QUIZ ಸ೦ಸ್ಕೃತ ನಾಟಕ
ಸ೦ಸ್ಕೃತ ನಾಟಕ
ಕೆಳಗೆ ಕೊಟ್ಟಿರುವ ಸ೦ಸ್ಕೃತ ನಾಟಕಕಾರರ ಪಟ್ಟಿಯಲ್ಲಿ ,
ನಾಟಕಕಾರರ ನಾಟಕಗಳ ಹೆಸರನ್ನು ತಿಳಿಸಿ.
೧> ಭಾಸ
೨>ಕಾಳಿದಾಸ
೩>ಶೂದ್ರಕ
೪>ವಿಶಾಖದತ್ತ
೫>ಅಶ್ವಘೋಷ.
೬>ಹರ್ಷವರ್ದನ
೭>ಭವಭೂತಿ
೮>ರಾಜಶೇಖರ.

- Login or register to post comments
- 597 hits
- Email this forum





RSS:
ಟಿಪ್ಪಣಿ: QUIZ ಸ೦ಸ್ಕೃತ ನಾಟಕ
ಭಾಸ - ವೇಣೀ ಸಂಹಾರ(??)
ಕಾಳಿದಾಸ - ಅಭಿಜ್ಞಾನ ಶಾಕುಂತಲಂ, ಮಾಳವಿಕಾಗ್ನಿಮಿತ್ರಂ, ವಿಕ್ರಮೋರ್ವಶೀಯಂ
ಶೂದ್ರಕ - ಮೃಚ್ಛಕಟಿಕ (ನನಗೆ ತುಂಬಾ ಇಷ್ಟವಾದ ನಾಟಕ, conceptwise)
ಭಾಸನ ನಾಟಕಗಳು
ಈ ಎಳೆಯನ್ನು ಪ್ರಾರಂಭಿಸಿದಕ್ಕಾಗಿ ಮುರಳಿಯವರಿಗೆ ನನ್ನಿಗಳು. ಭಾಸನ ನಾಟಕಗಳ ವಿಷಯವಾಗಿ ಹುಡುಕುತ್ತಿದ್ದಾಗ, ಶ್ಯಾಮ ಕಿಶೋರ್ ಸ್ವಪ್ನವಾಸವದತ್ತದ ಪ್ರಸ್ತಾಪ ಮಾಡಿದ್ದು ನನಗೆ ತುಂಬಾ ಉಪಯೋಗಕ್ಕೆ ಬಂತು.
ಭಾಸನ ನಾಟಕಗಳನ್ನು ಹುಡುಕುತ್ತಿದ್ದಾಗ, ಇದಿಷ್ಟು ಕಣ್ಣಿಗೆ ಬಿತ್ತು.
೧. ಸ್ವಪ್ನವಾಸವದತ್ತಮ್.
೨. ಪ್ರತಿಜ್ಞಾಯೌಗಂಧರಾಯಣಮ್.
ಮೇಲಿನ ಎರಡರಲ್ಲಿ ಯಾವುದೋ ಒಂದು ನಮಗೆ ಪಿ.ಯು.ಸಿಯಲ್ಲಿ ವತ್ಸರಾಜೋ ಗೃಹೀತಃ ಅಂತ ಇತ್ತು ಅನ್ನಿಸುತ್ತೆ. ಸದ್ಯಕ್ಕೆ, ನನಗೆ ಸರಿಯಾಗಿ ನೆನಪಾಗುತ್ತಿಲ್ಲ.
೩. ಅವಿಮಾರಕಮ್
೪. ಚಾರುದತ್ತಮ್
೫. ಪ್ರತಿಮಾ
೬. ಅಭಿಷೇಕ ನಾಟಕಮ್
೭. ಪಂಚರಾತ್ರಮ್
೮. ಮಧ್ಯಮವ್ಯಾಯೋಗಃ
೯. ದೂತವಾಕ್ಯಮ್
೧೦. ದೂತಘಟೋತ್ಕಚಮ್
೧೧. ಕರ್ಣಭಾರಮ್
೧೨. ಊರುಭಂಗಮ್
೧೩. ಬಾಲಚರಿತಮ್
ಉ: ಭಾಸನ ನಾಟಕಗಳು
ನಮಗೆ ಮೊದಲನೆಯ ಪಿ.ಯು.ನಲ್ಲಿ "ಸ್ವಪ್ನವಾಸವದತ್ತ"ದ ಐದನೇ ಅಂಕದ ಒಂದು ಭಾಗ ಇತ್ತು. ಅದನ್ನು ಕೃಷ್ಣಮೂರ್ತಿ ಸರ್ (ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ನಲ್ಲಿ ಅವರು ಕಿಟ್ಟಿ ಸರ್ ಎಂದೇ ಪ್ರಸಿದ್ಧರಾಗಿದ್ದರು) ಅವರು ಸುಮಾರು ಎರಡು ತಿಂಗಳುಗಳ ಕಾಲ, ಪಠ್ಯಪುಸ್ತಕವನ್ನೂ ತರದೇ, ಆಕಸ್ಮಾತ್ ತಂದರೂ ತೆರೆದೂ ನೋಡದೇ, ನಿರರ್ಗಳವಾಗಿ ಪಾಠ ಮಾಡಿದ್ದು ಇನ್ನೂ ನಿನ್ನೆ ಮೊನ್ನೆಯ ಘಟನೆಯೆಂಬಂತೆ ನೆನಪಿದೆ. ಊಹೂಂ ಅದು ಬರಿಯ ಪಾಠವಲ್ಲ; ಸ್ವತಃ ಭಾಸ ಬದುಕಿದ್ದರೂ ಕೂಡ ತನ್ನದೇ ನಾಟಕವನ್ನು ಕಿಟ್ಟಿ ಸಾರ್ ಅವರ ಹತ್ತಿರ ಇನ್ನೊಮ್ಮೆ ಹೇಳಿಸಿಕೊಳ್ಳುತ್ತಿದ್ದನೇನೋ!
ಅದರಲ್ಲೂ "ಯದಿ ತಾವದಯಂ ಸ್ವಪ್ನ: ಧನ್ಯಮಪ್ರತಿಬೋಧನಂ..." ಎಂದು ಪ್ರಾರಂಭವಾಗುವ ಶ್ಲೋಕವನ್ನು ಅವರು ಎಷ್ಟು ಚೆನ್ನಾಗಿ ವಿವರಿಸಿದ್ದರೂ ಅಂದ್ರೆ, ಈ ಒಂದು ಶ್ಲೋಕವನ್ನು ಇವತ್ತಿಗೂ ಮರೆಯೋದಕ್ಕೆ ಆಗುತ್ತಿಲ್ಲ. ವಿಷಯ ಎಲ್ಲೋ ಎಳೆದುಕೊಂಡು ಹೋಯಿತು ಅನ್ನಿಸಿದರೆ ಕ್ಷಮಿಸಿ.
"ನೆನಪುಗಳ ಮಾತು ಮಧುರ" ಅನ್ನೋದು ಕೆಲವೊಮ್ಮೆ ಎಷ್ಟು ನಿಜ ಅಲ್ವೇ?
- ಶ್ಯಾಮ್ ಕಿಶೋರ್
ಪ್ರತಿಕ್ರಿಯೆ: QUIZ ಸ೦ಸ್ಕೃತ ನಾಟಕ
ಭಾಸ: ಸ್ವಪ್ನವಾಸವದತ್ತ (ಬಹಳ ಚೆನ್ನಾಗಿದೆ. ಅದರಲ್ಲೂ ಸ್ವಪ್ನಾಂಕ ಎಂದೇ ಪ್ರಸಿದ್ಧವಾಗಿರುವ ಐದನೇ ಅಂಕ ನನಗೆ ಇಷ್ಟವಾಯಿತು)
ಭವಭೂತಿ: ಉತ್ತರರಾಮ ಚರಿತ
ಅಶ್ವಘೋಷ: ಬುದ್ಧಚರಿತ (ನಾಟಕವೋ, ಕಾವ್ಯವೋ ಸರಿಯಾಗಿ ನೆನಪಾಗುತ್ತಿಲ್ಲ)
ವಿಶಾಖದತ್ತ: ಮುದ್ರಾರಾಕ್ಷಸ
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)
Re: QUIZ ಸ೦ಸ್ಕೃತ ನಾಟಕ
ಭಾಸ ಕಾಳಿದಾಸ ಮೊದಲಾದವರ ನಾಟಕಗಳನ್ನು ಆಗಲೇ ಹೆಸರಿಸಿದ್ದಾಗಿದೆ. ಹರ್ಷ ಒಬ್ಬ ಬಿಟ್ಟುಹೋಗಿದ್ದ!
ಹರ್ಷ, (ಹೌದು, ಸಾಮ್ರಾಟ ಹರ್ಷವರ್ಧನನೇ!) ರತ್ನಾವಳಿ ಎಂಬ ನಾಟಕವನ್ನು ಬರೆದಿದ್ದಾನೆ. ಇದು ಕೂಡ ಉದಯನ -ವಾಸವದತ್ತೆಯರ ಕಥೆಯ ಮೇಲೇ ಆಧಾರಿತವಾದದ್ದು.
ರತ್ನಾವಳಿ ನಮಗೆ ಇನ್ನೊಂದು ದಿಕ್ಕಿನಿಂದಲೂ ಮುಖ್ಯವಾಗುತ್ತದೆ. ಕನ್ನಡದ ಮೊದಲ ನಾಟಕ, ಸಿಂಗರಾರ್ಯ ರಚಿಸಿದ ಮಿತ್ರವಿಂದಾ ಗೋವಿಂದಾ ಎಂಬ ನಾಟಕವು ರತ್ನಾವಳಿಯ ರೂಪಾಂತರವೇ ಆಗಿದೆ.
-ಹಂಸಾನಂದಿ