21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸೈಬರ್‍ ಕೆಫೆಗಳಲ್ಲಿ ಕನ್ನಡದ ಅಗತ್ಯತೆ ಬಗ್ಗೆ ಅನಂತಮೂರ್ತಿಯವರ ಹೇಳಿಕೆ

August 18, 2006 - 11:30pm
Rohit

ಗೆಳೆಯರೆ,

೧೮, ಆಗಸ್ಟ್, ೨೦೦೬ರ ವಿಜಯ್ ಟೈಂಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ, ಶ್ರೀಯುತ ಅನಂತಮೂರ್ತಿಯವರ ಸಂದರ್ಶನದಲ್ಲಿ, ಅವರು ಸೈಬರ್‍ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸಬೇಕಾದ ತುರ್ತು ಅಗತ್ಯದ ಬಗೆಗೆ ಮಾತನಾಡಿದ್ದಾರೆ. ಇದನ್ನು ಕನ್ನಡಸಾಹಿತ್ಯ.ಕಾಂ ನ ಸಂಪಾದಕೀಯ ಪುಟದಲ್ಲೂ ಉದ್ಧರಿಸಲಾಗಿದೆ.

http://www.kanlit.com/modes/editorial/brh

http://www.kanlit.com/modes/editorial/kanuni

 

[ ಪಠ್ಯ ಇಲ್ಲಿ ಪ್ರಾರಂಭವಾಗುತ್ತದೆ ]

Question: How can the use of Computer be increased especially among Kannada users?
URA: If the usage of Kannada is to gain momentum among internet users, firstly, we should popularise the Kannada software in cyber cafes across the state. The government should make it mandatory for internet parlours to introduce Kannada fonts and programmes before giving them licenses to operate. The onus is on the government to popularise the use of Kannada fonts and software.

Question: For doing this there should be an implementing authority in the state, isn't it?
URA: The Kannada Development Authority (KDA) should enforce compulsory implementation of Kannada software across the state. There are Kannada fonts available, there is a software, but it has not been effectively implemented. KDA Chairman Dr Siddalingaiah, recently said that he will have orders issued to every cybercafe in the state to have KAnnada software. This should be done at the earliest.

(Interviewer: Usha Prasad)

[ ಪಠ್ಯ ಇಲ್ಲಿ ಕೊನೆಗೊಳ್ಳುತ್ತದೆ ]

 

ಇದುವರೆವಿಗೂ ತಂತ್ರಜ್ಞಾನವನ್ನು ಕನ್ನಡವನ್ನು ಸಮರ್ಥವಾಗಿ ಬೆಸೆಯುವ ಅಗತ್ಯವನ್ನು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸುತ್ತಿರುವ ಕನ್ನಡಸಾಹಿತ್ಯ.ಕಾಂ ಬಳಗಕ್ಕೆ , ತನ್ನ ನಂಬಿಕೆಯ ಕಡೆಗೆ, ಕನ್ನಡದ ಮಹತ್ವಪೂರ್ಣ ಚಿಂತಕರೊಬ್ಬರ ಗಮನಸೆಳೆಯಲು ಸಾಧ್ಯವಾಗಿರುವುದು ಅತ್ಯಂತ ಪ್ರೋತ್ಸಾಹದಾಯಕ ವಿಚಾರವಾಗಿದೆ. ಈ ವಿಚಾರವನ್ನು ಕನ್ನಡಸಾಹಿತ್ಯ.ಕಾಂನ ಶ್ರೀಯುತ ಶೇಖರ್‍ ಪೂರ್ಣರವರು ಆಗಸ್ಟ್ ೬, ೨೦೦೬ ರಂದು ಬೆಂಗಳೂರಿನಲ್ಲಿ ನಡೆದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದರು.

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by ravee... on

ಸ್ನೇಹಿತರೆ,

ಕನ್ನಡಿಗರು ಕೇಳದೆ, ಕರ್ನಾಟಕದಲ್ಲಿ ಅಲ್ಲಲ್ಲ...ಭಾರತದಲ್ಲಿ ಏನೂ ಸಿಗುವುದಿಲ್ಲ ಎನ್ನುವುದು ಸಿದ್ಧ ಸತ್ಯ. ಕರ್ನಾಟಕದ ಸೈಬರ್ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಅಳವಡಿಸಬೇಕಾದ ಅಗತ್ಯ-ಆಲೋಚನೆ ಯಾರಿಗೂ ಇಲ್ಲಿಯವರೆಗೂ ಬಂದಿರಲಿಲ್ಲವೆನ್ನುವುದು..ನಮ್ಮಂತಹ ಸೈಬರ್-ಮೋಹಿಗಳಿಗೆ ನಾಚಿಕೆಗೇಡಿನ ಸಂಗತಿ. ಆವತ್ತು ಕನ್ನಡಸಾಹಿತ್ಯ.ಕಾಂನ ಶೇಖರಪೂರ್ಣರವರು ಈ ವಿಷಯವನ್ನು ಕನ್ನಡಸಾಹಿತ್ಯ.ಕಾಂನ ೬ನೇ ವಾರ್ಷಿಕೋತ್ಸವದಂದು ನೆರೆದ ಚಿಂತಕರು, ಸಾಹಿತಿ, ಕವಿಗಳ ಮುಂದೆ ಪ್ರಸ್ತಾಪಿಸುವುದರೊಂದಿಗೆ ನಮಗೆ ಸಮಸ್ಯೆ ಏನೆಂದು ಮನವರಿಕೆ ಮಾಡಿಕೊಟ್ಟರು. ಸಿದ್ಧಲಿಂಗಯ್ಯನವರು ವೇದಿಕೆ ಮೇಲಿಂದಲೇ ಇದರ ಅಗತ್ಯ ಮನಗಂಡಿದ್ದು, ಈ ಕುರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ಸ್ವಾಗತಾರ್ಹ. ಆದರೆ ಪೆಪ್ಸಿ-ಕೋಲ ನಿಷೇಧಿಸಲು ೩ ವರ್ಷ(ಅದು ವಿಷವೆಂದು ಸಾಬೀತಾದ ಮೇಲೂ) ತೆಗೆದುಕೊಂಡ ಕೇಂದ್ರ ಸರ್ಕಾರದ ನಿರ್ಧಾರದಂತಹ ಮೂರ್ಖ ನಿಲುವನ್ನು ರಾಜ್ಯ ಸರ್ಕಾರ ತಾಳದಿರಲಿ. ತಕ್ಷಣದಿಂದಲೇ ಸೈಬರ್ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಕಡ್ಡಾಯವಾಗಿ ಅನುಸ್ಥಾಪನೆ ಮಾಡುವ ಆದೇಶ ಜಾರಿಯಾಗಲಿ. ಅದಕ್ಕಾಗಿ ನಿಮ್ಮದೊಂದು ಕೂಗು ಸರ್ಕಾರದ ಕಿವಿ ಮುಟ್ಟಲಿ....
ಸಮಸ್ಯೆಗಳ ಪ್ರಸ್ತಾಪ ಮತ್ತು ಅವುಗಳನ್ನು ಅನುಷ್ಟಾನಗೊಳಿಸಲು ಸಮುದಾಯವನ್ನು,ಸರ್ಕಾರವನ್ನು ಎಚ್ಚರಿಸುವ ದಿಕ್ಕಿನಲ್ಲಿ ಕನ್ನಡಸಾಹಿತ್ಯ.ಕಾಂ ಮುಂಚೂಣಿಯಲ್ಲಿರಲಿ....
ಹೊಸ ಚರ್ಚೆಗಳಿಗೆ ಅದು ಸದಾ ಮುನ್ನುಡಿ ಬರೆಯಲೆನ್ನುತ್ತಾ...
--

ವಂದನೆಗಳೊಂದಿಗೆ.. ಅರೇಹಳ್ಳಿ ರವಿ