Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಓಹೋ ಕನ್ನಡದವ್ರಾ?

May 28, 2007 - 3:45pm — prapancha

ಓಹೋ ಕನ್ನಡದವ್ರಾ?

ಈ ಪ್ರಶ್ನೆಯನ್ನ ಸಾಮಾನ್ಯವಾಗಿ ನೀವು ಎಲ್ಲಿ ಕೇಳಿರುತ್ತೀರಿ? ಹೊರ ರಾಜ್ಯದಲ್ಲೋ, ಹೊರ ದೇಶದಲ್ಲೋ?. ಆದರೆ ಕಳೆದ ಒ೦ದು ವಾರದಿ೦ದ ಈ ಪ್ರಶ್ನೆ ನನಗೆ ಸ್ವಲ್ಪಮಟ್ಟಿನ ಬೇಸರ ತ೦ದುಕೊಟ್ಟಿದೆ, ಯಾಕ೦ದ್ರೆ ಈ ಪ್ರಶ್ನೆಯನ್ನ ನಾನು ಕೇಳಿದ್ದು ನಮ್ಮದೇ ಆದ ಬೆ೦ಗಳೂರಿನಲ್ಲಿ. ಒ೦ದು ಸಾರಿಯಾಗಿದ್ದರೆ ಅಷ್ಟೊ೦ದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಒ೦ದೆ ವಾರದಲ್ಲಿ ಎರಡು ಮೂರು ಬಾರಿ ಈ ಪ್ರಶ್ನೆಯನ್ನ ಎದುರಿಸಬೇಕಾಯಿತು.

ನಾನು ಬೆ೦ಗಳೂರಿನ ಹೊಸೂರು-ಸರ್ಜಾಪುರ(ಎಚ್.ಎಸ್.ಆರ್) ಬಡಾವಣೆಯಲ್ಲಿ ವಾಸಿಸುತ್ತಿದ್ದೇನೆ. ಮೊನ್ನೆ ಈಗೆ ನಮ್ಮ ಮನೆಯ ಮು೦ದೆ ಮು೦ಜಾವಿನಲ್ಲಿ ನನ್ನ ಕಾರು ಸ್ವಚ್ಚಗೋಳಿಸುತ್ತಿದ್ದಾಗ, ಒಬ್ಬ ನಿವ್ರುತ್ತ ಉನ್ನತ ಸರಕಾರಿ ಅಧಿಕಾರಿಯವರೊಬ್ಬರು ತಮ್ಮ ನೆಚ್ಚಿನ ನಾಯಿಯೊ೦ದಿಗೆ ವಾಯು ವಿಹಾರಕ್ಕೆ ಬ೦ದರು. ನಮ್ಮ ಮನೆಯೇ ಕೊನೆಯದು, ಮು೦ದೆ ರಸ್ತೆಯಿಲ್ಲದಿದ್ದರಿ೦ದ ಅವರು ವಾಪಸಾಗುವವರಿದ್ದರು. ಆಗೆ ನನ್ನನ್ನ ನೋಡಿದ ಅವರು ಮಾತಿಗೆಳೆದರು. ಉಭಯಯಕುಶಲೋಪರಿಯ ನ೦ತರ ಸ೦ಕ್ಷಿಪ್ತವಾಗಿ ಅವರ ಪರಿಚಯ ಮಾಡಿಕೊಟ್ಟರು ಮತ್ತು ನಾನೂ ನನ್ನ ಪರಿಚಯ ಹೇಳಿದೆ. ನ೦ತರ ಹೊರಡಲು ಅನುವಾದ ಅವರು ಹೇಳಿದ್ದ ನೋಡಿ ಬೆಸರವಾಯಿತು, ಸಾರ್ ಈ ಬಡಾವಣೆಯಲ್ಲಿ ಕನ್ನಡವದರು ಸಿಗೋದೆ ಅಪರೂಪ, ನೀವು ಸಿಕ್ಕಿದ್ದು ತು೦ಬಾ ಸ೦ತೋಷವಾಯಿತೆ೦ದರು!. ಇದನ್ನ ಕೇಳಿ ನನಗೆ ಸ್ವಲ್ಪ ಕೇದವಾಯಿತು!.

ನ೦ತರ ಶನಿವಾರ ಸ೦ಜೆ ಬಸವನಗುಡಿಗೆ ಹೋಗಿ ಸ೦ಸಾರ ಜೊತೆ ಮನೆಗೆ ಕಾರಿನಲ್ಲಿ ವಾಪಾಸಾಗುತ್ತಿದ್ದೆ. ಮಡಿವಾಳ ಚೆಕ್ ಪೊಸ್ಟ್ ನ ಹತ್ತಿರ ಏಕ ಮುಕ ಸ೦ಚಾರದಲ್ಲಿ ಚಲಿಸಿಬಿಟ್ಟಿದ್ದೆ!. ಕತ್ತೆಲೆಯಾಗಿದ್ದರಿ೦ದ ನನಗೆ ಈ ಸೂಚನಾ ಪಲಕ ವೀಕ್ಷಿಸಿರಲಾಗಿರಲಿಲ್ಲ. ಕ್ಷಣ ಮಾತ್ರದಲ್ಲಿ ಹಾಜರಾದ ಅರಕ್ಷಕರು ಜೊರುಮಾಡುತ್ತಿದ್ದರು. ಸ್ವಲ್ಪ ವಿಚಲಿತನಾಗಿ,ಕಾರನ್ನ ಬದಿಗೆ ನಿಲ್ಲಿಸಿ, ಗೊತ್ತಾಗಲಿಲ್ಲ ಸಾರ್ ದಯವಿಟ್ಟು ಕ್ಷಮಿಸಿ ಎ೦ದೆ. ಇದನ್ನ ಕೇಳಿದ ಅವರು ಏನನ್ನ ಬೇಕು ಗೊತ್ತೆ? " ಓಹೋ ಕನ್ನಡದವ್ರಾ?" ಎನ್ನ ಬೇಕೆ?. ನಾನು ಕನ್ನಡವದನಾದ್ದರಿ೦ದ ಕೇವಲ ಎಚ್ಚರಿಕೆ ಕೋಟ್ಟು ಹೊರಟು ಹೋದರು!.

ಇವೆರಡೂ ಘಟನೆಗಳು ನಡೆದ ಮೇಲೆ ನಮ್ಮ ನೆಲದಲ್ಲೇ ನಾವು ಪರಕೀಯರಗುತ್ತಿದ್ದೇವಲ್ಲ ಎ೦ದು ಸ್ವಲ್ಪ ಬೇಸರವಾಯಿತು. ಬೆ೦ಗಳೂರಿನ ಕೆಲವು ಬಡಾವಣೆಗಳಲ್ಲಿ ಕನ್ನಡವನ್ನ ದುರ್ಬೀನು ಹಾಕಿ ಹುಡುಕ ಬೇಕಾಗಿರುವುದು ನಿಜಕ್ಕೂ ಶೋಚನೀಯ.

‹ ಜ್ಯೋತಿಷ್ಯ - ಎಷ್ಟರ ಮಟ್ಟಿಗೆ ನಂಬಬಹುದು? ಕನ್ನಡ ನಿಘಂಟು ತಂತ್ರಾಂಶ ›
  • ಹರಟೆ ಕಟ್ಟೆ
Ornamental seperator
  • Login or register to post comments
  • 673 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 28, 2007 - 4:02pm — ASHOKKUMAR

ಉ: ಓಹೋ ಕನ್ನಡದವ್ರಾ?

ASHOKKUMAR's picture

ಕನ್ನಡ ಮಾತನಾಡಿದಾಗ "ನೀವು ಮಾತಾಡುತ್ತಿರುವುದು ಯಾವ ಭಾಷೆ?" ಎಂಬ ಪ್ರಶ್ನೆ (ಬೇರೆ ಭಾಷೆಯಲ್ಲಿ) ಬರುವುದಕ್ಕಿಂತ ಇದು ವಾಸಿ. Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 4:07pm — prapancha

ಉ: ಓಹೋ ಕನ್ನಡದವ್ರಾ?

prapancha's picture

ಪರಿಸ್ತಿತಿಯನ್ನ ನೋಡಿದರೆ ಆ ದಿನ ಬ೦ದೇ ಬಿಡಬಹುದಾ ಎ೦ದು ದಿಗಿಲಾಗುತ್ತದೆ!.

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 5:53pm — hpn

ಉ: ಓಹೋ ಕನ್ನಡದವ್ರಾ?

hpn's picture

ಪರ್ವಾಗಿಲ್ಲ! ಕನ್ನಡದವರು ಅಂತ ಎಚ್ಚರಿಕೆ ಕೊಟ್ಟದ್ದು ಅಚ್ಚರಿಯೇ! ಇಂಗ್ಲೀಷಿನಲ್ಲಿ ಮಾತನಾಡಿದ್ರೇ ಗೌರವ ಹೆಚ್ಚು - ಕನ್ನಡ ಪೋಲಿಸ್ರುಗೂ ಚೆನ್ನಾಗಿ ಬರತ್ತೆ ನೋಡಿ, ಕಾರು ಬದಲು ಬೈಕಾಗಿದ್ರೆ "ಏಯ್ ಯಾವ್ ಕಡೆಗೋ ಹೋಗೋದು? ಹಾಕೋ ಗಾಡೀನ ಸೈಡಿಗೆ" ಅಂತ ಮಂಗಳಾರತಿ ಮಾಡಿರುತ್ತಿದ್ದರು.

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 10:04pm — mahesha

ಉ: ಓಹೋ ಕನ್ನಡದವ್ರಾ?

mahesha's picture

ಬೆಂಗಳೂರಿಗೆ ನೀವು ಹೊಸಬರಾ?

ಹೊಳೆನರಸೀಪುರದ ಕನ್ನಡ ಇಲ್ಲಿ ಸಿಕ್ಕುಕ್ಕಿಲ್ಲ ಬಿಡಿ ಸಾರ್‍!!

ಒಂದು ಸರತಿ ಕೋರಮಂಗಲಕ್ಕೆ ಬಂದ ಮೇಲೆ ನಾವು ಬೆಂಗಳೂರನ್ನು ಬಿಟ್ಟು 'ಬ್ಯಾಂಗಲೋರ್‍" ಅನ್ನು ಹೊಗಿಕೊಂಡಿದ್ದೀವಿ ಅಂತ ತಿಳಿದುಕೊಳ್ಳಬೇಕು.

ನನ್ ಮನೆಯೂ HSR ಹತ್ರವೇ ಇರೋದು, ಆದರೆ HSRಅಲ್ಲಿ ಇಲ್ಲ. ಆದ್ರೆ ನಮ್ ರೆಡ್ಡಿ ಅಣ್ಣತಮ್ಮಂದ್ರು ನಮ್ ಮನೆ ಸುತ್ಲ ತುಂಬಿಕೊಂಡವ್ರೆ. ಅವರು ನೆಟ್ಟಗೆ ನನ್ ಜೊತೆ ಕನ್ನಡ ಮಾತಾಡ್ತಾರೆ. ನಮ್ಗೂ ಬಲು ಮೋಜು ಅವರ ಜೊತೆ ಮಾತಾಡಕ್ಕೆ.

ಮೊನ್ನೆ ಏನಾಯ್ತು ಗೊತ್ತಾ... Smiling

ನಾವು ಬಾಳೆಹಣ್ಣು ತಗೊಳಕ್ಕೆ ಹೋದ್ವು. ಅವನು "ತೀನ್ ರುಪೀ" ಅಂದ, ಅದಕ್ಕೆ ನಾವು "ಕನ್ನಡದಲ್ಲಿ ಹೇಳ್ರಿ" ಅಂದ್ವು( ಸುಮ್ನೆ ಆಟ ಆಡ್ಸಕ್ಕೆ Smiling)... ಪಾಪ ಆವಯ್ಯ "ಅಯ್ಯೋ ಮೂರು ರುಪಾಯಿ. ನಮಗೆ ಕನ್ನಡಾ ಅಂದ್ರೆ ಇಷ್ಟ ಸಾರ್‍." ಅಂದು ಹೆದರಿಕೊಂಡಂತೆ ಹೇಳ್ದ. Smiling

ಏನಿಲ್ಲ, ಹೋಗಿ ಕನ್ನಡದಲ್ಲಿ ಮಾತು ಶುರುಮಾಡಿ ಎಲ್ಲ ಮಾತಾಡ್ತಾರೆ. !!

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 29, 2007 - 4:44am — kadeshammi

ಉ: ಓಹೋ ಕನ್ನಡದವ್ರಾ?

kadeshammi's picture

ಬೆಂಗಳೂರಿನಲ್ಲಿ ಕನ್ನಡದಲ್ಲೇ ಮಾತನಾಡುವ ಹಾಗೂ ಅದನ್ನು ಪಾಲಿಸುವ, ತಂತ್ರಾಂಶ ಅಭಿಯಂತರರ ಬಗ್ಗೆ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ನಮ್ಮ ವಿಶ್ವೇಶ್ವರ ಭಟ್ಟರು ಬರೆದ್ದಿದ್ದು ಓದಿದ್ದೇನೆ. ಆ ಕನ್ನಡ ಗಣದ ಕೆಲವರು ಸಂಪದದ ಸದಸ್ಯರೂ ಇರಬಹುದು. ಇಚ್ಚಾಶಕ್ತಿಯ ಕೊರತೆಯಿಂದಾಗಿ ಕನ್ನಡ ಬಡವಾಗುತ್ತಿದೆ ಎಂಬ ಅಧೈರ್ಯ ನಮ್ಮ ನಿಮ್ಮೆಲ್ಲರ ಕಾಡುತ್ತಿದೆ ಹೊರತಾಗಿ ಕನ್ನಡಕ್ಕೆ ಎಲ್ಲಿಯೂ ಸಾವಿಲ್ಲ .

  • Login or register to post comments
  • link
  • Email this ಪ್ರತಿಕ್ರಿಯೆ
March 8, 2008 - 9:01pm — sudhesh

ಉ: ಓಹೋ ಕನ್ನಡದವ್ರಾ?

sudhesh's picture

ನಾವು ಬೇರೆ ಭಾಷೆಯವರ ಬಗ್ಗೆ ಹೇಳ್ತಿವಿ. ಆದರೆ ಕನ್ನಡದವರೇ ಕನ್ನಡವನ್ನು ನಿರ್ಲಕ್ಷ ಮಾಡ್ತಾ ಇರೋದಕ್ಕೆ ಏನು ಮದ್ದು?

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 11:37am — agilenag

ಉ: ಓಹೋ ಕನ್ನಡದವ್ರಾ?

agilenag's picture

ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಬೆಂಗಳೂರಿನ ಕನ್ನಡವನ್ನು ಹೀಗೆ ಉದಾಹರಿಸುತ್ತಿದ್ದರು:
"ಅಟ್ಟದ ಮೇಲೆ ರೊಟ್ಟಿ ಪೆಟ್ಟಿಂಡಾನು, ಚಟ್ಣಿ ಪೋಟ್ಕೊಂಡು ಜಡಿಯಾಣಿ" ಅಂತ. ಎಂದರೆ ಕನ್ನಡ ಬೆಂಗಳೂರಿನಲ್ಲಿ ಕೆಟ್ಟು, ಕುಲಗೆಟ್ಟು ಹೋಗಿರುವುದರ ಚರಿತ್ರೆ ಅಂದಿನಿಂದಲೇ ಪ್ರಾರಂಭವಾಗಿದೆ. ಜೊತೆಗೆ ಮಲೆಯಾಳಂ, ಹಿಂದಿ ಎಟ್ಸೆಟ್ರಾ. . . ಎಲ್ಲಾ ಸೇರಿ ಚಟ್ಣಿ ಯಲ್ಲಾ, ಕಿಚಡಿಯಾಗಿ ಹೋಗಿದೆ.
ನಾಲಿಗೆ ಸೀಳಿದರೆ, ಮೂಗಿನಲ್ಲಾದರೂ ಕನ್ನಡವನ್ನೇ ಮಾತನಾಡುತ್ತೇನೆಂದ ಡಿ.ವಿ.ಜಿಯವರ ಛಲ ನಮ್ಮಲ್ಲಿ ಯಾರಿಗೂ ಇಲ್ಲ. ಎಂದ ಮೇಲೆ ಬೇರೆ ನಾಡಿನಿಂದ ಬಂದಿಲ್ಲಿ ತಿಂದು, ದುಡಿದುಕೊಂಡು, ಆಸ್ತಿವಂತರಾಗುತ್ತಿರುವವರನ್ನು ಅಂದೇನು ಪ್ರಯೋಜನ?

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 12:48pm — ಸಂಗನಗೌಡ

ಉ: ಓಹೋ ಕನ್ನಡದವ್ರಾ?

ಸಂಗನಗೌಡ's picture

Quote:
ನಾಲಿಗೆ ಸೀಳಿದರೆ, ಮೂಗಿನಲ್ಲಾದರೂ ಕನ್ನಡವನ್ನೇ ಮಾತನಾಡುತ್ತೇನೆಂದ ಡಿ.ವಿ.ಜಿಯವರ ಛಲ ನಮ್ಮಲ್ಲಿ ಯಾರಿಗೂ ಇಲ್ಲ.

ಹಂಗಂದವರು ಜಿ.ಪಿ.ರಾಜರತ್ನಂ.

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 2:09pm — Ennares

ಉ: ಓಹೋ ಕನ್ನಡದವ್ರಾ?

Ennares's picture

ಇದೇ ರೀತಿಯ ಅನುಭವ ನನಗೂ ಆಗಿದ್ದನ್ನು ಒಂದು ಲೇಖನದಲ್ಲಿ ಹೋದ ವರ್ಷವೇ ಬರೆದಿದ್ದೆ.

"ಮರಳಿ ಮಣ್ಣಿಗೆ - ಏನಾಗಿದೆ ಚೆಲುವಕನ್ನಡ ನಾಡಿಗೆ?" ಅಂತ ಈ ಲೇಖನದ ಕೊಂಡಿ ಈ ಕೆಳಗಿದೆ

- http://www.ourkarnataka.com/kannada/articles/whatwrong.htm

- ನವರತ್ನ ಸುಧೀರ್‍

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾನು ಮತ್ತು ನನ್ನ ಹಲ್ಲುಗಳು
  • ಭಾವನ ತ೦ಗಿ!
  • ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>
  • ಈಶ್ವರ್ ಅಲ್ಲಾ ತೇರೋ ನಾಮ್......
  • ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು

ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator