ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?
ಭಾರತದಲ್ಲೂ ವಿದ್ಯುತ್ ಸುಭಿಕ್ಷ ಉಂಟಾಗಿ ಕಲಾಂ ಅವರ ಕ್ರಿ.ಶ.2020ರ ಕನಸು ನನಸಾದೀತು. ಅಂದರೆ ಭಾರತ ಜಗತ್ತಿನ ಮೂರು ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ (ಮನಸ್ಸು ಮಾಡಿದರೆ ಒಂದನೆಯ ಸ್ಥಾನ) ವನ್ನು ಖಂಡಿತವಾಗಿಯೂ ಪಡೆಯಬಹುದು. ಎನ್ನುತಾರೆ ಸುಧೀಂದ್ರ ಹಾಲ್ದೊಡ್ಡೇರಿ--ನೆಟ್ನೋಟ ---ವಿಜಯಕರ್ನಾಟಕದಲ್ಲಿ

- Login or register to post comments
- 443 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?
ಇಲ್ಲಿ ಯಾವ ಶಕ್ತಿ..
ಬಾರತ ಆಗಲೇ ಜನಸಕ್ತಿಯಲ್ಲಿ ಬಲು ಮುಂದಿದೆ!!
ಸಂತಾನಲಕ್ಸ್ಮಿಯ ದಯೆ ನಮ್ಮ ಮೇಲೇ ಸಕ್ಕತ್ತಾಗಿದೆ.
ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?
ಹಾಗೆ ಟೆರ್ರರಿಸ್ಟರಿಂದ ಸಾಯುವವರ ಸಂಕೆಯಲ್ಲೂ ಮುಂದು ಅಂತ TOI ವರದಿ ಮಾಡಿದೆ.
http://timesofindia.indiatimes.com/articleshow/2312796.cms
ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?
ಸಕ್ತಿ ಶಾಲಿ ದೇಶ ಎ೦ದರೇನು ?? ನೂರು ಬಾ೦ಬ್ ಮಾಡಿದರೆ ಆಯ್ತೆ ???
ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?
ಅಯ್ಯ ಮುರುಳಿ ದೇವ್ರು...
ಜಗದಲ್ಲಿ ೧೦೦ ಮಂದಿ ಒಂದು ಹೇಳಿದ್ರೇ ನಂದೇ ಒಂದು ಅಂತ ಇರಬೋದು. ನನ್ ಜುಟ್ಟು, ನನ್ ತೀಟೆ.
ಆದ್ರೆ, ಇವೊತ್ತು ಕೆಲವು ದೇಸಗಳೂ ದಿಟವಾಗ್ಲು ಸುಮಾರಾಗಿ ಎಲ್ಗವನ್ನೂ ಹಿಡಿತದಲ್ಲಿ ಇಟ್ಟುಕೊಂಡವೆ. ಆ ದೇಸಗಳ ಬಳಿ ಬಾಂಬೂ ಐತೇ, ಜಾಣತನವೂ ಐತೆ.
ಈಗ ನಮ್ ದೇಸವೇ ಸಕ್ಕತ್, ಇದನ್ನ ಬಿಟ್ರಿಲ್ಲ, ಏಕೆಂದ್ರೆ ನಾವು ಸಾಂತಿ ಮಂದಿ, ನಮ್ ೫೦೦೦೦೦೦೦೦೦೦ ಏಡುಗಳು ಸಮಸುಕುರುತಿ, ನಮ್ ದರುಮ, ಕರುಮ, ಅಂತ ಬೊಗಳೆ ಬಿಟ್ಕೊಂಡು ಒಂದು ಗುಂಪು, ನಮ್ ಬಡತನ, ನಮ್ ಪೆದ್ದು, ನಮ್ ಪುಕ್ಕಲು ಇದನ್ನು ನೋಡೋದೇ ಇಲ್ಲ.
ಇನ್ನೊಂದು ಗುಂಪಯ್ತೆ, ಅದು ಯಾವಾಗ್ಲೂ ತಾನೇ ಸರಿ. ತನ್ನ ಸಮಾನತೆಯೇ ಸರಿ ಅಂತ ಟಮಟೆ ತಕ್ಕೊಂಡು ಟಾಮ್ ಟಾಮ್ ಮಾಡಿಕೊಂಡು ಇದ್ದು, ತಾವು ಆಳೋ ನೆಲ ಸಿಂಗೂರನ್ನೇ ಮೋಟಾರು ಕಂಪೆನಿಗೆ ಮಾರಿ, ಮಂದಿ ಮೇಲೆ ಗುಂಡಿ ಹಾರಿಸ್ತದೆ.
ಮತ್ತೊಂದು ಗುಂಪಯ್ತೆ, ಇದು ನಮ್ ಮಂದಿಗೆ ಸಕ್ಕತ್ ರೊಕ್ಕ ಬರೋ ಕೆಲಸಗಳನ್ನು ಕೊಡಿಸ್ತದೆ. ಹಾಗೇ ಅವರ ಕೈಲಿ ಸಿಕ್ಕಾಪಟ್ಟೆ ದುಡಿಸಿ ಸೋಮಾರಿಗಳಿಗೆ ಚೀಮಾರಿ ಹಾಕ್ತದೆ. ನಮ್ಮ ಹೈಕಳು ದೇಸಾದೇಸಾ ಸುತ್ತಿ ಹೆಚ್ಚೆಚ್ಚು ತಿಳಿಯೋ ಹಂಗೆ ಮಾಡ್ತದೆ. ಆದ್ರೆ ಈ ಗುಂಪು ಟಮಟೇನೋ ಹೊಡೆಯಲ್ಲ, ಬೊಗಳೇನೂ ಬಿಡಲ್ಲ. ತಾನಾಯ್ತು, ತನ್ ದುಡ್ಡಾಯ್ತು ಅಂತ ಐತೆ.
Ant and Cricket ಕತೆ ಐತಲ್ಲ ಹಂಗೆ, ಇರುವೆಗೆ ಯಾವಾಗ್ಲೂ ದುಡಿಯೋ, ಕಾಳುಕೂಡೋ ಚಿಂತೆ, ಮಿಡತೆಗೆ ಬರೀ ಗುಂಯ್ ಗುಂಯ್ ಅಂತ ಊರೂರ್ ಸುತ್ತಿ, ಇರುವೆಯನ್ನ ಹಂಗಿಸೋ ಬುದ್ದಿ. ಇರುವೆ ಮಿಡಿತಯ ಗುಂಯ್ ಗುಂಯ್ಗೆ ಕಿವಿಕೊಟ್ರೆ ಅದರ ಕೆಲಸ ಹಾಳು ಅಂತ ಅದು ಸುಮ್ಕಿರ್ತದೆ. ಆದ್ರೆ ಮಿಡತೆ ಅದನ್ನೇ ತನ್ನ ಗೆಲುವು ಅಂತ ಬೀಗ್ತದೆ.
ಒಟ್ನಲ್ಲಿ "ಕಾಯಕವೇ ಕೈಲಾಸ" ಅನ್ನೋ ಇರುವೆಗಳು, "ನೀ ಇರುವೆಗಳೇ ಎಲ್ಲ ಕೂಡಿಟ್ಟಕೊತೀರ" ಅಂತ ಹಾರಾಡೋ ಮಿಡತೆಗಳ ನಡುವೆ ಏನೇ ಮಾತಾದ್ರು, ಇರುವೆಗಳು ಮಾಡಿ ತೋರಿಸ್ತವೆ, ಮಿಡತೆಗಳು ಮಾಡದೇ ಬರೀ ಮಾತಾಡ್ತವೆ.
ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?
ಕೆಲಸ ಕೊಡ್ತಿವಿ ಅನ್ನುವ ಮುಕವಾಡ ಹಾಕೊಂಡು ನಮ್ಮ ನೆಲೆ, ನೀರು, ಸಂಪತ್ತನ್ನು ಕೊಳ್ಳೆ ಹೊಡಿತಾ ಇವೆ, ಕಾರ್ಪೋರೇಟ್ ಕಂಪನಿಗಳು. ಹಂಗೆ ಕೆಲಸ ಕೊಡೊ ಕಂಪನಿಗಳೂ ಅವೆ, ಅವುಗಳ ಹೆಸರು ಹೇಳಿಕೊಂಡು ನುಂಗುತ್ತಿರುವ ತೋಳಗಳೂ ಅವೆ.
ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?
ನೆಲ, ನೀರು ಉಳಿಸಿಕೊಂಡೂ ಕಾರ್ಪೊರೆಟ್ ಕಂಪೆನಿಗಳ ಬಾಳಿಕೆ ಮಾಡಿಕೋಬೋದು!
ನೆಲ ನೀರು ಉಳಿಸಿಕೊಳ್ಳೋದರ ಬಗ್ಗೆ ಎಚ್ಚರ ಇದ್ರೇ ಸಾಕು, ಅದು ಇದ್ಯಾ?