ಕಲಾಂ --ಸಲಾಂ
ಕಲಾಂ ಅವರು ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸುವ ದಿನ ಸಮೀಪಿಸಿದೆ.
ಮಕ್ಕಳ ಮೆಚ್ಚಿನ ಚಾಚಾ ಆದ ಕಲಾಂ ಅವರು ತಮ್ಮ ಸ್ಥಾನವನ್ನು ಸದುಪಯೋಗ ಪಡಿಸಿಕೊಂಡ ಬಗೆಯನ್ನು ಕಳೆದ ಐದು ವರ್ಷಗಳಲ್ಲಿ ನೋಡಿದ್ದೇವೆ. ದೇಶವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿ ಮಾಡುವ ಕನಸನ್ನು ಆದಷ್ಟು ಬೇಗನೆ ನಿಜ ಮಾಡುವುದು ಹೇಗೆ,ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಸದಾ ಚಿಂತಿಸುವುದು ಮಾತ್ರವಲ್ಲದೆ, ಅದನ್ನು ಜನರೊಡನೆ ಹಂಚಿಕೊಳ್ಳುವ ರಾಷ್ಟ್ರಪತಿಯಾಗಿ ಕಲಾಂ ನೆನಪಿನಲ್ಲಿ ಉಳಿಯುತ್ತಾರೆ. ಮುಂದೆ ಅವರೇನು ಮಾಡಲಿದ್ದಾರೆ, ನಾವೇನು ಮಾಡಬೇಕು, ಯೋಚಿಸಿ.

- Login or register to post comments
- 469 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕಲಾಂ --ಸಲಾಂ
ಕಳೆದ ವಾರ ನಮ್ಮ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಿತಷ್ಟೇ. ಆದರೆ ನಮ್ಮ ಪ್ರಜಾವಾಣಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿತ್ತು ನೋಡಿ. ಇವುಗಳು ಪ್ರಜಾವಾಣಿಯ ಮೊದಲ ಪುಟದ ಸುದ್ಧಿಯ ತುಣುಕುಗಳು.
ಜುಲೈ ೧೯
ವಿಮಾನ ದುರಂತ : ೨೦೦ ಸಾವು
ಮುಂಬೈ ಕಟ್ಟಡ ಸುಸಿದು ೧೦ ಸಾವು
ಅಸ್ಸಾಂ ಮಾಜಿ ಸಚಿವರ ಮನೆಯಲ್ಲಿ ಶಸ್ತ್ರಾಸ್ತ್ರ ವಶ
ಮೂವರಿಗೆ ಗಲ್ಲು - ೧೯೯೩ರ ಮುಂಬೈ ಸರಣಿ ಸ್ಫೋಟಕ್ಕೆ ಕಾರಣರಾದವರಿವರು
ಗಾಯಗೊಂಡಿದ್ದ ಬಾಲಕಿ ಸಾವು
ವೆಂಕಟೇಶ್ ಹತ್ಯೆ ಯಾರಿಂದ
ಸರಳ ಹಿಂದೆ ಕರಾಳ ಬದುಕು...
ಇಂದು ರಾಷ್ಟ್ರಪತಿ ಆಯ್ಕೆಗೆ ಮತದಾನ - ಶಹಾಬುದ್ದಿನ್, ಶಿಬು ಸೇರಿದಂತೆ ಜೈಲಲ್ಲಿರುವವರಿಗೂ ಮತಾಧಿಕಾರ
ಜುಲೈ ೨೦
ಮುಂಬೈ ಕಟ್ಟಡ ಕುಸಿತ; ಸತ್ತವರ ಸಂಖ್ಯೆ ೨೬ಕ್ಕೆ
ತೃತೀಯ ರಂಗದಲ್ಲಿ ಒಡಕು
ಮುಂಬೈ : ಮತ್ತೆ ಮೂವರಿಗೆ ಮರಣ ದಂಡನೆ
ಹಣಕ್ಕೆ ನಕ್ಸಲರಿಂದ ಬೆದರಿಕೆ
ಪಾಪ ಪ್ರಜಾವಾಣಿಯವರಿಗೆ, ಆ ಎರಡು ದಿನವೂ ಕೂಡ ಡಾ||ಕಲಾಂ ಅವರು ನೆನಪೇ ಆಗಲಿಲ್ಲ ಅನ್ನಿಸುತ್ತೆ
:( ಅಂದು ಮೊದಲ ಪುಟದಲ್ಲಿ ಎಲ್ಲಿಯಾದರೂ ಕಲಾಂ ಅವರ ಫೋಟೋ ಆಗಲೀ ಅಥವಾ ಅವರಿಗೆ ನಂಟಾದ ಬರಹ ಇದ್ದಿದ್ದರೆ ಎಷ್ಟು ಚೆನ್ನಾಗಿರೋದಲ್ವೇ. ಅದು ಬಿಟ್ಟು ಅಲ್ಲಿ ಸ್ಫೋಟ, ಇಲ್ಲಿ ಸಾವು, ಅಲ್ಲಿ ದುರಂತ.
ಕಲಾಂ ಅವರೇ ಒಮ್ಮೆ ಏನೇ ಕೆಟ್ಟ ಸಮಾಚಾರವಿರಲಿ ಮೊದಲ ಪುಟದಲ್ಲಿ ಆನಂದವನ್ನು ಹುಟ್ಟಿಸುವಂತಹ ಸುದ್ಧಿಯಿರಲಿ ಎಂದಿದ್ದರು. ಅದೊಂದು ದಿನವಾದರೂ ಈ ಮಾತನ್ನು ಫಾಲೋ ಮಾಡಬಹುದಿತ್ತಲ್ಲವೇ ?
