June 27, 2012 - 4:38pm
ಈ ಸುದ್ದಿ ಓದಿ......
ನಿತ್ಯಾನ೦ದ ಸಮನ್ಸ್ ಸ್ವೀಕರಿಸಲಿಲ್ಲ ಎ೦ಬ ಕಾರಣಕ್ಕೆ ಸುವರ್ಣದಲ್ಲಿ ದೊಡ್ಡದಾಗಿ ಸುದ್ದಿ ಮಾಡಿದ್ದ ವಿ. ಭಟ್ಟರು ಹೀಗೆ ಮಾಡಬಹುದೇ ...? ಅಲ್ಲದೇ ಈ ಸುದ್ದಿ ಯಾವ ಚಾನಲನಲ್ಲೂ ಬರುತ್ತಿಲ್ಲ್ಲ..ಇದರರ್ಥ ಮಾಧ್ಯಮದವರಿಗೊ೦ದು ನ್ಯಾಯ ,ಸಾಮಾನ್ಯರಿಗೊ೦ದು ನ್ಯಾಯವೇ ...? ನೀವೆ ಹೇಳಿ....
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ಬೆಣ್ಣೆ ಮತ್ತು ಸುಣ್ಣ
ಮೊದಲನೆಯದಾಗಿ ನಿತ್ಯಾನಂದ ಪ್ರಕರಣದಂಥದು ಅಷ್ಟಲ್ಲಾ ಸದ್ದು ಮಾಡುವ, ಕಣ್ಣು ಕುಕ್ಕುವ ಪ್ರಕರಣವೇ ಅಲ್ಲ. ’ಕಾಮ’ ವೆಂಬುದೇ ಸಮಾಜಿಕ ಪಾತಕವಲ್ಲ. ನೋಂದವರು ಕೇಸ್ ಹಾಕಿ ನ್ಯಾಯ ಕೋರುವ ಒಂದು ವೈಯಕ್ತಿಕ ಅಪರಾಧ. ಆದರೆ ಕಾಮ - Sex - ಎಂಬುದು ಸಾರ್ವಜನಿಕರ ಸುಪ್ತಚೇತನಕ್ಕೆ ಆಪ್ಯಾಯಮಾನವಾಗುವ ವಿಚಾರ. ಅದನ್ನೆತ್ತಿಕೊಂಡರೆ ಕೋಲಾಹಲ ಜಾಸ್ತಿಯಾಗುತ್ತದೆ; ಅಷ್ಟಷ್ಟೂ ತಮ್ಮ Viewership ಹೆಚ್ಚುತ್ತದೆನ್ನುವುದು ಮಧ್ಯಮಗಳ ’ವ್ಯಾಪಾರ ದ್ರೋಹ ಚಿಂತನ’. ಯೋಗಿಯಾದವನು ಯೋಗಿಯಾಗಿರುತ್ತಾನೆ; ಭೋಗಿಯಾದವನು ಭೋಗಿಯಾಗಿರುತ್ತಾನೆ. ಅದು ಅವರವರ ವಾಂಛೆ. ಮೇರೆ ಮೀರಿ ಅನ್ಯಾಯವಾದರೆ ನೋಡಿಕೊಳ್ಳಲು ಕೋರ್ಟುಗಳಿವೆ, ಮಾಧ್ಯಮಗಳಲ್ಲ!
ಉ: ಬೆಣ್ಣೆ ಮತ್ತು ಸುಣ್ಣ
<<ಮೊದಲನೆಯದಾಗಿ ನಿತ್ಯಾನಂದ ಪ್ರಕರಣದಂಥದು ಅಷ್ಟಲ್ಲಾ ಸದ್ದು ಮಾಡುವ, ಕಣ್ಣು ಕುಕ್ಕುವ ಪ್ರಕರಣವೇ ಅಲ್ಲ. >> ದಿವಾಕರ್ ಅವರೇ ಗಲ್ಲಿಯನ್ನು ಬಿಟ್ಟು ಆಚೆ ದಾಟದ ಮಾಧ್ವ ಮಟಗಳ ವಿಷ್ಯಗಳು ನಿಮಗೆ ಚರ್ಚಾಸ್ಪದ ವಿಷಯವಾಗಿ ಕ೦ಡು ನಿತ್ಯಾನ೦ದನ ಆಶ್ರಮದಲ್ಲಿ ನಡೆಯುತ್ತಿರುವ ಘಟನೆಗಳು ತಮಗೆ ಪ್ರಕರಣಗಳ ರೀತಿ ಕಾಣುತ್ತಿಲ್ಲ ಎ೦ಬ ಮಾತು ಹಾಸ್ಯಾಸ್ಪದವಾಗಿದೆ.