ಕಾವೇರಿ ಪ್ರತಿಭಟನೆ ಮೆಗಾಧಾರಾವಾಹಿ ಆಗಬೇಕೇ?
ಕಾವೇರಿ ನ್ಯಾಯಾಧೀಕರಣದ ತೀರ್ಪು ಬಂದು ಈಗಾಗಲೇ ಮೂರು ವಾರಗಳು ಕಳೆದುವು.ತೀರ್ಪು ರಾಜ್ಯದ ಹಿತಕ್ಕೆ ಮಾರಕ,ಅದರ ವಿರುದ್ಧ ನ್ಯಾಯಾಲಯದ ಮೆಟ್ಟಲು ಹತ್ತಬೇಕು ಇಲ್ಲವೇ ನ್ಯಾಯಾಧಿಕರಣದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎನ್ನುವ ಒಕ್ಕೊರಲಿನ ಕೇಳಿಕೆ ಜನರಿಂದ ಬಂದಿದೆ. ಮಂಡ್ಯದ ಸಂಸತ್ಸದಸ್ಯ ರಾಜೀನಾಮೆ ನೀಡಿ,ದೇಶಕ್ಕೆ ಸಂದೇಶ ಹೋಗುವಂತೆ ಮಾಡಿದ್ದಾಗಿದೆ. ಇನ್ನೆರಡು ದಿನಗಳಲ್ಲಿ ಸರಕಾರದ ನಿರ್ಧಾರವೂ ಸ್ಪಷ್ಟವಾಗಲಿದೆ. ಆದರು ರಾಜ್ಯದಾದ್ಯಂತ ರಸ್ತೆ ತಡೆ,ಪ್ರತಿಕೃತಿ ದಹನ,ಘೆರಾವೋ..ಹೀಗೆ ಚಳುವಳಿ ಅವಿರತವಾಗಿ ನಡೆದಿದೆ.ಈ ರೀತಿ ಪ್ರತಿಭಟನೆಗಳನ್ನು ಮಾಡಿ ಜನರ ದೈನಂದಿನ ಜೀವನವನ್ನು ಇನ್ನಷ್ಟು ತ್ರಾಸದಾಯಕವಾಗಿ ಮಾಡಬೇಕೇ? ಇಂತಹ ಪ್ರದರ್ಶನ ಹೋರಾಟಗಳಿಂದ ಹೊರಬಂದು ನೈಜ ಹೋರಾಟವನ್ನು ನ್ಯಾಯಾಲಯದಲ್ಲಿ ನೀಡುವುದಕ್ಕೆ ಗಮನ ಹರಿಸುವುದು ಬೇಡವೇ?

- Login or register to post comments
- 560 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕಾವೇರಿ ಪ್ರತಿಭಟನೆ ಮೆಗಾಧಾರಾವಾಹಿ ಆಗಬೇಕೇ?
ನಿಜ. ಪ್ರತಿಭಟನೆಗಳು ಏನಿದ್ದರೂ ಜನರ ಮನ ಗೆಲ್ಲೋದಕ್ಕೆ, ತಮ್ಮಗಳ ನಿಲುವು ತೋರಿಸೋದಕ್ಕಾಯಿತು.
ಆದರೆ ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡುವುದು ನ್ಯಾಯಾಲಯದ ತೀರ್ಪೊಂದನ್ನು ಖಂಡಿಸಿದಂತೆ. ತೀರ್ಪಿನ ವಿರುದ್ಧ ಒಂದು ಪೆಟಿಶನ್ ಹಾಕಿ ನ್ಯಾಯಾಲಯದಲ್ಲಿ ಹೋರಾಡಬೇಕೆ ವಿನಹ ಪ್ರತಿಭಟನೆಗಳಿಂದ ಈ ಸನ್ನಿವೇಶದಲ್ಲಿ ಏನೂ ಆಗದು (ಜನರಿಗಾಗುವ ತೊಂದರೆ ಬಿಟ್ಟರೆ) ಎಂಬುದನ್ನ ನಮ್ಮ ಜನ ಮರೆತೇಬಿಟ್ಟಂತಿದೆ.
ಸರಕಾರ ದೇಶದ ಅತ್ಯುತ್ತಮ ಲಾಯರುಗಳನ್ನು ಹಿಡಿದು ಬಲವಾದ ಕೇಸು ಮಂಡಿಸುವಂತಾಗಬೇಕು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"