ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?
ಭಾರವಾದ ಮನಸ್ಸಿನಿಂದಲೇ ಟಿವಿ ಯಲ್ಲಿ ಪೂಚಂತೆ ಬಗ್ಗೆ ಬರುತ್ತಿದ್ದ ಕಾರ್ಯಕ್ರಮಗಳನ್ನು ನೋಡ್ತಿದ್ದೆ. ಕೆಲವು ಜನರದ್ದು ಅದೇ ರಾಗ ಅದೇ ಹಾಡು. ಯಾರು ತೀರಿಕೊಂಡರೂ ಒಂದೇ ಥರದ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡ ಹಾಗೆ ಒದರಿಬಿಡ್ತಾರೆ. ತೇಜಸ್ವಿ ಬಗ್ಗೆ ಹೇಳಿ ಅಂದ್ರೆ ತೇಜಸ್ವಿಯವರ ಬಯೋಡಾಟ ಹೇಳೋಕೆ ಶುರು ಮಾಡ್ತಾರೆ. ತೇಜಸ್ವಿ ಕುವೆಂಪು ಅವರ ಮಗ, ಅವರು ಕತೆ ಕಾದಂಬರಿ ಬರಿತಿದ್ರು, ಇಂಥ ಕಡೆ ಹುಟ್ಟಿದ್ರು ಇಲ್ಲಿ ವಾಸಿಸುತ್ತಿದ್ರು ಹೀಗಿರ್ತವೆ ಅವರ ಮಾತುಗಳು. ಕೊನೆಗೆ ತುಂಬಲಾರದ ನಷ್ಟ ಅಂದುಬಿಡ್ತಾರೆ ಒಬ್ಬರಾದರು ಅವರ ಬರಹಗಳನ್ನ ಓದಿರ್ತಾರೋ ಇಲ್ವೋ? ಆದರೆ ಟಿವಿ ೯ ನಲ್ಲಿ ಇಸ್ಮಾಯಿಲ್(ನಮ್ಮ ಸಂಪದದ ಇಸ್ಮಾಯಿಲ್ಲೇ ತಾನೆ?) ಆಡಿದ ಮಾತುಗಳು ನೆನೆದ ನೆನಪುಗಳು ಅಗಲಿದ ಚೇತನಕ್ಕೆ ಸರಿಯಾದ ಶ್ರದ್ದಾಂಜಲಿಯಂತಿತ್ತು. ಅವಕಾಶ ಸಿಕ್ಕರೆ ಖಂಡಿತ ಕೇಳಿ. ತೇಜಸ್ವಿಯಂತಹ ವಿಶಿಷ್ಟ ವ್ಯಕ್ತಿಯ ಜೊತೆ ದಿನಗಳನ್ನು ಕಳೆದ ನೀವೇ ಅದೃಷ್ಟವಂತರು ಇಸ್ಮಾಯಿಲ್.
-ದೃವ

- Login or register to post comments
- 761 hits
- Email this forum





RSS:
ಉ: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?
ಹೌದು, ಇಸ್ಮಾಯಿಲ್ ಮಾತು ಒಳ್ಳೆಯ ಶ್ರದ್ಧಾಂಜಲಿಯಾಗಿತ್ತು. ಸಂಪದದ ಇಸ್ಮಾಯಿಲರೇ, ಹೌದು.
ಇಸ್ಮಾಯಿಲ್ descriptive ಆಗಿ ಮಾತನಾಡಿದರೆ ಅನಂತಮೂರ್ತಿಯವರದ್ದು ಇನ್ನೊಂದು ರೀತಿಯಲ್ಲಿ ಪರಿಪೂರ್ಣವಾಗಿತ್ತು. ಅನಂತಮೂರ್ತಿಯವರ ಮಾತುಗಳನ್ನೂ ಮಿಸ್ ಮಾಡಿಕೊಳ್ಳಬೇಡಿ (ಟಿ ವಿ ೯ ಯಾಕೋ ಅದರ ಸ್ಕ್ರಿಪ್ಟ್ ಫ್ಲಾಶ್ ಮಾಡ್ಲಿಲ್ಲ - ಆದರೆ ರೆಕಾರ್ಡು ಮತ್ತೆ ಮತ್ತೆ ಹಾಕ್ತಾ ಇದಾರಾದ್ದರಿಂದ ಕೇಳಲು ಸಿಗತ್ತೆ)
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?
ಇಸ್ಮಾಯಿಲ್ ಮಾತನಾಡೋದನ್ನು ಕೇಳಿದೆ..ಚೆನ್ನಾಗಿ ಮಾತನಾಡಿದ್ರು..ತೇಜಸ್ವಿಯವರ ಜೊತೆ ಕೆಲವು ಕ್ಷಣಗಳನ್ನು ಕಳೆದ ನೀವೇ ಅದೃಷ್ಟವಂತರು..ಇಸ್ಮಾಯಿಲ್ , ತೇಜಸ್ವಿಯವರ ಜೊತೆಗಿನ ನಿಮ್ಮ ಒಡನಾಟವನ್ನು ನಮ್ಮೊಡನೆ ಹಂಚಿಕೊಂಡರೆ ಚೆನ್ನಾಗಿರುತ್ತದೆ(ಬರಹದ ಮೂಲಕ)..
Re: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?
ತೇಜಸ್ವಿ ಅವರ ಬಗ್ಗೆ ಅನಂತಮೂರ್ತಿ ಹೇಳುವ `ವಿಸ್ಮಯ'ದ ಮಾತುಗಳನ್ನು ಈ ಭಾನುವಾರದ (ಏ.
ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಓದಿ.
-ಸುರೇಶ್