ಭಾರತ ಸಿಂಧು ರಶ್ಮಿ
ವಿ.ಕೃ.ಗೋಕಾಕರು ರಚಿಸಿದ, ಕನ್ನಡಕ್ಕೆ ಜ್ಞಾನಪೀಠವನ್ನು ತಂದಿತ್ತ, "ಭಾರತ ಸಿಂಧು ರಶ್ಮಿ" ಮಹಾಕಾವ್ಯವನ್ನು ಯಾರಾದರೂ ಓದಿರುವಿರೇ ?
ನೀವು ಯಾರಾದರು ಇದನ್ನು ಓದಿರುವಿರಾದರೆ, ದಯವಿಟ್ಟು ಕೆಲವು ವಿಚಾರಗಳನ್ನು ತಿಳಿಸಿಕೊಡಿ. ಕೆಲವು ದಿನಗಳಿಂದ ಇದಕ್ಕಾಗಿ ಹುಡುಕುತ್ತಿದ್ದೇನೆ.
ವಿಕಿಪೀಡಿಯಾದಲ್ಲಿ ಹುಡುಕಿದಾಗ, ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತಾದದ್ದು ಎಂಬುದು ತಿಳಿಯಿತು. ಮತ್ತೊಂದೆಡೆ, ಇದರಲ್ಲಿ ಆರ್ಯ, ದ್ರಾವಿಡ ಈ ರೀತಿಯಾದ ವಿಚಾರಗಳೂ ಇವೆ ಎಂಬುದು ತಿಳಿದು ಬಂತು. ಆದರೆ ನಾನು ಈ ಕೃತಿಯನ್ನು ಓದಿಲ್ಲ. ಓದಿದವರು ಯಾರಾದರೂ ಇದ್ದರೆ, ಆ ಮಹಾಕಾವ್ಯದ ಆಶಯವೇನು, ಅದರಲ್ಲಿ ಅಡಕವಾಗಿರಬಹುದಾದ ವಿಚಾರಗಳು, ಇವುಗಳನ್ನು ಹಂಚಿಕೊಳ್ಳಲು ಸಾಧ್ಯವೇ ? ಅಂದರೆ ಭಾರತ ಸಿಂಧು ರಶ್ಮಿ ಕೃತಿಯಲ್ಲಿರಬಹುದಾದ ಮುನ್ನುಡಿಯ ಸಾರಾಂಶ, ಲೇಖಕರ ಮಾತು..ಹೀಗೆ.

- Login or register to post comments
- 815 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
Re: ಭಾರತ ಸಿಂಧು ರಶ್ಮಿ
ನಾನೂ ಇದೇ ಪುಸ್ತಕಕ್ಕೆ ಬಹಳ ಹುಡುಕಾಟ ನಡೆಸಿದ್ದೇನೆ. ಮಾರಾಟಕ್ಕೆ ಇದ್ದದ್ದು ನೋಡಿಲ್ಲ.ಕೇಂದ್ರ/ಜ್ಞಾನಭಾರತಿ ಗ್ರಂಥಾಲಯದಲ್ಲಿ ಸಿಕ್ಕರೂ ಸಿಗಬಹುದು. ಸಿಕ್ಕರೆ ತಿಳಿಸಿ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಭಾರತ ಸಿಂಧು ರಶ್ಮಿ
>>> ಕೆಲವು ದಿನಗಳಿಂದ ಇದಕ್ಕಾಗಿ ಹುಡುಕುತ್ತಿದ್ದೇನೆ.
ಎಲ್ಲಿ ಹುಡುಕುತ್ತಿರುವುದು ಎಂಬುದರ ಮೇಲೆ Depend ಆಗತ್ತೆ. ನಿನ್ನೆ ಸ್ನೇಹಿತರೊಂದಿಗೆ ಸಪ್ನ, ಅಂಕಿತ ಭೇಟಿ ಕೊಟ್ಟಾಗ ಎರಡೂ ಕಡೆ ಈ ಪುಸ್ತಕ (ನಾವಾಗಿಯೇ ಹುಡುಕದಿದ್ದರೂ) ಕಾಣಿಸಿತು - ಹೀಗಾಗಿ ಅದು ಸಿಗೋದು ಕಷ್ಟ ಎಂದೇನಿಲ್ಲ.
ಶ್ರೀನಿಧಿಗೆ ಈ ಪುಸ್ತಕ ತಕ್ಷಣ ಸಿಗದು - ಅಮೇರಿಕದಲ್ಲಿರುವುದರಿಂದ. ಆನ್-ಲೈನ್ ಹುಡುಕುತ್ತಿದ್ದೀರಾದರೆ ಬಹಳ ಹೆಚ್ಚಿನ ನಿರೀಕ್ಷೆಯಾಯಿತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ: ಭಾರತ ಸಿಂಧು ರಶ್ಮಿ
ಭಾರತ ಸಿಂಧು ರಶ್ಮಿಯನ್ನು ಡಿಎಲ್ಐನಲ್ಲಿ ಪೇರಿಸಲಾಗಿದೆ. ಆಸಕ್ತಿಯುಳ್ಳವರು ಓದಿಕೊಳ್ಳಿ.
ಉ: ಭಾರತ ಸಿಂಧು ರಶ್ಮಿ
ಸುನೀಲ , ನೀವು ಕೊಟ್ಟ ಕೊಂಡಿಯಲ್ಲಿ (ಭಾರತ ಸಿಂಧುರಶ್ಮಿ) ಸಂಪುಟ-೨ ಇದೆ, ಸಂಪುಟ-೧ರ ಕೊಂಡಿ ಯಾರಿಗಾದರೂ ತಿಳಿದರೆ ದಯವಿಟ್ಟು ತಿಳಿಸಿ, ನಾನು ಅದನ್ನು ಪಿ.ಡಿ.ಎಫ಼್ಗೆ ಬದಲಿಸಿ, ಒಟ್ಟುಗೂಡಿಸಿ, ನಿಮಗೆಲ್ಲಾ ಹಂಚುವೆ.
ನಮಸ್ಕಾರಗಳೊಂದಿಗೆ.
ಉ: ಭಾರತ ಸಿಂಧು ರಶ್ಮಿ
ನಾನು ಈಗಷ್ತೇ ಪುಸ್ತಕಗಳ ಗೀಳು ಹಚ್ಚಿಕೊಳ್ಳುತ್ತಿರುವವ... ಕುತೂಹಲಕ್ಕೆ ೧-೨ ಪುಟಗಳನ್ನೋದಿದೆ... ಕೈಗೆ ನಿಲುಕದ್ದು ಆನ್ನಿಸಿತು. ಇಂಥ ಮಹಾಕಾವ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಕೊಡುತ್ತಿದ್ದ ನಮ್ಮ ನಾಗರಾಜ್ ಮೇಷ್ಟ್ರ ನೆನಪು ಕಾಡಿತು...
ಚಿ.ರಂ.ಶಿ.
-----------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸು!!! ಜಗಳಕ್ಕೆ ಜಾಗವೆಲ್ಲಿ???