ಓ ಎಲ್ ಎನ್ ಅವರಿಗೆ ಅಭಿನಂದನೆಗೆಳು
ಸಂಪದದ ಸಕ್ರಿಯ ಸದಸ್ಯರಾಗಿರುವ ಓ ಎಲ್ ಎನ್ ಸ್ವಾಮಿ ಅವರನ್ನು ಕರ್ನಾಟಕ ಭಾಷಾಂತರ ಅಕಾದೆಮಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಿಗೋಣ,
ಪವನಜ

- Login or register to post comments
- 894 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸಂಪದದ ಸಕ್ರಿಯ ಸದಸ್ಯರಾಗಿರುವ ಓ ಎಲ್ ಎನ್ ಸ್ವಾಮಿ ಅವರನ್ನು ಕರ್ನಾಟಕ ಭಾಷಾಂತರ ಅಕಾದೆಮಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಿಗೋಣ,
ಪವನಜ




ಥ್ಯಾಂಕ್ಸ್
ಅಭಿನಂದನೆಗಳಿಗೆ ಧನ್ಯವಾದಗಳು. ಚಿತ್ರದುರ್ಗದಲ್ಲಿ ನಿನ್ನೆ ಇದ್ದ ಕಾರ್ಯಕ್ರಮ ಮುಗಿಸಿಕೊಂಡು ಇಂದು ಬೆಳಗಿನ ಜಾವ ಬೆಂಗಳೂರಿಗೆ ಬಂದು ಪೇಪರಿನಲ್ಲಿ ನಾನೂ ನೋಡಿದೆ. ಇದೊಂಥರಾ ಪವಾಡ ಅನ್ನಿಸಿ ಆಶ್ಚರ್ಯ ಪಟ್ಟೆ. ನಿಮ್ಮ ಅಭಿನಂದನೆಗಳು ನೋಡಿ ಮತ್ತೂ ಸಂತೋಷಪಟ್ಟೆ ಥ್ಯಾಂಕ್ಸ್.
ಅಭಿನಂದನೆ ಹೇಳುವುದರೊಂದಿಗೆ ಈ ಹೊಸ ಅಕಾಡೆಮಿ ಏನು ಮಾಡಬಹುದು ಎಂಬ ಬಗ್ಗೆ ದುಯವಿಟ್ಟು ಸಲಹೆ ನೀಡುತ್ತೀರಾ? ಉಪಯೋಗವಾಗುತ್ತದೆ.
ವಿಜ್ಞಾನ ತಂತ್ರಜ್ಞಾನ ಕಡೆಗಣಿಸಲಾಗಿದೆ
ಈ ಸದಸ್ಯರ ಪಟ್ಟಿಯಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯದ ಕ್ಷೇತ್ರದಿಂದ ಯಾರನ್ನೂ ನೇಮಕ ಮಾಡಲಾಗಿಲ್ಲ. ಇದೊಂದು ಬಹುದೊಡ್ಡ ಕೊರತೆ. ಈಗ ಬಹುಮುಖ್ಯವಾಗಿ ಬೇಕಾಗಿರುವುದು ಪ್ರಪಂಚದ ವಿವಿಧ ವಿಷಯ ಜ್ಞಾನವನ್ನು ಕನ್ನಡಕ್ಕೆ ಆಮದು ಮಾಡಿಕೊಳ್ಳುವುದು. ವಿಜ್ಞಾನ ತಂತ್ರಜ್ಞಾನ ಅತಿ ವೇಗದಲ್ಲಿ ಬೆಳೆಯುತ್ತಿದೆ. ಈ ಬಗ್ಗೆ ಇಂಗ್ಲೀಶಿನಲ್ಲಿ ವಿಪುಲವಾಗಿ ಲೇಖನಗಳು ಬರುತ್ತಿವೆ. ಇವುಗಳನ್ನು ಅಷ್ಟೇ ವೇಗದಲ್ಲಿ ಕನ್ನಡಕ್ಕೆ ತರಬೇಕಾಗಿದೆ. ನಗರಗಳಲ್ಲಿ ವಾಸಿಸುವ, ಇಂಗ್ಲೀಶಿನಲ್ಲಿ ಪರಿಣತರಾಗಿರುವ ಮಂದಿಗೆ ಈ ಅಗತ್ಯ ಕಣ್ಣಿಗೆ ಕಾಣಿಸುವುದೇ ಇಲ್ಲ. ನೀವು ಈ ಅಗತ್ಯವನ್ನು ತೋರಿಸಿಕೊಡಬಹುದು. ವಿಜ್ಞಾನ ತಂತ್ರಜ್ಞಾನ ಸಾಹಿತ್ಯವನ್ನು ಕನ್ನಡದಲ್ಲಿ ರಚಿಸಿರುವವರಲ್ಲಿ ಯಾರನ್ನಾದರೂ ಈ ಅಕಾದೆಮಿಗೆ ನೀವು co-opt ಮಾಡಬಹುದು.
ಸಾಹಿತ್ಯ ಕ್ಷೇತ್ರಕ್ಕೆ ಬಂದರೆ -ವಿಶ್ವದ, ಯಾಕೆ, ಭಾರತದ ಬಹುಮಂದಿಗೆ, ಕನ್ನಡದಲ್ಲಿ ಎಷ್ಟು ವಿಪುಲ ಸಾಹಿತ್ಯ ಇದೆ ಎಂಬ ಅರಿವೇ ಇಲ್ಲ. ಇದಕ್ಕಾಗಿ ಮಾಡಬೇಕಾಗಿರುವುದೇನೆಂದರೆ, ಕನ್ನಡದ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಅನುವಾದ ಮಾಡುವುದು ಮತ್ತು ಅವುಗಳನ್ನು ಅಂತರಜಾಲದಲ್ಲಿ ಸೇರಿಸುವುದು.
ಇನ್ನೇನಾದರೂ ನೆನಪಾದರೆ ಬರೆಯುತ್ತೇನೆ.
ಸಿಗೋಣ,
ಪವನಜ
-----------
Think globally, Act locally
ಅಭಿನಂದನೆಗಳು
ಅಭಿನಂದನೆಗಳು.
ಇನ್ನೊಂದು ಥ್ರೆಡ್ಡಿನಲ್ಲಿ ಬಹಳಷ್ಟು ಮಾತುಕತೆ ನಡೆಯುತ್ತಿರೋದ್ರಿಂದ ನಿಮ್ಮನ್ನು ಅಭಿನಂದಿಸಲು ಈ ಥ್ರೆಡ್ಡಿಗೆ ದೌಡಾಯಿಸಿದೆ.
ನಿನ್ನೆ ನಾನೂ ಚಿತ್ರದುರ್ಗದಲ್ಲೇ ಇದ್ದೆ. ಆದರೆ ಸ್ವಲ್ಪ ಹೊತ್ತು ಮಾತ್ರ
--
"ಹೊಸ ಚಿಗುರು, ಹಳೆ ಬೇರು"
ಅಭಿನಂದನೆ
ಸಂತೋಷದ ಸುದ್ದಿ.
ಸ್ವಾಮಿಯವರಿಗೆ ಅಭಿನಂದನೆಗಳು
ವಂದನೆಗಳೊಂದಿಗೆ
---
ತವಿಶ್ರೀನಿವಾಸ