November 28, 2009 - 2:52pm
ಕರವೆ ಅಧ್ಯಕ್ಷರಾದ ನಾರಾಯಣ ಗೌಡರು ತಮ್ಮದೂ ಒಂದು ಪಕ್ಷ ಇರಲಿ ಎಂದು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಕರವೆ ರಾಜಕೀಯ ಪಕ್ಷದ ಅಗತ್ಯ ಇದೆಯೇ? ಇವರ ಪಕ್ಷಕ್ಕೆ ಜನ ಬೆಂಬಲ ದೊರಕಬಹುದೇ ಹೇಗೆ?
ತಮ್ಮ ಅಭಿಪ್ರಾಯಗಳನ್ನು ತಿಳಿಸಿ.
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ಕರವೆ ಪಕ್ಷ ಬೇಕೇ? ಬೇಡವೇ?
ಎಂಭತ್ತರ ದಶಕದ ಆದಿಯಲ್ಲಿ, ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಂದಿನ ಕಾರ್ಯದರ್ಶಿ ವೆಂಕಟೇಶ್ ಅನ್ನುವವರು ಮಲ್ಲೇಶ್ವರಂ ಕ್ಷೇತ್ರದಿಂದ ವಿಧಾನ ಸಭೆಗೆ ಸ್ಪರ್ಧಿಸಿ ತಮ್ಮ ಠೇವಣಿ ಕಳೆದುಕೊಂಡಿದ್ದರು.
ಇವರೂ ಪ್ರಯತ್ನಿಸಿ ನೋಡಲಿ.
ಕರ್ನಾಟಕದ ಮತದಾರರು ಮೂರ್ಖರಲ್ಲ.
:)
ಉ: ಕರವೆ ಪಕ್ಷ ಬೇಕೇ? ಬೇಡವೇ?
ಖಂಡಿತ ಅಗತ್ಯ ಇದೆ, ಆದರೆ ಇವರು ತುಂಬಾ ತಯಾರಿ ಮಾಡಿಕೊಂಡು ಪಕ್ಷ ಕಟ್ಟಿಕೊಂಡರಸ್ಟೆ ಉಪಯೊಗ. ಈಗಾಗಲೆ ಕೆಲವೊಂದು ಭಣಗಳಾಗಿರುವ ಕನ್ನಡ ಪರರು ಒಟ್ಟಾಗಿ ಒಂದು ಪಕ್ಷ ಮಾಡಿ ಕನ್ನಡಕ್ಕಾಗಿ ಧ್ವನಿ ಯಾಗುವವರನ್ನು ಮುಂದಿಟ್ಟು ಕೆಲಸಮಾಡಿದರೆ ಅದಕ್ಕೆ ಭವಿಷ್ಯ ಇದೆ..ಇಲ್ಲದಿದ್ದರೆ ವಾಟಾಳ್,ಸಂಕೇಶ್ವರ ಸಾಲಲ್ಲಿ ಇನ್ನೊಂದಾಗುತ್ತದೆ..