Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

June 5, 2007 - 9:19am — vinayudupa

ನಮಸ್ಕಾರ,
               ಈ ಕೆಳಗಿನ ಪದಗಳನ್ನು ರಾಷ್ಟ್ರಕವಿ ಕುವೆಂಪುರವರ ಒಂದು ಪುಸ್ತಕದಲ್ಲಿ ಓದಿದೆ. ಆದರೆ ಇವುಗಳ ಪದಶ: ಅರ್ಥ ತಿಳಿಯಲಿಲ್ಲ. ದಯವಿಟ್ಟು ತಿಳಿಸಿ."ಲಳಿಮಸಗಿದಂಬುಧಿಯಂತೆ ಅಲ್ಲೋಲಕಲ್ಲೋಲವಾಯಿತು". ಅಂಬುಧಿ ಅಂದ್ರೆ ಸಮುದ್ರ ಇರಬಹುದು. ಆದರೆ ಸಂಯುಕ್ತ ಪದದ ಅರ್ಥ ತಿಳಿಸಿ"ಹೊಸ ಹಸುರಿನ ಹಸಲೆಯನ್ನು ಚುಂಬಿಸುವ ಅಚ್ಚಲರುಗಳಂತೆ"

‹ underestimate ಗೆ ಕನ್ನಡ ಪದ ತಿಳಿಸಿ ಕಣ್ಣಿಗೆವೆಯಂದದಲಿ ಕೈ ಮೈ | ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 723 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 5, 2007 - 11:00am — mahesha

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

mahesha's picture

೧"ಲಳಿಮಸಗಿದಂಬುಧಿಯಂತೆ ಅಲ್ಲೋಲಕಲ್ಲೋಲವಾಯಿತು". ಅಂಬುಧಿ ಅಂದ್ರೆ ಸಮುದ್ರ ಇರಬಹುದು.
೨ಆದರೆ ಸಂಯುಕ್ತ ಪದದ ಅರ್ಥ ತಿಳಿಸಿ"ಹೊಸ ಹಸುರಿನ ಹಸಲೆಯನ್ನು ಚುಂಬಿಸುವ ಅಚ್ಚಲರುಗಳಂತೆ"

ಅಂಬುಧಿ = ಕಡಲು.
ಅಂಬು = ಬಾಣ(ಕ) ನೀರು(ಸಂ)

ಮೊದಲನೆಯದು ತುಸು ಗೋಜಲಿದೆ.
ಲಳಿಮ ?
ಅಸಗು = agitate
ಅಂಬುಧಿ = (ಇಲ್ಲಿ) ಕಡಲು
ಅಲ್ಲೋಲಕಲ್ಲೋಲ

೨
ಹಸಲೆ/ಪಸಲೆ = ಹುಲ್ಲು
pasale = young grass, pasturage, a place overgrown with grass, lawn

ಚುಂಬಿಸುವ = ಮುತ್ತಿಕ್ಕುವ, ಉಮ್ಮುವ

ಅಚ್ಚಲರು = ಅಚ್ಚ + ಅಲರು?
ಅಲರು = ಅರಳು, ಅರಳಿದ ಹೂ

ಸರಿಯಾಗಿ ಇದ್ಯಾ?

ಇದು ಕುವೆಂಪು ಅವರ ಯಾವ ನೆಗಳ್ಚು(ರಚನೆ)ಅಲ್ಲಿ ಇದೆ?

- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ
June 5, 2007 - 1:08pm — mahesha

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

mahesha's picture

ಅಚ್ಚಲರ್‍ ಅಂದ್ರೆ fresh-blossom ಅಂತ ಅಲ್ವಾ?

ಅಚ್ಚಕರ್ಪೂರ ಬಲು ಕಂಪಿರುವ ಕರ್ಪೂರ
ಅಚ್ಚಹಸಿರು = ಕಡುಹಸಿರು, ಬಲು ಹಸಿರು.

- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ
June 6, 2007 - 9:26am — vinayudupa

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

vinayudupa's picture

ಧನ್ಯವಾದಗಳು ಮಹೇಶ್,

ಹೊತ್ತಿಗೆಯ ಹೆಸರು "ಸ್ವಾಮಿ ವಿವೇಕಾನಂದ".

  • Login or register to post comments
  • link
  • Email this ಪ್ರತಿಕ್ರಿಯೆ
June 6, 2007 - 10:00am — mahesha

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

mahesha's picture

ವಿನಯುಡುಪ,

"ಲಳಿಮಸಗಿದಂಬುಧಿಯಂತೆ " ಇರದ ಮುಂದೆ ಹಿಂದೆ ಇರುವ ಸಾಲುಗಳ ಒದವು ಮಾಡಿ, ದಯವಿಟ್ಟು.

ಲಳಿಮ ಅಂದ್ರೆ ಏನು ಅಂತ ನಂಗೆ ತಿಳಿಯಬೇಕು!! ಇದು ಕನ್ನಡದ ಒರೆಯಂತೆ ಕಾಣ್ತಿಲ್ಲ!
- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ
June 7, 2007 - 10:18pm — nandakishore_bhat

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

nandakishore_bhat's picture

ಅದನ್ನು "ಲು + ಅಳಿಮಸಗಿದಂಬುಧಿಯಂತೆ" ಎಂದು ಬಿಡಿಸಬೇಕು ಎಂದು ನನ್ನ ಅನಿಸಿಕೆ. "ಲು" ಅಂದರೆ "ಮಾಡಲು, ಹೋಗಲು, ಬೀಳಲು" ಅನ್ನುವ ಥರ. ವಿನಯ ಉಡುಪರೆ, ಮಹೇಶರು ಹೇಳಿದ್ದು ಸರಿ, ಹಿಂದುಮುಂದಿನ ವಾಕ್ಯವನ್ನು ಒದಗಿಸಿ. ಆ ಸಂದರ್ಭವನ್ನೂ ವಿವರಿಸಿದರೆ ಚೆನ್ನು. ವಿವೇಕಾನಂದರು ಸಮುದ್ರಕ್ಕೆ ಧುಮುಕುವ ಘಟನೆಯ ವಿವರದಲ್ಲಿ ಈ ನುಡಿ ಪ್ರಯೋಗವಾಗಿದೆಯೇ? ಹಾಗೆಯೇ, ಅದು ’ಅಳಿಮಸಗಿದ’ ಎಂದೋ ಅಥವಾ ’ಅಳಿಮೆಸಗಿದ’ ಎಂದೋ ಎಂದು ಪರೀಕ್ಷಿಸುವಿರಾ?
- ಕಿಶೋರ

  • Login or register to post comments
  • link
  • Email this ಪ್ರತಿಕ್ರಿಯೆ
June 8, 2007 - 10:08am — vinayudupa

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

vinayudupa's picture

"ಮಹರ್ಷಿಗಳು ಪ್ರಶ್ನೆಯ ಅಗಾಧತೆಗೂ, ವಾಣಿಯ ಗಂಭೀರತೆಗೂ ವಿಸ್ಮಯಸ್ತಂಭಿತರಾದರು. ಅವರ ಎದೆ ಲಳಿಮಸಗಿದಂಬುಧಿಯಂತೆ ಅಲ್ಲೋಲಕಲ್ಲೋಲವಾಯಿತು. ಒಂದು ಸಲ ಪ್ರತ್ಯುತ್ತರವೀಯಲು ಯತ್ನಿಸಿದರು; ಆಗಲಿಲ್ಲ."
ಈ ಭಾಗ ನರೇಂದ್ರ ದತ್ತನು ಪರಮಹಂಸರ ಆಶ್ರಮ ಸೇರುವ ಮೊದಲು ಬ್ರಾಹ್ಮ ಸಮಾಜದಲ್ಲಿರುವಾಗ ಅಲ್ಲಿರುವ ಒಬ್ಬರನ್ನ ದೇವರ/ಧರ್ಮದ ಬಗೆಗೆ ಪ್ರಶ್ನಿಸಿದಾಗ ಬರುತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ
June 8, 2007 - 10:15am — vinayudupa

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

vinayudupa's picture

ಆದರೆ ಮುದ್ರಣ ದೋಷ ಇದ್ದರೆ ಗೊತ್ತಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 12:03pm — nandakishore_bhat

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

nandakishore_bhat's picture

ವಿನಯ ಉಡುಪರೆ ನಮಸ್ಕಾರ.
ವಾರಾಂತ್ಯದಲ್ಲಿ ಮನೆಗೆ ಹೋಗಿದ್ದಾಗ ಆ ಪುಸ್ತಕವನ್ನು ತೆರೆದು ನೋಡಿದೆ. ನಿಮ್ಮ ಊಹೆ ಸರಿ. ಅದು ಮುದ್ರಣದೋಷ. ’ಅಳಿ ಮಸಗಿದಂಬುಧಿಯಂತೆ’ ಎಂದು ನನ್ನ ಬಳಿ ಇರುವ ಆವೃತ್ತಿಯಲ್ಲಿದೆ. ನೋಡಿ - ’ಸ್ವಾಮಿ ವಿವೇಕಾನಂದ’ ಕರ್ತೃ-ಕುವೆಂಪು, ೧೦ನೇ ಮುದ್ರಣ(೧೯೮೪), ಪುಟ - ೫೩, ಅಧ್ಯಾಯ - ’ನಿರಂಕುಶಮತಿ’.

ಮುಂದೆ ನಾನು ಹುಡುಕಿದ್ದು- ’ಕನ್ನಡ ರತ್ನಕೋಶ’ (೧೯೯೪ರ ೨ನೇ ಆವೃತ್ತಿ; ಪ್ರಕಟಣೆ - ಕ.ಅ.ಪ್ರಾಧಿಕಾರ). ಅದರಲ್ಲಿ ಸಿಕ್ಕಿದಂತೆ -
ಅಳಿ = ನಾಶವಾಗು; ದುಂಬಿ.
ಮಸಗು = ಹರಳು, ಕೆರಳು, ವಿಜೃಂಭಿಸು (ಮಸೆ).

ಈಗ ಆ ಪದಸಮುಚ್ಚಯದ ಅರ್ಥ ಸುಲಭವಾಗಿ ಆಗುತ್ತದೆ. ’ಮಹಾಶಯ, ನೀವು ದೇವರನ್ನು ನೋಡಿದ್ದೀರಾ’ ಎಂಬ ನರೇಂದ್ರದತ್ತನ ಪ್ರಶ್ನೆ ಕೇಳಿ ಮಹರ್ಷಿ ದೇವೇಂದ್ರನಾಥ ಠಾಕೂರರ ಎದೆಯು ಅಳಿಗಾಲದಲ್ಲಿ(=ಪ್ರಳಯಕಾಲದಲ್ಲಿ) ಕೆರಳುವ ಸಮುದ್ರದಂತೆ ಅಲ್ಲೋಲಕಲ್ಲೋಲವಾಯಿತು.

ಈ ಚಿಕ್ಕ ಹುಡುಕಾಟಕ್ಕೆ ಪ್ರೇರಣೆ ಕೊಟ್ಟ ಆ ನಿಮ್ಮ ಪ್ರಶ್ನೆಗೂ, ನಿಮಗೂ ಧನ್ಯವಾದ. Smiling

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 12:10pm — mahesha

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

mahesha's picture

ನನ್ನ ಗೊಂದಲವನ್ನೂ ಬಗೆಹರಿಸಿದ ಭಟ್ಟರಿಗೆ ನನ್ನ ನನ್ನಿ/ನಲ್ಮೆ!

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 9:32am — vinayudupa

ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

vinayudupa's picture

ನಮಸ್ಕಾರ ಮಹೇಶ್/ಭಟ್ಟರೆ,
ನನ್ನ ಪ್ರಶ್ನೆಯನ್ನು ಉತ್ತರಿಸಿದ ನಿಮಗೆ ನನ್ನ ಧನ್ಯವಾದಗಳು. ಯಾವುದೇ ಭಾಷೆಯ ಸಮಸ್ಯೆ ಇದ್ದರು ಸಂಪದದಲ್ಲಿ ಉತ್ತರ ಹುಡುಕಬಹುದೆಂದು ತಿಳಿಯಿತು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಪ್ರೀತಿಸಿದ ಹುಡುಗಿ"
  • ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು
  • ಒಂಥರಾ ಪ್ರೀತಿ...
  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
  • ನುಡಿಮುತ್ತುಗಳು
Syndicate content

ಲೇಖಕರು

vinayudupa's picture

ಪೂರ್ಣ ಹೆಸರು
ವಿನಯ ಉಡುಪ

ಪರಿಚಯ

ಇಲ್ಲಿರಲಾರೆ, ಬಿಟ್ಟು ಹೋಗಲಾರೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
ಇನ್ನಷ್ಟು

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator