ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ನಮಗೆ ರಿಮೇಕ್ ಪತ್ರಿಕೆ ಬೇಕೇ?

January 15, 2007 - 6:57am — ASHOKKUMAR

ಇಂಗ್ಲಿಷ್ ಪತ್ರಿಕೆಯ ಸುದ್ದಿ-ಲೇಖನಗಳನ್ನು ಕನ್ನಡದಲ್ಲಿ ಅನುವಾದ ಮಾಡಿ ಕೊಡುವ ಪತ್ರಿಕೆಯೊಂದು ಆರಂಭವಾಗಲಿದೆಯಂತೆ. ಹಾಗೆ ನೋಡಿದರೆ ಇತರ ಕನ್ನಡ ಪತ್ರಿಕೆಗಳೂ ಕೂಡಾ ಇಂಗ್ಲಿಷಿನಿಂದ ಸುದ್ದಿ ಮತ್ತು ಲೇಖನಗಳನ್ನು ಅನುವಾದ ಮಾಡಿ ಕೊಡುವುದು ಸಾಮಾನ್ಯ. ಆದರೆ ಇದು The Times Of Indiaವನ್ನು ಯಥಾ ರೀತಿ ಕನ್ನಡಕ್ಕೆ ಭಟ್ಟಿ ಇಳಿಸಿ ಕೊಡುವ ಉದ್ದೇಶ ಹೊಂದಿದೆ.ನಿಮ್ಮ ಪ್ರತಿಕ್ರಿಯೆ ಏನು? India Today ಅಂತಹ ಪತ್ರಿಕೆಗಳ ಗುಜರಾಥಿ,ಮಲೆಯಾಳ ಆವೃತಿ ಬಹಳ ಹಿಂದಿನಿಂದ ಲಭ್ಯವಿವೆ ಎನ್ನುವುದನ್ನು ಗಮನದಲ್ಲಿಡಿ.

‹ ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ! ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ ›
  • ಸುದ್ದಿ, ಸಮಾಚಾರ
~.~
  • Login or register to post comments
  • 1214 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 15, 2007 - 6:59pm — Sunil Jayaprakash

ಎಂಜಲು ದಿನಪತ್ರಿಕೆ ??

Sunil Jayaprakash's picture

ಈ ವಿಷಯವಾಗಿ, ಅನಂತಮೂರ್ತಿಯವರು ಈ ದಿನದ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಅವುಗಳನ್ನು ಎಂಜಲು ಪತ್ರಿಕೆಗಳೆಂದು ಲೇವಡಿ ಮಾಡಿದ್ದಾರೆ.

ಈ ಅನುವಾದಿತ ಪತ್ರಿಕೆಗಳ ಮೇಲೆ ನನ್ನಲ್ಲೇನು ವಿಶೇಷವಾದ ಕಾಳಜಿ ಇಲ್ಲ. ಆದರೆ ಒಂದೇ ಒಂದು ಪ್ರಶ್ನೆ, ಇಷ್ಟು ವರ್ಷ ಯಾವುದೇ ತಕರಾರಿಲ್ಲದೆ ನಡೆದುಕೊಂಡು ಬಂದ,
೧. ಅನುವಾದಿತ ಸಾಹಿತ್ಯವನ್ನು ಎಂಜಲು ಸಾಹಿತ್ಯ ಎನ್ನಬಹುದೇ ?
೨. ಅನುವಾದ ಅಕಾಡೆಮಿಯನ್ನು ಎಂಜಲು ಅಕಾಡೆಮಿ ಎನ್ನಲಾಗುತ್ತದೆಯೇ ?

ಈ ಎಂಜಲು ಸಾಹಿತ್ಯ, ಅಕಾಡೆಮಿಗಳನ್ನು ಕುರಿತು, ಸಾಮಾನ್ಯ ಓದುಗರಿಗೆ, ಯಾವ ರೀತಿಯ ಸಮರ್ಥನೆ ಸಿಗಬಲ್ಲದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2007 - 9:32pm — pavanaja

Re: ಎಂಜಲು ದಿನಪತ್ರಿಕೆ ??

pavanaja's picture

ಈ ಬಗ್ಗೆ ನಾನು ಸಪ್ಟೆಂಬರ್ ೨೦೦೬ರಲ್ಲೇ ಬರೆದಿದ್ದೆ. ಆದರೆ ನಾನು ಅನಂತಮೂರ್ತಿ ಅಲ್ಲದ ಕಾರಣ ನನ್ನ ಬರೆಹ ಯಾರಿಗೂ ಸುದ್ದಿಯೇ ಆಗಲಿಲ್ಲ Sad. ಆ ಬರೆಹ ಇಲ್ಲಿದೆ.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2007 - 10:17pm — ASHOKKUMAR

Re: ಎಂಜಲು ದಿನಪತ್ರಿಕೆ ??

ASHOKKUMAR's picture

ನಿಮ್ಮ ಲೇಖನ "ಉಷಾಕಿರಣದ ದಿವ್ಯಮರಣ" ನಾನೀಗ ತಾನೇ ಗಮನಿಸಿದೆ.ಅನಂತಮೂರ್ತಿಯವರ ಮಾತಿಗೆ ಹೆಚ್ಚು ಬೆಲೆ-ನೀವು ಬರೆದುದಕ್ಕೆ ಬೆಲೆಯಿಲ್ಲ  ಎಂದು ತಿಳಿಯಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2007 - 10:40pm — ವೈಭವ

Re: ಎಂಜಲು ದಿನಪತ್ರಿಕೆ ??

ವೈಭವ's picture

ನಿಜವಾಗಲು ಇದು ಖಂಡನೀಯವಾದುದು.

ನಮ್ಮ ಪತ್ರಕರ್ತರು ಡೈಲಿ ಅನುವಾದಕರಾಗಬೇಕೆ ? ಇದಕ್ಕಿಂತ ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಬೇರೆ ಉದಾಹರಣೆ ಬೇಕೆ?  ಸಂಕೇಶ್ವರರು ವಿಜಯ ಕರ್ನಾಟಕ ಟೈಂಸ್ ನವರಿಗೆ ಮಾರಿದಾಗಲೆ ಬಹಳ ನಿರಾಸೆಯಾಯಿತು.

ಅನುವಾದ ಸಾಹಿತ್ಯದ ಬಗ್ಗೆ, ಇದು ಬೇಕೆ ಬೇಡವೆ ಎಂಬ ಪ್ರಶ್ನೆ ಇದ್ದರೆ ಅದು ಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಏಕೆಂದರೆ

* ಅದು ಆ ಅನುವಾದಕನು ಆಸಕ್ತಿಯಿಂದ ಮಾಡುವುದು ಹಾಗು ಅದು ಬೇರೆ ಭಾಷೆಯಲ್ಲಿರುವ ಉತ್ತಮ ಕೃತಿಯಾಗಿರಬಹುದು ಆದರೆ ಪತ್ರಿಕೆಯಲ್ಲಿ ಹಾಗಲ್ಲ ಅದು ದಿನವೂ ನಡೆಯುವ ಕೆಲಸ ಹಾಗು ಆ ಅನುವಾದಕನು ಇಷ್ಟವಿಲ್ಲದೆಯೊ/ಇಷ್ಟವಿದೆಯೊ ಅದನ್ನು ಮಾಡಲೆಬೇಕಾಗುತ್ತದೆ. ಇಲ್ಲಿ ಅನುವಾದಕನ ಇಷ್ಟ/ಕಷ್ಟ ಗಳಿಗೆ ಬೆಲೆಯಿಲ್ಲ.

* ಆದರೆ ನಾವು ಚರ್ಚಿಸಬೇಕಾದುದು ಅನುವಾದ ಸಾಹಿತ್ಯದ 'ಪ್ರಮಾಣ' ಎಷ್ತಿರಬೇಕು ಎಂಬುದು. ಇದು ಅನುವಾದ ಸಾಹಿತ್ಯದಲ್ಲಿ ಪಳಗಿರುವವರಿಗೆ ನಾವು ಬಿಡಬೇಕು. ಅವರು ಚಿಂತಿಸಬೇಕಾದುದು ನಾವು ಒಳ್ಲೆಯ ಕೃತಿಗಳನ್ನ ಅನುವಾದ ಮಾಡಿತ್ತಿದ್ದೀವೆಯೊ ಅಥವಾ ಕೇವಲ ಸಾಮಾನ್ಯ ( ಅಥವಾ ಅದಕ್ಕಿಂತ ಕೆಳಮಟ್ಟದ್ದು) ಕೃತಿಗಳನ್ನ ಮಾಡುತ್ತಿದ್ದೀವೆಯೊ? ಇದು ಅನುವಾದಿತ ಕೃತಿಗಳ ಬಗ್ಗೆ ವಿಮರ್ಶೆ ಮಾಡಿದರೆ ತಿಳಿಯುತ್ತದೆ.

-ಜೈ ಕರ್ನಾಟಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 7:45am — srivathsajoshi

Re: ಎಂಜಲು ದಿನಪತ್ರಿಕೆ ??

srivathsajoshi's picture

pavanaja wrote:
ಆದರೆ ನಾನು ಅನಂತಮೂರ್ತಿ ಅಲ್ಲದ ಕಾರಣ ನನ್ನ ಬರೆಹ ಯಾರಿಗೂ ಸುದ್ದಿಯೇ ಆಗಲಿಲ್ಲ Sad

ಸಿಗೋಣ,
ಪವನಜ
-----------

ಹೌದು ಡಾ|ಪವನಜ,

ಯು ಆರ್ (ನಾಟ್)ಅನಂತಮೂರ್ತಿ; ಯು ಬಿ ಪವನಜ!

Smiling

ಅಂದಹಾಗೆ ಪ್ರಸ್ತಾಪಿತ 'ಎಂಜಲು'ಪತ್ರಿಕೆಯಲ್ಲಿ ಈ ತರಹದ ಸುದ್ದಿಶೀರ್ಷಿಕೆ ತರ್ಜುಮೆಗೊಂಡು
"ಕುವೈಟ್ ಪವನಜ ಮಗುವಿಗೆ ೧೮ ವರ್ಷ ಉಚಿತ ವಿಮಾನಯಾನ" ಎಂದು ಬರಬಹುದೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 11:41am — pavanaja

Re: ಎಂಜಲು ದಿನಪತ್ರಿಕೆ ??

pavanaja's picture

srivathsajoshi wrote:

ಅಂದಹಾಗೆ ಪ್ರಸ್ತಾಪಿತ 'ಎಂಜಲು'ಪತ್ರಿಕೆಯಲ್ಲಿ ಈ ತರಹದ ಸುದ್ದಿಶೀರ್ಷಿಕೆ ತರ್ಜುಮೆಗೊಂಡು
"ಕುವೈಟ್ ಪವನಜ ಮಗುವಿಗೆ ೧೮ ವರ್ಷ ಉಚಿತ ವಿಮಾನಯಾನ" ಎಂದು ಬರಬಹುದೇ?

ಹ್ಹ ಹ್ಹ! ಚೆನ್ನಾಗಿದೆ.

ತರಲೆ ಅನುವಾದಗಳ ಉದಾಹರಣೆಗೆ ಇಲ್ಲಿ ಕ್ಲಿಕ್ ಮಾಡಿ.

ಸಿಗೋಣ,
ಪವನಜ
-----------
Vishva Kannada Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 4:48pm — ismail

Re: ಎಂಜಲು ದಿನಪತ್ರಿಕೆ ??

ismail's picture

(punಡಿತೋತ್ತಮರ ಕ್ಷಮೆ ಕೋರಿ)

ಖಂಡಿತವಾಗಿಯೂ you are not Ananthamurthy, you be Pavanaja.

ಇಸ್ಮಾಯಿಲ್

ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 5:36pm — srivathsajoshi

Re: ಎಂಜಲು ದಿನಪತ್ರಿಕೆ ??

srivathsajoshi's picture

ಇಸ್ಮಾಯಿಲ್ ಅವರಿಗೆ, ನಮಸ್ಕಾರ.

ಎಲ್ಲರಿಗೂ ಅರ್ಥವಾಗುವಂತೆ 'ಪನ್'ಅನ್ನು ಬಿಡಿಸಿ ಬರೆದದ್ದಕ್ಕೆ ತುಂಬಾ ಧನ್ಯವಾದಗಳು!

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 10:49am — Sunil Jayaprakash

Re: ಎಂಜಲು ದಿನಪತ್ರಿಕೆ ??

Sunil Jayaprakash's picture

ಪವನಜರೆ, ಬೇಸರಿಸದಿರಿ. Laughing out loud

ASHOKKUMAR wrote:
ಅನಂತಮೂರ್ತಿಯವರ ಮಾತಿಗೆ ಹೆಚ್ಚು ಬೆಲೆ-ನೀವು ಬರೆದುದಕ್ಕೆ ಬೆಲೆಯಿಲ್ಲ ಎಂದು ತಿಳಿಯಬೇಡಿ.

ನನ್ನದೂ ಇದೇ ಮಾತು. ನೀವು ಬರೆದುದಕ್ಕೆ ಬೆಲೆಯಿಲ್ಲ ಎಂದು ದಯವಿಟ್ಟು ತಿಳಿಯಬೇಡಿ.

ಮೇಲಿನ ಪ್ರತಿಕ್ರಿಯೆಯಲ್ಲಿ ನನ್ನ ಮುಖ್ಯ ಉದ್ಧೇಶ ಇದ್ದುದ್ದು, ಅನುವಾದಿತ ಪತ್ರಿಕೆಯನ್ನು ಎಂಜಲು ಪತ್ರಿಕೆಯೆನ್ನಬಹುದಾದರೆ, ಅನುವಾದಿತ ಸಾಹಿತ್ಯ ಮತ್ತು ಅದಕ್ಕೆಂದೇ ಇರುವ ಅನುವಾದ ಅಕಾಡೆಮಿಗಳನ್ನೂ ಕೂಡ ಎಂಜಲು ಪ್ರಾಡಕ್ಟುಗಳು ಎನ್ನಬಹುದೇ ಎಂಬುದಾಗಿ ಅಷ್ಟೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 12:37pm — pavanaja

Re: ಎಂಜಲು ದಿನಪತ್ರಿಕೆ ??

pavanaja's picture

Sunil Jayaprakash wrote:
ಮೇಲಿನ ಪ್ರತಿಕ್ರಿಯೆಯಲ್ಲಿ ನನ್ನ ಮುಖ್ಯ ಉದ್ಧೇಶ ಇದ್ದುದ್ದು, ಅನುವಾದಿತ ಪತ್ರಿಕೆಯನ್ನು ಎಂಜಲು ಪತ್ರಿಕೆಯೆನ್ನಬಹುದಾದರೆ, ಅನುವಾದಿತ ಸಾಹಿತ್ಯ ಮತ್ತು ಅದಕ್ಕೆಂದೇ ಇರುವ ಅನುವಾದ ಅಕಾಡೆಮಿಗಳನ್ನೂ ಕೂಡ ಎಂಜಲು ಪ್ರಾಡಕ್ಟುಗಳು ಎನ್ನಬಹುದೇ ಎಂಬುದಾಗಿ ಅಷ್ಟೇ.

ಅನುವಾದ ಬೇಕು. ಆದರೆ ಅದಕ್ಕೆಂದೇ ಒಂದು ಅಕಾಡೆಮಿ ಬೇಕೋ ಎಂಬುದು ಗೊತ್ತಿಲ್ಲ. ನಾನು ಪ್ರಪಂಚದ ಕೆಲವು ಖ್ಯಾತ ಪುಸ್ತಕಗಳನ್ನು (ಉದಾ -ಮೆಟಾಮಾರ್ಫಾಸಿಸ್, ಹೆಂಚ್‌ಬ್ಯಾಕ್ ಆಫ್ ನೋಟ್ರಡಾಮ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಇತರೆ ಭಾಷೆಯ ಪುಸ್ತಗಳು, ...) ಅವುಗಳ ಕನ್ನಡಾನುವಾದದಲ್ಲೇ ಓದಿರುವುದು. ಅದೇ ರೀತಿ ಕನ್ನಡ ಬರದವರಿಗೆ ಕನ್ನಡದ ಉತ್ತಮ ಪುಸ್ತಗಳನ್ನು ಅನುವಾದಿಸಿ ಕೊಡಲೂ ಬೇಕು. ಕನ್ನಡ ವಿಜ್ಞಾನ ಸಾಹಿತ್ಯವನ್ನಂತೂ ಕೆಲವರು ಅನುವಾದ ಸಾಹಿತ್ಯ ಎಂದೇ ಕರೆಯುತ್ತಾರೆ (ಇದನ್ನು ನಾನು ಒಪ್ಪುವುದಿಲ್ಲ).

ಆದರೆ ಅನುವಾದ ಪತ್ರಿಕೆ? ಕನ್ನಡ ನಾಡಿನ ಸುದ್ದಿಗಳನ್ನು ಮೂಲ ಕನ್ನಡ ಭಾಷೆಯಲ್ಲೇ ತಯಾರಿಸಿದರೆ ಅದಕ್ಕೆ ರುಚಿ ಜಾಸ್ತಿ. ಟೈಂಸ್‌ನವರಿಗಂತೂ ಕನ್ನಡ ನಾಡಿನ ಆಗುಹೋಗುಗಳು ಸುದ್ದಿಯೇ ಅಲ್ಲ. ಜಿ.ವಿ. ಅಯ್ಯರ್ ಸತ್ತಾಗ ಟೈಂಸ್‌ನವರಿಗೆ ಮುಖ ಪುಟದ ಸುದ್ದಿ ಏನಿತ್ತು ಗೊತ್ತೆ? ಮುನಿಸಿಪಾಲಿಟಿಯವರು ಸೆರೆಹಿಡಿದ ನಾಯಿಗಳಿಗೆ ಸಸ್ಯಾಹಾರ ನೀಡುತ್ತಿದ್ದಾರೆ, ಇದು ಸರಿಯಲ್ಲ ಎಂಬ ಸುದ್ದಿ ಮುಖಪುಟದಲ್ಲಿ ಕೆಳಗಡೆ ಆರು ಕಾಲಂಗಳಲ್ಲಿತ್ತು! ಜಿ.ವಿ. ಅಯ್ಯರ್ ಬಗ್ಗೆ ಸುದ್ದಿ ಎಲ್ಲೋ ಒಳಪುಟದಲ್ಲಿತ್ತು. ಟೈಂಸ್‌ನವರಿಗೆ ಬ್ರಿಟ್ನಿ ಸ್ಪಿಯರ್, ಮಲ್ಲಿಕಾ ಶೆರಾವತ್ ಸುದ್ದಿಯಾಗುತ್ತಾರೆ. ಕನ್ನಡ ಸುದ್ದಿಯಾಗುವುದಿಲ್ಲ. ಅವರು ಕನ್ನಡದ ಜಾಯಮಾನಕ್ಕೆ ಒಗ್ಗದ ಸುದ್ದಿಗಳನ್ನು (?) ಹಾಗೆಯೇ ಕನ್ನಡಾನುವಾದ ಮಾಡಿ ಪತ್ರಿಕೆಯಲ್ಲಿ ಹಾಕುತ್ತಾರೊ ಎಂಬುದನ್ನು ಕಾದು ನೋಡಬೇಕಾಗಿದೆ.

ಸಿಗೋಣ,
ಪವನಜ
-----------
Vishva Kannada Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 5:42pm — ASHOKKUMAR

Re: ಪತ್ರಿಕೆಗೆ ಯಾವುದು ಸುದ್ದಿ?

ASHOKKUMAR's picture

೧೬.೧.೨೦೦೭ರ "Vijay Times" ವರದಿ ಹೀಗಿದೆ:

Rabid dog bites 3 kids Bannur: Three children were bitten by a rabid dog in Bannur town in Mysore district on Monday. Later, the enraged public chased the..

" ನಾಯಿ ಮನುಷ್ಯನನ್ನು ಕಡಿದರೆ ಸುದ್ದಿ ಅಲ್ಲ..ಮನುಷ್ಯ ನಾಯಿಯನ್ನು ಕಡಿದರೆ ಸುದ್ದಿ" ಎಂಬ ನಾಣ್ನುಡಿ ಈಗ ಸೂಕ್ತವಲ್ಲವೇ?Wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 21, 2007 - 7:00pm — ismail

ಎಂಜಲು ಪತ್ರಿಕೆಯ ಕುರಿತು

ismail's picture

ಪ್ರಿಯ ಸುನೀಲ್  ನೀವು ಪ್ರಸ್ತಾಪಿಸಿದ ಎಂಜಲು ಪತ್ರಿಕೆ, ಎಂಜಲು ಸಾಹಿತ್ಯಗಳ ಕುರಿತು ಅನಂತಮೂರ್ತಿಯವರೇ ಬರೆದ ಲೇಖನ 'ಭಾಷಾಂತರದ ಗಂಡಾಂತರ' ಇಲ್ಲಿದೆ. ಭಾಷಾಂತರದ ಒಳಿತುಗಳಂತೆಯೇ ಅಪಾಯಗಳನ್ನೂ ಅವರು ಈ ಲೇಖನದಲ್ಲಿ ಗುರುತಿಸಿದ್ದಾರೆ.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 10:36pm — H.S.R.Raghavend...

Re: ನಮಗೆ ರಿಮೇಕ್ ಪತ್ರಿಕೆ ಬೇಕೇ? : ಇದನ್ನು ಹೀಗೂ ನೋಡಬಹುದೇ? HSR

H.S.R.Raghavendra Rao's picture

ಕನ್ನಡದ ಓದುಗರು ಇಂಗ್ಲಿಷ್ ನಿಂದ ಅನುವಾದಿತವಾದ ದಿನಪತ್ರಿಕೆಯನ್ನು ಓದಬೇಕೆಂದಾಗ ಬೇಸರವಾಗುವುದು ಸಹಜ.  ಆದರೆ ಈ ಕೆಲವು ವಿಷಯಗಳನ್ನು ಕುರಿತು ಆಲೋಚಿಸೋಣ.

೧. ದೇಶ-ವಿದೇಶಗಳ ವಾರ್ತೆಯನ್ನು ಸಂಗ್ರಹಿಸಲು ಮತ್ತು ಅವುಗಳ ವಿಶ್ಲೇಷಣೆ ಮಾಡಿಸಿ ಲೇಖನ ಬರೆಸಲು ಅಗತ್ಯವಾದ ಸಂಪನ್ಮೂಲಗಳು ಕನ್ನಡ ಪತ್ರಿಕೆಗಳಿಗೆ ಇದ್ದಂತೆ ತೋರುವುದಿಲ್ಲ.

೨. ಕಾರಣ ಏನೇ ಇರಲಿ, ಕನ್ನಡ ಪತ್ರಿಕೆಗಳಲ್ಲಿ ಇಂಥ ಗಂಭೀರ ಬರೆಹಗಳು ಕಡಿಮೆಯಾಗುತ್ತಿವೆ. ಐ.ಏ.ಎಸ್., ಕೆ.ಏ.ಎಸ್. ಮುಂತಾದ ಪರೀಕ್ಷೆಗಳನ್ನು ತೆಗೆದುಕೊಳ್ಳುವ ನನ್ನ ವಿದ್ಯಾರ್ಥಿಗಳು ಪಡುವ ಪಾಡನ್ನು ನಾನೇ ನೋಡಿದ್ದೇನೆ. ಅಲ್ಲಿ ಅಪರಾಧ, ಹುಸಿ ಮನರಂಜನೆ ಮತ್ತು ಪ್ರಚಾರ ರೂಪದ ಬರಹಗಳನ್ನು ಓದಿ ನಿಟ್ಟುಸಿರು ಬಿಟ್ಟಿದ್ದೇನೆ.

೩. ಈಗ ಕನ್ನಡದಲ್ಲಿ ಬರುತ್ತಿರುವ ಅನ್ಯದೇಶೀಯವಾದ ಮಾಹಿತಿಗಳು ಕೂಡ, ಇಂಗ್ಲಿಷ್ ಪತ್ರಿಕೆಗಳು ಮತ್ತು ಇಂಟರ್ ನೆಟ್ ನಲ್ಲಿ ದೊರೆಯುವ ಮಾಹಿತಿಗಳ ಸಂಗ್ರಹಿತವಾದ ಅನುವಾದವೇ ಆಗಿರುತ್ತದೆ.

೪. `ಟೈಮ್ಸ್ ಆಫ್ ಇಂಡಿಯಾ' ಮತ್ತು `ದಿ ಹಿಂದೂ'ಗಳು ಸೇರಿದಂತೆ ಎಲ್ಲ ಪತ್ರಿಕೆಗಳೂ ಬೆಂಗಳೂರು ಆವೃತ್ತಿಯನ್ನು ಪ್ರಕಟಿಸುತ್ತಿವೆ .

೫. ಇತರ ಇಂಗ್ಲಿಷ್ ಪತ್ರಿಕೆಗಳ ಬಗ್ಗೆ ನಾನು ಏನೂ ಹೇಳಲಾರೆ. ಆದರೆ, ಹಿಂದೂ ಪತ್ರಿಕೆಯಲ್ಲಿ ಬರುವ ಎಲ್ಲ ಸುದ್ದಿ ಮತ್ತು ವಿಶ್ಲೇಷಣೆಗಳು ಕೇವಲ ಕನ್ನಡ ಬರುವ ಓದುಗರಿಗೆ ದೊರೆತರೆ, ಬಹಳ ಅನುಕೂಲವಾಗುವುದೆಂದು ನನ್ನ ಗ್ರಹಿಕೆ.

೬. ನಾವು ಸಂಬಂಧಪಟ್ಟವರ ಮೇಲೆ ಒತ್ತಡ ತಂದು ಅನುವಾದಿತ ಪತ್ರಿಕೆಯಲ್ಲಿ ಕನ್ನಡ ಸಂಸ್ಕೃತಿಗೆ ಮೀಸಲಾದ, ಅನುವಾದವಲ್ಲದ ಕೆಲವು ಪುಟಗಳು ಇರಬೇಕೆಂದು ಒಪ್ಪಿಸಬಹುದು.

೭. ಇಂಥ ಪೈಪೋಟಿಯಿಂದ ಕನ್ನಡ ಪತ್ರಿಕೆಗಳ ಮಟ್ಟವೂ ಹೆಚ್ಚಬಹುದು. ಆದರೆ ಅವುಗಳಿಗೆ ಧಕ್ಕೆ ಬರದಂತೆ ನೋಡಕೊಳ್ಳುವ ಹೊಣೆಯು ನಮ್ಮದೂ ಹೌದು.

೮. ಈ ವಿಷಯದ ಬಗ್ಗೆ ಇರಬಹುದಾದ ಸೂಕ್ಷ್ಮಗಳನ್ನು ಸಂಪದದಲ್ಲಿಯೇ ಪತ್ರಿಕೋದ್ಯಮದ ಮಿತ್ರರು ಮತ್ತು ಮಾಧ್ಯಮಗಳ ವಿದ್ಯಾರ್ಥಿಗಳು ನೀಡಿದರೆ ಚೆನ್ನಾಗಿರುತ್ತದೆ.

S.Raghavendra Rao

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 11:44pm — ASHOKKUMAR

Re: ನಮಗೆ ರಿಮೇಕ್ ಪತ್ರಿಕೆ ಬೇಕೇ? : ಇದನ್ನು ಹೀಗೂ ನೋಡಬಹುದೇ? HSR

ASHOKKUMAR's picture

HINDU ಅಂತಹ ಪತ್ರಿಕೆ ಕನ್ನಡದಲ್ಲಿ ಲಭ್ಯವಾದರೆ ಪ್ರಯೋಜನವಾಗಬಹುದು ಎನ್ನುವುದನ್ನು ಒಪ್ಪಬಹುದು.ಆದರೆ ಈಗ ಲಭ್ಯವಾಗಲಿರುವುದು TOI.

ಇಂತಹ ಪತ್ರಿಕೆಯನ್ನು ನಮ್ಮಲ್ಲೆಷ್ಟು ಜನ ತರಿಸಬಹುದು? ತರಲೆ ಅನುವಾದಗಳನ್ನು ಓದಿ ಖುಷಿ ಪಡಲು ಉಪಯೋಗಿಸಬಹುದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2007 - 12:24am — rajeshnaik111

Re: ನಮಗೆ ರಿಮೇಕ್ ಪತ್ರಿಕೆ ಬೇಕೇ?

rajeshnaik111's picture

ರಿಮೇಕ್ ಪತ್ರಿಕೆ ನಮೆಗೆಲ್ಲರಿಗೂ ಬೇಡದಿರಬಹುದು, ಆದರೆ ಬೆನೆಟ್ ಎಂಡ್ ಕೋಲ್-ಮನ್ ಸಂಸ್ಥೆಗೆ ಬೇಕೆನ್ನಿಸುತ್ತಿದೆ - ಕರ್ನಾಟಕದ ಇನ್ನಷ್ಟು ಕನ್ನಡ ದಿನಪತ್ರಿಕೆ ಓದುಗರನ್ನು ತನ್ನತ್ತ ಸೆಳೆಯಲು. ನೆನಪಿರಲಿ, ಕೆಲವೇ ವರ್ಷಗಳ ಹಿಂದೆ ಡೆಕ್ಕನ್ ಹೆರಾಲ್ಡ್ ಕರ್ನಾಟಕದ ಕಿಂಗ್ ಆಗಿತ್ತು. ಈಗ ಅದು ಸಾಯುತ್ತಿದೆ. ಟೈಮ್ಸ್ ಆಫ್ ಇಂಡಿಯಾದ ಬೆಂಗಳೂರು ಆವೃತ್ತಿ ಎಲ್ಲಾ ತರಹದ ಆ(ಕಪ)ಟಗಳನ್ನು ಆಡಿ ಈಗ ಕರ್ನಾಟಕದ ನಂಬರ್ ಒನ್ ಆಂಗ್ಲ ದೈನಿಕ. ಈಗ ಬೆನೆಟ್ ಎಂಡ್ ಕೋಲ್-ಮನ್ ಕರ್ನಾಟಕದ ಉಳಿದ ಕನ್ನಡ ದಿನಪತ್ರಿಕೆಗಳನ್ನು ಮಲಗಿಸಲು ಹೊರಟಿದೆ.

ತನ್ನ ಸುಪರ್ದಿಯಲ್ಲಿರುವ ಉಶಾ ಕಿರಣದೊಂದಿಗೆ ಹೇಗೆ ಬೇಕಾದರೂ ಪ್ರಯೋಗ ಮಾಡುವ ಅಧಿಕಾರ ಬೆನೆಟ್ ಎಂಡ್ ಕೋಲ್-ಮನ್ ಗೆ ಇದೆ. ಆಂಗ್ಲ ಪತ್ರಿಕೆ ಓದುಗರು ಟೈಮ್ಸ್ ಆಫ್ ಇಂಡಿಯಾವನ್ನು ಸ್ವೀಕರಿಸಿದರು ಎಂಬ ಮಾತ್ರಕ್ಕೆ, ಕನ್ನಡ ದಿನಪತ್ರಿಕೆ ಓದುಗರು ಅದರ ನಕಲನ್ನು ಸ್ವೀಕರಿಸಬೇಕೆಂದಿಲ್ಲವಲ್ಲ. ಈಗಲೂ ಅಂಗ್ಲ ದಿನಪತ್ರಿಕೆಗಳು ಸುದ್ದಿಯನ್ನು ವಿವರ ಮಾಡುವ ಶೈಲಿಗೆ ಮತ್ತು ಕನ್ನಡ ದಿನಪತ್ರಿಕೆಗಳು ಸುದ್ದಿ ವಿವರಿಸುವ ಶೈಲಿಗೆ ಅಜಗಜಾಂತರ ವ್ಯತ್ಯಾಸವಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2007 - 11:30am — pavanaja

Re: ನಮಗೆ ರಿಮೇಕ್ ಪತ್ರಿಕೆ ಬೇಕೇ?

pavanaja's picture

rajeshnaik111 wrote:
ಆಂಗ್ಲ ಪತ್ರಿಕೆ ಓದುಗರು ಟೈಮ್ಸ್ ಆಫ್ ಇಂಡಿಯಾವನ್ನು ಸ್ವೀಕರಿಸಿದರು

TOI ಓದುಗರು ಅಲ್ಲ. ನೋಡುಗರು ಎಂದಾಗಬೇಕು Smiling

ಸಿಗೋಣ,
ಪವನಜ
-----------
Vishva Kannada Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2007 - 12:04pm — rajeshnaik111

Re: ನಮಗೆ ರಿಮೇಕ್ ಪತ್ರಿಕೆ ಬೇಕೇ?

rajeshnaik111's picture

ಹ್ಹ ಹ್ಹ ... ಸರಿಯಾದ ಮಾತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2007 - 12:10pm — ASHOKKUMAR

ಪ್ರಥಮ ಸಂಚಿಕೆ ಹೇಗೆ ಬಂದಿದೆ? ಅಭಿಪ್ರಾಯ ತಿಳಿಸಿ.

ASHOKKUMAR's picture

ಇಂದು TOI ಕನ್ನಡ ಅವತರಣಿಕೆ(ಅವತಾರ) ಬಿಡುಗಡೆಯಾಗಿದೆ. ನೋಡಿದಿರಾ? ಹೇಗಿದೆ? ಕನ್ನಡದ ಛಾಪು ಇದೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ
  • ದಿನ ಪತ್ರಿಕೆಯೂ ಪ್ರಾದೇಶಿಕ ಆವೃತ್ತಿಗಳೂ
  • ಸಂಪದದಲ್ಲಿ ಹೊಸತು: ಆಯ್ದ ಸುದ್ದಿ ವಿಭಾಗ
  • ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ
  • ಅನುವಾದ ಅಕಾಡೆಮಿ ಏನು ಮಾಡಬಹುದು?
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ನೆಗೞ್
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 6:28pm
  • anamadheya
    ಉ: ....ಬಾರದು ಎಂದುಕೊಂಡರೆ!
    August 21, 2008 - 5:40pm
  • Sunil Jayaprakash
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 5:33pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • madhava_hs
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • kannadakanda
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:50pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:45pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:30pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:27pm
ಇನ್ನಷ್ಟು


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator