Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಕನ್ನಡಸಾಹಿತ್ಯ.ಕಾಂ ಅಭಿಯಾನಕ್ಕೆ ಮಹತ್ವದ ತಿರುವು - ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಕನ್ನಡಸಾಹಿತ್ಯ.ಕಾಂ ಮನವಿ....?

November 21, 2006 - 12:46am — Rohit

ದೇಸಗತಿ ಭಾಷೆಗಳು, ಒಂದೇಸಮನೆ ಏರುಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಬಗೆಗೆ, ಸಾಮಾಜಿಕ ಕಳಕಳಿಯಿಂದ, ವಾಸ್ತವ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವ, ಸಕಾರಾತ್ಮಕ, ಕ್ರಿಯಾಶೀಲ, ದೃಢ ಸಂಕಲ್ಪಶಕ್ತಿಯಿಂದ ಕೂಡಿದ ಪ್ರಯೋಗಶೀಲ ಗುಣಧರ್ಮದ, ವೈಚಾರಿಕ ಚಿಂತನೆಯ ಭಾಗವಾಗಿ ಕನ್ನಡಸಾಹಿತ್ಯ.ಕಾಂ ಹಾಗೂ ಬೆಂಬಲಿಗರ ಬಳಗದವರು ಕರ್ನಾಟಕದ ಮುಖ್ಯಮಂತ್ರಿಗಳು, ಸೇರಿದಂತೆ, ಕನ್ನಡ ಸಂಸ್ಕೃತಿ, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಇಲಾಖೆಗಳ ಸಚಿವರುಗಳಿಗೆ ಸಲ್ಲಿಸಲು ನಿರ್ಧರಿಸಿದ ಮನವಿ ಪತ್ರ ಕ್ಕೆ, ಸಾಮಾಜಿಕ, ಸಾಂಸ್ಕೃತಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವವರ, ಸಾರ್ವಜನಿಕರ 'ಬೆಂಬಲದಿಂದ ಕೂಡಿದ ಸಹಿ' ಸಂಗ್ರಹಣಾ ಅಭಿಯಾನಕ್ಕೆ ಒಂದು ಮಹತ್ವದ ತಿರುವು ದೊರೆತಿದೆ.

ಈ ದಿನ ಕನ್ನಡಸಾಹಿತ್ಯ.ಕಾಂ ನ ಸಂಸ್ಥಾಪಕರಾದ ಶ್ರೀಯುತ ಶೇಖರ್‍ಪೂರ್ಣರವರು ಅಭಿಯಾನಕ್ಕೆ ಬೆಂಬಲ ಕೋರಿ ಮಾಜಿ ಮಾಹಿತಿ ತಂತ್ರಜ್ಞಾನ ಸಚಿವರಾದ, ಸುಸಂಸ್ಕೃತ ರಾಜಕಾರಣಿ, ಶ್ರೀಯುತ ಬಿ ಕೆ ಚಂದ್ರಶೇಖರ್‍ ಅವರನ್ನು ಭೇಟಿಯಾಗಿ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ, ಅಭಿಯಾನದ ಧ್ಯೇಯೋದ್ದೇಶಗಳನ್ನು ಮನವರಿಕೆ ಮಾಡಿಕೊಡಲಾಗಿ, ಮಾನ್ಯರು, ಮನವಿ ಪತ್ರದಲ್ಲಿರುವ 'ಬೇಡಿಕೆಗಳನ್ನು' - ಶಾಸನವಾಗಿಸಲಿಕ್ಕೆ, ರಾಜ್ಯ ಶಾಸನಸಭೆಯ ಮುಂದಿನ ಅಧಿವೇಶನದಲ್ಲಿ, ಅವುಗಳನ್ನು ಚರ್ಚೆಗೆ ಮಂಡಿಸುವ ಸ್ವಯಂಪ್ರೇರಿತ ಪ್ರಸ್ತಾಪ ಹಾಗೂ ಭರವಸೆ ನೀಡಿದ್ದಾರೆ. ಅಲ್ಲದೆ, ಇದೇ ವಿಷಯವಾಗಿ, ಕನ್ನಡ ಹಾಗೂ ತಂತ್ರಜ್ಞಾನದ ಸಂದರ್ಭದಲ್ಲಿ ಅಗತ್ಯವಿರುವ ಶಾಸನದ ಕರಡೊಂದನ್ನು ಸಿದ್ಧಪಡಿಸಲು ಶ್ರೀಯುತ ಶೇಖರ್‍ಪೂರ್ಣರವರ ಹಾಗೂ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಸಹಕಾರ ಕೋರಿದ್ದಾರೆ.

ಇದೇ ವಿಚಾರವಾಗಿ, ತಾಂತ್ರಿಕ ಸಂದರ್ಭದಲ್ಲಿ ಕಾನೂನು ಹಾಗೂ ಶಾಸನಗಳ ಬಗೆಗಿನ ಹೆಚ್ಚಿನ ಅರಿವಿರುವವರ ಅಗತ್ಯವಿದ್ದು, ಗಣಕ ತಂತ್ರಜ್ಞಾನ ಪರಿಸರದಲ್ಲಿ 'ಕನ್ನಡದ ಹಣತೆ' ಹಚ್ಚುವ ಈ ಕಾರ್ಯಕ್ಕೆ, ಸ್ವಯಂಪ್ರೇರಣೆಯ ಬೆಂಬಲವನ್ನು ಈ ಪತ್ರದ ಮೂಲಕ ವಿನಮ್ರ ಮನವಿಯನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗವು ಮುಂದಿಡುತ್ತಿದೆ.

 

ಆಸಕ್ತರು, ಶ್ರಿಯುತ ಶೇಖರ್‍ಪೂರ್ಣರವರನ್ನು ೦೯೩೪೧೨೩೦೦೧೫ ksctanda@gmail.com ಅಥವಾ ಖುದ್ದಾಗಿ, ನ೦. ೧೦೩, ೧ನೇ ಬ್ಲಾಕ್, ಜನಪ್ರಿಯ ಲೇಕ್ ವ್ಯೂ ಅಪಾರ್ಟಮೆಂಟ್ಸ, ಕೋಡಿಚಿಕ್ಕನಹಳ್ಳಿ, ಬೆಂಗಳೂರು-೫೬೦೦೭೬ , ವಿಳಾಸದಲ್ಲಿ ಸಂಪರ್ಕಿಸಲು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗವು ಕೋರುತ್ತಿದೆ.

‹ ಹಿಂಗಾದ್ರೆ ಹೆಂಗೆ.... Welcome to Sampada ›
  • ಹರಟೆ ಕಟ್ಟೆ
Ornamental seperator
  • Login or register to post comments
  • 743 hits
  • Email this forum
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ: ಇತ್ತೀಚಿನ ಬೆಳವಣಿಗೆಗಳು
  • ಹಾಸನ ಜಿಲ್ಲಾ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗದ ಉದ್ಘಾಟನಾ ಕಾರ್ಯಕ್ರಮ
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ - ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಗೋಷ್ಠಿ
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಆಯೋಜಿಸಿರುವ ಮೇಲ್ಕಂಡ ಕಾರ್ಯಕ್ರಮದ ಮತ್ತಷ್ಟು ವಿವರಗಳು.....
  • 'ಸಲ್ಲಾಪ' - ಕನ್ನಡಸಾಹಿತ್ಯ.ಕಾಂ ನಿಂದ ಮತ್ತೊಂದು ಪ್ರಥಮ
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಸಾಕೋದನ್ ಅರಿತಾತ - ಸಾವಿರ ಜನಕ್ ತ್ರಾತ

— ಟಿ ಪಿ ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator