ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಗಾಂಧಿ ಮತ್ತೆ ಹುಟ್ಟಿ ಬಾ...

September 5, 2007 - 8:17pm — uniquesupri

ಗಾಂಧಿ ಜಯಂತಿ ಹತ್ತಿರಾಗುತ್ತಿದೆ. ಜಗತ್ತಿನೆ ಇತಿಹಾಸದಲ್ಲೇ ಮಾನವರು ಕಾಣಲಾಗದಂತಹ ರಾಜಕೀಯ ಸಂತನನ್ನು ಭಾರತ ಪ್ರಪಂಚಕ್ಕೆ ಕೊಟ್ಟ ದಿನ.

ಚಿಕ್ಕಂದಿನಲ್ಲಿ ನಮಗೆ ದೊರೆಯುವ ಪ್ರೇರಣೆ, ಅರೆಬೆಂದ ವೈಚಾರಿಕತೆಯ ಕಾವಿನಲ್ಲಿ, ಹುಚ್ಚು ಸಿದ್ಧಾಂತಗಳ ಕಣ್ಕಾಪಿನಲ್ಲಿ ನಾವು ಗಾಂಧೀಜಿಯನ್ನು ವಿನಾಕಾರಣವಾಗಿ ಅಲಕ್ಷಿಸುತ್ತೇವೆಯೇ? ಗಾಂಧೀಜಿಯ ಬಗ್ಗೆ ತಿಳಿಯುವ ಮೊದಲೇ ಪೂರ್ವಾಗ್ರಹದ ನಿರ್ಧಾರಕ್ಕೆ ಬಂದು ಅದನ್ನು ಪುಷ್ಟೀಕರಿಸುವಂತಹ ದಾಖಲೆಗಳನ್ನು ಮಾತ್ರ ಓದಿಕೊಂಡು ನಮ್ಮ ಇತಿಹಾಸದ ಒಬ್ಬ ಮಹಾಪುರಷನಿಗೆ ಸಲ್ಲಿಸಬೇಕಾದ ಸಹಜ ಗೌರವವನ್ನು ತಪ್ಪಿಸುತ್ತಿದ್ದೇವೆಯೇ?

ಗಾಂಧೀಜಿ ಎಂದ ಕ್ಷಣವೇ ನಮಗೆ ಮುಸ್ಲಿಮರ ಓಲೈಕೆ, ಭಗತ್ ಸಿಂಗ್‍ರನ್ನು ಗಲ್ಲಿಗೇರಿಸಲು ನೆರವಾದರು ಎಂಬ ಭಾವ ಹುಟ್ಟಲು ಕಾರಣವೇನು? ಸ್ವಾತಂತ್ರ್ಯ ಹೋರಾಟವೆಂದರೆ ಯಾರೋ ರಾಜರು, ರಾಣಿಯರು ತಮ್ಮ ಸಿಂಹಾಸನಕ್ಕೆ ಬಂದ ಕುತ್ತು ನಿವಾರಿಸಿಕೊಳ್ಳಲು ಮಾಡುವ ಯುದ್ಧ ಎಂದೇ ತಿಳಿದು, ಬ್ರೀಟೀಶ್ ದೊರೆಗಳನ್ನೂ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದ್ದ ಸ್ವಾತಂತ್ರ್ಯ ಪೂರ್ವ ಭಾರತದ ಶ್ರೀ ಸಾಮಾನ್ಯರೆಲ್ಲರನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಒಳಗೊಳ್ಳುವಂತೆ ಮಾಡಿದ ಗಾಂಧೀಜಿ ಮಹಾತ್ಮರಲ್ಲವೇ? ಅನ್ಯರಿಂದ ಎರವಲು ಪಡೆದ ಸಿದ್ಧಾಂತದ, ಪರಕೀಯರ ನೆಲದಲ್ಲಿ ಯಶಸ್ವಿಯಾದ ತಂತ್ರವನ್ನೇ ನಮ್ಮ ದೇಶಕ್ಕೂ ಅಳವಡಿಸಲು ಮುಂದಾದವರ ಎದುರು ಭಾರತದ ನೈಜ ಸ್ವಭಾವವನ್ನರಿತು ಸತ್ಯಾಗ್ರಹದ ಅಸ್ತ್ರವನ್ನು ಕೊಡಮಾಡಿದ ಗಾಂಧಿ ಸಮಾಜ ಚಿಕಿತ್ಸಕರಲ್ಲವೇ?

ಹೌದು, ಗಾಂಧೀಜಿಯನ್ನು ನಿಂದನೆ, ಆರೋಪಗಳಿಂದ ರಕ್ಷಿಸಿ ದೇವರ ಸ್ಥಾನದಲ್ಲಿ ಕೂಡಿಸುವುದು ತಪ್ಪು. ಸಹಜ ಗೊಂದಲ, ದೌರ್ಬಲ್ಯಗಳಿಂದ ಕೂಡಿದ ಒಬ್ಬ ವ್ಯಕ್ತಿ ಮಹಾತ್ಮನಾದ phenomenonನನ್ನು ಅರ್ಥಮಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವಲ್ಲವೇ?

ಈಗ ಹೇಳಿ ಗಾಂಧಿ ಬಗ್ಗೆ ನಿಮಗೇನನ್ನಿಸುತ್ತದೆ?

‹ ಯಾರು ತೀವ್ರವಾದಿ ? Who is an extremist ? ರಾಷ್ಟ್ರೀಯತೆ ಮತ್ತು ಕೋಮುವಾದ ›
  • ಸಮಾಜ
~.~
  • Login or register to post comments
  • 799 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಂguess ಸತ್ಯಾಗ್ರಹದ ವಿರುದ್ಧ ಬಿಜೆಪಿ ಸತ್ಯಾಗ್ರಹ !
  • ಮಹಾತ್ಮ ಗಾಂಧಿ - ೧೧
  • ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ, ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !
  • ಗಾಂಧಿ ನೆನಪು -೧
  • ಗಾಂಧಿ ಜಯಂತಿ
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

ಹೆಸರು ಸುಪ್ರೀತ್.ಕೆ.ಎಸ್. ವಯಸ್ಸು ಇಪ್ಪತ್ತು. ಇಂಜಿನಿಯರಿಂಗ್ ಓದು.

ಕನ್ನಡದಲ್ಲಿ ಬರೆಯುವುದೆಂದರೆ ಇಷ್ಟ. ಸಾಹಿತ್ಯದಲ್ಲಿ ಆಸಕ್ತಿಯಿದೆ. ಕತೆ, ಕಾದಂಬರಿ, ಕವನಗಳು ಇಷ್ಟವಾದ ಹಾಗೆಯೇ ವೈಜ್ಞಾನಿಕ ಬರಹಗಳೂ, ರಾಜಕೀಯ ವಿಶ್ಲೇಷಣೆಗಳೂ ಗಮನ ಸೆಳೆಯುತ್ತವೆ. ಬರವಣಿಗೆ ಹಾಗೂ ಓದುವುದು ಮುಖ್ಯ ಹವ್ಯಾಸವಾದರೂ ಆಗಾಗ ಸಮಕಾಲೀನ ವಿಷಯಗಳ ಚರ್ಚೆಗಳಲ್ಲಿ ಭಾರಿ ಆಸಕ್ತಿಯಿಂದ ಭಾಗವಹಿಸುತ್ತೇನೆ. ಕನ್ನಡದಷ್ಟು ಇಂಗ್ಲೀಷ್ ಸರಾಗವಿಲ್ಲ ಎಂಬ ಬಗ್ಗೆ ಸಂಕೋಚ ಹಾಗೂ ಉಡಾಫೆಯಿದೆ.

ಎಲ್ಲಾ ಬಗೆಯ ಸ್ಥಾಪಿತ ಸಿದ್ಧಾಂತಗಳ, ಮನಸ್ಥಿತಿಗಳ ಬಗ್ಗೆ ಸಿಟ್ಟಿದೆ. ಅವೆಲ್ಲವನ್ನೂ ಮೀರಬೇಕೆಂಬ ಹಂಬಲವಿದೆ. ಬ್ಲಾಗಿನಲ್ಲಿ ಕವಿತೆಯ ಬಗ್ಗೆ ಆಸಕ್ತಿ ಬೆಳೆಯಿತು. ಇಷ್ಟ ಎನ್ನುವ ಮಟ್ಟಿಗೆ ಯಾವ ಕವಿಯನ್ನೂ ಓದಿಕೊಂಡಿಲ್ಲ. ಲಂಕೇಶ್, ಶಿವರಾಮ ಕಾರಂತ, ತೇಜಸ್ವಿ, ಡಿ.ಎಸ್.ನಾಗಭೂಷಣ್, ಅನಂತಮೂರ್ತಿಯರ ವೈಚಾರಿಕತೆಯನ್ನು ಆಸ್ವಾದಿಸುತ್ತಾ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ರವಿ ಬೆಳಗೆರೆ, ಜೋಗಿ,ಜಯಂತ ಕಾಯ್ಕಿಣಿ, ಅಗ್ನಿ ಶ್ರೀಧರ್, ತೇಜಸ್ವಿ, ನಾಗೇಶ್ ಹೆಗಡೆ, ಚೇತನಾ ತೀರ್ಥಹಳ್ಳಿಯವರ ಬರವಣಿಗೆಯ ಶೈಲಿಯನ್ನು ಆರಾಧಿಸುತ್ತಾ, ಅನುಕರಿಸುತ್ತಾ, ಅನುಮಾನಿಸುತ್ತಾ ಅವೆಲ್ಲವನ್ನೂ ದಾಟುವ ಪ್ರಯತ್ನ ಮಾಡುತ್ತಾ ಬರೆಯುತ್ತಿದ್ದೇನೆ. ಹೆಚ್ಚು ಓದಿರುವುದು ಕಾರಂತರ ಕಾದಂಬರಿಗಳು. ಸಾಹಿತ್ಯಿಕ ಓದಿಗಿಂತ ಪತ್ರಿಕೆಗಳು, ಮ್ಯಾಗಝೀನುಗಳ ಓದೇ ಹೆಚ್ಚು. ಇದರಿಂದ ಎಲ್ಲಾ ತಿಳಿದಿದ್ದೇನೆ ಎನ್ನುವ ಭ್ರಮೆ ಆಗಾಗ ತಲೆಗೆ ಹತ್ತುತ್ತದೆ. ಅಷ್ಟೇ ಬೇಗನೇ ಇಳಿದುಹೋಗುತ್ತದೆ. ಓಶೋ ನನ್ನನ್ನು ಗೊಂದಲಕ್ಕೆ ತಳ್ಳಿ ನಾನಾಗಿ ಈಜಿ ದಡ ತಲುಪುವಂತೆ ಮಾಡುತ್ತಾರೆ, ನನ್ನೆಲ್ಲಾ ಊರುಗೋಲುಗಳನ್ನು ನಿಷ್ಕರುಣೆಯಿಂದ ಕಿತ್ತೆಸೆಯುತ್ತಾರೆ ಎಂಬ ಕಾರಣಕ್ಕೆ ಇಷ್ಟವಾಗುತ್ತಾರೆ. ಗಾಂಧಿ ಬಗ್ಗೆ ಆಳವಾಗಿ ಅಧ್ಯಯನ ಮಾಡುವ ಇಚ್ಛೆಯಿದೆ. ವಿಜ್ಞಾನವನ್ನು ಸರಳವಾಗಿ ಬರೆಯಬೇಕೆಂಬ ಕನಸಿದೆ. ನನ್ನ ಸಹಜೀವಿಗಳ ಬಗೆಗೇ ಏನೂ ಆಸಕ್ತಿ ಬೆಳೆಸಿಕೊಂಡಿಲ್ಲವಲ್ಲ ಎಂಬ ಯೋಚನೆಯಿದೆ.

ಒಮ್ಮೆ ಬ್ಲಾಗಿಂಗಿನ ಗುಂಗಿಗೆ ಬಿದ್ದು ಐದಾರು ಬ್ಲಾಗ್ ತೆರೆದು ಕೈಲಾದಷ್ಟು ಬರೆದು ಅನಂತರ ತಲೆಕೆಟ್ಟು ಎಲ್ಲವನ್ನೂ ಅಳಿಸಿಹಾಕಿ ನಿರಾಳನಾಗಿದ್ದ ಅನುಭವವಿದೆ. ಮತ್ತೆ ಕೈ ಕಡಿಯಲು ಶುರು ಮಾಡಿದಾಗ ಬ್ಲಾಗಿನ ಜಗತ್ತಿಗೆ ವಾಪಸ್ಸಾಗಿದ್ದೇನೆ. ಕಳೇದ ಎರಡು ವರ್ಷಗಳಿಂದ ನಾನು ಹಾಗೂ ನನ್ನ ವಯಸ್ಸಿನ ಕೆಲವು ಗೆಳೆಯರು ಸೇರಿ ‘ಸಡಗರ’ ಎಂಬ ಹೆಸರಿನ ಮಾಸ ಪತ್ರಿಕೆಯೊಂದನ್ನು ಪ್ರಕಟಿಸಿ ಚಂದಾದಾರರಿಗೆ ಕಳುಹಿಸಿಕೊಡುತ್ತಿದ್ದೇವೆ. ನನ್ನನ್ನು ಅವರು ಪತ್ರಿಕೆಯ ಸಂಪಾದಕ ಎಂದು ನೇಮಿಸಿದ್ದಾರೆ.

ಸಂಗೀತ ಸಂಯೋಜನೆಯಲ್ಲಿ ಆಸಕ್ತಿ ಇದೆ. ಆದರೆ ಅದರ ಎಬಿಸಿಡಿಯೂ ತಿಳಿದಿಲ್ಲ. ಸಾಯುವುದರೊಳಗೆ ಕೊಳನ್ನು ನುಡಿಸುವುದನ್ನು ಕಲಿಯಬೇಕು ಎಂದು ಹಗಲು ಗನಸು ಕಾಣುವಾಗಲೆಲ್ಲಾ ತಪ್ಪದೆ ನೆನಪು ಮಾಡಿಕೊಳ್ಳುತ್ತೇನೆ. ತಿಂಗಳಿಗೊಮ್ಮೆ ಗಲ್ಲಿ ಕ್ರಿಕೆಟ್ ಆಡಿದಾಗಲೆಲ್ಲಾ ನಾನು ಅದ್ಭುತ ಕ್ರಿಕೆಟರ್ ಆಗಬೇಕು ಎಂದುಕೊಳ್ಳುತ್ತೇನೆ. ಮುಂದೇನಾಗಬೇಕು ಎಂದು ಯೋಚಿಸುತ್ತ ಕುಳಿತರೆ ಸಾಲುಗಟ್ಟಿಬರುವ ನೂರಾರು ಆಲೋಚನೆಗಳನ್ನು ಕಂಡು ನನಗಿನ್ನೂ ಕನಸು ಕಾಣುವುದಕ್ಕೆ ಬರುತ್ತೆ ಎಂದುಕೊಂಡು ಖುಶಿಯಾಗುತ್ತೇನೆ.

ಇದು ಈವರೆಗಿನ ಪ್ರವರ. ಮರುಕ್ಷಣವೇ ಏನಾದರೂ ಬದಲಾವಣೆಗಳಾಗಬಹುದು. ಹೀಗಾಗಿ ಮೇಲೆ ಹೇಳಿರುವುದೆಲ್ಲಾ ಸತ್ಯ ಎಂದು ಪ್ರಮಾಣೀಕರಿಸುವ ಅಪರಾಧ ಮಾಡುವುದಿಲ್ಲ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
  • ಗಣೇಶ
    ಉ: ವೈಕುಂಠ ಏಕಾದಶಿ
    January 7, 2009 - 10:57pm
ಇನ್ನಷ್ಟು


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator