ಈ ವಚನದ ಅರ್ಥ ಹೇಳಿ ನೋಡೋಣ
ಈ ವಚನದ ಭಾವಾರ್ಥ ಹೇಳಿ ನೋಡೋಣ![]()
ಕರೆಯದೆ ಬರುವವನ
ಬರಿಗಾಲಲ್ಲಿ ನಡೆಯುವವನ
ಬರೆಯದೆ ಓದುವವನ
ಕರೆತಂದು ಕೆರದಲ್ಲಿ ಹೊಡೆಯೆಂದ ಸರ್ವಜ್ಞ
(ಇದನ್ನು ನಾನು ನೆನಪಿನಿಂದ ಬರೆಯುತ್ತಿರುವುದರಿಂದ ಕೆಲವು ಪದಗಳು ಬೇರೆಯಾಗಿರಬಹುದು)

- Login or register to post comments
- 737 hits
- Email this forum




RSS:
ಉತ್ತರ: ಅರ್ಥ: ಈ ವಚನದ ಅರ್ಥ ಹೇಳಿ ನೋಡೋಣ
ನನಗೆ ತಿಳಿದಂತೆ ಇದರ ಅರ್ಥ:
ಬರಿಗಾಲಲ್ಲಿ ನಡೆಯುದು ಆರೋಗ್ಯದ ದೃಷ್ಟಿಯಿಂದ ಹೇಗೆ ಒಳ್ಳೆಯದಲ್ಲವೋ ಹಾಗೆಯೇ ದಾರಿದ್ರ್ಯದ ಸಂಕೇತ ಕೂಡಾ.
ಹತ್ತು ಬಾರಿ ಓದುವುದಕ್ಕಿಂತ ಒಮ್ಮೆ ಬರೆದರೆ ಸಾಕು ಅದು ಮನಸ್ಸಿನಲ್ಲಿ ಗಟ್ಟಿಯಾಗಿ ಊರುತ್ತದೆ. ಹಾಗೆ ಮಾಡದೇ ಬರಿದೆ ಓದುವುದು (ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು) ವ್ಯರ್ಥ.
ಕರೆಯದೇ ಬರುವವನ ಬಗ್ಗೆ ಹಲವು ಜಿಜ್ಞಾಸೆಗಳಿವೆ ಅಂತ ಓದಿದ ನೆನಪು. ಇದು ನೇರವಾಗಿ ಅಭ್ಯಾಗತರನ್ನು ಕುರಿತು ಹೇಳಿದ್ದಲ್ಲ. ಕರೆಯದೇ ಮಧ್ಯೆ ಮೂಗು ತೂರಿಸುವವನು ಎಂದೂ ಅರ್ಥೈಸಬಹುದು.
ಇಂಥವರನ್ನು (ಮೇಲಿನ ಮೂರೂ ಗುಂಪಿನ ಜನರನ್ನು) "ಕರೆದು ಕೆರದಲ್ಲಿ ಹೊಡೆ" ಎಂದರೆ ಅಕ್ಷರಶಃ ಕೆರದಲ್ಲಿ ಹೊಡೆಯುವುದು ಅನ್ನುವುದಕ್ಕಿಂತ ಅವಮಾನಿಸು ಎಂಬರ್ಥದಲ್ಲಿ ತೆಗೆದುಕೊಳ್ಳಬಹುದು.
- ಶ್ಯಾಮ್ ಕಿಶೋರ್
ಉ: ಉತ್ತರ: ಅರ್ಥ: ಈ ವಚನದ ಅರ್ಥ ಹೇಳಿ ನೋಡೋಣ
ಇದು ಏಕೋ ನನಗೆ ಸರಿಯೆನ್ನಿಸುತ್ತಿಲ್ಲ. ನಮ್ಮಲ್ಲಿ ಎಷ್ಟೋ ಜನ ಬರಿಗಾಲಲ್ಲಿಯೇ ನಡೆಯುತ್ತಾರೆ. ಕೆಲವು ಸನ್ಯಾಸಿಗಳು, ಜೈನ ಮುನಿಗಳು ಬರಿಗಾಲಲ್ಲಿಯೇ ನಡೆಯುತ್ತಾರೆ. ಇದಕ್ಕೆ ಒಳಾರ್ಥ ಬೇರೆ ಏನಾದರೂ ಇದೆಯೆ?
Re: ಈ ವಚನದ ಅರ್ಥ ಹೇಳಿ ನೋಡೋಣ
ಈ ವಚನದ ಮುಖ್ಯ ಭಾಗ "ಬರೆಯದೆ ಓದುವವನ ಕರೆತಂದು ಕೆರದಲ್ಲಿ ಹೊಡೆ" ಎಂಬುದು.
ನನಗೆ ಜ್ಞಾನೋದಯವಾದಂತೆ ಇದರ ಅರ್ಥ ಹೀಗಿದೆ:
ವಾಲ್ಮೀಕಿ ರಾಮಾಯಣವು ರಾಮನು ಅಯೋಧ್ಯೆಗೆ ಮರಳುವುದರೊಂದಿಗೆ ಮುಗಿಯುತ್ತದೆ. ಉತ್ತರ ಕಾಂಡವನ್ನು ನಂತರ ಸೇರಿಸಲಾಗಿದೆ. ಶಬರಿಯ ಕೈಯಿಂದ ಹಣ್ಣು ತಿನ್ನುವ ರಾಮನೆಲ್ಲಿ, ಶೂದ್ರ ತಪಸ್ವಿಯನ್ನು ಕೊಲ್ಲುವ ರಾಮನೆಲ್ಲಿ. ಅನೇಕ ಧರ್ಮ ಗ್ರಂಥಗಳನ್ನು ಕೆಲವು ಕಪ್ಪುತಲೆಯ ಪುರೋಹಿತಶಾಹಿಗಳು ತಿದ್ದಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಆದ್ದರಿಂದ ಸರ್ವಜ್ಞನು ಧರ್ಮ ಗ್ರಂಥಗಳಲ್ಲಿ ಬರೆಯದೆ ಇರುವುದನ್ನು ಪಠಿಸಿ ಮಡಿ ಮೈಲಿಗೆ ಎಂದೆಲ್ಲ ಕತೆಕಟ್ಟಿ ಹೇಳುವವರನ್ನು ಅವಮಾನಿಸಿ/ ಶಿಕ್ಷಿಸಿ ಎಂದು ಹೇಳಿದ್ದಾನೆ. ಮನುಸ್ಮೃತಿಗೂ ಇದು ಅನ್ವಯವಾಗುತ್ತದೆ.
ಸರ್ವಜ್ಞನ ಕಾಲದಲ್ಲೇ ಅವನ ಮಾತನ್ನು ಕೇಳಿದ್ದರೆ ಇಂದು ತಥಾಕಥಿತ ಬುದ್ಧಿಜೀವಿಗಳ ಮತ್ತು ಆಧ್ಯಾತ್ಮಿಕತೆ ಕಡಿಮೆ ರಾಜಕೀಯವೇ ಹೆಚ್ಚಾಗಿರುವ ಮತಗಳ ದಾಳಿಯನ್ನು ಸನಾತನ ಧರ್ಮ ಎದುರಿಸಬೇಕಾಗಿರಲಿಲ್ಲ.
-----
hinduwisdom
ನನ್ನ ಬ್ಲಾಗ್
Re: ಈ ವಚನದ ಅರ್ಥ ಹೇಳಿ ನೋಡೋಣ
ಸರ್ವಜ್ಞನ ಎಲ್ಲಾ ಹೇಳಿಕೆಗಳೂ ಸರಿಯೆಂದು ಯಾರು ಹೇಳಿದರು ?
'ಎಲ್ಲರಿಂದ ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ '!
ಅವನ ನಿಲವು , ಉದಾ : ಸ್ತ್ರೀಯರ ಬಗ್ಗೆ, ನಿಜವಾಗಿಯೂ ಚರ್ಚಾಸ್ಪದಕ್ಕೆ ದಾರಿ ಮಾಡಿಕೊಟ್ಟಿದೆ. ಏನೊ ಆಗಿನ ಕಾಲಕ್ಕೆ, ವಿದ್ಯಾ ಪ್ರಸಾರದ ಪರಿಕರಗಳಿಲ್ಲದ ಒಂದು ಕಾಲದಲ್ಲಿ, ಸ್ಮೃತಿಯಿಂದಲೇ ಬಹುತೇಕ ಕಾವ್ಯರಚನೆಗಳು ಆಯಿತು ! ಸರ್ವಜ್ಞ, ಆ ತರಹದ ಕಾಲದ ಒಬ್ಬ ದಾರ್ಶನಿಕ ! ಕೆಲವು ಅವನ ಅಭಿಪ್ರಾಯಗಳು ಸಾರ್ವತ್ರಿಕ ವಾಗಬೇಕಾಗಿಲ್ಲ. ಕೆಲವು ಆಗಿವೆ. ಬಹುಪಾಲು ಒಳ್ಳೆಯ ಅನುಭವದ ನುಡಿಗಳಿವೆ; ಅವನ ಬತ್ತಳಿಕೆಯಲ್ಲಿ- ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ ! ಅಷ್ಟೆ !
'ಸಂಪದ' ದಲ್ಲಿ ನಾನು ಸರ್ವಜ್ಞ ನ ಮೇಲೆ ಒಂದು ಲೇಖನ ಸಂಗ್ರಹಿಸಿ ಬರೆದಿದ್ದೆ. ಅದರಲ್ಲಿ ಕೆಲವು ಅಂತಹ ಹೇಳಿಕೆಗಳನ್ನು ಪಟ್ಟಿ ಮಾಡಿದ್ದೇನೆ. ನೋಡಿ.
Re: ಈ ವಚನದ ಅರ್ಥ ಹೇಳಿ ನೋಡೋಣ
ನಿಮ್ಮ ಬರಹ ಓದಿದ ಮೇಲೆ ಕೊನೆಯ ಎರಡು ಸಾಲು ಕಟ್!!