ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
ಕಾರವಾರದ ಸಮೀಪ ಗೋವದ ಗಡಿಯ ಹಳ್ಳಿಗೆ ವರ್ಗವಾಗಿ ಬಂದ ಮೇಷ್ಟ್ರು ಅಲ್ಲಿನ ಜನರ ಕೊಂಕಣಿ ಮತನಾಡುವುದು ಕೇಳಿ ಸುಸ್ತಾಗುತ್ತಾರೆ. ಹೇಳಿ ಕೇಳಿ ಅವರದ್ದು ಬಯಲುಸೀಮೆ.
"ದುಂಡಗೆ ಬರೀರಿ" ಅಂತ ಮಕ್ಕಳಿಗೆ ಹೇಳಿದಾಗ ಮುಸಿಮುಸಿ ನಗು.
ತನ್ನ ಉಡುಗೆ ಸರಿಯಿಲ್ವೋ ಅಂತ ಮೇಷ್ಟ್ರಿಗೆ ಡೌಟು.
ಕೊಂಕಣಿಯಲ್ಲಿ ಮಕ್ಕಳಿಗೆ ಕಲಿಸಿದ್ದಕ್ಕೆ ಟೀಚರಮ್ಮನನ್ನು ಆಕ್ಷೇಪಿಸಿದರೆ, ಮೇಷ್ಟ್ರಿಗೆ ಭಾಷಾ ಅಸಹನೆ ಅಂತ ಟೀಚರಮ್ಮನಿಗೆ ಅಸಮಾಧಾನ.

- Login or register to post comments
- 438 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
ಬರಹ ಶ್ರೀಧರ ಬಳೆಗಾರ ಅವರದ್ದು.
*ಅಶೋಕ್
ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
ನಾನು ಮೊದಲ ಬಾರಿ, ಬೆಳಗಾವಿ ಮೂಲಕ ಪುಣೆಗೆ ಹೋದದ್ದು ನೆನಪಾಯಿತು.
ಹಾಸನದಿಂದ ಬೆಳಗಾಗಿವೆ ಬಸ್ ಹಿಡಿದಿದ್ದೆ. ಅಲ್ಲಿ ಇಳಿದು, ಮತ್ತೆ ಪುಣೆಯ ಬಸ್ ಬಗ್ಗೆ ವಿಚಾರಿಸಹೊರಟೆ.
ಸಂಜಿ ಸವಾ ಏಳಕ್ಕೆ ಒಂದು ಬಸ್, ಪೌಣೇ ಎಂಟಕ್ಕೆ ಒಂದೈತ್ರೀ ಅಂತ ಕೌಂಟರ್ನಲ್ಲಿದ್ದವ ಹೇಳಿದಾಗ ನಾನು ಕಕ್ಕಾಬಿಕ್ಕಿಯಾಗಿದ್ದೆ!
-ಹಂಸಾನಂದಿ
ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
"ಒಮ್ಮೆ ಆಲಂದದ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಆಗ ಒಬ್ಬಾತ ಬಂದು ಸಮಯವೆಷ್ಟು ಎಂದು ಕೇಳಿದ (ವೇಳೆ ಏಷ್ಟಾತ್ರೀ ಸಾಯಬ್ರ). ನಾನು ಗಡಿಯಾರ ನೋಡಿಕೊಂಡು ಒಂದೂವರೆ ಎಂದಿದ್ದೆ. ಅದಕ್ಕವನು - ಸರಿಯಾ ಬೋಲ್ರೀ ಅರ್ಥ ಆಗೂದಿಲ್ಲ ಎಂದಿದ್ದ. ಮತ್ತೆ ಒಂದೂವರೆ ಎಂದು ಗಡಿಯಾರವನ್ನು ಅವನ ಮುಖದ ಮುಂದೆ ಹಿಡಿದಿದ್ದೆ. ಅದಕ್ಕವನ ಪ್ರತಿಕ್ರಿಯೆ - ದೀಡ್ ಬೋಲ್ರೀ. ಇದೆಂಥಾ ಸೀಮೀ ಕನ್ನಡ ಮಾತಾಡ್ತೀರ್ರೀ ಎನ್ನೋದೇ.
http://venkatesha.wordpress.com/2007/03/29/%E0%B2%B0%E0%B2%9C%E0%B2%A4%E...
ದಿಂದ ನಮ್ಮ ತ.ವಿ.ಶ್ರೀನಿವಾಸರವರ ಅನುಭವ
ಕುಂ.ವೀ. ರವರ ಒಂದು ಕಥೆಯಲ್ಲಿ , ಕಿತ್ತೂರ ಬಶ್ಟ್ಯಾಂಡಿನಾಗ ಬೆಂಗಳೂರ ಕಡೆಯ ಕಂಡಕ್ಟರನ ಭಾಷೆಗೆ ಅಲ್ಲಿನ ಹೆಣ್ಣು ಮಗಳ ಪ್ರತಿಕ್ರಿಯೆ - ಅದು ತಮಿಳೋ ತೆಲುಗೋ ಅಂತ !