ಇಷ್ಟಕ್ಕೆ ನಿಲ್ಲದೆ, ಮುಂದಿನ ದಿನಗಳ ಮೊದಲ ಪುಟದ ಸುದ್ಧಿ ನೋಡಿ.
ಜುಲೈ ೨೧
ಮುಂಗಾರು.. ಚಿತ್ರಕ್ಕೆ ಪ್ರಶಸ್ತಿಗಳ ಸುರಿ ಮಳೆ.
ರಾಷ್ಟ್ರಪತಿ ಫಲಿತಾಂಶ ಇಂದು
ಸ್ಫೋಟದ ಸ್ಥಳದಲ್ಲಿ ಸಿಮ್ ಇರಲೇ ಇಲ್ಲ.
ಮಸೂದೆ ವಾಪಸಾಗಿಲ್ಲ.
ಭಾರಿ ಮಳೆಗೆ ಉದ್ಯಾನನಗರಿ ತಲ್ಲಣ.
ನಂದಿ ಹೋದ ಬಾಲಕಿ ಸಂಜನಾ ಬದುಕು!
ಜುಲೈ ೨೨
ಹೊಸ ಇತಿಹಾಸ
ಅಪನಂಬಿಕೆ ಹೋಗಲಾಡಿಸಿ
ಶೆಡ್ ಕುಸಿದು ಮೂವರ ಸಾವು
ಉ: ಕಲಾಂ --ಸಲಾಂ
ಪತ್ರಿಕೆ ಓದುವ ಕ್ರಿಯೆಯ ಬಗ್ಗೆ ಒ೦ದು ಪದ್ಯ
ಪೇಪರಾಆಆ, ಪೇಪರಾಆಆ, ಪೇಪರಾಆಆ
ಕೈಯಲ್ಲಿ ಹಿಡಿದರೆ ಸಾಕು ದಿನ ಪತ್ರಿಕೆ.
ಸುದ್ದಿ ಬುದ್ಧಿಯ ಬಿಡುವುದಿಲ್ಲಾ .
ಬುದ್ಧಿ ಸುದ್ಧಿಯ ಬಿಡುವುದಿಲ್ಲಾ .
ಬುದ್ಧಿ ಸುದ್ಧಿಯರೇನು ಗಣೇಶಗೆ ಹೆ೦ಡತಿಯರೂ ??
ಓದಿ ಓದಿ ನೀನ್ಯಾವ ಲೋಕವ ಗೆದ್ದಿ ??
ಬೂದಿಯಾಯ್ತು ನೀನು ಗಳಿಸಿದಾ ಸಿದ್ಧಿ.
ನಿನ್ನೆ ಸತ್ತವರ ಸುದ್ದಿ , ನಾಳೆ ಸಾಯುವವರು ಇ೦ದು ಓದುವರು.
ಇ೦ದು ಇಲ್ಲೇ ಬದುಕುವುದಾ ಮರೆತು
ಅ೦ದು ಅಲ್ಲೇನಾಯ್ತು ಎ೦ದು ತಲೆ ಕೆಡಿಸಿ ಕೊಳ್ಳುವವರು.
ಮು೦ದೆ ಅಳುವ ಕ೦ದನ ಮರೆತು ದೂರದಲ್ಲಿ ಸತ್ತ ವಗೆ ಮರುಗುವರು.
ಲೋಕವಾರ್ತೆಯ ತಿಳಿದು ಲೋಕ ಸತ್ಯವ ತಿಳಿದೆವೆನ್ನುವರು.
"ಪೇಪರಾಆಆ"..ಒ೦ದು ಕಿರುಚಿ ಬರುವನಲ್ಲಿ ಅನಕ್ಷರಸ್ಥ.
ಕ್.ಜಿ ಗೆ ಎರಡು ರೂಪಾಯಿ ಕೈಯಲ್ಲಿ ಇಟ್ಟು
ಒಯ್ದರೂ, ಅವನೊ೦ದಿಗೆ ಹೋಗಬಾರದೆ ವಿಷಯ ವಾಸನೆ ಸುಟ್ಟೂ ??
ಉ: ಕಲಾಂ --ಸಲಾಂ
ಯಪ್ಪ!! ಮುರುಳೀಈಈಈ ದೇವರು,
"ಅವನೊ೦ದಿಗೆ ಹೋಗಬಾರದೆ ವಿಷಯ ವಾಸನೆ ಸುಟ್ಟೂ ??"
ವಾಸನೆಯನ್ನು ಸುಡೋದು ಹೇಗೆ?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಲಾಂ --ಸಲಾಂ
http://prajavani.net/UserFiles/Image/Jul252007/CartoonLarge.jpg
ಪಿ.ಮಹಮ್ಮದ್ ವ್ಯಂಗ್ಯಚಿತ್ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಹೇಗಿದೆ?
*ಅಶೋಕ್
ಉ: ಕಲಾಂ --ಸಲಾಂ
ಮೊನ್ನೆ ಆದಿತ್ಯವಾರ NDTV, ರಾಮನಾಥ ಗೋಯೆಂಕಾ ನೆನಪಿಗಾಗಿ ನಡೆಸಿದ Debate ಅನ್ನು ಪ್ರಸಾರ ಮಾಡಿತ್ತು.
ಕಲಾಂ ಅವರೂ ಇದ್ದರು. ’Is Excellent Journalism Bad Business? ” - ಎಂಬ ಬಗ್ಗೆ ಚರ್ಚೆಗಳಾದುವು.
http://www.hindu.com/2007/07/17/stories/2007071760021100.htm