ಶ್ರೀರಾಮಚಂದ್ರ ಹೇಗೆ ಸತ್ತರು?
ಶ್ರೀರಾಮಚಂದ್ರ ಹೇಗೆ ಸತ್ತರು?
ವಾಲ್ಮೀಕಿ ಏನು ಹೇಳಿದ್ದಾರೆ?
ನಾನು ಕೇಳಿದಂತೆ ರಾಮ ಸರಯೂ ಹೊಳೆಯಲ್ಲಿ ಮುಳುಗಿ ಸತ್ತಿದ್ದು.

- Login or register to post comments
- 709 hits
- Email this forum



ಶ್ರೀರಾಮಚಂದ್ರ ಹೇಗೆ ಸತ್ತರು?
ವಾಲ್ಮೀಕಿ ಏನು ಹೇಳಿದ್ದಾರೆ?
ನಾನು ಕೇಳಿದಂತೆ ರಾಮ ಸರಯೂ ಹೊಳೆಯಲ್ಲಿ ಮುಳುಗಿ ಸತ್ತಿದ್ದು.




ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ಅದ್ಯಾಕೋ ಗೊತ್ತಿಲ್ಲ. ಬಹಳಷ್ಟು ಜನರಿಗೆ ಜಲಸಮಾಧಿ ಯನ್ನು ಆರೋಪಿಸಿದ್ದಾರೆ. ಪನ್ಚ ಭೂತಗಳಲ್ಲಿ .. ಜಲದಲ್ಲಿ ಲೀನವಾಗೋದನ್ನೇ ತುಮ್ಬಾ ಜನ ಶ್ರೇಷ್ಟ ಅನ್ತ ಹೇಳ್ತಾರೆ.
ಕೃಷ್ಣ , ವಿವೇಕಾನನ್ದ.. ಹೀಗೆ. ರಾಮನೂ ಜಲಸಮಾಧಿಯಾದ ಬಗ್ಗೆ ಕೇಳಿದ್ದೆ/ ಓದ್ದಿದ್ದೆ. ವಿವರಣೆ ಇಲ್ಲ.
ವೈದಿಕರು ಅಗ್ನಿಯಲ್ಲಿ ಶವ ಸಂಸ್ಕಾರ ಮಾಡ್ತಾರೆ.
ಶರಣರು ಅಗ್ನಿ ಸಂಸ್ಕಾರ ಅನ್ನೋದು ತಪ್ಪು / ತಮಗೆ ಅಗತ್ಯವಿಲ್ಲ ಎನ್ದು ಮಣ್ಣು ಮಾಡುತ್ತಾರೆ. ಮಣ್ಣಲ್ಲಿ ಒನ್ದಾಗೋದೆ ಶ್ರೇಷ್ಟ ಅನ್ತಾರೆ.
ಸವಿತೃ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ವಾಲ್ಮೀಕಿ ರಾಮಯಣದ ಪ್ರಕಾರ ಸರಯೂ ನದಿಯಲ್ಲಿ ನಡೆದು ಹೋಗುತ್ತಾನೆ ಎಂಬ ನೆನಪು...
--ಶ್ರೀ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ರಾಮ ಲಕ್ಷ್ಮಣರಿಬ್ಬರೂ ಸರಯೂ ನದಿಯನ್ನು ಪ್ರವೇಶಿಸುತ್ತಾರೆ ಎಂದು ಇದೆ ಎಂಬ ನೆನಪು.
ನಂತರದ ಉದಾಹರಣೆಯನ್ನು ತೆಗೆದುಕೊಂಡರೆ, ಬಸವಣ್ಣನವರೂ ಕೂಡ ಮಲಪ್ರಭೆಯನ್ನು ಹೊಕ್ಕರು ಎಂದೇ ಐತಿಹ್ಯ.
-ಹಂಸಾನಂದಿ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ರಾಮ ಲಕ್ಷ್ಮಣರಿಬ್ಬರೂ ಸರಯೂ ನದಿಯನ್ನು ಪ್ರವೇಶಿಸುತ್ತಾರೆ ಎಂದು ಇದೆ ಎಂಬ ನೆನಪು.
ನಂತರದ ಉದಾಹರಣೆಯನ್ನು ತೆಗೆದುಕೊಂಡರೆ, ಬಸವಣ್ಣನವರೂ ಕೂಡ ಮಲಪ್ರಭೆಯನ್ನು ಹೊಕ್ಕರು ಎಂದೇ ಐತಿಹ್ಯ.
-ಹಂಸಾನಂದಿ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ರಾಮ ಲಕ್ಷ್ಮಣರಿಬ್ಬರೂ ಸರಯೂ ನದಿಯನ್ನು ಪ್ರವೇಶಿಸುತ್ತಾರೆ ಎಂದು ಇದೆ ಎಂಬ ನೆನಪು.
ನಂತರದ ಉದಾಹರಣೆಯನ್ನು ತೆಗೆದುಕೊಂಡರೆ, ಬಸವಣ್ಣನವರೂ ಕೂಡ ಮಲಪ್ರಭೆಯನ್ನು ಹೊಕ್ಕರು ಎಂದೇ ಐತಿಹ್ಯ.
-ಹಂಸಾನಂದಿ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ರಾಮ ಲಕ್ಷ್ಮಣರಿಬ್ಬರೂ ಸರಯೂ ನದಿಯನ್ನು ಪ್ರವೇಶಿಸುತ್ತಾರೆ ಎಂದು ಇದೆ ಎಂಬ ನೆನಪು.
ನಂತರದ ಉದಾಹರಣೆಯನ್ನು ತೆಗೆದುಕೊಂಡರೆ, ಬಸವಣ್ಣನವರೂ ಕೂಡ ಮಲಪ್ರಭೆಯನ್ನು ಹೊಕ್ಕರು ಎಂದೇ ಐತಿಹ್ಯ.
-ಹಂಸಾನಂದಿ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ಲೋಓಓಓ, ಮಹೇಶ. ನೀನು "ದೇವರನ್ನ", "ಹೋಗು ಬಾ", ಅಂತೀಯೋ ಅಥವಾ "ಹೋಗಿ ಬನ್ನಿ" ಅಂತೀಯೋ ? "ಗಣೇಶ ಬಂದ, ಕಾಯಿ ಕಡುಬು ತಿಂದ..." ಎನ್ನುವಂತೆ ಈ "ದೇವರುಗಳಿಗೆ" ಬಹುವಚನ ಬೇಡಪ್ಪಾ.
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ಹೌದಪ್ಪ..!!
ನಿನಗೂ ಹೇಗೆ ಅನ್ಬೇಕಾ?
ಗುರುತು-ಪರಿಚಯವಿರದವರು,ದೂರದವರು, ನಮಗೆ ತಿಳಿಯದವರನ್ನು ಹೀಗೆ 'ಹೋಗಿ ಬನ್ನಿ' ಎನ್ನೊದು ಕನ್ನಡ-ನಡಾವಳಿ..
ಈಗ ಮಾತು ಎತ್ತೆತ್ತಲೋ ವೋಯ್ತದೆ.. ಅದಿಕ್ಕೆ ಅದು ಬ್ಯಾಡ...
ರಾಮ ಹೇಗೆ ಅಸುನೀಗಿದ್ದು ಹೇಳೋ ಸಾಕು, ಚನ್ನೀಲ!
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ಚನ್ನೀಲ ದಾರಿ ತಪ್ಪಿಸಬೇಡಲೇ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ರೀ ಸ್ವಾಮೀ ,
ಹುಷಾರು ,
೧. ದೇವರುಗಳು ಸಾಯೋದಿಲ್ಲ ; ಅವರುಗಳ ’ಅವತಾರ ಸಮಾಪ್ತಿ ’ ಆಗುತ್ತದೆ .
೨. ಬಸವಣ್ಣನವರು ಕೂಡಲಸಂಗಮನಲ್ಲಿ ’ಐಕ್ಯ’ವಾದರು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ಶ್ರೀಕಾಂತ ಬುದ್ದಿ..
ನಾನು ಬರೆದು ಕೇಳಿದ್ದನ್ನು ಇನ್ನೊಮ್ಮೆ ನೋಡಿ...
ವಾಲ್ಮೀಕಿ ಬರೆದಿರುವ ಬರೆವಣಿಗೆಯಲ್ಲಿರುವ ಶ್ರೀರಾಮಚಂದ್ರ ಎಂತು ಸತ್ತರು ಎಂದು ಇದೆ...
ನಾನು ಕಡವಳವಂದು ಅನ್ನಿಸಿಕೊಳ್ಳುವ ಶ್ರೀರಾಮದ ಬಗ್ಗೆ ಕೇಳಿಲ್ಲ, ಅಂತ ಮಾತುಬೆಳೆಸಬೋದು... ಆದ್ರೆ ಅದು ಬೇಡ...
ದಯವಿಟ್ಟು ವಾಲ್ಮೀಕಿ ಶ್ರೀರಾಮರನ್ನು ಹೇಗಿ ಕೊನೆಗೊಳಿಸಿದ್ದಾರೆ ಎಂದು ಗೊತ್ತಿದ್ದರೆ ತಿಳಿಸಿರಿ..
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ನನಗೆ ತಿಳಿದ ಪ್ರಕಾರ, ವಾಲ್ಮೀಕಿಯವರು "ಸತ್ತ" ಎಂದು ಬಳಸಿಲ್ಲ...ಸರಯೂ ನದಿಯಲ್ಲಿ ಲಕ್ಷ್ಮಣನೊಂದಿಗೆ ಸ್ವ-ಇಚ್ಛೆಯಿಂದ ನಡೆದು ಹೋದ ಎಂಬಲ್ಲಿಗೆ ರಾಮಾವತಾರದ ಸಮಾಪ್ತಿ...
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ನನ್ನಿ!
ಆದ್ರೆ.. ಹಲವು ರಾಮಾಯಣಗಳೂ ಇದಕ್ಕೆ ಮುನ್ನವೇ ಮುಗಿಯುವುದು ಅಲ್ವ?
ಉತ್ತರಕಾಂಡ( ಲವಕುಶರ ಕತೆ ) ಎಲ್ಲ ರಾಮಾಯಣಗಳಲ್ಲೂ ಇದ್ಯಾ?
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ರಾಮಯಣದ ಕಥೆ ಶುರುವಾಗುವುದೇ ಲವ-ಕುಶರಿಂದ...
ಲವ-ಕುಶರು ರಾಮನ ಮುಂದೇ ರಾಮ ಕಥೆಯನ್ನು ಹಾಡುವರು...
ಇಡೀ ರಾಮಾಯಣ ಒಂದು Flashback
ವಾಲ್ಮೀಕಿಯವರು ರಾಮನ ಅಂತ್ಯವನ್ನು ಯಾವ ಭಾಗದಲ್ಲಿ ಬರೆದಿರುವರೋ ನನಗೆ ತಿಳಿಯದು...
ತಿಳಿದವರು ತಿಳಿಸಿ
--ಶ್ರೀ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ನನಗೆ ಬೇರೆ ರಾಮಯಣದ ಬಗ್ಗೆ ಹೆಚ್ಚು ತಿಳಿದಿಲ್ಲ...
ಪ್ರೊ.ನಾರಾಯಣಾಚಾರ್ಯರ ಪ್ರವಚನಗಳಿಂದ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿರುವೆ...
--ಶ್ರೀ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ಮಹೇಶರೆ,
ವಾಲ್ಮೀಕಿ ರಾಮಾಯಣದ ಪೂರ್ಣ ಪಾಠ ಇಲ್ಲಿದೆ.
http://www.sanskritdocuments.org/mirrors/ramayana/valmiki.htm
ಸಂಸ್ಕೃತ ಚೆನ್ನಾಗಿ ತಿಳಿದಿರುವ ನಿಮಗೆ ಹೆಚ್ಚಿನ ವಿವರ ಅಗತ್ಯವಿಲ್ಲ. ಉತ್ತರ ಕಾಂಡದ ನೂರನೇ ಅಧ್ಯಾಯದಲ್ಲಿ ಇಪ್ಪತ್ತೈದು ಶ್ಲೋಕಗಳಲ್ಲಿ ರಾಮನ ಸ್ವರ್ಗಾರೋಹಣವನ್ನು ವಿವರಿಸಲಾಗಿದೆ.
ಸಂಸ್ಕೃತದ ಪರಿಚಯ ಹೆಚ್ಚಿಲ್ಲದವರಿಗೆ ಇಲ್ಲಿ ಸ್ವಲ್ಪ ವಿವರಗಳನ್ನು ಕೊಡುತ್ತಿದ್ದೇನೆ
ಶ್ಲೋಕ ೧:
ಅಧ್ಯರ್ಧಯೋಜನಂ ಗತ್ಚಾ ನದೀ ಪಶ್ಚಾನ್ಮುಖಾಶ್ರಿತಾಮ್
ಸರಯೂಂ ಪುಣ್ಯಸಲಿಲಾಂ ದದರ್ಶ ರಘುನಂದನಃ
ಅರ್ಧ ಯೋಜನ ನಡೆದು, ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ (?) ಪುಣ್ಯತೀರ್ಥವಾದ ಸರಯೂ ನದಿಯನ್ನು ರಾಮನು ಕಂಡನು
ಶ್ಲೋಕ ೫:
ಸರಯೂ ಸಲಿಲಂ ರಾಮಃ ಪದ್ಭ್ಯಾಂ ಸ್ಮುಪಚಕ್ರಮೇ
ಸರಯೂ ನದಿಯ ನೀರನ್ನು ರಾಮನು ತನ್ನ ಪಾದಗಳಿಂದ ಹೊಕ್ಕನು
ಶ್ಲೋಕ ೬:
ತತಃ ಪಿತಾಮಹೋ ವಾಣೀಮಂತರಿಕ್ಷಾದಭಾಷತ
ಆಗಚ್ಚ ವಿಷ್ಣೋ ಭದ್ರಂ ತೇ ದಿಷ್ಟ್ಯಾ ಪ್ರಾಪ್ತೋಸಿ ರಾಘವ
ನಂತರ ಪೂರ್ವಜರ ಮಾತು ಆಕಾಶದಿಂದ ಕೇಳಿಬಂತು: ಓ ರಾಘವನೇ , ಮಂಗಳವಾಗಲಿ ನಿನಗೆ. ನೀನು ನಿನ್ನ (ವಿಷ್ಣು) ಲೋಕವನ್ನು ಹೊಂದಲಿರುವೆ(?)
ಶ್ಲೋಕ ೭:
ಭ್ರಾತೃಭಿಃ ಸಹ ದೇವಾಭೈಃ ಪ್ರವಿಶಸ್ವ ಸ್ವಕಾಂ ತನುಮ್
ವೈಷ್ಣವೀಂ ತಾಂ ಮಹಾತೇಜಸ್ತದಾಕಾಶಂ ಸನಾತನಂ
ತಮ್ಮಂದಿರೊಡನೆ, ನೀನು ನಿನ್ನದೇ ಆದ ಆ ಕಾಶದಷ್ಟು ಪ್ರಕಾಶಮಾನವಾದ ಮಹಾ ತೇಜಸ್ಸಿನ ತನುವನ್ನು ಪ್ರವೇಶಿಸು.
ಶ್ಲ್ಲೋಕ ೧೦:
ಪಿತಾಮಹ ವಚಃ ಶ್ರುತ್ವಾ ವಿನಿಶ್ಚಿತ್ಯ ಮಹಾಮತಿಃ
ವಿವೇಶ ವೈಷ್ಣವಂ ತೇಜಃ ಸಶರೀರಃ ಸಹಾನುಜಃ
ತನ್ನ ಪೂರ್ವಜರ (ಅಜ್ಜನ?) ಮಾತನ್ನು ಕೇಳಿ, ಆ ಧೀಮಂತನು ತನ್ನ ತಮ್ಮಂದಿರೊಡನೆ, ದೇಹದ ಸಮೇತ ವೈಷ್ಣವ ತೇಜಸ್ಸಿನನ್ನಿ ಒಂದಾಗಿ ಸೇರಿ ಹೋದನು.
-ಹಂಸಾನಂದಿ
-ಹಂಸಾನಂದಿ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ಬಲು ನೆರವಾಯ್ತು...
ಓದ್ತೀನಿ...
ನನ್ನಿ ಹಂಸಾನಂದಿಯವರಿಗೆ
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ಸಾಯೋದು ಅ೦ದರೇನು ??
ಉ: ಶ್ರೀರಾಮಚಂದ್ರ ಹೇಗೆ ಸತ್ತರು?
ನ೦ಗೊತ್ತು ! ರಾಮ ಸೀತಾ ವಿರಹದಿ೦ದ ಆತ್ತೂ ಅತ್ತೂ ಉಸಿರುಕಟ್ಟಿ ಪ್ರಾಣ ಬಿಟ್ಟನು.