಪ್ಪಿನಕಾಯಿ ಹಾಕುತ್ತಾರೆ.

ಇಂದಿಗೂ ಕನ್ನಡವು ಮಂಡ್ಯ, ಮೈಸೂರು, ಹುಬ್ಬಳ್ಳಿ, ಹಾಸನ, ಚಿಕ್ಕಮಗಳೂರು, ತುಮಕೂರು, ಚಾಮರಾಜನಗರ, ಶಿವಮೊಗ್ಗ ಮುಂತಾದ ಜಿಲ್ಲೆಗಳು, ಅಲ್ಲದೆ ಕಡಲಾಚೆಯೂ ರಾರಾಜಿಸುತ್ತಿದೆ.

ನಮ್ಮೂರಿನಲ್ಲಿ ಕನ್ನಡಸಿನಿನಮಾ ಬಿಟ್ಟು ಬೇರಾವ ಸಿನಿಮಾ ಓಡದು. ಅದು ಗಬ್ಬೋ ಗಿಬ್ಬೋ, ರಿಮೇಕೋ, ಗಿಮೇಕೋ ಅದು ಕನ್ನಡಸಿನಿಮಾ ಎಂದು ಜನ ಹೋಗುತ್ತಾರೆ.

ಆದರೆ ನಾನು ಗಮನಿಸಿದ್ದೀನಿ, ಈ ಹಾಳು ಬೆಂಗಳೂರಿನಂತ ಪಟ್ಟಣದವರಿಗೆ, ಬಂದಿರುವುದು ದೊಡ್ಡರೋಗ. ಬನ್ನಿ ಕನ್ನಡ ಚಿತ್ರಕ್ಕೆ ಹೋಗೋಣ ಎಂದರೆ, "ಅವೇನು ಬರಿ ರಿಮೇಕು ಎನ್ನುವರು". ಸರಿ ಮಾತಾಡಿಸಿದರೆ, ಏನೋ ಬಹಳ ಸಭ್ಯರು, ಇವರನ್ನು ಬಿಟ್ಟರಿಲ್ಲವೆಂಬಂತೆ ಮೊದಲು ಒಂದು ಕಂತೆ ಸಂಸ್ಕೃತದ ಪೊಳ್ಳು ಶಿಷ್ಟಾಚಾರಗಳು, ಮುಂದೆ ಒಂದು ಮಣ ಇಂಗ್ಲೀಷು, ಇನ್ನೊಂದು ಮಣ ಸಂಸ್ಕೃತ ಸೇರಿಸಿ ಮೇಲೆ ಒಂದು ಚಟಾಕು ಕನ್ನಡದೊಂದಿಗೆ ಮಾತಾಡುತ್ತಾರೆ.

ಕೆಲವರಂತೂ ಒಂದೇ ಸಮನೆ, ಕನ್ನಡ ಪಾತಾಳಕ್ಕೆ ಬಿದ್ದು ಹೋಗಿದೆ, ಎತ್ರಪ್ಪೋ ಎಂದು ಬಡಿದುಕೊಳ್ಳುವರು. ಆದರೆ ಅವರು ಮಾತ್ರ ಯಾವುದಕ್ಕೂ ಮುನ್ನುಗರು. ಬರಿ ಹಿಂದೆ ಕುಳಿತು ಒಂದು ಮಣ ಮಾತಾಡವುದರಲ್ಲಿ ಎತ್ತಿದಕೈ. (ನನ್ನಂತೆ ? )

ಇರಲಿ, ಈ ಎದೆಯುರಿ, ಹಲ್ಲಕಡಿತಗಳಲ್ಲೆ ಒಂದೆಡೆ ಇಡೋಣ.

ಇಲ್ಲಿ ಸಂಪದದಲ್ಲಿ ಸೇರಿದವರಾದರು ಕಡೆಪಕ್ಷ, ನಮ್ಮ ಮನೆಗಳಲ್ಲಿ ಸರಿಯಾಗಿ ಕನ್ನಡ ಮಾತಾಡೋಣ. ಕನ್ನಡವಿಲ್ಲವೆಂದು ಕೊರಗದೆ, ಬೆಂಗಳೂರಿನಲ್ಲಿ ಮುಖ್ಯವಾಗಿ, ಮತ್ತುಎಲ್ಲೆಡೆ ಕನ್ನಡವು ಬೆಳದಿಂಗಳ ಚಂದಿರನಂತೆ ತಂಪಗಿದ್ದರೂ, ಸುತ್ತಲಿರುವ ಎಲ್ಲ ಗ್ರಹಚುಕ್ಕಿಗಳಿಗಿಂತ ಹೊಳೆಯುವಂತೆ ಬೆಳಗಿಸೋಣ. (ಗ್ರಹ ಯಾವುದೆಂದು ಗೊತ್ತಲ್ಲ Smiling ).

"ಪುರುಷಪ್ರಯತ್ನವಿಲ್ಲದೆ ದೈವಾನುಗ್ರಹವೂ ಫಲಿಸದು".

ಇದು ಒಬ್ಬರು, ಇಬ್ಬರು ಮಾಡುವ ಕೆಲಸವಲ್ಲ. ಕೋಟಿಕೋಟಿ(ಕೋಟಿ ಇಲ್ಲದಿದ್ದರು, ಸಾವಿರವಾದರು ಸಾಕು, ಸಂಪದದಂತೆ Smiling ) ಕನ್ನಡಿಗರ ಒಕ್ಕೊರಲು ಬೇಕು, ಕೆಚ್ಚದೆ ಬೇಕು, ನುಡಿಯೊಲವಿರಬೇಕು. ಇವೆಲ್ಲವೂ ನಮ್ಮಲ್ಲಿದೆ, ಆದರದು ಅಡಗಿದೆ, ಮಲಗಿದೆ ಅದನ್ನು ಹೊರಗೆ ತಂದು, ಬಡಿದೆಬ್ಬಿಸಬೇಕಷ್ಟೆ.

ಕನ್ನಡಿಗರು ನಿರಭಿಮಾನಿಗಳಲ್ಲ. ನಮ್ಮ ಅಭಿಮಾನವನ್ನು ನಾವು ಹೆಚ್ಚು ಪ್ರದರ್ಶಿಸಿವುದಿಲ್ಲವಷ್ಟೆ. ಕಾಣದ್ದು ಇಲ್ಲವೆಂದಲ್ಲ. ಅದು ಕೇವಲ ನಮಗೆ ಕಾಣದಷ್ಟೆ.

ಕೊಸರು : ೨೨೦೦ ವರುಷಗಳಿಂದ ಬದುಕುತ್ತಿರುವ ಕನ್ನಡವು ಬಲಹೇನವೆ, ಇಂತಹ ನುಡಿಯನಾಡುವವರಿಗೆ ಕೀಳರಿಮೆಯೆ? ..

-ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜೋಳದ ಹಿಟ್ಟು ಇದೆಯಾ...?
  • ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)-ರಘೋತ್ತಮ್ ಕೊಪ್ಪರ
  • ಕನ್ನಡ ಎಲ್ಲಿದೆ... ?
  • ಕನ್ನಡಂಗಳ್: ಪದ್ಯ ಹೀಗಿದೆ
  • ಹಾಗೇ ಸುಮ್ಮನೆ
Syndicate content

ಲೇಖಕರು

nmshyam's picture

ಪರಿಚಯ

ಒಬ್ಬ ಪಕ್ಕಾ ಕನ್ನಡಿಗ
Working in a Software Company

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator