26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಲಿಬಿಯಾದಲ್ಲಿನ ಸಂಪದಿಗರು/ಇತರ ಕನ್ನಡಿಗರು ಸುರಕ್ಷಿತವಾಗಿ ಹಿಂದುರಗಲಿ ಎಂದು ಹಾರೈಸೋಣ್

February 28, 2011 - 8:43pm
ಕೇವೆಂ

  ಉದಯ ಇಟಗಿ, ರಾಜೀವ ಲೋಚನ ಮುಂತಾದ ಸಂಪದಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಹಿಂದುರಗಲಿ ಎಂದು ಆಶಿಸೋಣ. ಹೆಚ್ಚು ಮಾಹಿತಿ ಇದ್ದವರು ಹಂಚಿಕೊಳ್ಳಿ ಲಿಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ನೆನಪು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by hnrl on

ವೆಂಕಟೇಶರವರೆ ಹಾಗು ಸಂಪದ ದ ಎಲ್ಲ ಅಭಿಮಾನಿಗಳಿಗೆ ನನ್ನ ವಂದನೆಗಳು ಇಂದು ಸಂಪದವನ್ನು ಓದಿದಾಗ ನನ್ನ ಹೆಸರು ಬಂದಿದ್ದನ್ನು ನೋಡಿದೆ. ನನ್ನ, ಇತರ ಕನ್ನಡಿಗರ ಹಾಗು ಒಟ್ಟಾರೆಯಾಗಿ ಎಲ್ಲೇ ಭಾರತೀಯರ ಕ್ಷೇಮವನ್ನು ಬಯಸಿದ್ದಕ್ಕಾಗಿ ಧನ್ಯವಾದಗಳು.
ನಿಮ್ಮೆಲ್ಲರ ಮಾಹಿತಿಗಾಗಿ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ವ್ಯವಸ್ತೆ ಮಾಡಿದ್ದ ಮೊದಲನೇ ವಿಮಾನ ಹಿಂತಿರುಗಿ ಬಂದಿರುವೆ. ಅಲ್ಲಿಯ ಭಾರತದ ರಾಯಭಾರಿ ಕಚೇರಿ ಹಾಗು ನಮ್ಮ ಕಂಪನಿಯ ಹಿರಿಯರು ಬಹಳ ಪ್ರಯತ್ನ ಪಟ್ಟಿದ್ದಾರೆ.
ಹಾಗೆಯೇ ನಮ್ಮ ಪಾಕಿಸ್ತಾನಿ ಚಾಲಕನೂ ಕೂಡ ಇಂತಹ ಸಂದಿಗ್ದ ಪರಿಸ್ತಿತಿಯಲ್ಲಿ ನಮ್ಮನ್ನು ಏರ್ಪೋರ್ಟ್ ಗೆ ತಲುಪಿಸುವಲ್ಲಿ ಬಹಳ ಪ್ರಯತ್ನಪಟ್ಟನು. ಇವರೆಲ್ಲರಿಗೂ ನಾನು ಅಜೀವಪರ್ಯಂತ ಋಣಿಯಾಗಿರುತ್ತೇನೆ

ಲಿಬಿಯಾದ ಜನರು ಬಹಳ ಸ್ನೇಹಮಯಿಗಳು, ಹಸನ್ಮುಖಿಗಳು ಆಗಿದ್ದಾರೆ.

ಎಲ್ಲರಿಗು ನನ್ನ ವಂದನೆಗಳು

ರಾಜೀವಲೋಚನ HN

Submitted by manju787 on

ರಾಜೀವ ಲೋಚನರೆ, ಕ್ಷೇಮವಾಗಿ ತಾಯ್ನಾಡಿಗೆ ಹಿ೦ದಿರುಗಿದ ನಿಮಗೆ ಹಾರ್ದಿಕ ಅಭಿನ೦ದನೆಗಳು. ಉದಯ್ ಇಟಗಿ ಹಾಗೂ ಇನ್ನಿತರ ಕನ್ನಡಿಗರು ಹಾಗೂ ಸ೦ಕಷ್ಟಕ್ಕೆ ಸಿಲುಕಿರುವ ಎಲ್ಲ ಭಾರತೀಯರು ಆ ಕ್ಷೋಭೆಯ ನಾಡಿನಿ೦ದ ಕ್ಷೇಮವಾಗಿ ತ೦ತಮ್ಮ ಮನೆ ತಲುಪಲೆ೦ದು ಭಗವ೦ತನಲ್ಲಿ ಪ್ರಾರ್ಥಿಸುವೆ.

Submitted by sunilkgb on

ರಾಜೀವ ಅವರೇ,ಲಿಬಿಯಾ ದಲ್ಲಿನ ಸದ್ಯದ ಭಾರತೀಯರ ಪರಸ್ಥಿತಿಯ ಬಗ್ಗೆ ,ದಂಗೆಯಿಂದ ಸಾಮಾನ್ಯ ಜೀವನದ ಮೇಲಾದ ಪರಿಣಾಮಗಳ ಬಗ್ಗೆ ನಿಮ್ಮಿಂದ ಒಂದು ಲೇಖನ ನಿರೀಕ್ಷಿಸಬಹುದೆ?