ಅಭಿ ಐಶ್ ಐಶಾರಾಮದ ಮದುವೆ
ಇತ್ತೀಚಿಗೆ ಎಲ್ಲಾ ಮಾಧ್ಯಮಗಳಲ್ಲೂ ತುಂಬಿರುವ ಅಭಿ ಐಶ್ ಮದುವೆಯ ಸುದ್ದಿಗಳನ್ನು ನೋಡ್ತಾ, ಕೇಳ್ತಾ ಅನಿಸಿದ್ದು: ಈ ಮದುವೆಯನ್ನು ಸರಳವಾಗಿ ಮಾಡಿದಿದ್ದರೆ? (ಬರೀ ರೇ... ಪ್ರಪಂಚ!) ಬಹಳ ಜನರಿಗೆ ಒಂದು ಮಾದರಿಯಾಗ್ತಿತ್ತೇನೋ? ನಿಮಗೇನನ್ಸುತ್ತೆ? ಅವರವರ ಸ್ವಂತ ವಿಷಯ ಅಂತೀರಾ? ಆದರೂ ಅಷ್ಟೊಂದು media glare ನಲ್ಲಿ ಇರುವವರು ಸ್ವಲ್ಪ ಯೋಚನೆ ಮಾಡಬಹುದೇನೋ?

- Login or register to post comments
- 535 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಅಭಿ ಐಶ್ ಐಶಾರಾಮದ ಮದುವೆ
ನಂನ ಕೇಳಿದ್ರೆ.....
ಇಂತ ಸಿಕ್ಕಾಪಟ್ಟೇ ದುಡ್ಡಿರೋ ಮಂದಿ, ಹಿಂಗೆ ದಾಮ್ ದೂಮ್ ಅಂತ ಮದುವೆ, ಮುಂಜಿ ಮಾಡಿ, ಚೆನ್ನಾಗಿ ಕರ್ಚು ಮಾಡಬೇಕು. ಇದರಿಂದ ಏಟೊಂದು ಮಂದಿಗೆ ದುಡಿದು ಹಣ ಮಾಡಕ್ಕೆ ಒಂದು ನೆವ ಸಿಗುತ್ದೆ.
ಇವ್ರ ದೌಲತ್ತು ತೋರಿಕೆ, ಏಟೋ ಮಂದಿಗೆ ಹೊಟ್ಟೆ, ಬಟ್ಟೆ, ಇಸ್ಕೂಲಿಗೆ ದುಡ್ಡ ಕೊಡುತ್ದೆ. ಈ ನೆವದಲ್ಲಾದ್ರು ಅವ್ರ ಹತ್ರ ಕೊಳೀತಾ ಇರೋ ರೊಕ್ಕ ಹಲವು ಬಡಬಗ್ಗರಿಗೆ ಹಂಚಿಹೋಗಲಿ.
ಇವ್ರ ಹತ್ರ ಏನು ಕಮ್ಮಿ ದುಡ್ಡೈತಾ? ಇವ್ರು ಈಟು ಹೊತ್ತು ಕೂಡಿಟ್ಟಿರೋ ಹಣ ಯಾತಕ್ಕೆ ಮತ್ತೆ? ಹೆಂಗೂ ಸರಕಾರಕ್ಕೂ ಗಳಿಕೆ-ಸುಂಕದಲ್ಲಿ ಪಂಗನಾಮ ಹಾಕ್ತಾರೆ.!!!
=====================================================
ಉ: ಅಭಿ ಐಶ್ ಐಶಾರಾಮದ ಮದುವೆ
ಇದೇ ವಿಚಾರವಾಗಿ ಆರ್ಕುಟ್ನ ಒಂದು ಕಮ್ಯೂನಿಟಿಯಲ್ಲೂ ಚರ್ಚೆ ನಡೆಯುತ್ತಿತ್ತು. ಅಲ್ಲಿ ಕಂಡುಬಂದ ಚರ್ಚೆಯಲ್ಲಿ ಸಿಕ್ಕಿದ ಒಂದು ಅದ್ಭುತ ಲಿಂಕ್
Parable of the broken window
ಅನಗತ್ಯವಾದ ಖರ್ಚುಗಳಿಂದ ಬೇರೆಯವರ ಉದ್ಧಾರ ಆಗುತ್ತೆ ಅನ್ನುವುದು ವಿತಂಡವಾದ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಅಭಿ ಐಶ್ ಐಶಾರಾಮದ ಮದುವೆ
ಶ್ರೀನಿಧಿಯವರೆ,
ನಿಮ್ಮ ಪ್ರತಿಕ್ರಿಯೆ ಓದಿ ತುಂಬಾ ಖುಷಿಯಾಯಿತು. ಯಾಕೆಂದರೆ, ನಾನೂ ಮುರಿದ ಕಿಟಕಿಯ ಬಗ್ಗೆ ಹೇಳಬೇಕೆಂದಿದ್ದೆ. ಅಷ್ಟೇ ಅಲ್ಲ, ಭಾರತದಂಥ ದೇಶದಲ್ಲಿ ಇಂಥ ವೈಪರೀತ್ಯಗಳನ್ನು ಹೇಗೆ ಬಗೆಯಬೇಕು ಎಂಬುದು ಬರೇ ಆರ್ಥಿಕತೆಯ ಮಾತಲ್ಲ, ಸಾಮಾಜಿಕ ಜಾವಾಬ್ದಾರಿಯೂ ಆಗುತ್ತದೆ. ಆದರೆ ಅದನ್ನು ಯಾರೂ ಬೋಧಿಸಲಾಗುವುದಿಲ್ಲ. ಅಂದ ಮಾತ್ರಕ್ಕೆ ಗಮನಿಸದೇ ಇರಲು ಬಾರದು. ಇದನ್ನು ಹೇಗೆ ವಿವರಿಸಲಿ ಎಂದು ಮನಸ್ಸಿನಲ್ಲೇ ಇಂದು ಬೆಳಿಗ್ಗೆ ಯೋಚಿಸುತ್ತಿದ್ದೆ. ತರಾತುರಿಯಿಂದ ಅರ್ಧಮರ್ಧ ಕಕ್ಕಿದ್ದೇನೆ!
ಉ: ಅಭಿ ಐಶ್ ಐಶಾರಾಮದ ಮದುವೆ
ಅಮಿತಾಭ್ ಬಚನ್ ಅಂತವರಿಗೆ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಬೋಧಿಸಬೇಕಾಗಿ ಬರುವುದು ವಿಷಾದನೀಯ. ಇನ್ನೋರ್ವ ಉದ್ಯಮಿ ಮುಕೇಶ್ರ "ಅರಮನೆ" ಬಗ್ಗೆ ಗೊತ್ತು ತಾನೇ?ಇದನ್ನು ಓದಿ-ಏನು ಹೇಳ್ತೀರೋ ಕೇಳೋ ಕುತೂಹಲ ನನಗಿದೆ.
ಉ: ಅಭಿ ಐಶ್ ಐಶಾರಾಮದ ಮದುವೆ
ಅಮಿತಾಭ್ ತನ್ನ ಏಕೈಕ ಪುತ್ರನ ವಿವಾಹ ಅದ್ದೂರಿಯಾಗಿ ನಡೆಸದಿದ್ದರೆ,ಅವರ ಕೋಟ್ಯಾಂತರ ರೂಪಾಯಿ ಸಂಪತ್ತು ಮತ್ಯಾಕೆ ಇರುವುದು ಎಂದು ಚಿಂತಿಸುವರೇ ನಮ್ಮಲ್ಲಿ ಅಧಿಕ. ಸಾಲ ಮಾಡಿ ಮನೆ ಕಟ್ಟಿ ಮತ್ತೆ ಗೃಹಪ್ರವೇಶಕ್ಕೆ ಸಾಲ ತೆಗೆದು ಅದ್ದೂರಿ ಮನೆ ಒಕ್ಕಲು ಮಾಡುವವರಿರುವ ನಮ್ಮ ದೇಶದ ಮಧ್ಯಮ ವರ್ಗದವರಿಗೆ ಹೋಲಿಸಿ ನೋಡಿದಾಗ ಅಮಿತಾಭ್ ಮತ್ತು ಐಶ್ವರ್ಯ ರೈ ಬಳಗದ್ದು ಸಹಜ ನಡವಳಿಕೆ ಅನಿಸುತ್ತದೆ.
ಶ್ರೀಮಂತರ ಹಣ ಸಮಾರಂಭದ ಏರ್ಪಾಡಿನಲ್ಲಿ ಇತರರ ಕೈ ಸೇರುತ್ತದಲ್ಲಾ ಎಂದು ಸಮಾಧಾನ ಹೊಂದೋಣ.