~
ಗಾಂಧಿ ಮತ್ತೆ ಹುಟ್ಟಿ ಬಾ...
ಗಾಂಧಿ ಜಯಂತಿ ಹತ್ತಿರಾಗುತ್ತಿದೆ. ಜಗತ್ತಿನೆ ಇತಿಹಾಸದಲ್ಲೇ ಮಾನವರು ಕಾಣಲಾಗದಂತಹ ರಾಜಕೀಯ ಸಂತನನ್ನು ಭಾರತ ಪ್ರಪಂಚಕ್ಕೆ ಕೊಟ್ಟ ದಿನ.
ಚಿಕ್ಕಂದಿನಲ್ಲಿ ನಮಗೆ ದೊರೆಯುವ ಪ್ರೇರಣೆ, ಅರೆಬೆಂದ ವೈಚಾರಿಕತೆಯ ಕಾವಿನಲ್ಲಿ, ಹುಚ್ಚು ಸಿದ್ಧಾಂತಗಳ ಕಣ್ಕಾಪಿನಲ್ಲಿ ನಾವು ಗಾಂಧೀಜಿಯನ್ನು ವಿನಾಕಾರಣವಾಗಿ ಅಲಕ್ಷಿಸುತ್ತೇವೆಯೇ? ಗಾಂಧೀಜಿಯ ಬಗ್ಗೆ ತಿಳಿಯುವ ಮೊದಲೇ ಪೂರ್ವಾಗ್ರಹದ ನಿರ್ಧಾರಕ್ಕೆ ಬಂದು ಅದನ್ನು ಪುಷ್ಟೀಕರಿಸುವಂತಹ ದಾಖಲೆಗಳನ್ನು ಮಾತ್ರ ಓದಿಕೊಂಡು ನಮ್ಮ ಇತಿಹಾಸದ ಒಬ್ಬ ಮಹಾಪುರಷನಿಗೆ ಸಲ್ಲಿಸಬೇಕಾದ ಸಹಜ ಗೌರವವನ್ನು ತಪ್ಪಿಸುತ್ತಿದ್ದೇವೆಯೇ?
ಗಾಂಧೀಜಿ ಎಂದ ಕ್ಷಣವೇ ನಮಗೆ ಮುಸ್ಲಿಮರ ಓಲೈಕೆ, ಭಗತ್ ಸಿಂಗ್ರನ್ನು ಗಲ್ಲಿಗೇರಿಸಲು ನೆರವಾದರು ಎಂಬ ಭಾವ ಹುಟ್ಟಲು ಕಾರಣವೇನು? ಸ್ವಾತಂತ್ರ್ಯ ಹೋರಾಟವೆಂದರೆ ಯಾರೋ ರಾಜರು, ರಾಣಿಯರು ತಮ್ಮ ಸಿಂಹಾಸನಕ್ಕೆ ಬಂದ ಕುತ್ತು ನಿವಾರಿಸಿಕೊಳ್ಳಲು ಮಾಡುವ ಯುದ್ಧ ಎಂದೇ ತಿಳಿದು, ಬ್ರೀಟೀಶ್ ದೊರೆಗಳನ್ನೂ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದ್ದ ಸ್ವಾತಂತ್ರ್ಯ ಪೂರ್ವ ಭಾರತದ ಶ್ರೀ ಸಾಮಾನ್ಯರೆಲ್ಲರನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಒಳಗೊಳ್ಳುವಂತೆ ಮಾಡಿದ ಗಾಂಧೀಜಿ ಮಹಾತ್ಮರಲ್ಲವೇ? ಅನ್ಯರಿಂದ ಎರವಲು ಪಡೆದ ಸಿದ್ಧಾಂತದ, ಪರಕೀಯರ ನೆಲದಲ್ಲಿ ಯಶಸ್ವಿಯಾದ ತಂತ್ರವನ್ನೇ ನಮ್ಮ ದೇಶಕ್ಕೂ ಅಳವಡಿಸಲು ಮುಂದಾದವರ ಎದುರು ಭಾರತದ ನೈಜ ಸ್ವಭಾವವನ್ನರಿತು ಸತ್ಯಾಗ್ರಹದ ಅಸ್ತ್ರವನ್ನು ಕೊಡಮಾಡಿದ ಗಾಂಧಿ ಸಮಾಜ ಚಿಕಿತ್ಸಕರಲ್ಲವೇ?
ಹೌದು, ಗಾಂಧೀಜಿಯನ್ನು ನಿಂದನೆ, ಆರೋಪಗಳಿಂದ ರಕ್ಷಿಸಿ ದೇವರ ಸ್ಥಾನದಲ್ಲಿ ಕೂಡಿಸುವುದು ತಪ್ಪು. ಸಹಜ ಗೊಂದಲ, ದೌರ್ಬಲ್ಯಗಳಿಂದ ಕೂಡಿದ ಒಬ್ಬ ವ್ಯಕ್ತಿ ಮಹಾತ್ಮನಾದ phenomenonನನ್ನು ಅರ್ಥಮಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವಲ್ಲವೇ?
ಈಗ ಹೇಳಿ ಗಾಂಧಿ ಬಗ್ಗೆ ನಿಮಗೇನನ್ನಿಸುತ್ತದೆ?

- Login or register to post comments
- 799 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: