ಭಗವದ್ ಗೀತೆಯ ಶ್ಲೋಕ!
ನಾನು ಓದ್ತಿದ್ದಾಗ ನಮ್ಮ ಬೀಡುಶಾಲೆಯಲ್ಲಿ ಊಟದ ವೇಳೆ ೨ ಭಗವದ್ ಗೀತೆಯ ಶ್ಲೋಕಗಳನ್ನು ಹೇಳ್ತಿದ್ವು. ಅಲ್ಲಿ ಇರುವ ತನಕ ಅವುಗಳ ಅರ್ತ ನಂಗೆ ತಿಳಿಲೇ ಇಲ್ಲ. ಬರೀ ಕಾಟಾಚಾರಕ್ಕೆ ಹೇಳ್ತಿದ್ವಿ ಅಂತ ಅನ್ಸುತ್ತೆ.
ಆದರೆ ಈಗ ನೆನ್ನೆ ಉಂಕಿಸುತ್ತಾ ಆವೆರಡು ಶ್ಲೋಕಗಳ ನೆನೆಪಾಯ್ತು.
ಅವು:( ತಪ್ಪುಗಳದ್ದರೆ ತಿದ್ದಿ )
ಪ್ರಶ್ನೆ!!!
ಬ್ರಹ್ಮಾರ್ಪಣಂ ಬ್ರಹ್ಮಹವಿಃ
ಬ್ರಹ್ಮಾಗ್ನೌ ಬ್ರಹ್ಮಣಾಹುತಂ
ಬ್ರಹ್ಮೇಣ ತೇನ ಗಂತವ್ಯಂ
ಬ್ರಹ್ಮಕರ್ಮಸಮಾಧಿನಾ
ಅರ್ಪಣೆ, ಹವಿಸ್ಸು, ಅಗ್ನಿ, ಆಹುತಿ, ಇವೆಲ್ಲವೋ ಬ್ರಹ್ಮವೇ. ಬ್ರಹ್ಮವೇ ಇವಲ್ಲೆವನ್ನು ಒಯ್ಯತ್ತದೆ. ಈ ಕೆಲಸವೂ ಬ್ರಹ್ಮ(?)
ಉತ್ತರ!!
ಅಹಂ ವೈಶ್ವಾನರೋ ಭೂತ್ವಾ
ಪ್ರಾಣಿನಾಂ ದೇಹಮಾಶ್ರತಃ
ಪ್ರಾಣಾಪಾನ ಸಮಾಯುಕ್ತ್ಯ
ಪಚಾಮ್ಯನ್ನಂ ಚರ್ತುವಿಧಮ್
ನಾನು ವೈಶ್ವಾನರ-ಬೆಂಕಿಯಾಗಿ( ಜಟರಾಗ್ನಿ ), ಜೀವಿಗಳ ಮೈಗಳೇ ಇಂಬಿನಲ್ಲಿರುವೆನು. ಪ್ರಾಣ ಮತ್ತು ಅಪಾನ ಎಂಬ ಎರಡು ಗಾಳಿಗಳನ್ನು ಬರೆಸಿ ನಾಲ್ಕು ತೆರಗಳಲ್ಲಿ ಅರಗಿಸುವೆನು.
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎಂಬ ಐದುಗಾಳಿಗಳು( ಪಂಚಪ್ರಾಣ ).
ನಮ್ಮ ಹೊಟ್ಟೆಯಲ್ಲಿ ಅರಗುವಿಕೆಯನ್ನು ಹೀಗೆ ಹೇಳಲಾಗಿದೆ.
೪ ವಿಧದ ಅರಗಿಸುವಿಕೆಗಳಾವುವು?
ಕೆಲವು ವಿಜ್ನಾನ ಬಿಡಿಸಿಕೆಗಳೂ, ವಿವರಗಳೂ ಬೇಕು.!!
ತಿಳಿಸಿರಿ.!!

- Login or register to post comments
- 577 hits
- Email this forum





RSS:
ಉ: ಭಗವದ್ ಗೀತೆಯ ಶ್ಲೋಕ!
"..ಪಚಾಮ್ಯನ್ನಂ ಚರ್ತುವಿಧಮ್..."
ಇದು 'ಚತುರ್ವಿಧಮ್' ಆಗಿರಬೇಕು ಅಲ್ವ?
ಉ: ಭಗವದ್ ಗೀತೆಯ ಶ್ಲೋಕ!
ಹವ್ದೂ
"ಚರ್ತುವಿಧಂ"!!
- ಮಾಯ್ಸ !!
ಉ: ಭಗವದ್ ಗೀತೆಯ ಶ್ಲೋಕ!
ದೇಹದಲ್ಲಿ ಪಂಚಪ್ರಾಣಗಳ ಸ್ಥಾನಗಳ ಬಗ್ಗೆ ಅಮರಕೋಶದಲ್ಲಿ ಚುಟುಕಾಗಿ ಕೊಟ್ಟಿದ್ದಾನೆ -
ಹೃದಿಪ್ರಾಣೋ ಗುದೇsಪಾನ: ಸಮಾನೋ ನಾಭಿಸಂಸ್ಥಿತ: |
ಉದಾನ: ಕಂಠದೇಶಸ್ಥೋ ವ್ಯಾನ: ಸರ್ವಶರೀರಗ: ||
ಅರ್ಥ ಸರಳ - ಹೃದಯದಲ್ಲಿ ಪ್ರಾಣ, ಗುದದಲ್ಲಿ ಅಪಾನ, ಹೊಕ್ಕುಳಲ್ಲಿ ಸಮಾನ, ಗಂಟಲಲ್ಲಿ ಉದಾನ ಮತ್ತು ವ್ಯಾನವಾಯುವು ಇಡೀ ಶರೀರರದಲ್ಲಿ ವ್ಯಾಪಿಸಿದೆ.
(ಗುದೇ ಅಪಾನ: ಅಂತ ಬಿಡಿಸಿ ಓದಬೇಕು. ಅವಗ್ರಹ ಚಿಹ್ನೆಯನ್ನು s ನಿಂದ ಗುರುತಿಸಿದ್ದೇನೆ. ಯುನಿಕೋಡ್ನಲ್ಲಿ ಅವಗ್ರಹ, ಲಘು-ಗುರು ಮುಂತಾದುವುಗಳನ್ನು ಮೂಡಿಸುವ ಬಗೆ ಯಾರಿಗಾದರೂ ಗೊತ್ತೆ?)
ಉ: ಭಗವದ್ ಗೀತೆಯ ಶ್ಲೋಕ!
ಮಹೇಶರೇ,
ಒಳ್ಳೆಯ ಪ್ರಶ್ನೆಯನ್ನೇ ಕೇಳಿದಿರಿ; ನನಗೆ ತಿಳಿದಿದ್ದನ್ನು ಹೇಳುತ್ತೇನೆ:
ಅಹಮ್ ವೈಶ್ವಾನರೋ... ಚತುರ್ವಿಧಮ್|| ಶ್ಲೋಕದ ಮೂರು ಪಾದಗಳನ್ನು ಸರಿಯಾಗಿಯೇ ತಿಳಿಸಿದ್ದೀರಿ. ಆದರೆ, ಕೊನೆಯ ಪಾದದ ವಿವರಣೆ ಮಾತ್ರ ತಪ್ಪಾಗಿದೆ!
ಪಚಾಮ್ಯನ್ನಂ ಚತುರ್ವಿಧಮ್ - ಎಂದರೆ "ಅನ್ನವನ್ನು ನಾಲ್ಕು ತೆರನಾಗಿ ಅರಗಿಸುವೆ" ಎಂದರ್ಥವಲ್ಲ! ಬದಲಿಗೆ "ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ" ಎಂದರ್ಥ. --> ’ಪಚಾಮಿ ಚತುರ್ವಿಧಂ ಅನ್ನಂ’ ಎಂದು ಮರುಜೋಡಿಸಬೇಕು.
ಇಲ್ಲಿ ಅನ್ನವೆಂದರೆ ಈಗ ನಾವೆಲ್ಲ ತಿಳಿದಿರುವ ’ನೀರಿನಲ್ಲಿ ಬೇಯಿಸಿದ ಅಕ್ಕಿ’ ಅಲ್ಲ! ಬದಲಿಗೆ ಎಲ್ಲ ರೀತಿಯ ’ಆಹಾರ’ ಎಂದರ್ಥ. ಅಕ್ಕಿಯ ಅನ್ನವನ್ನು ತಯಾರಿಸಿ ತಿನ್ನುವುದು ಮಾನವರು ಮಾತ್ರ; ಆದರೆ ಶ್ರೀಕೃಷ್ಣ "...ಪ್ರಾಣಿನಾಂ ದೇಹಮಾಶ್ರಿತಃ" ಎಂದು ಹೇಳಿರುವುದರಿಂದ ಈ ’ಅನ್ನ’ ಎಲ್ಲ ’ಪ್ರಾಣಿ’(ಪ್ರಾಣವಿರುವ ಜೀವಿ)ಗಳು ತಿನ್ನಬಲ್ಲ ಆಹಾರ ಎಂದರ್ಥ. ಈ ಎಲ್ಲ ಪ್ರಾಣಿಗಳ ಅಹಾರವನ್ನೂ ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು - ಅದನ್ನೇ ಇಲ್ಲಿ ’ಚತುರ್ವಿಧಂ ಅನ್ನಂ’ ಎಂದು ಹೇಳಿರುವುದು.
ಆ ನಾಲ್ಕು ವಿಧಗಳೇ - ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ.
ಭಕ್ಷ್ಯ = ಅಗಿದು, ಕಡಿದು ತಿನ್ನಲು ಯೋಗ್ಯವಾದುದು [ಭಕ್ಷ್ -> ಕಚ್ಚು, ಕಡಿ, ಅಗಿ, ಜಗಿ ಎಂದರ್ಥ] ಉದಾ: ಹಣ್ಣು, ಅಕ್ಕಿಯ ಅನ್ನ
ಭೋಜ್ಯ = ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು [ಭುಜ್/ಭುಂಜ್ -> ತಿನ್ನು, ನವಣಿಸು, ನುಂಗು] ಉದಾ: ಗಂಜಿ, ಹಿಟ್ಟು
ಲೇಹ್ಯ = ನೆಕ್ಕಿ ತಿನ್ನಲು ಯೋಗ್ಯವಾದುದು [ಲಿಹ್ -> ನೆಕ್ಕು, ನಾಲಿಗೆಯಿಂದ ಸವರು] ಉದಾ: ಉಪ್ಪಿನಕಾಯಿಯ ರಸ, ಬೆಲ್ಲದ ಪಾಕ
ಚೋಷ್ಯ = ಹೀರಿ ತಿನ್ನಲು/ಕುಡಿಯಲು ಯೋಗ್ಯವಾದುದು [ಚುಷ್ -> ಹೀರು, ಕುಡಿ] ಉದಾ: ನೀರು, ಮಾವಿನ ರಸ
ಈ ನಾಲ್ಕು ವಿಧದ ’ಅನ್ನ’ಗಳನ್ನು ಸೇವಿಸುವ ಎಲ್ಲ ಜೀವಿಗಳ ಜಠರಾಗ್ನಿಯ ರೂಪದಲ್ಲಿ ಪರಮಾತ್ಮನಿದ್ದಾನೆ ಎಂಬುದೇ ಇಲ್ಲಿಯ ಸಾರ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಭಗವದ್ ಗೀತೆಯ ಶ್ಲೋಕ!
ನಮೋ ಬೆನಕಾಯ
ಚರ್ತುವಿಧ ಅನ್ನಗಳ ಬಗ್ಗೆ ಅರುಹಿದ್ದಕ್ಕೆ ನನ್ನಿ!
ಇಲ್ಲಿ ಪ್ರಾಣಾಪಾನಗಳ ಪಾತ್ರವೇನು?
- ಮಾಯ್ಸ !!
ಉ: ಭಗವದ್ ಗೀತೆಯ ಶ್ಲೋಕ!
ಇದು ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆ ಅಂದುಕೊಳ್ಳುವೆ.
ಪ್ರಾಣ ವಾಯುವಿನ ಕೆಲಸ:
प्राणॊऽत्र मूर्धगः ।
उरः कण्ठश्चरॊ बुद्धि हृदयॆन्द्रियचित्तधृक् ।
ष्ठीवनक्षवथूद्गार निःश्वासान्नप्रवॆशकृत् । - अष्टाङ्ग हृदय
ಪ್ರಾಣ ವಾಯು ತಲೆಯಲ್ಲಿದ್ದುಕೊಂಡು, ಎದೆ ಮತ್ತು ಕೊರಳುಗಳಲ್ಲಿ ಚಲಿಸುತ್ತ, ಕೆಳಗಿನ ಕೆಲಸಗಳನ್ನು ಮಾಡುತ್ತದೆ:
ಬುದ್ಧಿ, ಹೃದಯ, ಇಂದ್ರಿಯ ಮತ್ತು ಚಿತ್ತ (ಮನಸ್ಸು) - ಇವುಗಳ ನಿಯಂತ್ರಣ,
ಉಗಿಯುವುದು, ಸೀನುವುದು, ತೇಗು, ಶ್ವಸನ ಕ್ರಿಯೆ ಮತ್ತು ಅನ್ನವನ್ನು ನುಂಗುವ ಕ್ರಿಯೆ (Deglutition / swallowing) - ಇವೂ ಸಹ ಪ್ರಾಣ ವಾಯುವಿನ ನಿಯಂತ್ರಣದಲ್ಲೇ ಇರುವುದು.
ಆಧುನಿಕ ವೈದ್ಯ ವಿಜ್ಞಾನದ ಪ್ರಕಾರವೂ ಈ ಎಲ್ಲ ಕೆಲಸಗಳು Brain ಮತ್ತು Brain Stem ನಿಂದ ನಿಯಂತ್ರಿತವಾಗುತ್ತವೆ. (ಮೂರ್ಧಾ)
ಉ: ಭಗವದ್ ಗೀತೆಯ ಶ್ಲೋಕ!
'ಪ್ರಾಣ'ದ ಕುರಿತು ಬಹಳ ಒಳ್ಳಯ ಅರುಹು!!
ದಯವಿಟ್ಟು ಬಿಡುವಾದರೆ ಅಪಾವ, ವ್ಯಾನ, ಉದಾನ, ಸಮಾನಗಳ ಬಗ್ಗೆಯೂ ಬರೆಯಿರಿ.!!!
ವಂದನೆ! ನನ್ನಿ!
- ಮಾಯ್ಸ !!
ಉ: ಭಗವದ್ ಗೀತೆಯ ಶ್ಲೋಕ!
ಅಪಾನ ವಾಯುವಿನ ಕೆಲಸ:
अपानॊऽपानगः श्रॊणिवस्तिमॆढ्रॊरुगोचरः ।
शुक्रार्तवशकृन्मूत्रगर्भनिष्क्रमणक्रियः ॥ - अ. हृ.
ಅಪಾನ ವಾಯುವಿನ ಕಾರ್ಯಕ್ಷೇತ್ರ: ಅಪಾನ . ( perinium )
ಕೆಲಸ: ಶುಕ್ರ, ಆರ್ತವ, ಶಕೃತ್ (ಮಲ), ಮೂತ್ರ, ಗರ್ಭ - ಇವುಗಳ ನಿಷ್ಕ್ರಮಣ.
ಹಾಗಾಗಿ, ಪ್ರಾಣವಾಯು ಅನ್ನಗ್ರಹಣ ಮಾಡಿದರೆ, ಅಪಾನ ವಾಯು, ಪಚನವಾಗದೆ ಉಳಿದದ್ದನ್ನು ಹೊರಕ್ಕೆ ಹಾಕುತ್ತದೆ.
ಉ: ಭಗವದ್ ಗೀತೆಯ ಶ್ಲೋಕ!
ವ್ಯಾನ ವಾಯು:-
ವ್ಯಾನೋ ಹೃದಿ ಸ್ಥಿತಃ ಕೃತ್ಸ್ನ ದೇಹಚಾರೀ ಮಹಾಜವಃ |
ಗತ್ಯಪಕ್ಶೇಪಣೋತ್ಕ್ಷೇಪ ನಿಮೇಷೋನ್ಮೇಷಣಾದಿಕಾಃ |
ಪ್ರಾಯಃ ಸರ್ವಾಃ ಕ್ರಿಯಾಃ ತಸ್ಮಿನ್ ಪ್ರತಿಬದ್ಧಾಃ ಶರೀರಿಣಾಮ್ | - ಅ. ಹೃ.
ಸಮಾನ ವಾಯು:
ಸಮಾನೋ ಅಗ್ನಿ ಸಮೀಪಸ್ಥಃ ಕೋಷ್ಠೇ ಚರತಿ ಸರ್ವತಃ |
ಅನ್ನಂ ಗೃಹ್ಣಾತಿ ಪಚತಿ ವಿವೇಚಯತಿ ಮುಞ್ಚತಿ |
ಉದಾವ ವಾಯು:
ಉರಃ ಸ್ಥಾನಮುದಾನಸ್ಯ ನಾಸಾ ನಾಭಿ ಗಲಾಂಶ್ಚರೇತ್ |
ವಾಕ್ ಪ್ರವೃತ್ತಿ ಪ್ರಯತ್ನೋರ್ಜಾ ಬಲ ವರ್ಣ ಸ್ಮೃತಿಕ್ರಿಯಃ |
ಉ: ಭಗವದ್ ಗೀತೆಯ ಶ್ಲೋಕ!
ತಿದ್ದುಪಡಿ:
ಗತ್ಯಪಕ್ಶೇಪ.... => ಗತ್ಯಪಕ್ಷೇಪ ...
ಉದಾವ ವಾಯು => ಉದಾನ ವಾಯು
ನನ್ನ ಟೈಪಿಂಗ್ ಸ್ಪೀಡು ಚೆನ್ನಾಗಿಲ್ಲದ್ದಕ್ಕೆ ಸಂಸ್ಕೃತ ವರ್ಶನ್ ಮಾತ್ರ ಕೊಟ್ಟಿದ್ದೇನೆ . (ಅದೂ ಬರಬರುತ್ತ ಕನ್ನಡ ಲಿಪಿಯಲ್ಲಿ )..
ಡೌಟ್ ಗಳಿದ್ದರೆ ಕೇಳಿ. ಹೇಳುತ್ತೇನೆ.
ಉ: ಭಗವದ್ ಗೀತೆಯ ಶ್ಲೋಕ!
ವ್ಯಾನ ಗುಂಡಿಗೆ/ಹೃದಯದಲ್ಲಿ, ಸಮಾನ ಹೊಟ್ಟೆಯಲ್ಲಿ(?) ಮತ್ತು ಉದಾನ ನಾಭಿ/ಹೊಕ್ಕಳಲ್ಲಿ ಇರುವುದೆಂದು ತಿಳಿಯುತು.
ಮುಂದೆ ಹೊಳೆಯಲಿಲ್ಲ.
ಬಿಡುವಾದಾಗ ಬಿಡಿಸಿರಿ. ಅರ್ಜೆಂಟಿಲ್ಲ!!
ಶ್ಲೋಕಕ್ಕೆ ವಂದನೆಗಳು!!
- ಮಾಯ್ಸ !!
ಉ: ಭಗವದ್ ಗೀತೆಯ ಶ್ಲೋಕ!
ಉದಾನವಾಯುವಿನ ಬಗ್ಗೆ:
Major site of ‘Udana Vata’ is chest. Other sites where it is active are- nose, umbilicus and throat.
Its function is to produce speech. Also, it is responsible for the effort, energy and strength required for speech- production. It helps in the recall of vocabulary required to make the speech meaningful.
ಉ: ಭಗವದ್ ಗೀತೆಯ ಶ್ಲೋಕ!
ಸಮಾನವಾಯು:
Active site of ‘Samana’ is adjacent to gastro intestinal tract. It performs the functions like reception of food, its digestion ( by activating ‘Agni’ ), its division into useful and waste parts and its onward propulsion.
ಉ: ಭಗವದ್ ಗೀತೆಯ ಶ್ಲೋಕ!
ವ್ಯಾನವಾಯು:
Vyana Vayu moves with great velocity all over the body and is responsible for activities like- controlling one's gait, extension, flexion, movements of eyelids and all other similar activities.
ಉ: ಭಗವದ್ ಗೀತೆಯ ಶ್ಲೋಕ!
ಮೇಲಿನ ಎಲ್ಲ ಇಂಗ್ಲಿಶ್ ಗಾಗಿ ಕ್ಷಮೆ ಇರಲಿ .
(ಟೈಪಿಂಗ್ ಸ್ಪೀಡು ಕಡಿಮೆ ಇರುವುದರಿಂದ ಯಾವತ್ತೋ ಬರೆದಿಟ್ಟಿದ್ದ ವಿಚಾರವನ್ನು ಕಟ್ಟಿಸಿ ಪೇಸ್ಟಿಸಿದ್ದೇನೆ.)
ನನ್ನಿ!!
ಉ: ಭಗವದ್ ಗೀತೆಯ ಶ್ಲೋಕ!
ಬಹಳ ಒಳ್ಳೆಯ ಅರಿಹ..!!!
ನನ್ನ ಒಂದು ಪ್ರೆಶ್ನೆ ಮರೆತುಬಿಟ್ಟಿರಾ?
ಪಚನ ಕ್ರಿಯೆಯಲ್ಲಿ ಅನ್ನಗ್ರಹಣ ಮತ್ತು ಮಲವಿಸರ್ಜನ ಸೇರಿಕೊಂಡಿದೆಯೇ?
ವಂದನೆಗಳು!
- ಮಾಯ್ಸ !!
ಉ: ಭಗವದ್ ಗೀತೆಯ ಶ್ಲೋಕ!
ಪಚನ ಕ್ರಿಯೆಯಲ್ಲಿ ನಲ್ಲಿ ಅವನ್ನು ಸೇರಿಸುವುದು / ಬಿಡುವುದು ನಮಗೆ ಬಿಟ್ಟದ್ದು.
Gastro intestinal tract (ಜೀರ್ಣಾಂಗವ್ಯೂಹ (coined term) = ಸಂಸ್ಕೃತದ / ಆಯುರ್ವೇದದ ಅನ್ನವಹ ಸ್ರೋತಸ್ + ಪುರೀಷವಹ ಸ್ರೋತಸ್ ) ನ ಕೆಲಸಗಳಲ್ಲಿ ಇವೂ ಸಹ ಸೇರುತ್ತವೆ.
ಆದರೆ digestion ಎಂಬ process ನೊಳಗೆ ಇವು ಬರುವುದಿಲ್ಲ.
ಉ: ಭಗವದ್ ಗೀತೆಯ ಶ್ಲೋಕ!
ಆ ಶ್ಲೋಕ ಹೇಳೋದು
"ಪ್ರಾಣಾಪಾನ ಸಮಾಯುಕ್ತ್ಯ
ಪಚಾಮ್ಯನ್ನಂ ಚರ್ತುವಿಧಂ" ಅಂತ ಬಂದಿದೆ. ಅದಕ್ಕೆ ಕೇಳಿದೆ.
ವಂದನೆ!!
- ಮಾಯ್ಸ !!
ಉ: ಭಗವದ್ ಗೀತೆಯ ಶ್ಲೋಕ!
ಶ್ಲೋಕದಲ್ಲಿ ಪಚನ ಕ್ರಿಯೆಯು ಪ್ರಾಣಾಪಾನಗಳನ್ನು ಸಮಾಯುಕ್ತಿಸಿ ನಡೆಯುದೆಂದು ಹೇಳಿದೆಯಲ್ಲ.
ಪಚನದಲ್ಲಿ ಅನ್ನಗ್ರಹಣ ಮತ್ತು ವಿಸರ್ಜನ ಸೇರುವುದೇ?
- ಮಾಯ್ಸ !!