ರಾಮಾಯಣ ಕಟ್ಟು ಕಥೆಯೇ??
ಶ್ರೀರಾಮ, ರಾಮಾಯಣ, ವಾನರರು ಲಂಕೆಗೆ ಕಟ್ಟಿದ ಶ್ರೀರಾಮ ಸೇತುವೆ ಎಲ್ಲವೂ ಒಂದು ಕಾಲ್ಪನಿಕ ಕಟ್ಟು ಕಥೆ ಮಾತ್ರ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಸೇತು ಸಮುದ್ರಂ ಯೋಜನೆಗೋಸ್ಕರ ಶ್ರೀರಾಮ ಸೇತುವೆಯನ್ನು ಧ್ವಂಸಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ದಿನೇ ದಿನೇ ಕಾವನ್ನು ಪಡೆದು ಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೇಂದ್ರದ ಈ ರೀತಿಯ ಹೇಳಿಕೆ ದೇಶದಾದ್ಯಂತ ಕೋಟ್ಯಂತರ ಜನರಿಗೆ ಅತೀವ ನೋವನ್ನುಂಟುಮಾಡಿದೆ.

- Login or register to post comments
- 444 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ರಾಮಾಯಣ ಕಟ್ಟು ಕಥೆಯೇ??
ಎಲ್ಲ ಕತೆಗಳೂ ಕಟ್ಟಿದ್ದೇ, ಹೆಣೆದ್ದಿದ್ದೇ ಅದಕ್ಕೆ ರಾಮಾಯಣವೂ ಕಟ್ಟುಕತೆಯೇ!!ರಾಮಾಯಣದಲ್ಲಿ ಹಲವು ಕಲ್ಪನೆಗಳು ಸೇರಿರುವುದು ಎಂದು ನಮಗೆ ಎಲ್ಲರಿಗೂ ಗೊತ್ತು.
ಆದ್ರೆ.. ಇಲ್ಲಿ ರಾಮ ಅನ್ನುವ ಪಾತ್ರ ಕಾಲ್ಪನಿಕವೂ, ದಿಟವಾಗಲೂ ಇದ್ದನೋ ಎಂಬುದು ಪ್ರಶ್ನೆ.
ನಮ್ಮ ನಾಯ್ಯಾಲಯ ವ್ಯವಸ್ಥೆಯಲ್ಲಿ ಅವನು ಇದ್ದನು, ಅವನೊಬ್ಬ ದಿಟವಾದವನು ಎಂದು ತೋರಲು, ಪುರಾವೆ ಬೇಕಂತೆ!
ಉ: ರಾಮಾಯಣ ಕಟ್ಟು ಕಥೆಯೇ??
ಪುರಾವೆಯ ಅಗತ್ಯ ಎಲ್ಲೆಲ್ಲೂ ಇದೆ.. ನ್ಯಾಯಾಲಯ ವ್ಯವಸ್ಥೆಯಲ್ಲಿ ಮಾತ್ರವಲ್ಲ.
ಉದಾಹರಣೆಗೆ, ಆಯುರ್ವೇದ ಔಷಧಿ ಕೊಳ್ಳಲು ಮಂದಿ ಹಿಂಜರಿಯುವುದೇಕೆ?
ಯಾವುದೋ ಗುಳಿಗೆ ಕೊಟ್ಟರೆ ಅದು ನಿಜಕ್ಕೂ ಪ್ರಯೋಜನಕಾರಿಯೋ ಅಲ್ಲವೋ ಎಂಬ ಪುರಾವೆ ಇಲ್ಲದೆ ನುಂಗಲು ತಯಾರಾಗುವ ಮಂದಿ ಎಷ್ಟಿದ್ದಾರೆ?
Clinical study ಯ ಪುರಾವೆ ಅಲ್ಲೂ ಬೇಕು. ಇದು evidence based ವಿಜ್ಞಾನದ ಯುಗ. Evidence ಇಲ್ಲದಿದ್ದರೆ ಎಲ್ಲ ಸುಳ್ಳು !!
ಅಂದ ಹಾಗೆ ’ ಪುರಾವೆ ಏನು? ’ ಎನ್ನುವ ಸೋಪ್ ಪೌಡರ್ ನ ad ನೋಡಿದ್ದೀರಲ್ಲ?
ಉ: ರಾಮಾಯಣ ಕಟ್ಟು ಕಥೆಯೇ??
ಈವತ್ತು ರಷ್ಯಾದವರು ಒ೦ದು ಬಾ೦ಬ್ ಮಾಡಿದ್ದಾರ೦ತೆ, Father of all bombs
ಆ ಬಾ೦ಬು ಯಾವುದೇ ಊರಿನ ಮೇಲೆ ಹಾಕಿದರೆ ಆ ಊರು ಇತ್ತು ಅ೦ತಾ ಕೂಡ ಹೇಳೋಕ್ಕಾಗುವುದಿಲ್ಲವ೦ತೆ.
ಕಾಲನ ಹೊಡೆತಕ್ಕೆ ಸಿಕ್ಕಿ ಎಷ್ಟೊ ಅಳಿಸಿಹೋಗುತ್ತೆ ಅವೆಲ್ಲಾದಕ್ಕೂ ವರ್ತಮಾನದಲ್ಲಿ ಸಾಕ್ಷಿ ಸಿಗುತ್ತೆ ಅನ್ನುವುದು ಎಷ್ಟು ನಿಜ ?
ನಮ್ಮ ಮುತ್ತಜ್ಜನ ಫೋಟೋ ಆಗಲಿ ಮತ್ತ್ಯಾವುದೇ ಕಥೆಯಗಲಿ ಇ೦ದು ಇಲ್ಲಾ ಅ೦ದರೆ ಅತ ಇಲ್ಲ ಅನ್ನುವುದಕ್ಕಾಗುತ್ತೇನು ?
ಯಾರಿಗೆ Evidence ?? Evidence ಇದ್ದರೇನು ??
ನಮ್ಮ ರಾಜಕಾರಣಿಗಳು ಭ್ರಷ್ಟರು ಅನ್ನುವ Evidence ಇದ್ದರೂ ನಾವೇಕೆ ಅವರಿಗೆ ವೋಟ್ ಹಾಕ್ತೀವಿ ??
Evidence ಇದ್ದ ಮಾತ್ರಕ್ಕೆ ಜನ ಅರಿತು Evidence ನ೦ಬಿ ತಮ್ಮ ಕ್ರಿಯೆಯನ್ನು ಮಾಡ್ತರೆ ಅನ್ನುವುದು ಎಷ್ಟರ ಮಟ್ಟಿಗೆ ಸರಿ ?
ಮೊನ್ನೆ Sting operation ನಲ್ಲಿ ಸುಳ್ಳು Evidence ಕೊಟ್ಟು ಒಬ್ಬ ಅಧ್ಯಾಪಕಳನ್ನು ತೊ೦ದರೆಗೆ ಸಿಕ್ಕಿಸಲಿಲ್ಲವೇನು ?
ಪೆಪರ್ ನವರು / ಸರ್ಕಾರದವರು ಸುಳ್ಳು Evidence ಕೊಡಬಹುದಲ್ಲಾ ?
ಅತವಾ ನಿಜವಾದ Evidence, ಅವರಿಗೆ ಸಿಗದೇ ಹೋಗಿರಬಹುದು.
ಉ: ರಾಮಾಯಣ ಕಟ್ಟು ಕಥೆಯೇ??
ಇ೦ತಹುದೇ ವಾದವೊ೦ದು ಕ್ರಿಸ್ತನ ಬಗ್ಗೆ ನಡೆಯುತ್ತಿದ್ದಾಗ 'ಆತ ದೇವದೂತನೋ ಅಲ್ಲವೋ ಎ೦ದು ಚರ್ಚಿಸುವುದಕ್ಕಿ೦ತ ಆತ ನಮಗೇನು ಕಲಿಸಿದನೆನ್ನುವುದೇ ಮುಖ್ಯ' ಎ೦ಬ ಅನ್ನಿಸಿಕೆ ಕೇಳಿಬ೦ದಿತು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ರಾಮಾಯಣ ಕಟ್ಟು ಕಥೆಯೇ??
ರಾಮ ಇಲ್ಲ ಕ್ರಿಷ್ಣ ಇಲ್ಲ ಅನ್ನೊ ಮಂದಿ ಸರಕಾರದ ಹಣ ದಿಂದ ತಿರುಪತಿಗೆ ಹೋಗಿ ಅಡ್ಡಬಿಳ್ತಾರೆ. ಈಗ ಸೊನಿಯಾ(ಗಾ)ಗಂಧಿ ನಡುವೆ ಬಂದು ಅವರಿಗೆ ರಾಮ ಇದ್ದ ಅಂದ್ರಂತೆ. ಈ ಕ್ಂಗ್ರೆಸ್ಸಿ ಗರು ಮತ್ತು ಅವರ ದೊಸ್ತಿಗಳು ಯೆಂತಾ ಹೆಸಿಗೆಗೂ ತಯಾರು! DMK ಬಾಲು ಗೆದ್ದೆತ್ತಿನ ಬಾಲಹಿಡಿಯೊದು.ಇನ್ನು ನಮ್ಮ ಬುಧಿ ಜೀವಿಗಳ ಹೆಳಿಕೆಗೆ ಕಾಯಬೇಕು.