ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
ಈ ನಡುವೆ ಬಹಳಷ್ಟು ಜನಗಳು ಕನ್ನಡ ಕನ್ನಡ ಎಂದುಕೊಂಡು ಅಂಗಡಿಗಳನ್ನೊಡೆಯೋದು, ಚಿತ್ರಮಂದಿರಗಳನ್ನ ಚೂರು ಮಾಡೋದು, ಪೇಪರುಗಳನ್ನ ಬೈಯೋದು ಇವೆಲ್ಲಾ ಕಸುಬು ಮಾಡಿಕೊಂಡಿರುವುದು ಗಮನಕ್ಕೆ ಬರದೇ ಇರೋದಿಲ್ಲ. ಕನ್ನಡ ಪ್ರೇಮೆ ಇದೇನಾ? ಕನ್ನಡ ತಾಯಿ ಹೀಗೆ ಮಚ್ಚು ದಿಣ್ಣೆ ಹಿಡಿದು ಜಗಳ ಕಾರುವವರು ತನ್ನ ಮಕ್ಕಳೆಂದು ಹೆಮ್ಮೆ ಪಡುವಳಾ?
ತಮಿಳರ ಬುದ್ಧಿ ಬಂದುಬಿಟ್ಟಿದೆಯಾ ನಮ್ಮ ಜನಕ್ಕೆ?
ಸಮಸ್ತ ಕನ್ನಡಿಗರು ಕನ್ನಡ ಪ್ರೇಮವನ್ನ ಇಷ್ಟಕ್ಕೇ ಸೀಮಿತಗೊಳಿಸಿಕೊಂಡಿರಬೇಕೆ? ಭಾಷೆ ಬೇರೊಬ್ಬರ ಮೇಲೆ ಹೇರುವ ದೌರ್ಜನ್ಯವಾಗಬೇಕೆ? ಅಥ್ವ ಭಾಷೆಯನ್ನ ಬೆಳೆಸೋ ಕಡೇನೂ ಗಮನ ಹರಿಸಬೇಕೆ?
ಕನ್ನಡ ಕುವರರು ಉತ್ತರಿಸಲೇಬೇಕು.
~ ಗಂಗಾಧರ

- Login or register to post comments
- 543 hits
- Email this forum





RSS:
ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
ಖಂಡಿತಾವಗ್ಯೂ ಅಲ್ಲಿಗೇ ಸೀಮಿತಗೊಳ್ಳಬಾರದು... ಅದಕ್ಕೆ ಸಾಂಸ್ಕೃತಿಕವಾದ ಹಾಗೂ ರಾಜಕೀಯ ಆಯಾಮವನ್ನು ಒದಗಿಸಬೇಕು. ಆದರೆ ತಮ್ಮದೇ ಆದ ರೀತಿಯಲ್ಲಿ ಭಾಷೆಯ ಬಗೆಗಿನ ಅಭಿಮಾನವನ್ನು ವ್ಯಕ್ತಪಡಿಸುವ ಕನ್ನಡಾಭಿಮಾನಿಗಳನ್ನು ಅಸಹ್ಯದಿಂದ ನೋಡುವುದು ಸಾಧುವಲ್ಲ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
"ತಮಿಳರ ಬುದ್ಧಿ ಬಂದುಬಿಟ್ಟಿದೆಯಾ ನಮ್ಮ ಜನಕ್ಕೆ?"
ತಮಿಳರು ತಮಿಳರು, ಕನ್ನಡದವರು ಕನ್ನಡದವರೇ!!
ತಮಿಳರ ಹಾಗೆ ನಮ್ಮ ನಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಆಗುತ್ತಾ?
ನೀವು ತಮಿಳರ ಒಂದು ಕಡೆಯನ್ನು ನೋಡಿದ್ದೀರಿ, ಇನ್ನೊಂದು ನೋಡಿಲ್ಲ.
ಮಲೇಸಿಯ, ಸಿಂಗಾಪುರ, ತೆಂಕಣಾಪ್ರಿಕ, ಇನ್ನೂ ಮುಂತಾದೆಡೆ ತಮಿಳು National languageಗಳು. ಅದಕ್ಕೆ ತಮಿಳರಯ ಬಲು ದುಡಿಮೆ ಹಾಕಿದ್ದಾರೆ.
ಹಾಗೆ ನಮ್ಮ ದೇಸದಲ್ಲಿ ತಮಿಳು ನಾಡಲ್ಲಿ ಹಿಂದಿ ಇಲ್ಲ. ಮಣಿಪುರದಲ್ಲೂ ಇಲ್ಲ. ಆದರೆ ಮಿಕ್ಕೆಲ್ಲೆಡೆ ಅದು ಕಡ್ಡಾಯ. ಇದರಿಂದ ತಮಿಳಿಗೆ ನಮ್ಮ ದೇಸದಲ್ಲಿ ವಿಶೇಶ ಸ್ತಾನ!!
ಭಾರತ ದೇಸ ಮೊದಲು ಫೋಷಿಸಿದ "ಶಾಸ್ತ್ರೀಯ ಭಾಷೆ" ತಮಿಳು, ತರುವಾಯ ಸಂಸ್ಕೃತ
ತೆಂಕಣ ರೈಲ್ವೆ ಅಂದರೆ ತಮಿಳರು, ತಮಿಳರಿಗೆ ರೈಲ್ವೆಗೆ ತಮಿಳಲ್ಲಿ ಪರೀಕ್ಷೆ, ಕನ್ನಡಿಗರಿಗೆ ಹಿಂದಿ, ಇಂಗ್ಲೀಶಲ್ಲಂತೆ!
ತಮಿಳು ನಾಡನ್ನು ಆಳುವ ಜಯಲಲಿತಾ ಇರಲಿ, ಕರುಣಾನಿಧಿ ಇರಲಿ, ಅವರ ರಾಜ್ಯ ಬೇಕಾದಷ್ಟು ಅನುಕೂಲಗಳನ್ನು ಕೇಂದ್ರದಿಂದ ಗಿಟ್ಟಿಸುವಲ್ಲಿ ಯಾವಾಗಲೂ ಎತ್ತಿದ ಕೈ!!
ಕನ್ನಡಿಗರು ಏನು ಅಂತ ಮೊನ್ನೆ KRS ಇಂದ ಕರುಣಾನಿಧಿ ಬಂದು ನೀರು ಬಿಡಿಸಿಕೊಂಡು ಹೋದಾಗಲೇ ಗೊತ್ತಗುತ್ತೆ.
ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
ಅಯ್ಯೊ ತಮಿಳರ ಹಾಗೆ ಇದ್ದರೆ ಕನ್ನಡ, ಕನ್ನಡಿಗರ ಸ್ತಿತಿ ಇನ್ನು ಚನ್ನಾಗಿರುತ್ತಿತ್ತು.
ಈಟೆಲ್ಲ ಬರೆದಿರುವ ನೀವು ಕನ್ನಡದ, ಕನ್ನಡಿಗರ ಸ್ತಿತಿ ಬಗ್ಗೆ ಮೊದಲು ಉಂಕಿಸಿ. ಚೆನ್ನಾಗಿದಿಯಾ? ನಮ್ಮ ನೆಲದಲ್ಲೇ ನಾವು ಗುಲಾಮರಾಗಿದ್ದೀವಿ
ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
ಕನ್ನಡಿಗರು ತಮಿಳರಂತ್ತಿದ್ದರೆ ಬಹಳ ಸಂತೋಶವಾಗುತ್ತಿತ್ತು. ಅದು ಆಗಲು ಇನ್ನು ೨೦-೨೫ ವರ್ಶಗಳಾಗಬಹುದು. ಒಂದು ಉದಾಹರಣೆಯನ್ನು ಕೊಡುತ್ತೀನಿ:
ತಮಿಳರು ಎಂದಿಗು ಅವರ ರಾಜ್ಯದಲ್ಲಿ ಅಥವ ಅವರು ಬಹುಸಂಖ್ಯಾತರಾಗಿರುವ ಸ್ಥಳದಲ್ಲಿ ತಮಿಳು ಬಿಟ್ಟು ಬೇರೆ ಬಶೆ ಮಾತಾಡುವುದಿಲ್ಲ, ಆದರೆ ನಮ್ಮ ಕನ್ನಡದವರು ಬೆಂಗಳೂರಿನಲ್ಲೆ ಹಿಂದಿ, ತೆಲಗು ತಮಿಳು ಮಾತಡುತ್ತಾರೆ
ಈ ಮಟ್ಟವನ್ನು, ಈಗಿನ ಅಂದರೆ ಭಾರತ ಸ್ವತಂತ್ರ್ಯ ಗೊಂಡಮೇಲೆ ತಮಿಳರು ಹೇಗೆ ಸಾದಿಸಿದರು ಅಂತ ತಿಳಿಯಲು, "ಇರುವರ್" ಎಂಬ ತಮಿಳು ಚಿತ್ರ ನೂಡಿ. ನಾನು ಕನ್ನಡ ಬಿಟ್ಟು ಬೇರೆ ಚಿತ್ರ ನೂಡುವುದು ಬಹಳ ಕಡಿಮೆ. ಆದರೆ ನಾವು ತಮಿಳರ ತರಹ ರಾಷ್ಟ್ರ ಮಟ್ಟದಲ್ಲಿ ಬೇಳೆಯಬೇಕಾದರೆ, ೫೦-೭೦ ರ ದಶಕದಲ್ಲಿ ಅಲ್ಲಿನ ಜನನಾಯಕರು ಹೇಗೆ ಹಿಂದಿ ವಿರುದ್ದ ಹೂರಾಡಿದರೂ, ಅಂತಃ ನಾಯಕರು ಕನ್ನಡಕ್ಕೆ ಬೇಕಾಗಿದ್ದಾರೆ. ಅದನ್ನು ಈ ಚಿತ್ರದಲ್ಲಿ ಚೆನ್ನಾಗಿ ತೂರಿಸಿದ್ದಾರೆ.
ನೀವು ಹೇಳಿದ ಹಾಗೆ ಕನ್ನಡಿಗರು ತಮಿಳರಂತೆ ಬಾಷಾಭಿ ಮಾನ ಬೇಳಸಿಕೊಳ್ಳಲಿ ಎಂದು ಹಾರಿಸುತ್ತೀನಿ.
ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
ನಾವು ಹಿಗಂದುಕೊಂಡೇ ನಮಗೀಗತಿ ಬಂದಿರೋದು. ಕನ್ನಡ ಯೆಲ್ಲಿ ಚೆನ್ನಾಗಿ ಇದೆ ಹೇಳಿ. ರಾಜಧಾನಿಯಲ್ಲಿ ಅದರ ಅವಸ್ಥೆ ನೋಡಿದರೆ ಅರ್ಥ ಆಗುತ್ತೆ. ಒಮ್ಮೆ ನಮ್ಮ ಮಂಗಳೂರು ರೈಲ್ವೇಸ್ಟೇಷನ್ಗೆ ಬನ್ನಿ, ಅದು ಕೇರಳದಲ್ಲಿ ಇದ್ದಿವೋ ಅನುಸುತ್ತೆ. ಅಲ್ಲಿ ನೌಕರರ ಮುಷ್ಕರ ನಡೆದರೆ ಅವರ ನಾಯಕರು ಬಾಷಣ ಮಾಡೊದು ಮಲಯಾಳಂ ನಲ್ಲಿ. ಅದು ಯಾಕೆ ಬೆಂಗಳೋರು, ಮೈಸೂರು, ಮಂಡ್ಯ, ಮೈಸೂರು ಕಡೆಯಿಂದ ನಮ್ಮಲ್ಲಿ ಓದಲು ಬರುವ ಹುಡುಗ/ಗಿರು ಮತಾಡೊದು ಇಂಗ್ಲಿಷ್!. ಇವರಿಗೆ ಕನ್ನಡ ಅಭಿಮಾನ ಬರಿಸೊದಕೆಅಲ್ಲದಿದ್ರು ಸ್ವಲ್ಪ ಕನ್ನಡದ ಭಗ್ಗೆ ಭಯ ಬಕ್ತಿ ಬರಲಿ..