23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎತ್ತ ಸಾಗುತ್ತಿದೆ ಭಾರತ?

October 27, 2010 - 1:47pm
mpneerkaje

ಇತ್ತೀಚಿನ ಕೆಲವೊಂದು ಬೆಳವಣಿಗೆಗಳು ನನ್ನನ್ನು ತುಂಬಾ ಚಿಂತೆಗೀಡು ಮಾಡಿವೆ. ಕೆಳಗಿನ ಘಟನೆಗಳ ಬಗ್ಗೆ ಒಮ್ಮೆ ಯೋಚಿಸಿ :

 

೧. ಪಸ್ಚಿಮ ಬಂಗಾಳದ ದೇಗಂಗಾ ದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ. ಹಿಂದೂ ಹೆಣ್ಣು ಮಕ್ಕಳ ಅತ್ಯಾಚಾರ, ದೇವಸ್ಥಾನಗಳನ್ನು ಧ್ವಂಸಗೊಳಿಸುವುದು ಇತ್ಯಾದಿ ಸರ್ವೇ ಸಾಮಾನ್ಯವಾಗಿದೆ. ಈ ಕೃತ್ಯಗಳನ್ನು ಖಂಡಿಸಿ ಈ ಬಾರಿ ಹಿಂದೂಗಳು ದುರ್ಗಾ ಪೂಜೆ ಆಚರಿಸದಿರಲು ನಿರ್ಧರಿಸಿದರು.  ಅದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ? ಸರಕಾರ ಬಹುಸಂಖ್ಯಾತ ಮುಸ್ಲಿಮರ ಪರವಾಗಿರುವಾಗ? ಎಂದಿನಂತೆ ದೇಶದ ಯಾವುದೇ ಪ್ರಮುಖ ಪತ್ರಿಕೆ ಈ ನರಮೇಧವನ್ನು ವರದಿ ಮಾಡಿಲ್ಲ. ಹಿಂದೂಗಳ ನರರಲ್ಲ ಎಂಬ ಕಾರಣವೋ ಏನೋ, ಗೊತ್ತಿಲ್ಲ.

 

೨. ಕೇರಳದಲ್ಲಿ ಯಾತ್ರಾರ್ಥಿಗಳಿಗಾಗಿರುವ ಬಸ್ ಗಳಲ್ಲಿ ಹಿಂದೂ ದೇವ ದೇವತೆಗಳ ಚಿತ್ರಗಳಿಗೆ ನಿಷೇಧ. ಈ ಬಸ್ ಗಳು ಪ್ರಮುಖವಾಗಿ ಶಬರಿಮಲೆ ಯಾತ್ರಾರ್ಥಿಗಳಿಗಾಗಿ ನಿಯೋಜಿಸಿದಂಥವುಗಳು. ಈ ನಿಷೇಧಧ ಅರ್ಥ ಏನು? ಕೇರಳದಲ್ಲಿ ಷರಿಯತ್ ಕಾನೂನು ಈಗಾಗಲೇ ಜಾರಿಯಾಗಿದೆ, ಗಮನದಲ್ಲಿರಲಿ ಎಂಬ ಎಚ್ಚರಿಕೆಯೇ?

 

೩. ದೇಶದ ಅಖಂಡತೆಯನ್ನೇ ಪ್ರಶ್ನಿಸುವ ಗಿಲಾನಿ, ಅರುಂಧತಿ ಇನ್ನೂ ಸ್ವಚ್ಚಂದವಾಗಿ ತಿರುಗಾಡುತ್ತಿರುವುದು, ಹಾಗೂ ಅವರನ್ನು ಸಮರ್ಥಿಸಲು ಇದೇ ಭಾರತ ದೇಶ ಕೊಟ್ಟಿರುವ ವಾಕ್ ಸ್ವಾತಂತ್ರ್ಯವನ್ನು ನೆಪವಾಗಿರಿಸಿರುವ ಸರಕಾರ ಹಾಗೂ ಸರಕಾರೇತರ ಸಂಘಟನೆಗಳು

 

೪. ಈ ಮೇಲ್ಕಂಡ ಯಾವುದೇ ಅನಾಹುತಗಳನ್ನು ಪ್ರಶ್ನಿಸುವ ಎದೆಗಾರಿಕೆ, ಅಗತ್ಯತೆ, ಆಸಕ್ತಿ, ಅನಿವಾರ್ಯತೆ ಯಾರಿಗೂ ಇಲ್ಲದಿರುವುದು, ಪ್ರತಿಪಕ್ಷವಾದ ಬಿಜೆಪಿ, ಹಿಂದೂಪರ ಸಂಘಟನೆಗಳಿಗೂ ಕೂಡ

 

ಏನನಿಸುತ್ತಿದೆ ನಿಮಗೆ? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

Submitted by Jayanth Ramachar on

ಹೌದು ನೀರ್ಕಾಜೆ ಅವರೆ...ಇಂದಿನ ವಿ.ಕ. ಪತ್ರಿಕೆಯಲ್ಲಿ ಅರುಂಧತಿ ರಾಯ್ ಅವರ ಹೇಳಿಕೆ ನೋಡಿ ನಿಜವಾಗಲೂ ಬೆಚ್ಚಿಬಿದ್ದೆ..

Submitted by gunashekara murthy on

ಹಿಗ್ಗುವುದು ಎನ್ನ ಮನ
( ಈ ಕವಿತೆ ಬರೆದು ಇಪ್ಪತೈದು ವರ್ಷಗಳಾವೆ. ಆಗಿನ ಜನಸಂಖ್ಯೆಯನಿಟ್ಟು ಎಂಬತ್ತುಕೋಟಿಯೆಂದು ಬರೆದಂತಹುದು ಆದರೆ ಇಂದು ಬಡತನರೇಖೆಯಲ್ಲಿರುವವರು ಎಂಬತ್ತು ಕೋಟಿ ಜನರಿದ್ದಾರೆ ನೀವು ಹೇಗೆ ಬೇಕಾದರೂ ತಿಳಿದುಕೊಳ್ಳಬಹುದು )

ಎಂಬತ್ತು ಕೋಟಿ ( 120ಕೋಟಿ ) ಮುಠ್ಠಾಳ ಭಾರತೀಯರ ಮಟ್ಟ
ಗುಣಮಟ್ಟ ಎತ್ತ ಸಾಗುತಿದೆ ನೋಡಾ.

ಕಟ್ಟಿರುವರೋ ರಾಷ್ಟ್ರವ ಸ್ವಾತಂತ್ರದ ಕಹಳೆಯೂದಿ
ಕಟ್ಟಿರುವರೋ ರಾಷ್ಟ್ರವ ಅತಂತ್ರ ಸ್ವತಂತ್ರದ ನಡುವೆ
ಹೊಲಸು ಜಾತಿ ಮತಗಳ ಮೂಢನಂಭಿಕೆಗಳ ನಡುವೆ
ಹೊಲಸು ಬಾಷಾ ದ್ವೇಷ ಅಸೂಯೇ ಪೀಳಿಗೆ ನಡುವೆ
ಈ ಹೊಲಸು ಲಂಚ ರಾಜಕೀಯ ಸಂಸ್ಕೃತಿಯ ನಡುವೆ
ಇದೇ ನಮಗೆ ಹೆಮ್ಮೆ ಎಂದೇಳುವ ನೀಚರಿವರು ನೋಡಾ.

ಹೊಲ್ಲದಾ ಪುರಾಣಕಥೆಗಳ ಮೇಲೆ ಸತ್ಯಾನ್ವೇಷಣೆಗೈದು
ಸತ್ಯವನ್ನೇ ಎಂದೂ ಕಾಣದೆ ಮಿಥ್ಯೆಯನ್ನೇ ಸತ್ಯವೆಂದು
ನೋಟವಿಲ್ಲದವ ಪ್ರಪಂಚವ ಅರಿತು ನೋಡುವ ತೆರದಿ
ಕಣ್ಣಿದ್ದು ಕುರುಡಾಗಿರುವ ಇವರನೆಂಥೂ ಬಣ್ಣಿಸಲಿ ನೋಡಾ.

ದೇವರಿಗೆ ಕೋಟಿ ಕೋಟಿ ರೊಕ್ಕವ ಸುರಿದು
ಚರ್ಚು ಮಸೀದಿ ದೇವಾಲಯ ಗುಡಿ ಗೋಪುರವ ಕಟ್ಟಿ
ಸ್ಥಾವರ ಮಂದಿರ ಗುಡಿಯಲಿ ನಗನಾಣ್ಯ ಬಚ್ಚಿಟ್ಟು
ತೊಟ್ಟಿಯಂತಿರುವಲ್ಲಿ ಬಾಳುವ ಬಹುಜನರಿಗೆ ಹೊಟ್ಟೆರೊಟ್ಟಿಗೆ ಗತಿಯಿಲ್ಲ
ಹೋಮದ ತೊಟ್ಟಿಗೂ ಸುರಿವರೂ ಅಜ್ಯಮಧು ಪಾಯಾಯಧಿಗಳನೊಟ್ಟಿಗೆ ನೋಡಾ.

ಯಾಗ ಯಙ್ಞ ಅರ್ಚನೆ ನೈವೇದ್ಯವೆಂದು ವಿಧ ವಿಧದಿ
ದೇವರಿಗೆ ಲಂಚವ ನೀಡಿ ಫಲವ ಪಡೇದಂತೆ ಭಾವಿಪರು
ಲಂಚವದು ಮನುಜ ಮನುಜರಿಗೆ ನೀಡಿದ್ದು ಉತ್ತುಂಗ ಕೇರಿ
ಲೋಕದಲಿ ಬದತನವೆಂಬ ಬೆಂಕಿಗೆ ಬಿದ್ದ ಪತಂಗದಂತಾಗಿ
ಭವಸಾಗರದಿ ಬಿದ್ದು ಸಾವ ಮುಠ್ಠಾಳ ಮನುಜರ ಎನಿತು ಬಣ್ಣಿಪಲಿ ನೋಡಾ

ಹೊಲಸ ಚರಂಡಿಯಲಿ ಪುಳು ಪುಟ್ಟಿ ಯಾರೂ ಅರಿಯದೆ
ಸಾವು ತಾ ಅಪ್ಪುವ ತೆರದಿ ಜೀವನವ ಕಷ್ಟದ ಸಂಕೋಲೆಯಲಿ
ಕಳೆದು ಜೀವ ಬಿಡುವ ಈ ಮೂಢರನೆಂಥೂ ಬಣ್ಣಿಸಲಿ ನೋಡಾ.

ದೇವರಿಲ್ಲದಾ ಗುಡಿ ಚರ್ಚು ಮಜೀದುಗಳ ಸುತ್ತಿದೊಡೆ ಫಲವೇನು ?
ನೋಟವಿಲ್ಲದವ ತಾ ಪ್ರಪಂಚವನರಿಯೇ ಸುತ್ತಿ ಸುತ್ತಿ ತಾ
ಪ್ರಪಂಚವ ಅರಿತು ಬಂದಂತೆ ಕಾಣುವ ಮೂಢ ಮನವ ನೋಡಾ.

ಪ್ರಪಂಚದ ಮನುಜ ಮನುಜರೆಲ್ಲರು ಎಲ್ಲರು ಒಂದೇ
ತನ್ನಂಥೆ ಪರರೆಂದು ಕಾಯ ವಾಚ ಮನಸಾ ನಡೆದೊಡೆ
ಭುವನವೇ ಶಿರಬಗ್ಗಿ ನಾಚುವುದು ಭಾರತ ಭಾರತೀಯರ ಕಂಡು
ಹಿಗ್ಗುವುದು ಎನ್ನ ಮನ ಆಗ ಮಾತ್ರ ನೋಡಾ .

Submitted by gunashekara murthy on

ಹಿಗ್ಗುವುದು ಎನ್ನ ಮನ
( ಈ ಕವಿತೆ ಬರೆದು ಇಪ್ಪತೈದು ವರ್ಷಗಳಾವೆ. ಆಗಿನ ಜನಸಂಖ್ಯೆಯನಿಟ್ಟು ಎಂಬತ್ತುಕೋಟಿಯೆಂದು ಬರೆದಂತಹುದು ಆದರೆ ಇಂದು ಬಡತನರೇಖೆಯಲ್ಲಿರುವವರು ಎಂಬತ್ತು ಕೋಟಿ ಜನರಿದ್ದಾರೆ ನೀವು ಹೇಗೆ ಬೇಕಾದರೂ ತಿಳಿದುಕೊಳ್ಳಬಹುದು )

ಎಂಬತ್ತು ಕೋಟಿ ( 120ಕೋಟಿ ) ಮುಠ್ಠಾಳ ಭಾರತೀಯರ ಮಟ್ಟ
ಗುಣಮಟ್ಟ ಎತ್ತ ಸಾಗುತಿದೆ ನೋಡಾ.

ಕಟ್ಟಿರುವರೋ ರಾಷ್ಟ್ರವ ಸ್ವಾತಂತ್ರದ ಕಹಳೆಯೂದಿ
ಕಟ್ಟಿರುವರೋ ರಾಷ್ಟ್ರವ ಅತಂತ್ರ ಸ್ವತಂತ್ರದ ನಡುವೆ
ಹೊಲಸು ಜಾತಿ ಮತಗಳ ಮೂಢನಂಭಿಕೆಗಳ ನಡುವೆ
ಹೊಲಸು ಬಾಷಾ ದ್ವೇಷ ಅಸೂಯೇ ಪೀಳಿಗೆ ನಡುವೆ
ಈ ಹೊಲಸು ಲಂಚ ರಾಜಕೀಯ ಸಂಸ್ಕೃತಿಯ ನಡುವೆ
ಇದೇ ನಮಗೆ ಹೆಮ್ಮೆ ಎಂದೇಳುವ ನೀಚರಿವರು ನೋಡಾ.

ಹೊಲ್ಲದಾ ಪುರಾಣಕಥೆಗಳ ಮೇಲೆ ಸತ್ಯಾನ್ವೇಷಣೆಗೈದು
ಸತ್ಯವನ್ನೇ ಎಂದೂ ಕಾಣದೆ ಮಿಥ್ಯೆಯನ್ನೇ ಸತ್ಯವೆಂದು
ನೋಟವಿಲ್ಲದವ ಪ್ರಪಂಚವ ಅರಿತು ನೋಡುವ ತೆರದಿ
ಕಣ್ಣಿದ್ದು ಕುರುಡಾಗಿರುವ ಇವರನೆಂಥೂ ಬಣ್ಣಿಸಲಿ ನೋಡಾ.

ದೇವರಿಗೆ ಕೋಟಿ ಕೋಟಿ ರೊಕ್ಕವ ಸುರಿದು
ಚರ್ಚು ಮಸೀದಿ ದೇವಾಲಯ ಗುಡಿ ಗೋಪುರವ ಕಟ್ಟಿ
ಸ್ಥಾವರ ಮಂದಿರ ಗುಡಿಯಲಿ ನಗನಾಣ್ಯ ಬಚ್ಚಿಟ್ಟು
ತೊಟ್ಟಿಯಂತಿರುವಲ್ಲಿ ಬಾಳುವ ಬಹುಜನರಿಗೆ ಹೊಟ್ಟೆರೊಟ್ಟಿಗೆ ಗತಿಯಿಲ್ಲ
ಹೋಮದ ತೊಟ್ಟಿಗೂ ಸುರಿವರೂ ಅಜ್ಯಮಧು ಪಾಯಾಯಧಿಗಳನೊಟ್ಟಿಗೆ ನೋಡಾ.

ಯಾಗ ಯಙ್ಞ ಅರ್ಚನೆ ನೈವೇದ್ಯವೆಂದು ವಿಧ ವಿಧದಿ
ದೇವರಿಗೆ ಲಂಚವ ನೀಡಿ ಫಲವ ಪಡೇದಂತೆ ಭಾವಿಪರು
ಲಂಚವದು ಮನುಜ ಮನುಜರಿಗೆ ನೀಡಿದ್ದು ಉತ್ತುಂಗ ಕೇರಿ
ಲೋಕದಲಿ ಬದತನವೆಂಬ ಬೆಂಕಿಗೆ ಬಿದ್ದ ಪತಂಗದಂತಾಗಿ
ಭವಸಾಗರದಿ ಬಿದ್ದು ಸಾವ ಮುಠ್ಠಾಳ ಮನುಜರ ಎನಿತು ಬಣ್ಣಿಪಲಿ ನೋಡಾ

ಹೊಲಸ ಚರಂಡಿಯಲಿ ಪುಳು ಪುಟ್ಟಿ ಯಾರೂ ಅರಿಯದೆ
ಸಾವು ತಾ ಅಪ್ಪುವ ತೆರದಿ ಜೀವನವ ಕಷ್ಟದ ಸಂಕೋಲೆಯಲಿ
ಕಳೆದು ಜೀವ ಬಿಡುವ ಈ ಮೂಢರನೆಂಥೂ ಬಣ್ಣಿಸಲಿ ನೋಡಾ.

ದೇವರಿಲ್ಲದಾ ಗುಡಿ ಚರ್ಚು ಮಜೀದುಗಳ ಸುತ್ತಿದೊಡೆ ಫಲವೇನು ?
ನೋಟವಿಲ್ಲದವ ತಾ ಪ್ರಪಂಚವನರಿಯೇ ಸುತ್ತಿ ಸುತ್ತಿ ತಾ
ಪ್ರಪಂಚವ ಅರಿತು ಬಂದಂತೆ ಕಾಣುವ ಮೂಢ ಮನವ ನೋಡಾ.

ಪ್ರಪಂಚದ ಮನುಜ ಮನುಜರೆಲ್ಲರು ಎಲ್ಲರು ಒಂದೇ
ತನ್ನಂಥೆ ಪರರೆಂದು ಕಾಯ ವಾಚ ಮನಸಾ ನಡೆದೊಡೆ
ಭುವನವೇ ಶಿರಬಗ್ಗಿ ನಾಚುವುದು ಭಾರತ ಭಾರತೀಯರ ಕಂಡು
ಹಿಗ್ಗುವುದು ಎನ್ನ ಮನ ಆಗ ಮಾತ್ರ ನೋಡಾ .