ವಾಟಾಳ್ ಆಸ್ತಿ
ವಾಟಾಳ್ ಕನ್ನಡಕ್ಕೆ ಜೈ ಅನ್ನುತ ಮಡಿದರು ನೂರೆಂಟು ಎಕರೆ ಭೂಮಿ, ಗ್ರಾಂ ಗಟಲೆ ಚಿನ್ನ, ಲಕ್ಷ ಗಟಲ್ಲೆ ಹಣ. ಪಾಪ ಕನ್ನಡದ ಗತಿ ಮಾತ್ರ ಇನ್ನು ಸುದಾರಿಸಿಲ್ಲ. ಸುದಾರಿಸದಿದರಲ್ಲವೆ ತಮಟೆ ಬಡಿದು ಎಮ್ಮೆ ಮೇಲೆ ಸವಾರಿ ಮಾಡಿ ಪತ್ರಿಕೆ ಮುಖಪುಟದಲ್ಲಿ ಸುದ್ದಿ ಆಗೊದು. ಜೈ ಕರ್ನಾಟಕ (ನಾಟಕ!!) ![]()
http://www.prajavani.net/Content/Aug292007/state2007082943586.asp?sectio...

- Login or register to post comments
- 630 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ವಾಟಾಳ್ ಆಸ್ತಿ
ಕನ್ನಡ ಹಾಗೂ ಕರ್ನಾಟಕದ ಯಾವುದೇ ಸಮಸ್ಯೆ ಇರಲಿ ಇವರು ಮುಂದೆ ಬರುತ್ತಾರೆ. ಅದಂತು ನಿಜ.
ಯಾವುದೇ ಪಕ್ಷದ ಆಮೀಷಕ್ಕೆ ಒಳಗಾಗದೆ ಕಠೋರ ಮಾತಿನ ಈ ಮನುಷ್ಯನ ಮಾತು ಮೆಚ್ಚುವಂತದ್ದು.
ಉ: ವಾಟಾಳ್ ಆಸ್ತಿ
ಪ್ರತಿಭಟನೆಯೇ ಸರ್ವಸ್ವವಲ್ಲ. ಅದು ಖಂಡಿತ ಬೇಕು. ಪ್ರಜಾಪ್ರಭುತ್ವದಲ್ಲಿ ಜನ ತಮಗಾದ ಅನ್ಯಾಯವನ್ನು ಒಪ್ಪದೆ ನ್ಯಾಯದೊರಕಿಸಿ ಎಂದು ಆಳುವ ಸರ್ಕಾರವನ್ನು ಕೇಳುವ ಪ್ರಕ್ರಿಯೆಯನ್ನು ಎಲ್ಲರೂ ಒಪ್ಪತ್ತಾರೆ. ಆದರೆ, ನಮ್ಮ ವಾಟಾಳ್ ಬರಿ ಪ್ರತಿಭಟನೆಗೆಂದೇ ದೇವರು ಸೃಷ್ಟಿಸಿದ ವ್ಯಕ್ತಿಯಂತೆ, ಭಾವಿಸುತ್ತಿದ್ದಾರೆ. ಮೀಡಿಯ ಗಮನವನ್ನು ಸೆಳೆಯುವುದೊಂದೇ ಅವರಿಗೆ ಗೊತ್ತಿರುವುದು.
ಏನಾದರೂ ಸಾಧನೆ ಮಾಡಲೇ ಬೇಕೆನ್ನುವ ಛಲ ಇದ್ದಂತಿಲ್ಲ. ನಾಯಕನಿಗೆ ಇರುವ ಕೆಲವು ಅರ್ಹತೆಗಳನ್ನು ಗಮನಿಸಿದರೆ, ವಾಟಾಳ್ ಸರದಿ ಎಲ್ಲೆಗೆ ಬರುತ್ತದೆ, ಎಂದು ಗಮನಿಸೋಣ.
೧. ನಾಯಕ, ತ್ಯಾಗ, ಸದ್ಗುಣಗಳಿಂದ, ಜನಮತಗಳನ್ನು ಮೆಚ್ಚಿಸಿ ಪಡೆಯುವ ಸಾಮರ್ಥವನ್ನು ಹೊಂದಿರಬೇಕು.
೨. ಸರಿಯಾದ ಹಿಂಬಾಲಕರುಗಳನ್ನು ಹೊಂದಿರಬೇಕು.
೩. ದೇಶದ ರಾಜಕೀಯವನ್ನು ಆಳವಾಗಿ ತಿಳಿದಿರಬೇಕು.
೪. ಯಾವಾಗಲೋ ಒಮ್ಮೆ ಕೂಗಿ ಸುಮ್ಮನಾದರೆ, ಉಪಯೋಗವೇನು ?
೫. ಒಂದು ಮಾದ್ತ್ಯಮವನ್ನು ಕಟ್ಟಿ ಬೆಳಸಬೇಕು. ಉದಾ : ಪತ್ರಿಕೆಗಳು, ಇತ್ಯಾದಿ.
೬. ಖ್ಯಾತ ಕನ್ನಡದ ಉದ್ಯಮಿಗಳು, ರುವಾರಿಗಳ ಸಹಕಾರವನ್ನು ಗಳಿಸಬೇಕು.
೭. ಇವೆಲ್ಲಾ ಮಾಡಿ ಎಲ್ಲರೂ ಒಪ್ಪುವಂತೆ, ಮಾತಾಡುವ ಮಾತಿನ ಕಲೆಯನ್ನು ಕಲಿತು, ಅವನ್ನು ಅನುಷ್ಥಾನ ಗೊಳಿಸಬೇಕು.
ಕನ್ನಡಿಗರೆಲ್ಲಾ ಒಕ್ಕೊರಲಿನಿಂದ ಇವರು ನಮ್ಮ ನಾಯಕ, ಎಂದು ಹೇಳುವ ಸ್ಥಿತಿಬರುವಂತೆ ತಮ್ಮ ಕೆಲಸಕಾರ್ಯಗಳಿಂದ ಜನರೆಲ್ಲರ ಮನಒಲಿಸಿಕೊಳ್ಳಬೇಕು. ಇಷ್ಟು ಸಾಕಲ್ಲವೇ ?
ಉ: ವಾಟಾಳ್ ಆಸ್ತಿ
ಇನ್ನೂ ಇಲ್ಲ! ಆಸ್ತಿ ಮಾಡಿದರು ಅಷ್ಟೆ!