ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂ ಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?
ಧಗ್ಧಸ್ಯ ದಹನಮ್ ನಾಸ್ಥಿ, ಪಕ್ವಸ್ಯ ಪಚನಂ ಯತಾ! ಜ಼್ನಾನಾಗ್ನಿ ಧಗ್ಧ ದೇಹಸ್ಯ ನ ಪುನರ್ಧಹನ ಕ್ರಿಯ!!
ಇದು ಕಾರಣ ಕೂಡಲ ಚೆನ್ನ ಸಂಗಣ ಶರಣರು ಬ್ರಾಂತು ಸೂತಕ ಕ್ರಿಯಾವಿಹಿತರು
ಇಲ್ಲಿ
"ಬೆಂದ ನುಲಿಯಾ ಸಂ ಧಿಸಬಹುದೆ?" ಎಂದರೆ ಏನು?
"ಸಂದೇಹ" ಎಂದರೆ ಏನು?
ಹಾಗೂ ಪೂರ್ಣ ವಚನದ ವಿಷಯವನ್ನು ವಿಷಾದ ಪಡಿಸಿ.
ಧನ್ಯವಾದಾಗಲೊಂದಿಗೆ
ಸವಿತೃ

- Login or register to post comments
- 832 hits
- Email this forum





RSS:
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
’ನುಲಿ’ ಎಂದರೆ ತಿರುಚಿದ, ಹಿಂಡಿದ ಮುಂತಾದ ತಿಳಿವಿದೆ. ಹೊಟ್ಟೆ ಹಿಂಡಿದಂತಾದ ನೋವು ಅನ್ನುವ ಅರಿಮೆಯೂ ಇದೆ. ಅದರಂತೆ ಬೆಂದ ನುಲಿಯಾ ಸಂದಿಸಬಹುದೇ? ಅಂದರೆ ಒಮ್ಮೆ ಪಟ್ಟ ನೋವನ್ನು ಮತ್ತೆ ಮತ್ತೆ ಪಡಲಾರೆವು, ಅದರಲ್ಲಿ ನೋವಿದೆ ಅಂತ ತಿಳಿದಾಗ ಅದರಿಂದ ದೂರವಾಗುತ್ತೇವೆ.
ಪಂಚಾಕ್ಷರಿಯಲ್ಲಿ ದಗ್ಧವಾದ( ಅದು ಧಗ್ದ/ಧಗ್ಧ ಅಲ್ಲಾ, ದಗ್ಧ) ನಿರ್ದೇಹಿಗೆ ಸಂದೇಹವುಂಟೆ?
ಅಂದರೆ ಪಂಚಾಕ್ಷರ(ಓಂ ನಮಃ ಶಿವಾಯ)ದಲ್ಲಿ ನಿಶ್ಯಂಕಿತರಾದ, ನಿರ್ದೇಹಿಗೆ(ಮೈಇಲ್ಲದ ಅಂದರೆ ಆತ್ಮಕ್ಕೆ) ಸಂದೇಹ, ಸಂಶಯಗಳು ಕಾಡವು.
ದಗ್ಧ ಅಂದರೆ ಸುಟ್ಟು ಹೋದ, ನಿಶ್ಯಂಕಿತವಾದ ಎಂಬ ತಿಳಿವುಗಳಿವೆ. http://baraha.com/nighantu
ಈ ವಚನದ ಒಟ್ಟಾರೆ ತಿಳಿವು,
ಅಟ್ಟುದನಡುವರೇ?, ಒಮ್ಮೆ ಅಟ್ಟುದನ್ನು ಮತ್ತೆ ಒಲೆಯ ಮೇಲಿಟ್ಟು ಅಡುವದಿಲ್ಲ, ಸುಟ್ಟುದ ಸುಡುವರೆ? ಇಲ್ಲ, ಸುಟ್ಟು ಬೂದಿಯಾದುದನ್ನು ಮತ್ತೆ ಸುಡಲಾಗದು, ಬೆಂದ ನುಲಿಯಾ ಸಂಧಿಸಬಹುದೇ? ಪಟ್ಟ ನೋವನ್ನು ಯಾರೂ ಮತ್ತೆ ಬಯಸಲಾರರು, ಪಂಚಾಕ್ಷರಿಯಲ್ಲಿ ದಗ್ಧವಾದ ನಿರ್ದೇಹಿಗೆ ಸಂದೇಹವುಂಟೆ? ಓಂ ನಮಃ ಶಿವಾಯ ಮಂತ್ರದಿಂದ ನಿಶ್ಯಂಕಿತರಾದವರು ಮತ್ತೆ ಸಂದೇಹಪಡಲಾರರು. ಇದು ಕಾರಣ ಕೂಡಲ ಸಂಗನ ಶರಣರು ಭ್ರಾಂತು ಸೂತಕ ಕ್ರೀಯಾವಿಹಿತರು, ಹೀಗೆ ಕೂಡಲ ಸಂಗನ ಶರಣರು ಭ್ರಾಂತಿಗಳಿಂದ ಕೂಡಿದ ಕರ್ಮಗಳಿಂದ ವಿಹಿತರು/ಮುಕ್ತರು.
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಇದರ ಒಳ ಅರಿವು ನನಗೂ ಗೊತ್ತಿರಲಿಲ್ಲ ..
ಸಂಗನರೆ ತಿಳಿಸಿದ್ದಕ್ಕೆ ನನ್ನಿ..
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಸಂಗನ ಗೌ ಡರಿಗೆ ದನ್ಯವಾದಗಳು.
ನಿಮ್ಮ ವಿವರಣೆ ನನಗೆ ಈ ವಚನವನ್ನು ಅರ್ಥ ಮಾಡಿಕೊಳ್ಳಲು ತುಂಬಾ ನೆರವಾಯಿತು.
ಇಲ್ಲಿ ಇನ್ನೊಂದು ಪದವಿದೆ..."ಸಂದೇಹ".. ಎಂಬುದು... ಇದರ ಮೇಲೆ ಬಲ್ಲವರು ಇನ್ನೂ ಹೆಚ್ಚು ಬೆಳಕಣ್ನ್ನ್ ಚೆಲ್ಲಬೆಕೆಮ್ದು ನನ್ನ ಬಯಕೆ.
ಈ ಪದವು ಅಧ್ಯಾತ್ಮಕ್ಕೆ ..ದೈವಕ್ಕೆ..ಪರತತ್ವಕ್ಕೆ ಸಂಬಧ ಪಟ್ಟೆದ್ದೆಮ್ದು ನನ್ನ ತಿಳುವಳಿಕೆ.
ನನ್ನ ಪ್ರಕಾರ "ಅಧ್ಯಾತ್ಮದಲ್ಲಿ "ಸಂದೇಹ" ದ ವಿರುದ್ಧ ಪದ "ಅರಿವು" ಆಗಬಹುದು.
ಇಲ್ಲಿ ಸಂದೇಹ ಯಾವುದರ ಬಗ್ಗೆ.. ಎಂತಹ ಸಂದೇಹ?.. ಅರಿವು ಎಂದರೆ ಯಾವುದರ ಅರಿವು? ಅರಿವು ಎಂದರೆ ಏನು?
ಶರಣರಲ್ಲಿ "ಅರಿವು" ಎಂದರೆ ಏನಾಗಿತ್ತು ಎಂಬ ಜಿಜ್ಞಾಸೆ ನನ್ನಲ್ಲಿ..
ತಿಳಿದವರು ಅರಿವಿನ ಬಗ್ಗೆ ಬೆಳಕ ಚೆಳ್ಳಬೇಕೆಂದು ನನ್ನ ಕೋರಿಕೆ.
ಸವಿತೃ
ಆರಿವೇ ಗುರು!
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಸಂದೇಹ ಅರಿವಿನ ವಿರುದ್ಧ ಪದವಲ್ಲ. ಸಂದೇಹ ನಂಬಿಕೆಯ ವಿರುದ್ಧದ ಪದ, ಅದರಲ್ಲೂ ಅಂಧಶ್ರದ್ಧೆಗೆ ವಿರುದ್ಧವಾದದ್ದು.
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
gc ಯವರೇ ತಮ್ಮ ಉತ್ತರಕ್ಕೆ ವಂದನೆಗಳು.
ನಾನು ಏಕೆ ಅರಿವನ್ನು ಸಂದೇಹಕ್ಕೆ ವಿರುಧ್ಧ ಪದವಾಗಿ ಬಳಸಿದೆ ಎಂದರೆ "ಅರಿತಾಗ ಸಂದೇಹ ಇರುವುದಿಲ್ಲ".
ಅರಿವುಡಕ್ಕಿಂತ ಮುಂಚೆ ನಮಗೆ ಸಂದೇಹ!! "ಅದು" ಇದೆಯೋ ಇಲ್ಲವೋ? "ಅದು ಒಂದೋ ..ಎರಡೋ? "ಅದು" ಸಾಕಾರವೋ ನಿರಾಕಾರೊವೋ? "ಅದು" ಸಗುಣವೋ ನಿರ್ಗುಣವೋ?.. ಈಗೇ...
ಅರಿತ ನಂತರ ನಂಬಿಕೆ!!! ಅಲ್ಲದಿದ್ಧರೆ ಅದೊಂದು ಮೂಡ ನಂಬಿಕೆ? !
ಈಗ ವಚನಕ್ಕೆ ಬರೋಣ..
ವಚನದಲ್ಲಿ ಹೀಗಿದೆ..." ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ? " ...
ನನ್ನ ಪ್ರಶ್ನೆ ಏನೆಂದರೆ ಪಂಚಾಕ್ಷರಿಗೂ ಸಂದೇಹಕ್ಕೂ ಏನು ಸಂಬಂಧ? ಇಲ್ಲಿ ಸಂದೇಹ ಯಾವುದರ ಬಗ್ಗೆ ?ಎಂಬುದು..ಎಂತ ಸಂದೇಹ ಎಂಬುದು//
ನನ್ನ ಈ ಪ್ರಶ್ನೆಗಳು ನಿಮಗೆ ಸಿಲ್ಲಿ ಅನ್ನಿಸಬಹುದು.. ದಯವಿಟ್ಟು ಕ್ಷಮಿಸಿ... ಆದರೆ ಅರಿತವರು ದಯವಿಟ್ಟು ಅರುಹಿ ..
ನಿಮ್ಮ ಉತ್ತರಕ್ಕೆ ಧನ್ಯವಾದಗಳು!!
ಸವಿತೃ
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಹೀಗೆ ಒಂದು ಯೋಚನೆ ಬಂತು. ಏಷ್ಟ್ರ ಮಟ್ಟಿಗೆ ಸರಿನೊ ಗೊತಿಲ್ಲ..
ಅರಿಯುವ ವರೆಗಸ್ಟೇ ಅದು "ನಂಬಿಕೆ".
ಅರಿತ ಬಳಿಕ ಅದು "ಅರಿವು" , "ಜ್ಞಾನ", "ತಿಳಿವು" ?
ಹೌದಾ.. ಹಾಗದರೆ ನಂಬಿಕೆಗಳೆಲ್ಲವೂ ಮೂಡ ನಂಬಿಕೆಗಳ?
ಏನೋ ತಿಳಿದವರು ಹೇಳ್ಬೇಕು!!
ಸವಿತೃ
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಅಹುದು ಅಹುದು ನಂಬಿಕೆಗಳೆಲ್ಲವೂ ಮೂಢನಂಬಿಕೆಗಳೆ, ನಾವು ಅರಿವಿಲ್ಲದೆ ಒಪ್ಪುವುದೇ ನಂಬಿಕೆ, ಅರಿತೊಡನೆ ನಂಬಿಕೆಯಜಾಗದಲ್ಲಿ ಜ್ಞಾನ ಕೂತಿರುತ್ತದೆ ಎಂದಿದ್ದಾರೆ ಶ್ರೀ ರಾಮಕೃಷ್ಣ ಪರಮಹಂಸರು.
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ನನ್ನ ಪ್ರಶ್ನೆ ಏನೆಂದರೆ ಪಂಚಾಕ್ಷರಿಗೂ ಸಂದೇಹಕ್ಕೂ ಏನು ಸಂಬಂಧ?
ನಿಮ್ಮ ಕೇಳಿಕೆ ಸರಿಯಾಗಿದೆ ಸವಿತ್ರುಗಳೇ. ಇಲ್ಲಿ ಪಂಚಾಕ್ಸರಿಗೂ ಸಂದೇಹಕ್ಕೂ ಏನು ನಂಟು? ಅನುಮಾನ ಅಂದರೆ ಯಾವುದರ ಬಗ್ಗೆಯೇ ಆಗಲಿ ನನ್ನಿ(ಸತ್ಯ)ವನ್ನು ತಿಳಿಯುವ ಹಂಬಲ. ಅಂದರೆ ಅನುಮಾನದಲ್ಲಿರುವವ ತಾನು ತನ್ನದು ಎಂಬ ಹಂಗಿನಲ್ಲಿರುವದಿಲ್ಲ. ನನ್ನಿ ತನ್ನಂತೆ ಇರಲಿ, ಇನ್ನಾವುದೇ ಇರಲಿ ಅದನ್ನು ತಿಳಿದುಕೊಳ್ಳಲು ಸಿದ್ದನಿರುತ್ತಾನೆ. ಅವನು ಹಾಗೆ ಸಿದ್ದನಾಗದೇ ಇದ್ದಲ್ಲಿ ನಂಬಿಕೆಯೊಂದನ್ನು ಅಪ್ಪಬೇಕಾಗುತ್ತದೆ. ಅನುಮಾನ ಪಡಲು ಎದೆಗಾರಿಕೆ ಬೇಕು.
ಅನುಮಾನ(ಇಲ್ಲವೇ ಸಂದೇಹ) ಎಂಬುದು ನನ್ನಿಯನ್ನು ತಿಳಿಯುವ ಮುನ್ನ ಇರುವ ದೆಸೆ, ಅದು ತಿಳಿದ ಮೇಲೆ ಅನುಮಾನ ಇರುವದಿಲ್ಲ, ಅದು ನಂಬಿಕೆಯೂ ಅಲ್ಲ, ಅದು ತಿಳಿವು, ಜ್ಞಾನ. ನಂಬಿಕೆಗೂ ತಿಳಿವಿಗೂ ಕೂದಲೆಳೆ ದೂರ, ತಿಳಿವು ಹೊತ್ತು ಹೊತ್ತಿಗೆ ಬದಲಾಗುತ್ತಿರುತ್ತದೆ, ಹೊಸ ತಿಳಿವು ಹಳೆಯ ತಿಳಿವನ್ನು ಸುಳ್ಳು ಮಾಡಿ, ತಿಳಿವನ್ನು ನಂಬಿಕೆಯಾಗಿಸುತ್ತಲೇ ಇರುತ್ತದೆ.
ನಂಬಿಕೆಗೆ ಒಂದು ಬಲ ಇದೆ. ನಾವು ಏನನ್ನು ಬಲವಾಗಿ ನಂಬುತ್ತೇವೆಯೋ ಅದು ಕೆಲ ಸಲ ನನ್ನಿಯಾಗುತ್ತದಂತೆ. ಮುನಿ-ಪುಂಗವರ ನಂಬಿಕೆಗಳಿಗೆ ಅಂತ ಬಲ ಇರುತ್ತದೆ.
ಪಂಚಾಕ್ಸರಿಯು ಸಂದೇಹವನ್ನು ಸುಡುತ್ತದೆ ಅಂಬುದನ್ನು ಎರಡು ಬಗೆಯಲ್ಲಿ ನೋಡಬಹುದು. ೧) ಪಂಚಾಕ್ಸರಿಯು ನನ್ನಿಯನ್ನು ತೋರುವದು ೨) ಪಂಚಾಕ್ಸರಿಯು ನಂಬಿಕೆ ಮೂಡಿಸುವದು
ಈ ಎರಡೂ ತಿಳಿವು ಒಂದು ರೀತಿ ಸರಿಯಾಗಿಯೇ ಇವೆ.
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂ ಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?
"ಬೆಂದ ನುಲಿಯಾ ಸಂಧಿಸಬಹುದೆ?" ಎಂದರೆ ಏನು?
"ಸಂದೇಹ" ಎಂದರೆ ಏನು?
-> ನುಲಿ ಎಂದರೆ ಇಲ್ಲಿ ಹಗ್ಗ, ನೂಲು, ತಿರುಚಿ ಮಾಡಲ್ಪಟ್ಟ ವಸ್ತು ಎಂದರ್ಥ. ಹಗ್ಗವನ್ನು ಬೇಯಿಸಿದರೆ, ಅದರ ತಿರುಚುಗಳೆಲ್ಲ ಮೆತ್ತಗಾಗಿ, ಬಿಡಿಬಿಡಿಯಾಗಿ ಎಳೆಗಳೆಲ್ಲ ಕಡಿದುಹೋಗಿ ಬಲವಿಲ್ಲದೆ ತುಂಡಾಗಿಬಿಡುತ್ತದೆ. ಅಂತಹ ಬೆಂದ ಹಗ್ಗವನ್ನು ಮತ್ತೆ ಸೇರಿಸಲು ಅಸಾಧ್ಯ; ಆದ್ದರಿಂದಲೇ "ಸಾಧ್ಯವಿಲ್ಲ" ಎಂಬರ್ಥದಲ್ಲಿ ಬೆಂದ ನುಲಿಯ ಸಂಧಿಸಬಹುದೇ? ಎನ್ನುತ್ತಾನೆ ಕವಿ.
-> ಸಂದೇಹ ಎಂಬುದನ್ನು ಇಲ್ಲಿ ಬಹಳ ಬುದ್ಧಿವಂತಿಕೆಯಿಂದ ಬಳಸಲಾಗಿದೆ. ಸಂಸ್ಕೃತದ "ದೇಹ"ಕ್ಕೆ "ಶರೀರ" ಎಂದು ಮಾತ್ರವಲ್ಲದೆ "ಅಂಟಿಕೊಂಡ" ಎಂಬರ್ಥವೂ ಇದೆ. ಪಂಚಾಕ್ಷರೀ ಮಂತ್ರದ ಜಪತಪಾದಿಗಳಿಂದ ಸುಡಲ್ಪಟ್ಟು "ದೇಹವೆಂಬ ಅಂಟನ್ನು" ಕಳೆದುಕೊಂಡವನು ಆತ್ಮಸ್ವರೂಪ!
೧.ಅವನಿಗೆ ಸಂ-ದೇಹ(ಇಹಲೋಕದ ಶರೀರ)ವುಂಟೇ? = ಅವನಿಗೆ ಪುನರ್ಜನ್ಮವುಂಟೇ(ಮಹೇಶರು ಹೇಳಿದ್ದು ಸರಿ)
೨.ಅವನಿಗೆ ಸಂದೇಹ(ಶಂಕೆ, ಅನುಮಾನ) ಉಂಟೇ? = ಅವನಿಗೆ ತಾನೇ ಆತ್ಮನೆಂಬುದರ ಬಗ್ಗೆ ಸಂದೇಹವುಂಟೇ(ಸಂಗನಗೌಡರು ಹೇಳಿದ್ದೂ ಸರಿ)
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ನಂನಿ
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಒಳ್ಳೆಯ ಬಿಡಿಕೆ.
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಶರಣು ಶರಣಯ್ಯ ಬೆನ ನಾಯಕ!!
ಬೆನಕರೆ .. ನಿಮ್ಮ ಉತ್ತರ ನನಗೆ ಒಪ್ಪಿಗೆಯಾಯಿತು!!
ವಂದನೆಗಳು
ಸವಿತೃ
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ದಗ್ಧಸ್ಯ ದಹನಂ ನಾಸ್ತಿ ಪಕ್ವಸ್ಯ ಪಚನಂ ಯತಾ!
ಜ್ಞಾನಾಗ್ನಿದಗ್ಧದೇಹಸ್ಯ ನ ಪುನರ್ದಹನಕ್ರಿಯಂ!!
ಇದನ್ನೂ ಯಾರು ಬರೆದುದು? ಚನ್ನಬಸವಣ್ಣರೇ?
ಇಲ್ಲಿ ಪುನರ್ದಹನ ಅಂದ್ರೆ ಮರುಜನುಮ ಅಂತ ನನ್ನ ಅನ್ನಿಸು.
ಯಾರು ಅರಿವಿನ ಬೆಂಕಿಯಲ್ಲಿ ಇಡಿಯಾಗಿ ಬೆಯ್ಯವರೋ ಅವರಿಗೆ ಮರುಹುಟ್ಟು ಇಲ್ಲ. ಅಂದ್ರೆ ಹುಟ್ಟು-ಸಾವುಗಳ ತಿಗುರಿ/ಚಕ್ರದಿಂದ ಬಿಡುಗಡೆ( ಮೋಕ್ಷ )
ನನಗೆ ವಚನದಲ್ಲಿ ಸಂದೇಹವುಂಟೇ ಅಂದ್ರೆ ಈ ಬಿಡುಗಡೆ ಸಿಗುವುದರಲ್ಲಿ ಸಂದೇಹಬೇಡ, ಅದು ನಿಕ್ಕುವ ಎಂದಂತೆ ಅನ್ನಿಸಿತು.!!
ಸಂಗನರು ಚನ್ನಾಗಿ ಬಿಡಿಸಿದ್ದಾರೆ. ಈ ಎಳೆಯನ್ನು ಎಳೆದ ಸವಿತಾಗೆ ನನ್ನಿ!
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ಮಹೇಶ
ಇದನ್ನು ಚನ್ನಬಸವಣ್ಣನವರು ಬರೆದಿರಲಿಕ್ಕಿಲ್ಲ.
ವೀರಶೈವ ಶರಣರು ಪುರಾಣ, ಭಗವದ್ಗೀತೆ, ಸಂಸ್ಕೃತ ವೇದಾಭ್ಜಾಸಗಳನ್ನು ಮಾಡಿದವರು (ಈಗಲೂ ಕೂಡ ಮಾಡ್ತಾರೆ... ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ, ಅದರ ಮೇಲೆ ಅವರಿಗೆ ತುಂಬ ನಂಬುಗೆ ಮತ್ತು ವಚನಗಳ ಜೊತೆಗೆ ಇವುಗಳ ಮೇಲೂ ಆದರ ಕೂಡ )
ಹೀಗಾಗಿ ತಮ್ಮ ವಚನಗಳಲ್ಲಿ ಆಗಾಗ ಸಕ್ಕದದ ಶ್ಲೋಕಗಳನ್ನು ಬಳಸುವುದು ರೂಢಿ.
ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?
ನನ್ನಿ!