Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

July 5, 2007 - 12:33am — girishwill

ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ......

ಏನಿದು ಅಂಥ ಆಶ್ಚರ್‍ಯಾನಾ?

ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು, ನಮ್ಮ ಬೆಂಗಳೂರಿನಲ್ಲಿ ನೆಲೆಸಿ ಕನ್ನಡಕ್ಕೆ ಬೆಲೆ ಕೊಡೋದಿಲ್ಲ ಕಣ್ರೀ ... ಅದಕ್ಕೆ ಬೇಜಾರು .....

ಉದಾಹರಣೆಗೆ ....
೧: ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು, ನಮ್ಮ ಊರನ್ನು ತೆಗಳೋದು .....
೨: ಕನ್ನಡ ಚಲನಚಿತ್ರಗಳ ಬಗ್ಗೆ ಲಘುವಾಗಿ ಮಾತನಾಡೋದು .....
೩: ಇಲ್ಲೇ ಇದ್ದುಕೊಂಡು, ಇಲ್ಲಿನ ಕಾವೇರಿ ನೀರು ಕುಡಿದು .... ತಮಿಳುನಾಡಿಗೆ ಬೆಂಬಲವಾಗಿ ಮಾತಾಡೋದು .....
೪: ರಜನಿಕಾಂತ್ ಕನ್ನಡದವನಲ್ಲ ಅಂತ ಸುಮ್ನೆ ಸುಮ್ನೆ ವಾದ ಮಾಡೋದು ......

ಈಗ ಮೇಲಿನದರ ಬಗ್ಗೆ ನೀವೇ ಹೇಳಿ .....
೧: ನಮ್ಮ ಬೆಂಗಳೂರನ್ನು ತೆಗಳೋದೇ ಆದರೆ, ಅವರವರ ರಾಜ್ಯಕ್ಕೆ ಹೋಗಿ ... ಅಲ್ಲೇ ಕೆಲಸ ಹುಡುಕಿಕೊಳ್ಳಲಿ ......
೨: ಕನ್ನಡ ಚಲನಚಿತ್ರದ ಬಗ್ಗೆ ಕೀಳಾಗಿ ಮಾತನಾಡುವವರು, ತಮ್ಮ ಭಾಷೆಯ ಚಲನಚಿತ್ರಗಳ ಬಗ್ಗೆ ಒಮ್ಮೆ ಯೋಚಿಸಿ ಮಾತನಾಡಬೇಕು (ತಮಿಳಿನಲ್ಲಾಗಲಿ, ತೆಲುಗಿನಲ್ಲಾಗಲಿ, ಹಿಂದಿಯಲ್ಲಾಗಲಿ ಕನ್ನಡದ ಹಾಗೆ ಮುಂಗಾರು ಮಳೆ, ದುನಿಯ, ಶಾಂತಿನಿವಾಸ, ಸತ್ಯವಾನ್ ಸಾವಿತ್ರಿ ತರಹ ಇಷ್ಟೊಂದು ಸೂಪರ್ ಹಿಟ್ ಚಿತ್ರಗಳು ಬಂದಿಲ್ಲ ಕಣ್ರೀ .....
೩: ಕಾವೆರಿ ವಿಶಯದಲ್ಲಿ ತಮಿಳುನಾಡಿಗೆ ಬೆಂಬಲ ಕೊಡೋದಾದ್ರೆ, ಇಲ್ಲಿ ನೆಲಸಬೇದಿ, ಕಾವೇರಿ ನೀರು ಕುಡೀ ಬೇಡಿ ..... ತಮಿಳುನಾಡಿಗೆ ತೊಲಗಿ ....
೪: ಎಷ್ಟೋ ಜನ ಹೊರ ರಾಜ್ಯದವರು ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿಕೊಂಡು, ಇಲ್ಲೇ ಸೆಟ್ಲ್ ಆಗಿದ್ದಾರೆ ... ಇವರ್‍ಯಾರು ತಮ್ಮನ್ನು ಕನ್ನಡಿಗರೆಂದು ಹೇಳಿಕೊಳ್ಳೋಲ್ಲ .... ಹೀಗಿದ್ದ ಮೇಲೆ ಕರುನಾಡಲ್ಲಿ ಹುಟ್ಟಿ, ಬೆಳೆದು ೩೦ ವರ್ಷಗಳ ನಂತರ ತಮಿಳಿಗೆ ಹೋದ ರಜನಿಕಾಂತ್ ತಮಿಳಿಗನಾಗಲು ಹೇಗೆ ಸಾಧ್ಯ? ... ನೀವೆ ಹೇಳಿ ....

ಅದಕ್ಕೆ ಹೇಳಿದ್ದು ..... ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ಅಂಥ ....

ಜೈ ಕರ್ನಾಟಕ ...... ಸಿರಿಗನ್ನಡಮ್ ಗೆಲ್ಗೆ .....

ನಿಮ್ಮ ಪ್ರೀತಿಯ ...
- ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

ನಾನು ಐಟಿ  ಕನ್ನಡಿಗರ ಹೋರಾಟದಲ್ಲಿ ...
‹ ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ? ಚಿಬ್ಲು , ಮುಗ್ಲು ..... ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 816 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 5, 2007 - 3:00pm — ಸಂಗನಗೌಡ

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

ಸಂಗನಗೌಡ's picture

ಬಿಡ್ರಿ ರೀ.. ರಜನಿಕಾಂತ್ ಕನ್ನಡಿಗ ಆದ್ರೆ ಎಸ್ಟು, ತಮಿಳಿಗ ಆದ್ರೆ ಎಸ್ಟು.. ಅವ್ನಿಂದೇನ್ ಬಳಕೆ ಕನ್ನಡಕ್ಕೆ?? ರೀ ಒಂದ್ ಮಾತ್ ಹೇಳ್ತಿನಿ ಕೇಳಿ, ದೂರದ ಪಂಜಾಬಿಂದ ಬಂದಿಂದ್ರೂ ಕನ್ನಡದ ಯಾವುದೇ ಹಾಡು, ಬರಹ, ಹೊತ್ತಗೆ ಬಿಡುಗಡೆ ಸಮಾರಂಬಗಳಲ್ಲಿ ಕಾಣಿಸ್ಕೊತಾರಲ್ಲಾ, ಆ ಪಂಜಾಬಿ ತಾತ (ಅವರ ಹೆಸರು ಗೊತ್ತಾಗ್ತಿಲ್ಲಾ..) ಅವ್ರು ಕನ್ರಿ ಕನ್ನಡಿಗಾ .. ಹರುಕು ಮುರುಕು ಕನ್ನಡ ಮಾತಾಡ್ಕೊಂಡಿದ್ರು, ಕನ್ನಡಿಗರ ಬಗ್ಗೆ ಗೌರವ, ಕನ್ನಡಿಗನಾಗಿ ಇಲ್ಲಿ ಹೊಂದಿಕೊಳ್ಳಲು ಹೆಣಗ್ತಿರ್ತಾರಲ್ಲಾ, ಅವ್ರು ಕಣ್ರಿ ಕನ್ನಡಿಗರು .. ಕನ್ನಡಿಗರಿಗೂ, ತಮಿಳರಿಗೂ ಜಗಳ ಆದ್ರೆ ನಿಮ್ ರಜನಿಕಾಂತ್ ಬರ್ತಾನಾ? .. ಹೇಳಿ .. ಬರಲ್ಲಾ ..':) .. ಯಾಕಂದ್ರೆ, ಬಂದ್ರೆ ತಮಿಳರು ಸುಮ್ನಿರ್ತಾರಾ? ರಜನಿಕಾಂತ್ ಅಂತೆ, ಕನ್ನಡಿಗ ಅಂತೆ....

  • Login or register to post comments
  • link
  • Email this ಪ್ರತಿಕ್ರಿಯೆ
July 5, 2007 - 3:35pm — Khavi

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

Khavi's picture

ಇನ್ನೊಂದು ವಿಷಯ.. ರಜನಿಕಾಂತ ಮೂಲತಃ ಮಹಾರಾಷ್ಟ್ರದವನಂತೆ... ನನಗ್ಯಾರೋ ಹೇಳಿದ್ದು ನೆನಪು...

  • Login or register to post comments
  • link
  • Email this ಪ್ರತಿಕ್ರಿಯೆ
July 5, 2007 - 3:50pm — ವೈಭವ

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

ವೈಭವ's picture

ಅವರ ಹೆಸರು ಚಿರಂಜೀವಿ ಸಿಂಗ್

  • Login or register to post comments
  • link
  • Email this ಪ್ರತಿಕ್ರಿಯೆ
July 5, 2007 - 3:51pm — ವೈಭವ

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

ವೈಭವ's picture

ಅವರ ಹೆಸರು ಚಿರಂಜೀವಿ ಸಿಂಗ್

  • Login or register to post comments
  • link
  • Email this ಪ್ರತಿಕ್ರಿಯೆ
July 5, 2007 - 5:26pm — muralihr

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

muralihr's picture

ಹೌದು ಅವರು ತು೦ಬಾ ಕ್ರಿಯಾಶೀಲ ವ್ಯಕ್ತಿ ! ಮತ್ತೊಬ್ಬರು ಅಜಯ್ ಕುಮಾರ್‍ ಸಿ೦ಗ್ IPS ಅವರು ಅಷ್ಟೆ ಕನ್ನಡ ಕಾವ್ಯ ದಲ್ಲಿ ತು೦ಬಾ ಆಸಕ್ತಿ ಯುಳ್ಳವರು.

  • Login or register to post comments
  • link
  • Email this ಪ್ರತಿಕ್ರಿಯೆ
July 6, 2007 - 12:50am — girishwill

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

girishwill's picture

ನಿಜ ಕಣ್ರೀ ...... ರಜನಿಕಾಂತ್ ಕನ್ನಡದ ಬಗ್ಗೆ ಬಹಿರಂಗವಾಗಿ ಅಭಿಮಾನ ತೋರಿಸಿದ್ರೆ ತಮಿಳಿಗರು ಅವರ ಬಗ್ಗೆ ಅಭಿಮಾನ ಕಳ್ಕೋತಾರೆ ..... ರಜನಿ ಒಬ್ಬ ಬುದ್ದಿವಂತ ಕನ್ನಡಿಗ ..... ನಮ್ಮ ಊರಿನಲ್ಲಿ ಹುಟ್ಟಿ, ಬೆಳೆದು ಅಲ್ಲಿ ಭರ್ಜರಿಯಾಗಿ ಮೆರೀತಿದ್ದಾರೆ .... ಅದು ಕಣ್ರೀ ಜಾಣ್ಮೆ .... ಅವರು ಕನ್ನಡ ಚಲನಚಿತ್ರಗಳನ್ನು ನೋಡ್ತಾನೆ ಇರ್ತಾರೆ ... ಬೆಂಗಳೂರಲ್ಲಿ ಶೂಟಿಂಗ್ ಮಾಡ್ತಾನೆ ಇರ್ತಾರೆ .... ಆಗಾಗ ಕರುನಾಡಿಗೆ ಬರ್ತಾನೆ ಇರ್ತಾರೆ ... ಅದೇ ಕನ್ನಡ ಅಭಿಮಾನ .....

ನಿರ್ದೇಶಕ ಪ್ರೇಮ್ ರವರ ರಜನಿಕಾಂತ್ ಅಭಿನಯಿಸಲಿರುವ ಕನ್ನಡ ಚಲನಚಿತ್ರ ನೋಡೋ ಆಸೆ .....

ಚಿರಂಜೀವಿ ಸಿಂಗ್ ಬಗ್ಗೆ ಕೇಳಿ ಖುಷಿಯಾಯ್ತು ಕಣ್ರೀ ....

ನಿಮ್ಮ ಪ್ರೀತಿಯ ಕನ್ನಡಿಗ
-ಗಿರೀಶ ಮಲ್ಲೇನಹಳ್ಳಿ ಚನ್ನಕೇಶವ (ಮಚಗಿ)

  • Login or register to post comments
  • link
  • Email this ಪ್ರತಿಕ್ರಿಯೆ
July 5, 2007 - 6:24pm — mahesha

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

mahesha's picture

ಬೆಂಗಳೂರಾಗೆ ನಡೆಯೋಸ್ಟು ಕನ್ನಡ ಚಟುವಟಿಕೆ ಯಾವ ಊರಲ್ಲೂ ನಡೆಯಲ್ಲ. ಆದರೆ ಕನ್ನಡ ಮಾತಾಡೋರು ಕಮ್ಮಿ.

ಬೆಂಗಳೂರಾಗೆ ಎಸ್ಟು ಕನ್ನಡ ಆಟಗಳು, ಹಾಡು-ಕುಣಿತಗಳು ನಡೇತಾನೇ ಇರ್ತಾವೆ.

  • Login or register to post comments
  • link
  • Email this ಪ್ರತಿಕ್ರಿಯೆ
July 8, 2007 - 12:19pm — uniquesupri

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

uniquesupri's picture

ನಿಮ್ಮ ಆಶಯವನ್ನು ನಾನು ಬೆಂಬಲಿಸುತ್ತೇನೆ. ಆದರೆ ನನ್ನದೊಂದು ವಿನಂತಿಯಿದೆ. ನಾವು ಹೇಗೆ ಕರ್ನಾಟಕದ ಹಿನ್ನೆಲೆಯಿರುವ ರಜನೀಕಾಂತ್ ತಮಿಳುನಾಡಿನ ಜನರ ಅಭಿಮಾನದಿಂದಾಗಿ ಸೂಪರ್ ಸ್ಟಾರ್ ಆಗಿ, ತಮಿಳುನಾಡಿನ ಜನರ ಅನ್ನದ ಋಣದ ಮೇಲೆ ಬೆಳೆದುನಿಂತರೂ ಕರ್ನಾಟಕದ ಬಗ್ಗೆ ಒಲುಮೆ ಇಟ್ಟುಕೊಳ್ಳಬೇಕು. ಕನ್ನಡವನ್ನು ತಮಿಳಿಗಿಂತ ಹೆಚ್ಚಾಗಿ ಪ್ರೀತಿಸಬೇಕು, ಕನ್ನಡಿಗರು ಹಾಗೂ ತಮಿಳರ ನಡುವೆ ವಿರಸವಾದಾಗ ಕನ್ನಡಿಗರಿಗೆ ಬೆಂಬಲವಾಗಿ ನಿಲ್ಲಬೇಕು ಅಂತ ಭಾವಿಸುತ್ತೇವೆಯೋ ಹಾಗೆಯೇ ತಮಿಳರು ಭಾವಿಸುವುದರಲ್ಲಿ ತಪ್ಪೇನಿದೆ?
ಕರ್ನಾಟಕದಿಂದ ಹೊರರಾಜ್ಯಕ್ಕೆ ಹೋದ ಒಬ್ಬ ವ್ಯಕ್ತಿ ಅಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲವಂತೆ, ಕನ್ನಡದ ಸಿನೆಮಾಗಳನ್ನೇ ನೋಡುತ್ತಾನಂತೆ, ಕನ್ನಡದ ಪಕ್ಷವಹಿಸುತ್ತಾನಂತೆ ಅಂದರೆ ಅದು ನಮಗೆ ಭಾಷಾಭಿಮಾನದ ಆದರ್ಶ ವ್ಯಕ್ತಿತ್ವದ ಉದಾಹರಣೆಯಾಗಿ ಕಾಣುತ್ತದೆ. ಅದೇ ಕೆಲಸವನ್ನು ಒಬ್ಬ ತಮಿಳು ಭಾಷೆಯವ, ತೆಲುಗ ಮಾಡಿದರೆ ಅದು ರಾಜ್ಯದ್ರೋಹವಾಗುತ್ತದೆ, ಸ್ವಾರ್ಥವಾಗಿ, ಭಾಷಾಂಧತೆಯಾಗು ಕಾಣುತ್ತದೆ. ಇದು ಏಕೆ ಹೀಗೆ?
ಅವರೆಲ್ಲರೂ ಅನ್ನ ಹುಡುಕಿಕೊಂಡು ನಮ್ಮ ನಾಡಿಗೆ ಬಂದವರು, ಯಾರೂ ಭಾಷಾಂಧತೆಯನ್ನು ಬೆಳೆಸಲು ಬಂದವರಲ್ಲ. ಅವರಿಗೆ ತಮ್ಮ ನಾಡುನುಡಿಯ ಬಗೆಗಿನ ಕಾಳಜಿ ಕಳಕಳಿಯನ್ನು ನಾವು ಮೆಚ್ಚಿಕೊಳ್ಳಬೇಕು. ಹಾಗೆಯೇ ನಮ್ಮ ನಾಡಿನಲ್ಲಿನ ಒಳ್ಳೆಯ ಅಂಶಗಳನ್ನು ಮೆಚ್ಚುವಂತೆ ಅವರನ್ನು ನಾವು ಪ್ರೋತ್ಸಾಹಿಸಬೇಕು. ಅವರ ಮನಸ್ಸನ್ನು ಗೆಲ್ಲುವಂತೆ ಕನ್ನಡಿಗರು ವರ್ತಿಸಬೇಕು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com

  • Login or register to post comments
  • link
  • Email this ಪ್ರತಿಕ್ರಿಯೆ
July 8, 2007 - 6:50pm — ವೈಭವ

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

ವೈಭವ's picture

ಸುಪ್ರಿ,

".... ಯಾರೂ ಭಾಷಾಂಧತೆಯನ್ನು ಬೆಳೆಸಲು ಬಂದವರಲ್ಲ..."

ಇದು ಸರಿಯಲ್ಲ. ನಮ್ಮ ನೆಲದಲ್ಲಿ ನಮಗಾಗುತ್ತಿರುವ ನೋವುಗಳಿಗೆ ಇಲ್ಲೊಮ್ಮೆ ಎಡತಾಗಿ. ನಿಮಗೆ ಗೊತ್ತಾಗುತ್ತದೆ.
http://enguru.blogspot.com/

".....ಕನ್ನಡದ ಪಕ್ಷವಹಿಸುತ್ತಾನಂತೆ ಅಂದರೆ ಅದು ನಮಗೆ ಭಾಷಾಭಿಮಾನದ ಆದರ್ಶ ವ್ಯಕ್ತಿತ್ವದ ಉದಾಹರಣೆಯಾಗಿ ಕಾಣುತ್ತದೆ. ಅದೇ ಕೆಲಸವನ್ನು ಒಬ್ಬ ತಮಿಳು ಭಾಷೆಯವ, ತೆಲುಗ ಮಾಡಿದರೆ ಅದು ರಾಜ್ಯದ್ರೋಹವಾಗುತ್ತದೆ, ಸ್ವಾರ್ಥವಾಗಿ, ಭಾಷಾಂಧತೆಯಾಗು ಕಾಣುತ್ತದೆ. ಇದು ಏಕೆ ಹೀಗೆ...."

ಯಾಕಂದ್ರೆ ಇದು ಕನ್ನಡ ನಾಡು. ಕನ್ನಡಕ್ಕೆ ಮುಡಿಪಾಗಿರುವ ನೆಲ.. ನಾವೇನು ಆಂದ್ರದಲೋ, ಮದ್ರಾಸಲ್ಲೊ ಹೋಗಿ ಮಾತಾಡ್ತ ಇಲ್ವಲ್ಲ
ನಮ್ಮ ನೆಲದಲ್ಲಿ ನಮ್ಮ ನುಡಿಗೆ ಮನ್ನಣೆ/ಮೇಲ್ಮೆ ಸಿಗಬೇಕನ್ನವುದರಲ್ಲಿ ತಪ್ಪೇನು?

  • Login or register to post comments
  • link
  • Email this ಪ್ರತಿಕ್ರಿಯೆ
December 16, 2007 - 9:34pm — chiramshi

ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

chiramshi's picture

ರ್ರೀ... ರಜನಿಕಾಂತ ಮಧ್ಯ ವಹಿಸಿದ್ರೆ ಕಾವೇರಿ ಗಲಾಟೆ ಯಾವತ್ತು ಸರಿ ಹೊಗಲ್ಲ ಕಂಡ್ರೀ!!ಇನ್ನು ಗಲಾಟೇ
ಹೆಚ್ಚಾಗತ್ತೆ. ಬರೆದು ಇಟ್ಕೋಳ್ಳಿ. ನಾನು ಮಂಡ್ಯದವನು. ಅಲ್ಲಿನ ನಿಜವಾದ ಸಮಸ್ಯೇ ಏನು ಅಂತ ನನ್ಗ್ಗೋತ್ತು ಯಾರೋ ಬಂದ ಹೇಳಿದ್ರು ಅಂತ ಕಾವೇರೀ ನೀರ ಬಿಡ್ತಾರಾ?? ನಾನು ಇಷ್ಟು ದೇಶ ಸುತ್ತಿದ್ದಿನಿ. ಬಹಳ ಜನ ಕನ್ನಡಿಗರನ್ನ ಭೇಟಿ ಮಾಡಿದ್ದಿನಿ, ನಾನು ಕನ್ನಡಿಗ ಅಂತ ಹೆಮ್ಮೆಯಿಂದ ಹೇಳ್ಕೋಳ್ಳೋರ ತುಂಬಾ ಕಮ್ಮಿ. ಅದೇ ಪ್ರತಿ ತಮಿಳ ತಾನು ತಮಿಳಿಗ ಅಂತ ಹೆಮ್ಮೆಯಿಂದ ಹೇಳ್ಕೋಳ್ತಾತೆ. ಅಷ್ಟೆ ವ್ಯತ್ಯಾಸ!!! ನಮ್ಮ ಸ್ವಾಭಿಮಾನ ಸ್ವಲ್ಪ ಹೆಚ್ಚಾಗ್ಬೇಕು.......

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಗಮಗಿಸುತ್ತಿರುವ ಕನ್ನಡ ಚಿತ್ರರ್‍ಅಂಗ .....
  • ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಹೊರಬಿದ್ದಿದೆ
  • ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"
  • ತಪ್ಪು ಯಾರದ್ದು?
  • ಆಟೋ ರಿಕ್ಷಾ ಮೇಲೆ ಕಂಡದ್ದು .....
Syndicate content

ಲೇಖಕರು

girishwill's picture

ಪೂರ್ಣ ಹೆಸರು
ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

ಪರಿಚಯ

ಕನ್ನಡ ... ಕರ್ನಾಟಕಕ್ಕೆ ನಾನು ಚಿರಋಣಿ ..... ನಾನೊಬ್ಬ ಮುದ್ದಿನ ಕನ್ನಡಿಗ ಕಣ್ರೀ .....

ಇಂಟೆಲ್, ಆಕ್ಸೆಂಚರ್, ಸತ್ಯಮ್ ಕಂಪನಿಯಲ್ಲಿ ನೀವು ನನ್ನನ್ನು ನೋಡಿರಲೂಬಹುದು ...... ನೋಡಿದ್ರೆ ನನಗೆ ತಿಳಿಸಿ. http://www.flickr.com/photos/7556498@N02/

"ಕನ್ನಡ ನಾಡಿನ ಮಕ್ಕಳು ನಾವು ಕನ್ನಡ ಗೀತೆಯ ಹಾಡುವೆವು
ಎಲ್ಲೇ ಇರಲಿ ಹೇಗೆ ಇರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡದಲೇ ಮಾತಾಡುವವು ಕನ್ನಡದಲೇ ಮಾತಾಡುವವು....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator