ಹಸೀನಾ ಮತ್ತು ಪಹೇಲಿ
ಪಹೇಲಿ (ಅಮೋಲ್ ಪಾಲೇಕರ್ ನಿರ್ದೇಶನದ, ರಾಣಿ ಮೂಖರ್ಜಿ ಮತ್ತು ಶಾರುಖ್ ಖಾನ್ ನಟನೆಯ ಚಿತ್ರ) ಆಸ್ಕರ್ ಗೆ ಆಯ್ಕೆಯಾಗಿದೆ. ನಮ್ಮ ಕರ್ಣಾಟಕದಿಂದ ಗಿರೀಶ ಕಾಸರವಳ್ಳಿಯವರ "ಹಸೀನಾ" ಚಿತ್ರವನ್ನು ಈ ಆಯ್ಕೆಗೆ ಕಳಿಸಲಾಗಿತ್ತು. ಆದರೆ ಪಹೇಲಿಯ ಆಯ್ಕೆ ಆಗಿದೆ.
ನಾನು ಎರಡೂ ಚಿತ್ರಗಳನ್ನು ನೋಡಿಲ್ಲ. ಆದರೆ ಒಂದು ಪ್ರಶ್ನೆ. ಹಸೀನಾ ಒಳ್ಳೆಯ ಚಿತ್ರವೋ ಅಥವಾ ಪಹೇಲಿಯೋ ? ಎರಡು ಭಿನ್ನ ರೀತಿಯ ಚಿತ್ರಗಳನ್ನು ಹೋಲಿಸುವುದು ಅಷ್ಟೊಂದು ಸರಿಯಲ್ಲ. ಆದರೂ ಸಂಪದದ ಸದಸ್ಯರನ್ನು ಕೇಳಲೇಬೇಕಿತ್ತು. ದುರದೃಷ್ಟವಶಾತ್ ನಾನು ಈ ಎರಡೂ ಚಿತ್ರಗಳನ್ನು ನೋಡಿಲ್ಲ. ಹಾಗೆಯೇ ಕುತೂಹಲವಷ್ಟೆ. ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಆಸ್ಕರ್ ಗೆ ಚೆನ್ನಾಗಿರುತ್ತಿತ್ತು ಅನ್ನುವುದೇ ನನ್ನ ಪ್ರಶ್ನೆ.
ಯಾರಾದರೂ ಈ ಎರಡೂ ಚಿತ್ರಗಳನ್ನು ನೋಡಿದ್ದರೆ ದಯವಿಟ್ಟು ಉತ್ತರಿಸಿರಿ.
ಧನ್ಯವಾದಗಳು.

- Login or register to post comments
- 950 hits
- Email this forum




RSS:
ಪಹೇಲಿ vs ಹಸೀನ
'ಪಹೇಲಿ' ಚಿತ್ರ ಆಯ್ಕೆಯಾದದ್ದು ಸಹಜವೇ. ಅಮೇರಿಕನ್ನರ ಮನವೊಲಿಸುವಂತಹ ಚಿತ್ರ ಈ ಬಾರಿ ಯಾವುದಾದರೂ ಆಗಿದ್ದರೆ ಅದು 'ಪಹೇಲಿ'ಯೇ ಆಗಿರಬೇಕು. ಒಳ್ಳೆಯ ಬಜೆಟ್, ಸ್ಕ್ರೀನ್ ಪ್ಲೇ, ಹಾಗೂ ಬಹಳ ಒಳ್ಳೆಯ ನಿರ್ದೇಶನವಿರುವುದು, ಅದಕ್ಕೆ. (ಬರಿಯ ಕಲಾತ್ಮಕ ಚಿತ್ರವಾದ ಮಾತ್ರಕ್ಕೆ ಆಸ್ಕರ್ ಲಭಿಸೋದಿಲ್ಲ - ಅಮೇರಿಕನ್ನರಿಗೆ ಚಿತ್ರ ಹಿಡಿಸಬೇಕು, ಅಲ್ಲದೆ ಆ ಚಿತ್ರಕ್ಕೆ ಕ್ಯಾಂಪೇಯ್ನ್ ಮಾಡುವ ಹಣಕಾಸುಳ್ಳ ದಿಗ್ಗಜರು ಬೇಕು)
ಹಸೀನಾ ನಾನೂ ವೀಕ್ಷಿಸಿಲ್ಲ, ಆದ್ದರಿಂದ ಆ ಚಿತ್ರ ಹೇಗಿದೆಯೋ ನಾನೂ ಹೇಳಲಾರೆ.
--
"ಹೊಸ ಚಿಗುರು, ಹಳೆ ಬೇರು"
ಹಸೀನಾ vs ಪಹೇಲಿ
hpn, ಒಂದಂತೂ ನಿಜ. ಅಲ್ಲಿ ಕ್ಯಾಂಪೇಯ್ನ್ ಮಾಡಕ್ಕೆ ದುಡ್ಡು ಬೇಕು, ಅದಕ್ಕೆ ಪಹೇಲಿ ಸರಿ ಹೋಗುತ್ತೆ.
ನಾನು ಎರಡೂ ಚಿತ್ರಗಳ್ನೂ ನೋಡಿದಿನಿ...ಹಸೀನಾ ತುಂಬ ನೈಜವಾಗಿದೆ. ಪಹೇಲಿಯಲ್ಲಿ ಕತೆ ತುಂಬ ಕಾಲ್ಪನಿಕ. ಅವ್ರು ಹೇಳಿರೋ ಹಾಗೆ ಜನಪದ ಕತೆ ತರಹನೇ. ಅದೇ ತರಹ ಕತೆ ಇರೋ 'ನಾಗಮಂಡಲ' ತುಂಬ ಚೆನ್ನಾಗಿದೆ. ಪಹೇಲಿ ಇದರ ಮುಂದೆ ನಿಲ್ಲೋಲ್ಲ. ಖರ್ಚು ಮಾಡಿರೋದ್ ಬಿಟ್ರೆ ಅದ್ರಲ್ಲಿ ಏನೇನೂ ಇಲ್ಲ. ಅಮೇರಿಕನ್ನರು ಬಿಡಿ ಅವ್ರಿಷ್ಟ ಬಂದಂಗೆ ಕೊಡೋದು. ಆಸ್ಕರ್ ಕತೇನೂ ಅಷ್ಟೆ. ನನ್ನ ಕೇಳಿದ್ರೆ ಹಸೀನಾ ತುಂಬ ಚೆನ್ನಾಗಿದೆ ಪಹೇಲಿ ಮುಂದೆ.
ಯಾವ್ದೋ ಮ್ಯಾಗಝೀನ್ ಅಲ್ಲಿ ಓದಿದ್ದು:
"Solve this paheli: Paheli selected for oscar"
~~~~~~~~~~~~~~~
"ನಾನು ಕನ್ನಡದ ಕಂದ"
~~~~~~~~~~~~~~~
ನಾಗಮಂಡಲ
'ನಾಗಮಂಡಲ' ಹಳೆಯ ಚಿತ್ರ ಅಲ್ವ? ಈ ವರ್ಷ ಬಂದದ್ದೆ? (ನಾನೊಂದು 'ನಾಗಮಂಡಲ' ಚಿತ್ರ ನೋಡಿದ್ದೆ... ಟಿ ಎಸ್ ನಾಗಾಭರಣರವರದ್ದು - ಗಿರೀಶ್ ಕರ್ನಾಡ್ ಬರೆದ ನಾಟಕವನ್ನಾದರಿಸಿದ್ದು... ಈ ಪುಟ ನೋಡಿ - ಅದೇನಾ ನೀವು ಹೇಳ್ತಿರೋದು?)
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ನಾಗಮಂಡಲ
ಹೌದು. ಅದೇ ನಾಗಮಂಡಲ. ಪಹೇಲಿಯಲ್ಲೂ ಇದೇ ತರಹ ಕತೆ, ಸ್ವಲ್ಪ ಇಲ್ಲಾಜಿಕಲ್....
ನಾಗಮಂಡಲ ಅದ್ಭುತವಾಗಿದೆ ಹಂಗೆ ನೋಡಕ್ಕೆ ಹೋದ್ರೆ....ಆದ್ರೆ ಮಾರ್ಕೆಟಿಂಗ್ ಇಲ್ಲ ಸರಿಯಾಗಿ...
~~~~~~~~~~~~~~~
"ನಾನು ಕನ್ನಡದ ಕಂದ"
~~~~~~~~~~~~~~~
ರಂಗಶಂಕರದಲ್ಲಿ ಚಂದ್ರಶೇಕರ ಕಂಬಾರರು ಬರೆದಿರುವ 'ಸಿರಿ ಸಂಪಿಗೆ' ನಾಟಕ ನೋಡಿದೆ, ಅದು ಸಹ 'ನಾಗಮಂಡಲ'ದಂತಿತ್ತು
ಪಹೇಲಿ, ನಾಗಮಂಡಲ, ದುವಿಧಾ ...
ಗಿರೀಶ ಕಾರ್ನಾಡರ ನಾಗಮಂಡಲ ಹಾಗು ಕಂಬಾರರ ಸಿರಿಸಂಪಿಗೆ ನಾಟಕಗಳು ಕನ್ನಡ ಜಾನಪದ ಕಥೆಯನ್ನು ಆಧರಿಸಿದ್ದು. 1996ರಲ್ಲಿ ಕಾರ್ನಾಡರ ನಾಟಕ ಆಧರಿಸಿ ನಾಗಾಭರಣರು ಅದೇ ಹೆಸರಿನ ಚಿತ್ರ ಮಾಡಿದರು. ರಾಜಸ್ಥಾನದ ಖ್ಯಾತ ಲೇಖಕ ವಿಜಯ ದಾಂಡೇತ ಅಲ್ಲಿನ ಜಾನಪದ ಕಥೆಯನ್ನು ಆಧರಿಸಿ ದೊಹ್ರಿಜೂನ್ ಎಂಬ ಹೆಸರಿನ ನೀಳ್ಗತೆಯನ್ನು ಪ್ರಕಟಿಸಿದ್ದರು. ಮುಂದೆ ಉಲ್ಝನ್ ಹಾಗು ದುವಿಧಾ ಎಂಬ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಅದನ್ನು ಹಿಂದಿಗೆ ಅನುವಾದಿಸಲಾಯಿತು. 1973ರಲ್ಲಿ ಮಣಿ ಕೌಲ್ (ಹಿಂದಿಯ ಕಲಾತ್ಮಕ ಚಿತ್ರಗಳ ನಿರ್ದೇಶಕ) ದುವಿಧಾ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಿಸಿದರು. ಅಮೋಲ್ ಪಾಲೇಕರನ ಪಹೇಲಿ ಈ ಹಿಂದಿ ಕಥೆಯನ್ನು ಆಧರಿಸಿದ್ದು.