Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಂಗೀತ

ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ

September 14, 2005 - 12:02pm — beluru

ಕನ್ನಡದಲ್ಲಿ ಈಗಲೂ ಸಂಗೀತಕ್ಕೆ ಸಂಬಂಧಿಸಿದ ಅದರಲ್ಲೂ ಹಿಂದುಸ್ತಾನಿ ಸಂಗೀತಕ್ಕೆ ಸಂಬಂಧಿಸಿದ ಸಾಹಿತ್ಯದ ಕೊರತೆ ತುಂಬಾ ಇದೆ. ನಾನು ಇತ್ತೀಚೆಗೆ ಹಿಂದುಸ್ತಾನಿ ಬಾನ್ಸುರಿ ಕಲಿಯಲು ಆರಂಭಿಸಿದಾಗ ಈ ವಿಷಯ ಗೊತ್ತಾಯಿತು. ಈ ಬಗ್ಗೆ ನಾನೂ ಈಗ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಸಂಗೀತ ಸಾಹಿತ್ಯ ರಚನೆಗೆ ಪ್ರಾಥಮಿಕ ತಿಳಿವಳಿಕೆ ಮತ್ತು ಗುರುಗಳ ಸಲಹೆ ಸೂಚನೆಗಳು ಬೇಕೇ ಬೇಕು.
ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತದ ಬಗ್ಗೆ ಇರುವ ಸಾಹಿತ್ಯದ ಬಗ್ಗೆ ನನಗೆ ಹೆಚ್ಚು ಮಾಹಿತಿಯನ್ನು ಯಾರಾದರೂ ತಿಳಿಸಿದರೆ ತುಂಬ ಒಳ್ಳೆಯದು. ಈ ಬಗ್ಗೆ ಈ ವೇದಿಕೆಯಲ್ಲಿ ಹೆಚ್ಚೆಚ್ಚು ಚರ್ಚಿಸೋಣ ಆಲ್ಲವೆ?

‹ ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
  • ಸಂಗೀತ
Ornamental seperator
  • Login or register to post comments
  • 1610 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 14, 2005 - 2:04pm — ಪ್ರಶಾಂತ.ಪಂಡಿತ

ಸಂಗೀತಕ್ಕಾಗಿ ಸಾಹಿತ್ಯ ಎಂದರೇನು?

ಪ್ರಶಾಂತ.ಪಂಡಿತ's picture

ಬೇಲೂರು ಸುದರ್ಶನರೇ,

ಹಿಂದೂಸ್ತಾನಿ (ಹಿಂದೂಸ್ಥಾನಿ?) ಸಂಗೀತಕ್ಕಾಗಿ ಸಾಹಿತ್ಯ ಎಂದರೇನೆಂದು ತಿಳಿಯಲಿಲ್ಲ. ಕ್ಷಮಿಸಿ, ನನಗೆ ಈ ವಿಷಯದಲ್ಲಿ ಹೆಚ್ಚಿಗೆ ತಿಳಿಯದು. ನನ್ನ ಅಭಿಪ್ರಾಯದಲ್ಲಿ ಯಾವುದೇ ಛಂದಸ್ಸಿನ ಚೌಕಟ್ಟಿನೊಳಗೆ ಬರೆಯಲ್ಪಟ್ಟ ಕವಿತೆ ಅಥವಾ ಕಿರುಗವಿತೆಯನ್ನು ಸಂಗೀತಕ್ಕೆ ಅಳವಡಿಸಬಹುದೆಂದುಕೊಂಡಿದ್ದೇನೆ. ಉದಾಹರಣೆಗೆ ಪಂ.ಭೀಮಸೇನ ಜೋಶಿಯವರು ಪುರಂದರದಾಸರ ಕೀರ್ತನೆಗಳನ್ನು ಹಾಡಿದ್ದಾರೆ. ಹಾಗೆಯೇ ಕೆಲ ವಚನಗಳನ್ನು ಬೇರೆ ಗಾಯಕರು ಹಾಡಿದ್ದನ್ನು ಕೇಳಿದ್ದೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
September 14, 2005 - 2:16pm — beluru

ಸಂಗೀತಶಾಸ್ತ್ರದ ಮೇಲಿನ ಸಾಹಿತ್ಯ ಬೇಕಿದೆ

beluru's picture

ಪ್ರಿಯ ಪ್ರಶಾಂತರವರೆ,
ನನ್ನ ವಿಚಾರಕ್ಕೆ ನೀವು ಕೂಡಲೇ ಸ್ಪಂದಿಸಿದ್ದು ಒಳ್ಳೆಯದಾಯಿತು. ನನ್ನ ಚರ್ಚೆಯ ಉದ್ದೇಶ ಇದು: ಹಿಂದುಸ್ತಾನಿ ಪದ್ಧತಿಯಲ್ಲಿ ಸಂಗೀತವನ್ನು ಹಾಡುವುದಲ್ಲ; ಹಿಂದುಸ್ತಾನಿ ಸಂಗೀತದ ಕಲಿಕೆಯ ಬಗ್ಗೆ ಇರಬೇಕಾದ ಕನ್ನಡದ ಪುಸ್ತಕಗಳು. ಉದಾಹರಣೆಗೆ : ಸ್ವರ ಮಾತಾ ಲಯ ಪಿತಾ ಎಂಬ ಪುಸ್ತಕವು ಹಾರ್ಮೋನಿಯಂ ಮತ್ತು ತಬಲಾ ಕಲಿಯಲು ಆನುಕೂಲಕರ. ಹೀಗೆ ಇನ್ನೂ ಉತ್ಕೃಷ್ಟವಾದ,ಶಾಸ್ತ್ರೀಯವಾದ ಪುಸ್ತಕಗಳು ಬಂದಿಲ್ಲ ಎಂಬುದು ನನ್ನ ಆಭಿಮತ.
ನೀವು ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದರೆ ತುಂಬಾ ಸಂತೋಷ.

  • Login or register to post comments
  • link
  • Email this ಪ್ರತಿಕ್ರಿಯೆ
September 14, 2005 - 3:24pm — hpn

ಹಿಂದುಸ್ತಾನಿ ಸಂಗೀತ

hpn's picture


ಹಿಂದುಸ್ತಾನಿ ಸಂಗೀತದ ಕಲಿಕೆಯ ಬಗ್ಗೆ ಇರಬೇಕಾದ ಕನ್ನಡದ ಪುಸ್ತಕಗಳು. ಉದಾಹರಣೆಗೆ : ಸ್ವರ ಮಾತಾ ಲಯ ಪಿತಾ ಎಂಬ ಪುಸ್ತಕವು ಹಾರ್ಮೋನಿಯಂ ಮತ್ತು ತಬಲಾ ಕಲಿಯಲು ಆನುಕೂಲಕರ

ಪುಸ್ತಕಗಳಿಲ್ಲವೆ? ಅವುಗಳ ಬಗ್ಗೆ ಬರವಣಿಗೆ ಇಲ್ಲವೆ? ತೊಂದರೆ ಇಲ್ಲ. ನಾವುಗಳೇ ಅಂಥವನ್ನು ಹುಟ್ಟುಹಾಕೋಣ Smiling

ವಿಕಿಪೀಡಿಯದಲ್ಲಿರುವ ಹಿಂದುಸ್ತಾನಿ ಸಂಗೀತದ ಬಗೆಗಿನ ಲೇಖನ ನೋಡಿ. ಇಂತದ್ದೇ ಲೇಖನಗಳನ್ನು ವಿಕಿಯಲ್ಲಿ ತೆರೆದು ಶಾಸ್ತ್ರೀಯ ಸಂಗೀತದ ಬಗ್ಗೆ ಬರೆದು ಕಲೆಗೂಡಿಸಬಹುದು. ತಿಳಿದವರು ತಮಗೆ ತಿಳಿದ ಮಾಹಿತಿ ಸೇರಿಸುವರು. ಏನಂತೀರಿ?

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
September 14, 2005 - 3:32pm — beluru

ನಾನೂ ಪ್ರಯತ್ನಿಸುತ್ತಿದ್ದೇನೆ

beluru's picture

ನಾನು ಈಗ ಹಿಂದುಸ್ತಾನಿ ಸಂಗೀತದ ಬಗ್ಗೆ ಹೆಚ್ಚು ಓದಲು ಆರಂಭಿಸಿದ್ದೇನೆ. ಹೀಗಾಗಿ ಈ ಬಗ್ಗೆ ಹಿಂದಿಯಲ್ಲಿ ಮತ್ತು ಇಂಗ್ಲಿಶಿನಲ್ಲಿ ಬಂದಿರುವ ಸಾಹಿತ್ಯಗಳನ್ನು ಕಲೆ ಹಾಕುತ್ತಿದ್ದೇನೆ. ಬಹುಶಃ ಇನ್ನೊಂದೆರಡು ವರ್ಷಗಳಲ್ಲಿ ನಾನೂ ಹಿಂದುಸ್ತಾನಿ ಸಂಗೀತದ ಬಗ್ಗೆ ಏನಾದರೂ ಬರೆಯಬಹುದು!
ಕನ್ನಡ ವಿಕಿಪೀಡಿಯಾದಲ್ಲಿ ಇರುವ ಮಾಹಿತಿ ಒಳ್ಳೆಯ ಆರಂಭ ಎನ್ನಬಹುದು. ಆದರೆ ಹೀಗೆ ಉಚಿತವಾಗಿ ಮಾಹಿತಿ ಹಂಚಲೂ ಸಾಕಷ್ಟು ಸಿದ್ಧತೆ ಬೇಕು; ಸಮಯ ಬೇಕು; ವಿಷಯವೂ ಸರಿಯಾಗಿರಬೇಕು.

  • Login or register to post comments
  • link
  • Email this ಪ್ರತಿಕ್ರಿಯೆ
September 14, 2005 - 3:58pm — hpn

ಹಾಗೇನಿಲ್ಲ

hpn's picture


ಸಾಕಷ್ಟು ಸಿದ್ಧತೆ ಬೇಕು; ಸಮಯ ಬೇಕು; ವಿಷಯವೂ ಸರಿಯಾಗಿರಬೇಕು.

ಹಾಗೇನಿಲ್ಲ. ನಿಮಗೆ ಗೊತ್ತಿದ್ದನ್ನು ಅಲ್ಲಿ ಕಲೆ ಹಾಕುತ್ತಾ ಹೋಗಿ. ತಪ್ಪಿದ್ದಲ್ಲಿ ತಿಳಿದವರು ಅದನ್ನು ಸರಿಪಡಿಸುವರು. ನಿಮಗಾದ ಸಮಯದಲ್ಲಿ ಆದದ್ದನ್ನು ಸೇರಿಸಿ. ನೀವು ಬರೆದದ್ದು ಭವಿಷ್ಯದಲ್ಲಿ ಹಲವರಿಗೆ ಉಪಯೋಗವಾಗುವಂತಹ ವಸ್ತುವಾಗಬಹುದು!

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
September 18, 2005 - 9:55pm — beluru

ಹಾಗೇನಿಲ್ಲವೆ?

beluru's picture

ಬರೆಯಲು ತುಂಬಾ ಸಿದ್ಧತೆ ಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಬರೆಯುವಾಗ ಜವಾಬ್ದಾರಿ ಹೆಚ್ಚಿರುತ್ತದೆ. ಅದರಲ್ಲೂ ಈಗಿನ ದಿನಮಾನದಲ್ಲಿ ಹೊಸ ಪೀಳಿಗೆಯವರು ಬರೆದದ್ದನ್ನೆಲ್ಲ ಸತ್ಯ ಎಂದು ತಿಳಿದುಕೊಳ್ಳುತ್ತಿರುವಾಗ ನಮ್ಮ ಹೊಣೆಗಾರಿಕೆ ಹೆಚ್ಚಿನದು. ಇಂದು ಪತ್ರಿಕೋದ್ಯಮದಲ್ಲಿ ರನ್‌ ಆನ್‌ ರೂಪದಲ್ಲಿ ಬರೆದದ್ದೆಲ್ಲ ಆಂಕಣ, ಕಟ್‌ ಮಾಡಿದ್ದೆಲ್ಲ ಕಾವ್ಯ ಎಂಬಂತಾಗಿದೆ. ಈ ಚಾಳಿ ಬ್ಲಾಗ್‌ಗೂ ಬರುವುದನ್ನು ತಪ್ಪಿಸಲಾಗದು. ಆದರೆ ಕನ್ನಡದ ಬ್ಲಾಗ್‌ನ ಈ ಆರಂಭದ ದಿನಗಳಲ್ಲಿ ನಮ್ಮ ಹೊಣೆಗಾರಿಕೆ ಕೊಂಚ ಹೆಚ್ಚಲ್ಲವೆ?
ಕ್ಷಮಿಸಿ, ಸಂಗೀತದ ಚರ್ಚೆಯಲ್ಲಿ ಈ ಮಾತು ಬರೆದೆ. ನಾನು ಸಂಗೀತವನ್ನು ಅಭ್ಯಾಸ ಮಾಡಲು ಆರಂಭಿಸಿದ ಮೇಲೆ ಆಳವಾದ ತಿಳಿವಳಿಕೆ ಏನು ಎಂಬ ಅರಿವಾಗುತ್ತಿದೆ. "ನಾನು ಬರೆದದ್ದೆಲ್ಲ ಟ್ರಾಶ್' ಎಂದು ರಾಜೀವ ತಾರಾನಾಥರು ನಮ್ಮೆದುರು ಕಳೆದ ವರ್ಷ ಹೇಳಿದ್ದು ನೆನಪಾಗುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
September 19, 2005 - 11:09am — pavanaja

ಬರೆಯುವಾಗ ಹೊಣೆಗಾರಿಕೆ ಹೆಚ್ಚು

pavanaja's picture

ಬೇಳೂರು ಸುದರ್ಶನ ಅವರ ಮಾತುಗಳನ್ನು ಬೆಂಬಲಿಸುತ್ತೇನೆ. ಬರೆಯುವವರಿಗೆ ಹೊಣೆಗಾರಿಕೆ ಹೆಚ್ಚು. ಸರಿಯಾದ ಆದ್ಯಯನವಿಲ್ಲದೆ ಬರೆಯಬಾರದು.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ
September 19, 2005 - 12:11pm — beluru

ಕಾರ್ಟೂನ್‌!

beluru's picture

ಪವನಜರೆ, ನೀವು ಕಾರ್ಟೂನ್‌ ಆಗಿದ್ದು ಯಾವಾಗ?!!!

  • Login or register to post comments
  • link
  • Email this ಪ್ರತಿಕ್ರಿಯೆ
September 19, 2005 - 1:08pm — pavanaja

ಕನ್ನಡಿಯಲ್ಲಿ ಕಂಡಾತ

pavanaja's picture

>ಪವನಜರೆ, ನೀವು ಕಾರ್ಟೂನ್ ಆಗಿದ್ದು ಯಾವಾಗ?

ಈದಿನ ಕನ್ನಡಿ ನೋಡಿದಾಗ!

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ
September 19, 2005 - 2:24pm — prakashaka

ಇದು ಪ್ರಕಾಶ್ ಶೆಟ್ಟಿ ಅವರ ಕಾರ್ಟೂನಲ್ಲವೇ?

prakashaka's picture

ಪವನಜರೇ ನಿಮ್ಮ ಕಾರ್ಟೂನು ನೋಡಿದಾಗ ಪ್ರಕಾಶ್ ಶೆಟ್ಟಿಯವರು ರಚಿಸಿದ ಹಾಗೆ ಕಾಣುತ್ತದೆ.. ನಿಜವೇ?

  • Login or register to post comments
  • link
  • Email this ಪ್ರತಿಕ್ರಿಯೆ
September 19, 2005 - 4:01pm — pavanaja

ಹೌದು

pavanaja's picture

ಹೌದು. ಇದು ಪ್ರಕಾಶ್ ಶೆಟ್ಟಿಯವರು ರಚಿಸಿದ ಕಾರ್ಟೂನ್.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ
March 28, 2006 - 6:29pm — ಶ್ರೀಶಕಾರಂತ

ಬೇಲೂರರೆ

ಶ್ರೀಶಕಾರಂತ's picture

ನಿಮ್ಮ ಸಂಗೀತಾಸಕ್ತಿ ನೋಡಿ ಸಂತಸವಾಯಿತು...

ಅದೇ ಕೆಲ್ಸವನ್ನು ನಾನು ಸ್ವಲ್ಪ ಮಟ್ಟಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮಾಡುತ್ತಿರುವೆ...(junior exam pass ಆಗಿದೆ senior portions ಪಾಠ ಆಗಿದೆ).ಸದ್ಯಕ್ಕೆ ಏನೂ ಕಲಿತಾಇಲ್ಲ.

ನೀವು ಎರಡು ಶೈಲಿಯನ್ನೂ ಹೋಲಿಸಿ ಅಭ್ಯಸಿಸುವುದಾದರೆ ನಿಮಗೆ ಕರ್ನಾಟಕ ಸಂಗೀತದಲ್ಲಿ ಒಂದೆರಡು ಪುಸ್ತಕಗಳನ್ನು ಹೇಳುವೆ...

೧. ಶೃತಿ ಲಕ್ಶಣ ಪ್ರಕಾಶಿನಿ-- ರಾಗಗಳ ವಿವರಣೆ ಚೆನ್ನಾಗಿದೆ.. ಓದಿ(ಭೌತಶಾಸ್ತ್ರ ಬಲ್ಲವರಾದರೆ ಮತ್ತೂ ಒಳ್ಳೆಯದು)

೨. ಸಂಪೂರ್ಣ ವಿವರ ಬೇಕೆಂದರೆ...ಕರ್ಣಾಟಕ ಸಂಗಿತ ದೀಪಿಕೆ ಪರವಾಗಿಲ್ಲ(ಹೀಗೆ ಸುಮರು ಇವೆ ಇವುಗಳಲ್ಲಿ)..

ಮೊನ್ನೆ ಮೊನ್ನೆ ವೀಣಾ ಅಂತ ಒಂದು ಬಿಡುಗಡೆಯಾಯ್ತು ನೋಡಿ...

ಹಿಂದೂಸ್ತಾನಿ ಗೆಳೆಯರು ಅನೇಕರಿದ್ದಾರೆ..ಕೇಳಿ ತಿಳಿಸುವೆ....

ಒಳ್ಳೆಯ ಚರ್ಚೆ ಪ್ರಾರಂಭಿಸಿದ್ದಕ್ಕೆ ಧನ್ಯವಾದಗಳು

--ಶ್ರೀಶ ಕಾರಂತ

  • Login or register to post comments
  • link
  • Email this ಪ್ರತಿಕ್ರಿಯೆ
September 19, 2005 - 2:30pm — beluru

ನಿಜ

beluru's picture

ನಿಮ್ಮನ್ನು ನೋಡೋದಕ್ಕಿಂತ ಕಾರ್ಟೂನೇ ವಾಸಿ!!!
ಇರಲಿ, ಸಂಗೀತದ ಚರ್ಚೆ ಮಾಡೋಣ. ನೀವು ಕೊಟ್ಟ ಪುಸ್ತಕ - ಟೈಪೋಗ್ರಫಿ ಮೇಲಿನದು... ಅದರಲ್ಲಿ ಸಂಗೀತದ ಹಲವು ಸಂಗತಿಗಳಿವೆ. ತುಂಬಾ ಧನ್ಯವಾದಗಳು.

  • Login or register to post comments
  • link
  • Email this ಪ್ರತಿಕ್ರಿಯೆ
February 14, 2007 - 9:11am — venkatesh

Re: ನಾನು ಹಿಂದುಸ್ತಾನಿ ಸಂಗೀತದ ಬಗ್ಗೆ ಹೆಚ್ಚು ಓದಲು ಆರಂಭಿಸಿದ್ದೇನೆ !

venkatesh's picture

ರಾಜಶೇಕರ್ ಮನ್ಸೂರ್, ಮುಂಬೈಗೆ ಬರುತ್ತಿದ್ದಾರೆ. ಗಂಗೂಬಾಯಿ ಹಾನಗಲ್ ರವರನ್ನು ಸಂಪರ್ಕಿಸಿ. ಮೊದಲು 'ವಿಕಿಪೀಡಿಯ'ದಲ್ಲಿ ವಿಷಯ ಸಂಗ್ರಹಮಾಡಿ. ಮನಸ್ಸಿದ್ದಲ್ಲಿ ಮಾರ್ಗ. ಈಗ ಶುರುಮಾಡುವ ಆಲೊಚನೆಸರಿಯಾಗಿದೆ. ನಿಮ್ಮ 'ವಿದ್ವತ್ಪೂರ್ಣ ಲೇಖನ'ವನ್ನು ನಿರೀಕ್ಷಿಸೋಣವೇ.... ? ?
Ceers, Good luck ! All the best....

ವೆಂ.

  • Login or register to post comments
  • link
  • Email this ಪ್ರತಿಕ್ರಿಯೆ
September 16, 2005 - 3:27pm — ಪ್ರಶಾಂತ.ಪಂಡಿತ

ಪ್ರಯತ್ನಿಸುತ್ತೇನೆ

ಪ್ರಶಾಂತ.ಪಂಡಿತ's picture

ಓಹ್! ನಾನು ತಪ್ಪಾಗಿ ಭಾವಿಸಿದೆ. ಹಿಂದುಸ್ತಾನಿ ಸಂಗೀತದ ಕಲಿಕೆಯ ಬಗ್ಗೆ ಇರಬೇಕಾದ ಕನ್ನಡದ ಪುಸ್ತಕಗಳ ಬಗ್ಗೆ ನನಗೆ ತಿಳಿಯದು. ಹಿಂದುಸ್ತಾನಿ ಸಂಗೀತದಲ್ಲಿ ಪರಿಶ್ರಮವಿರುವ ನನ್ನ ಸ್ನೇಹಿತರಲ್ಲಿ ವಿಚಾರಿಸುತ್ತೇನೆ. ಖ್ಯಾತ ಹಾರ್ಮೋನಿಯಂ ಪಟು ಶ್ರೀ ವ್ಯಾಸಮೂರ್ತಿ ಕಟ್ಟಿಯವರು ಮರಾಠಿಯಲ್ಲಿ ಭಾತ್ಕಂಡೆ ಎಂಬವರು ಬರೆದಿರುವ ಪುಸ್ತಕಗಳ ಬಗ್ಗೆ ಪ್ರಸ್ತಾಪ ಮಾಡಿದ್ದು ಗೊತ್ತು. ಅವುಗಳ ಕನ್ನಡ ಅನುವಾದ ಸಿಗಬಹುದೇ ಅಥವಾ ಕನ್ನಡದಲ್ಲೇ ಬರೆದಿರುವ ಪುಸ್ತಕಗಳೇನಾದರೂ ಇವೆಯೇ ಎಂದು ವಿಚಾರಿಸುತ್ತೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
September 16, 2005 - 9:06pm — beluru

ಹುಡುಕಾಟ ನಡೆಸೋಣ

beluru's picture

ಶ್ರೀ ಭಾತಖಂಡೆಯವರ ಪುಸ್ತಕವನ್ನು ಓದಲು ನನಗೆ ಗುರುಗಳು ನೀಡಿದ್ದಾರೆ. ಈ ಪುಸ್ತಕಗಳು ನಿಜಕ್ಕೂ ಚೆನ್ನಾಗಿವೆ. ಆದರೆ ಹಿಂದುಸ್ತಾನಿ ಸಂಗೀತವು ಈಗಲೂ ಬೆಳೆಯುತ್ತಿರುವ ಸಂಗೀತ ಪ್ರಕಾರ. ಆದ್ದರಿಂದ ಇಂದಿನ ಕಾಲಮಾನಕ್ಕೆ ತಕ್ಕಂತೆ, ಬದಲಾವಣೆಗಳಿಗೆ ತಕ್ಕಂತೆ ಮಾಹಿತಿ ಸಿಗಬೇಕಿದೆ. ಆದ್ದರಿಂದಲೇ ಈ ಬಗ್ಗೆ ಹುಡುಕಾಟ ಹೆಚ್ಚಬೇಕಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
September 14, 2005 - 2:17pm — Vinay

ಸಂಗೀತ - ಸಾಹಿತ್ಯ

Vinay's picture

ಪ್ರಶಾಂತ್ ರವರೇ

ನೀವು ಹೇಳ್ಳುತ್ತಿರುವ ಸಾಹಿತ್ಯ.. ದೇವರ ನಾಮಗಳದ್ದು.

ಸಂಗೀತದ ಸಾಹಿತ್ಯದಲ್ಲಿ ಕೀರ್ತನೆಗಳು ಬಲು ಮುಖ್ಯವಾದದ್ದು.
ಇವುಗಳಲ್ಲಿ ಕೇವಲ ಸಾಹಿತ್ಯವಲ್ಲ, ಚಿಟ್ಟೆ ಸ್ವರ, ಎತ್ತುಗಡೆ ಸ್ವರ.. ಎಂಬಂತೆಲ್ಲಾ ವಿಭಾಗಗಳಿರುತ್ತವೆ.

ತ್ಯಾಗರಾಜರು ರಚಿಸಿರುವ ಕೀರ್ತನೆಗಳು ಹೆಚ್ಚು ಜನಪ್ರಿಯವಾದವು. ಈ ಪ್ರಕಾರದ ಸಾಹಿತ್ಯಗಳಿಗೆ ಅವರೇ ರಾಗ,ತಾಳ ಗಳನ್ನು ಹಾಕಿದ್ದಾರೆ.

ಆದರೆ ದಾಸರ ದೇವರನಾಮಗಳಿಗೆ ಸಂಗೀತಗಾರರು ಬೇರೆ ಬೇರೆ ರಾಗಗಳನ್ನು ಹಾಕಿರುತ್ತಾರೆ.

ಸಂಗೀತದ ಸಾಹಿತ್ಯವೆಂದರೆ ಸಂಗೀತಕ್ಕಾಗಿಯೆ ರಚಿಸಿರುವಂಥದ್ದು.

  • Login or register to post comments
  • link
  • Email this ಪ್ರತಿಕ್ರಿಯೆ
September 14, 2005 - 10:53pm — muralihr

ಮಾಹಿತಿ -ಅನನ್ಯ

muralihr's picture

ನಿಮಗೆ ಬೇಕಿದ್ದರೆ ನಾನು ಕೆಲವು ಸ೦ಗೀತಗಾರರ ಪರಿಚಯವನ್ನು ಮಾಡಿಸುತ್ತೇನೆ.
ಆದರೆ ನಿಮಗೆ ಈ ವಿಷಯದಲ್ಲಿ ಮಾಹಿತಿ ಬೇಕಿದ್ದರೆ - ಇಲ್ಲಿ ಸ೦ಪರ್ಕಿಸಿ
http://www.ananyaculture.org/

  • Login or register to post comments
  • link
  • Email this ಪ್ರತಿಕ್ರಿಯೆ
September 15, 2005 - 9:08am — beluru

ನನಗೆ ರಾಘವೇಂದ್ರರಾವ್‌ ಪರಿಚಯವಿದೆ

beluru's picture

ನನಗೆ ಅನನ್ಯದ ಶ್ರೀ ರಾಘವೇಂದ್ರರಾವ್‌ ಪರಿಚಯವಿದೆ. ನಾನು ಅವರ ಚಟುವಟಿಕೆಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದೇನೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾಹಿತಿ ಹಂಚಿಕೊಳ್ಳುವುದೇ ನನ್ನ ಧ್ಯೇಯವಾಕ್ಯ
  • ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
  • ಯಾರ ಸಾಹಿತ್ಯ
  • ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು
  • 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!
Syndicate content

ಲೇಖಕರು

beluru's picture

ಪರಿಚಯ

I am a journalist by chance.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸವಾಲೊಂದು ನಿನ್ನ ಮ್ಯಾಲ...
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
  • ಆರನೇ ವಿಬಕುತಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
ಇನ್ನಷ್ಟು

ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator