ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್ಎಂಟು ಹೇಳಿದ.
ಉ: ಪಂಚಭೂತಗಳು ಯಾವವು ?
ರೀ ಬೇತಾಳಯ್ಯ,
ಎದಕ್ಕೆ ಹಿಂಗೆ ಎರಡು ಮೂರು ಕ್ಲಾಸಿನ ಮಕ್ಕಳಿಗೆ ಕೇಳ್ದಂಗೆ, ಕೇಳ್ತಿದ್ದೀರಿ?
ಪಂಚಭೂತಗಳು = ಭೂಮಿರಾಪೋsನಲೋsನಿಲೋ ನಭ, ಪೃಧ್ವಿರಾಪಸ್ತೇಜಃ ವಾಯುರಾಕಾಶ, ಖಂ ವಾಯುರ್ಜ್ಯೋತಿರಾಪಃ ಪೃಥಿವೀ ( ವಿಶ್ವಸ್ಯ ಧಾರಿಣೀ
)
ಉರು ಹೊಡೆಯಕ್ಕೆ ಸಲೀಸು...
ಕನ್ನಡದಾಗಿ = ಮಣ್ಣೀರೆಲರ್ವೆಂಕಿವಾನು
( ಮಣ್ + ನೀರ್ + ಎಲರ್ + ಬೆಂಕಿ + ಬಾನು ) ಇವೇ ಐದು ಬೂತಗಳು ( ಐಬೂತಗಳು; ಐವತ್ತು ಹಾಗೆ )
ಉ: ಪಂಚಭೂತಗಳು ಯಾವವು ?
ಸುಮ್ನೆ ಕೇಳ್ತಾ ಇದ್ದಿನಿ
ಯಾಕೆ ಕೇಳಬಾರದ ??
-ನಿಮ್ಮ ಬೆಂಬಿಡದ ಬೇತಾಳ .....
ಉ: ಪಂಚಭೂತಗಳು ಯಾವವು ?
ಸುಮ್ನೆಯೋ ಸರಿ ಸರಿ..!!
ಕೇಳ್ರಿ! ನಾನು ಕೇಳ್ತೀನಿ ನೋಡ್ತಿರಿ.