ಬಸವ ಜಯಂತಿಗೆ ರಜೆ!
ನಾಳೆ ಬಸವ ಜಯಂತಿ. "ಕಾಯಕವೇ ಕೈಲಾಸ" ಎಂದ ಮಹಾನುಭಾವ ಬಸವಣ್ಣನವರು. ನಮ್ಮ ಕರ್ತವ್ಯ ಪಾಲನೆಗೆ ಹೆಚ್ಚು ಒತ್ತು ಕೊಡಬೇಕಾದ್ದು ನ್ಯಾಯ. ಆದರೆ ಜಯಂತಿಗೆ ರಜೆ ಸಾರುತ್ತಾ ಬಂದ ಸರಕಾರಗಳು ಜನರು ತಮ್ಮ ಕಾಯಕದಲ್ಲಿ ತೊಡಗದಂತೆ ಮಾಡುತ್ತಿಲ್ಲವೇ?ಅಥವಾ ಕಾಯಕವೇ ಕೈಲಾಸ ಎನ್ನುವ ಮಾತಿಗೆ ಬೇರೇನಾದರೂ ಅರ್ಥವಿದೆಯೇ?

- Login or register to post comments
- 478 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಬಸವ ಜಯಂತಿಗೆ ರಜೆ!
ಹೀಗೆ ಇರಬಹುದೇನೋ ಅನ್ನಿಸುತ್ತೆ.. "ಕಾಯುವಿಕೆಯೇ (ರಜೆಗಾಗಿ)ಕೈಲಾಸ" ಅಂದರೆ ಕಾಯಕದಲ್ಲಿರುವವರು ಖುಷ್!!
ಉ: ಬಸವ ಜಯಂತಿಗೆ ರಜೆ!
ನಿಜ. ನಿಮ್ಮ ಮಾತನ್ನು ಒಪ್ಪುತ್ತೇನೆ. ನಮ್ಮ ದೇಶದಲ್ಲಿ ರಜೆಗಳಿರುವಷ್ಟು ಬೇರೆ ಕಡೆ ಇಲ್ಲ ಎಂದು ನನ್ನ ಭಾವನೆ. ಮಹಾನ್ ವ್ಯಕ್ತಿಗಳನ್ನು ಸ್ಮರಿಸಲು ಅವರ ಜನ್ಮದಿನ, ಪುಣ್ಯತಿಥಿಗಳಿಗೆ ರಜೆ ಘೋಷಿಸುವುದಕ್ಕಿಂತ ಬೇರೆ ಒಳ್ಳೆಯ ವಿಧಾನ ಇರಬೇಕು.
-----
ಶಶಿಧರ