Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ನಾಯಿಯೂ

March 4, 2007 - 8:20pm — anant pandit

ಕೊನೆಗೂ ಬೆಂಗಳೂರು ಮಹಾನಗರ ಪಾಲಿಕೆಯು ನಾಯಿಗಳ ಮಹಾ ಮಾರಣ ಹೋಮಕ್ಕೆ ಸಜ್ಜಾಗಿದೆ.. ದುಃಖದ ವಿಷಯವೆಂದರೆ ಮನೇಕಾ ಗಾಂಧಿಯವರು ನಾಯಿಗಳನ್ನು ಸಾಯಿಸ ಬಾರದೆಂದು ಹೇಳಿದ್ದಾರೆ. ಅಂದರೆ ಮಕ್ಕಳ ಜೀವಕ್ಕಿಂತ ನಾಯಿಗಳ ಜೀವ ಅಮೂಲ್ಯವಾದದ್ದು. ಇಲ್ಲಿ ಮುಖ್ಯವಾಗಿ ನಾವು ಚಿಂತಿಸಬೇಕಾದ ವಿಷಯ ನಾಯಿಗಳು ಯಾಕೆ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ? ಇಂದಿನ ನಗರ ಜೀವನದಲ್ಲಿ ಪ್ರಿಡ್ಜ ಸಂಕೃತಿಯಲ್ಲಿ ,ಕಸದ ತೊಟ್ಟಿ ಕಾಣೆಯಾಗುತ್ತಿರುವ ಈ ದಿನಗಳಲ್ಲಿ ಅವಕ್ಕೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಅಲ್ಲದೇ ನಗರ ಪಾಲಿಕೆಯವರೇ ಹೇಳುವಂತೆ ಮಾಂಸದ ಅಂಗಡಿಯವರು ಚುರು ಪಾರುಗಳನ್ನು ಬಿಸಾಡಿ ಅವನ್ನು ರಕ್ತಪಿಪಾಸುಗಳನ್ನಾಗಿ ಮಾಡಿರುವದು. ಇದರಿಂದ ಇಂದು ನಗರ ಸಂಸ್ಕೃತಿಗೆ ನಾಯಿ ಬೆಕ್ಕು ಸಾಕಾಣಿಕೆ ಹೊಂದಾಣಿಕೆ ಆಗುವದಿಲ್ಲ ವಾಗಿ ನಗರ ಸಭೆಯವರು ಇವನ್ನು ಸಾಕುವವರಿಗೆ ಪರವಾನಗಿ ನೀಡುವ ಕಾನೂನು ಮಾಡಬೇಕು. ಅಲ್ಲದೆ ಅಂತವರು ಅವನ್ನು ಸಾಯುವತನಕ ಸಾಕುವ ಜವಾಬ್ದಾರಿ ವಹಿಸಬೇಕು. ತಪ್ಪಿದರೆ ಉಗ್ರ ಶಿಕ್ಷೆ ,ದಂಡ ವಿಧಿಸಬೇಕು.

ಮತ್ತು ಈಗಿರುವ ನಾಯಿಗಳನ್ನು ಪ್ರಾಣಿದಯಾಸಂಘ ದವರಿಗೆ ಕೊಡಬೇಕು. ಅವರಿಗೆ ಇಷ್ಟ ವಿಲ್ಲದವುಗಳನ್ನು ಸಾಯಿಸುವದು ಅನಿವಾರ್ಯ. ಇಂದಿನ ನಗರಸಭೆ ವ್ಯಾಪ್ತಿಯನ್ನು ನಾಯಿ, ಬೆಕ್ಕು ಮುಕ್ತ ಗೊಳಿಸುವದು ಅತ್ಯಾವಶ್ಯಕ. ಯಾಕೆಂದರೆ ಇವೆರಡೂ ಹಸಿದಾಗ ಆಕ್ರಮಣ ಕಾರಿ ಆಗಬಲ್ಲವು. ಇನ್ನೊಂದು ವಿಷಯ, ಮೊನ್ನೆ ಸತ್ತ ಹುಡುಗನ ಕುಟುಂಬಕ್ಕೆ ೧ ಲಕ್ಷ ಪರಿಹಾರ ಕೊಡಲಾಯಿತು. ಎನ್.ಜಿ.ಓ . ಗಳಿಗೆ ನಗರ ಪಾಲಿಕೆ ಈ ಕೆಲಸ ವಹಿಸಿ ಹಣ ಕೊಡುತ್ತಿದೆ ಎಂದಮೇಲೆ ಈ ೧ ಲಕ್ಷವನ್ನು ಅವರಿಂದ ದಂಡ ರೂಪದಲ್ಲಿ ವಸೂಲಿ ಮಾಡಬೇಕು. ಅವರು ನಗರ ಸಭೆಯವರು ತಮಗೆ ಸರಿಯಾಗಿ ಹಣ ಪಾವತಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ ಹಾಗಾದರೆ ಅವರು ನಗರ ಸಭೆಯವರಿಗೆ ನೋಟೀಸ್ ನೀಡಿದ್ದಾರೆಯೆ. ತಮಗೆ ಈ ಕೆಲಸ ನಿರ್ವಹಿಸಲಾಗುವದಿಲ್ಲ ಎಂದು ತಿಳಿಸಿದ್ದಾರೆಯೆ? ಇಲ್ಲ ವೆಂದಾದಮೇಲೆ ಇದಕ್ಕೆ ಅವರೇ ಜವಾಬುದಾರರು. ನಮ್ಮ ಇಂದಿನ ವ್ಯವಸ್ಥೆಯಲ್ಲಿ ದುರಂತ ವೆಂದರೆ ಯಾರಿಗೂ ಹೊಣೆಗಾರಿಕೆ ಇಲ್ಲದಿರುವದು. ಇದರಿಂದ ಕೋಟ್ಯಂತರ ಸಾರ್ವಜನಿಕ ಹಣ ಪೋಲಾಗುತ್ತಿದೆ.

ಆದ್ದರಿಂದ ರಾಜಕೀಯ ದವರ ಸಹಿತ ಎಲ್ಲರಿಗೂ ಹೊಣೆಗಾರಿಕೆ ನಿರ್ಧರಿಸಿ ತಪ್ಪಿದ್ದರೆ ಉಗ್ರ ಶಿಕ್ಷೆ ವಿಧಿಸುವ ಪರಿಪಾಠ ಬಂದರೆ ಆಗ ಲಂಚಾವತಾರವೂ ಕಡಿಮೆ ಆಗುತ್ತದೆ ಸಾರ್ವಜನಿಕ ಹಣ ಪೋಲಾಗುವದೂ ತಪ್ಪುತ್ತದೆ. ಅಲ್ಲದೆ ಇಂತಹ ವಿಚಾರಗಳಿಗೆ ಮಕ್ಕಳು ಅಸಹಾಯಕರು ಜೀವ ತೆರುವದೂ ತಪ್ಪುತ್ತದೆ.

ಅನಂತ ಪಂಡಿತ

‹ ಸ೦ಪದದಲ್ಲಿ ಜಾಣೆಯರು ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ? ›
  • ಸಮುದಾಯ
Ornamental seperator
  • Login or register to post comments
  • 645 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 12, 2007 - 12:41pm — hpn

ಕಕ್ಕಿಲಯರ ಲೇಖನ ಓದಿ

hpn's picture

ಸ್ವತಃ ವೈದ್ಯರಾದ ಡಾ. ಕಕ್ಕಿಲಯರವರು ಇದೇ ಕುರಿತು "ಡೊಂಕು ಬಾಲದ ನಾಯಕರೇ, ನೀವೇನೂಟವ ಮಾಡಿದಿರಿ?" ಎಂಬ ಬಹಳ ಚೆಂದವಾದ ಲೇಖನವೊಂದನ್ನು ಬರೆದಿದ್ದಾರೆ. ಓದಿ ನೋಡಿ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
March 13, 2007 - 12:23pm — hamsanandi

Re: ಕಕ್ಕಿಲಯರ ಲೇಖನ ಓದಿ

hamsanandi's picture

ಕೊಂಡಿ ಹಾಕಿದ್ದಕ್ಕೆ ಧನ್ಯವಾದಗಳು. ಲೇಖನ ಚೆನ್ನಾಗಿದೆ.

(ಪಾಪದ) ಕುರಿ-ಕೋಳಿಗಳ ಮೇಲಿಲ್ಲದ ದಯೆ ನಾಯಿಗಳ ಮೇಲೇಕೋ ನಾನರಿಯೆ. ಇದು ಬರೀ ಪಾಶ್ಚಾತ್ಯ ದೇಶಗಳಲ್ಲಿನ ಮೂರ್ಖತನ ಮಾತ್ರವೆಂದುಕೊಂಡಿದ್ದೆ - ನಮ್ಮ ದೇಶಕ್ಕೂ ಇದರ ಗಾಳಿ ಬೀಸಿದೆಯಲ್ಲ  Sad

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕ.ರ.ವೇ. ಇಂದ ಬೃಹತ್ ಪ್ರತಿಭಟನ ಜಾಥಾ
  • ಮಹಾನಗರ ಪಾಲಿಕೆ..
  • ಹಸುವಿನ ಕರು.
  • ಕಾವೇರಿ ನೀರಿನ ಸಮಸ್ಯೆ
  • ಸ್ರೀವಾದ ಮತ್ತು ಸಮಾಜ
Syndicate content

ಲೇಖಕರು

anant pandit's picture

ಪರಿಚಯ

ನಾನು ಕನ್ನಡಿಗ. ನಿವೃತ್ತ ಪೋಸ್ಟಲ್ ನೌಕರ. ಕನ್ನಡ ಸಾಹಿತ್ಯಾಸಕ್ತ. ಸಾಮಾಜಿಕ ಚಟುವಟಿಕೆಯಲ್ಲಿ ಆಸಕ್ತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator