20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬೆತ್ತಲು ಸೇವೆ ಮತ್ತು ದಿಗಂಬರ ಮುನಿಗಳು

March 31, 2007 - 8:11am
ASHOKKUMAR

"ಶೀಲ, ಸಚ್ಚಾರಿತ್ರ್ಯಗಳಂಥ ವಿಷಯಗಳೂ ಅಷ್ಟೇ. ನಗ್ನತೆ ಎಂಬುದು ಸಾಮಾನ್ಯೀಕರಿಸಿ ನೋಡಿದಾಗ ಅಶ್ಲೀಲ. ಆದರೆ ಕೆಲವು ರಿಲಿಜಿಯಸ್ ಆದ ನಂಬಿಕೆಗಳ ಸಂದರ್ಭದಲ್ಲಿ ಅಶ್ಲೀಲವಲ್ಲ. ಆದರೆ ರೀಲಿಜಿಯಸ್ ಆಗಿದ್ದಾಗಲೂ ಅದು ಅಶ್ಲೀಲ ಎಂದು ವಾದಿಸಿದ ಉದಾಹರಣೆಗಳೂ ಇವೆ. ಇತ್ತೀಚೆಗೆ ಕರ್ನಾಟಕದಲ್ಲಿಯೇ ಇದಕ್ಕೆ ಸಂಬಂಧಿಸಿದ ವಿವಾದ ಉಂಟಾಯಿತು. ದಿಗಂಬರ ಪಂಥದ ಜೈನ ಮುನಿಯೊಬ್ಬರ ಬಗ್ಗೆ ಮಂಗಳೂರಿನ ಸಂಪಾದಕರೊಬ್ಬರು ಒಂದು ಪ್ರಶ್ನೆ ಎತ್ತಿದ್ದರು. ಅವರ ತರ್ಕ ಇಷ್ಟೇ. ಬೆತ್ತಲೆ ಪೂಜೆ ಒಂದು ಧಾರ್ಮಿಕ ಕ್ರಿಯೆಯೇ ಆದರೂ ಅದನ್ನು ವಿರೋಧಿಸಲಾಗುತ್ತದೆ. ಆದರೆ ಜೈನ ಮುನಿಗಳು ಬೆತ್ತೆಲೆ ತಿರುಗಾಡುವುದು ಮಾತ್ರ ಹೇಗೆ ಪವಿತ್ರವಾಗುತ್ತದೆ. ಈ ಪ್ರಶ್ನೆಯನ್ನು ಎತ್ತಿದ್ದಕ್ಕೆ ಆ ಸಂಪಾದಕರು ಬಂಧನಕ್ಕೂ ಒಳಗಾಗಬೇಕಾಯಿತು. ಆದರೂ ಅವರೆತ್ತಿದ ಪ್ರಶ್ನೆ ಧಾರ್ಮಿಕ ಆಚರಣೆಗಳ ಬಗ್ಗೆ ಇರುವ ಎಕ್ಸ್ ಕ್ಲುಸಿವಿಸಂ ಅನ್ನೂ ಪ್ರಶ್ನಿಸುತ್ತಿತ್ತು ಎಂಬುದಂತೂ ನಿಜ. ಚಂದ್ರಗುತ್ತಿಯೆ ರೇಣುಕಾಂಬೆಗೆ ಹರಕೆ ಹೊತ್ತವರು ಒಂದು ಧಾರ್ಮಿಕ ಆಚರಣೆಯ ಭಾಗವಾಗಿ, ಭಕ್ತಿ ಪರವಶರಾಗಿಯೇ ಬೆತ್ತಲೆ ಸೇವೆ ನಡೆಸುತ್ತಾರೆ. ಇವರೆಲ್ಲಾ ಬಡವರು ಮತ್ತು ತಮ್ಮ ಆಚರಣೆಯನ್ನು ದೊಡ್ಡ ದೊಡ್ಡ ಅಧ್ಯಾತ್ಮಿಕ ಪದ ಪುಂಜಗಳಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ ಅಷ್ಟೇ. ಇದೇ ಹೊತ್ತಿನಲ್ಲಿ ದಿಗಂಬರ ಪಂಥದ ಯತಿಗಳು ತಮ್ಮ ನಗ್ನತೆಗೆ ಅಧ್ಯಾತ್ಮದ ಆಯಾಮ ನೀಡುತ್ತಾರೆ.":Ismail

ಬೆತ್ತಲುಸೇವೆ ಒಂದು ಧಾರ್ಮಿಕ ಆಚರಣೆಯಾಗಿದ್ದರೂ,ಅದು ಒಂದು ಉತ್ಸವವಾಗಿ ಆಚರಣೆಯಲ್ಲಿತ್ತು.ದಿಗಂಬರ ಮುನಿಗಳು ವಸ್ತ್ರರಹಿತರಾಗಿರುವುದು ಒಂದು ದಿನದ ಉತ್ಸವವಾಗಿ ಅಲ್ಲ.ಇದು ಅವರ ಜೀವನ ವಿಧಾನ. ಇವೆರಡನ್ನೂ ಸಮೀಕರಿಸುವುದು ತರವಲ್ಲ.ನೀವೆನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

Submitted by mahesha on
ಬೆತ್ತಲೆ ಇರುವುದು, ಇರದಿರುವುವುದು ಅವರವರ ಪರ್ಸನಲ್ !! ಅದಕ್ಕೆ ನಮ್ಮ ದೇಶದಾಗೆ ಎಲ್ಲರಿಗೂ ಸಮಾನವಾಗಿ, ಬೆತ್ತಲೆ ಇರಲು, ಇರದಿರಲು freedom ಕೊಟ್ಟುಬಿಟ್ಟರೆ ಒಳಿತು. :D . . . . . ಅದರಿಂದ ನಮ್ಮ ಸಿನಿಮಾದೋರಿಗೆ ಮೊದಲು ಸಂತಸವಾಗುತ್ತೆ.!!! ====== :)

Submitted by Shreekar on

<ಇವೆರಡನ್ನೂ ಸಮೀಕರಿಸುವುದು ತರವಲ್ಲ.ನೀವೆನಂತೀರಿ?>

ಯೋಚಿಸಬೇಕಾದ ವಿಷಯ.

ಬೆತ್ತಲೆ ಸೇವೆ, ದಿಗಂಬರತ್ವಗಳಿಂದ ಸಮಾಜದ ಯಾರಿಗೇ ಆಗಲಿ ನಷ್ಟವಿಲ್ಲ ‍-- ಬಟ್ಟೆ ಗಿರಣಿ, ಅಂಗಡಿಗಳನ್ನು ಬಿಟ್ಟರೆ!

Submitted by ಆರ್ ಕೆ ದಿವಾಕರ on

ಬೆತ್ತಲು, "ಸೇವೆ"; ದಿಗಂಬರತ್ವ, ವ್ರತ ಅಥವಾ ನೇಮ (ನಿಯಮ). "ಸೇವೆ" ಎನ್ನುವುದು ಸಮಾಜಕ್ಕೆ ಸಲ್ಲಿಸಬೇಕಾದ್ದು, ಸ್ವಪ್ರೇರಿತರಾಗಿ ಅಥವಾ ಬಲಾತ್ಕಾರದಿಂದಾಗಿ. ನೇಮ ಅಥವಾ ವ್ರತ, ’ಸಾಧಿಸ’ಬೇಕದ್ದು, ನಿರಭಿಮಾನ ಮತ್ತು ವೈರಾಗ್ಯದಿಂದ. ಮುನಿಗಳ "ಬೆತ್ತಲೆ", ಸಮಾಜಕ್ಕೆ (ಬೇರೆಯವರಿಗೆ) ಯಾವುದೇ ಐಹಿಕ ಅಥವಾ ಆಧ್ಯತ್ಮಿಕವಾಗಿ ಸಹ ಯಾವುದೇ ಸುಖ-ಸಂತಸವನ್ನು ನೀಡುವ ಉದ್ದೇಶ, ಆದೇಶ ಹೊಂದಿರುವುದಿಲ್ಲ. ಆದರೆ ’ಬೆತ್ತಲೆ ಸೇವೆ’ ದುಶ್ಶಾಸನ ಸಂತತಿಯವರು ಸ್ವಸಂತಸಕ್ಕಾಗಿ ಏರ್ಪಡಿಸಿಕೊಂಡಿದ್ದು! ದಿಗಂಬರ ಸನ್ಯಾಸಿಗಳೂ ಅಪರೂಪ; ಸನ್ಯಾಸಿನಿಯರಂತೂ ಇರುವುದೇ ಇಲ್ಲ! ಆದರೆ ಒಂದು ವಿಷಯ ಮಾತ್ರಾ ಸತ್ಯ. ಸೂಟು-ಶಾರ್ಟು, ಪಂಚೆ-ಧೋತ್ರಗಳ ’ಒಳಗೆ’ ನಾವೆಲ್ಲರೂ ಬೆತ್ತಕಲಾಗಿಯೇ ಇರುತ್ತೇವೆ, ಎನ್ನುವುದು!