ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?
ಅನಂತಮೂರ್ತಿಯವರ "ಋಜುವಾತು" ಐನೂರು ಪ್ರತಿ ಕೂಡಾ ಖರ್ಚಾಗಿಲ್ಲ. ಭೈರಪ್ಪನವರ "ಆವರಣ" ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಪ್ರತಿ ಖರ್ಚಾಗಿದೆ. ಅನಂತಮೂರ್ತಿ ಭೈರಪ್ಪನವರಲ್ಲಿ ಯಾರು ದೊಡ್ದವರು ಎನ್ನುವ ದಾಟಿಯ ಚರ್ಚೆಗೆ ವಿದಾಯ ಹೇಳೋಣ. ಮೌಲಿಕ ವಿಚಾರ ವಿನಿಮಯ ನಡೆಯಬೇಕು ಎನ್ನುವ "ನೂರೆಂಟು ಮಾತು" ಅಂಕಣ ಬರಹ ಇಲ್ಲಿದೆ. ಓದಿ:
http://vijaykarnatakaepaper.com/svww_zoomart.php?Artname=20070531a_00610...

- Login or register to post comments
- 844 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?
http://vijaykarnatakaepaper.com/svww_zoomart.php?Artname=20070531a_00610...
ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?
ಈ ಬರಹ ಓದಿದೆ. ಭೈರಪ್ಪನವರ ಚರಿತ್ರೆ ಹೇಳಿರುವ ಅವರು(ವಿಕ) ಅನಂತಮೂರ್ತಿರವರ ಚರಿತ್ರೆಯನ್ನು ಹೇಳಬೇಕಿತ್ತು. ಇದು ಅಪೂರ್ಣ ಬರಹ..
ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?
ಇದೊಳ್ಳೇ ಹೋಲಿಕೆ ಆಯ್ತಲ್ಲ??!!
ವಿಕ ಮೊದಲು ೧ ರುಪಾಯಿಗೆ ಮಾರಾಟವಾಗಿ, ಪ್ರಜಾವಾಣಿಗಿಂತ ಹೆಚ್ಚು ಮಾರಾಟವಾಯ್ತು. ಹಂಗಂತ ಪ್ರಜಾವಾಣಿ ಕಳಪೆಯೇ, ವಿಕ ದೊಡ್ಡದೇ?
ನಮಗೆಲ್ಲ 'ಆವರಣ'ದ ಮಾರಾಟ ಹೇಗೆ ಹೆಚ್ಚಿತು ಎಂದು ಗೊತ್ತಿದೆ. ಅದಕ್ಕೆ ಜಾಹೀರು ಮಾಡಿದವರು ಯಾರೆಂದೂ ಗೊತ್ತಿದೆ.( ನಾನೂ ಅವರಿಂದಲೇ ಅದನ್ನು ಕೊಂಡಿದ್ದು, ಕೊಡಿಸಿದ್ದು )
ಬಿಡುಗಡೆಯಾದ ಕೂಡಲೇ ಮೂರು ಸಾವಿರ ಮಾರಾಟವಾದ 'ಆವರಣ'ದ ಮುಂದೆ ಅಷ್ಟ ಮಾರಾಟವಾಗದ 'ಪರ್ವ', 'ಸಾರ್ಥ'ಗಳು ಕಳಪೆಯೇ?
ಯಾಕೋ ಈ ಹೋಲಿಕೆಗಳು ಅತಿಯಾಯ್ತು.
ಹಾಗಾದರೆ ಪೂಚಂತೆ, ಕುವೆಂಪೂ, ದರಾಬೇಂದ್ರೆ, ಶಿವರಾಮಕಾರಂತರೂ ಮುಂತಾದವರ ಹೊತ್ತಗೆಗಳು ಇಷ್ಟು ಮಾರಾಟವಾಗಿಲ್ಲ. ಹಾಗಂತ??
- ಮಾಯ್ಸ
ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?
ಹಾಗಾದರೇ ಈ ಹೋಲಿಕೆ ಸಂಪೂರ್ಣ ತಪ್ಪೇ? ಯಾವುದೇ ಒಂದು ವಸ್ತುವಿಗೆ ಜನಪ್ರಿಯವಿದೆಯೆಂದು ಮಾರುಕಟ್ಟೆ ಸಿಗುತ್ತದೆಯೋ ಅಥವಾ ಮಾರುಕಟ್ಟೆಯಿದೆಯಂದು ಜನಪ್ರಿಯವಾಗುತ್ತದೆಯೋ?
ನನಗೀಗ "ಮುಂಗಾರು ಮಳೆ"ಯನ್ನ ಯಾವ ಕೆಟಗರಿಗೆ ಸೇರಿಸೋದು ಅಂತ ದಿಗಿಲು!
ಕೊನೆಗೊಂದು ಗಾದಿ : ಇಂಗು ಬೆಲ್ಲ ಇದ್ರ ಮಂಗ ಮೂಳೆ ಸೈತ ಅಡ್ಗಿ ಮಾಡ್ತಾಳಂತ !
ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?
ಇಬ್ಬರು ಕನ್ನಡಿಗರ ನಡುವೆ ಜಗಳವನ್ನು ತಣಿಸುವ ಬದಲು ಇನ್ನೂ ಅದಕ್ಕೆ ಎಣ್ಣೆ ಸುರಿವುದು ಸರಿಯೇ? ಸರಿಯಿಲ್ಲ!
ಬರೀ ಹೀಗೆ ಒಡುಕುಮನಗಳೇ ಇದ್ರೆ ಏನು ಒಳಿತು.
"ಮುಂಗಾರು ಮಳೆ" ಇನ್ನೊಬ್ಬರ ಖುಶಿಗಾಗಿ, ತಾನು ತೆಪ್ಪಗಿರುವುದು, ರಚ್ಚೆಮಾಡದಿರುವರ ಬಗ್ಗೆ ಹೇಳುವುದು. ಒಂದು ಮನೆಯ ಮರ್ಯಾದೆಯನ್ನು ಕಾಪಾಡಲು, ಹೀರೋ ತನ್ನ ಬಯಕೆಯನ್ನು ಬಿಟ್ಟುಬಿಡುವನು. ಕೊನೆಯ ತನಕ ಪ್ರೀತಿಯ ಒಂದು ಮೆದುಭಾವವನ್ನು ತೋರಿದ್ದಾರೆ. ಆ ಸಿನಿಮದಲ್ಲಿ ಎಲ್ಲೂ ರಚ್ಚೆ ಹಿಡಿದು ನಿನ್ನ ಬಯಕೆ-ಹಂಬಲಗಳನ್ನು ಮುಟ್ಟು, ತೀರಿಸಿಕೋ ಅಂತ ಹೇಳಿಲ್ಲ.
"ಆವರಣ" ಮತ್ತು "ಮಂಗಾರು ಮಳೆ"ಗಳಲ್ಲಿ ನನಗೆ(ಹಲವರಿಗೂ?) ಹೋಲಿಕೆ ಸಿಗಲಿಲ್ಲ, ( ಜನಪ್ರಿಯತೆಯಲ್ಲೂ!! )
ಒಡೆಯೋ ಬುದ್ದಿ ಬೇಡ... ಬೈರಪ್ಪ ಮತ್ತು ಅನಂತಮೂರ್ತಿ ಇಬ್ಬರೂ ಕನ್ನಡದ ಆಸ್ತಿ. ಇಬ್ಬರೂ ಕನ್ನಡದ ಕೀರ್ತಿ!! ನಾವು ಪಂಗಡಗಳನ್ನು ಮಾಡಿ ಕಿತ್ತಾಡೋದು ನಮಗೇ ಒಳ್ಳೇದಲ್ಲ!!
- ಮಾಯ್ಸ