~
ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಶಂಕರಬಟ್ಟರ ಬರವಣಿಗೆಯನ್ನು ಮೆಚ್ಚುವವರಿಗೆ ಸಿಹಿ ಸುದ್ದಿ. ಅವರ ಇನ್ನೊಂದು ಹೊಸ ಹೊತ್ತಿಗೆ 'ಕನ್ನಡ ನುಡಿ ನಡೆದು ಬಂದ ದಾರಿ'ಬಂದಿದೆ.
ಏನಪ್ಪ ಇದರ ಮೇಲ್ಮೆ ಅಂದರೆ ಇದು ಅವರು ಹೊಸದಾಗಿ ನೆಗಳಿರುವ ಕನ್ನಡದ ಬರಹದಲ್ಲಿ ಈ ಹೊತ್ತಿಗೆಯನ್ನು ಬರೆಯಲಾಗಿದೆ.
೧) ಯಾವುದೇ ಮಹಾಪ್ರಾಣ ಇಲ್ಲ
೨) ಅರ್ಕ ವತ್ತು ಇದರಲ್ಲಿ ಇಲ್ಲ
೩) 'ಕೃಷ್ಣ' ಅಲ್ಲ 'ಕ್ರುಶ್ಣ'
೪) 'ಮೈಸೂರು'ಅಲ್ಲ 'ಮಯ್ಸೂರು'
ಹೀಗೆ ಕನ್ನಡಿಗರ ಬಾಯಲ್ಲಿ ಯಾವ ಬಗೆಯಲ್ಲಿ ಕನ್ನಡ ಇದೆ ಅದೇ ಬಗೆಯಲ್ಲಿ ಬರೆಯಲಾಗಿದೆ. ನಿಜಕ್ಕೂ ಶಂಕರಬಟ್ಟರನ್ನು ಮೆಚ್ಚಲೇಬೇಕು.
ಅವರ ಹೊತ್ತಿಗೆಗಳಿಂದ ತಮ್ಮ ಅರಿಮೆಯನ್ನು ಹೆಚ್ಚಿಸಿಕೊಂಡಿರುವವರಲ್ಲಿ ನಾನು ಒಬ್ಬನು.

- Login or register to post comments
- 1057 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಈ ಹೊತ್ತುಗೆ ಸಪನದಲ್ಲಿ ಇಂನೂ ಬಂದಿಲ್ಲ...
ನೆಂನೆ ಅಂಕಿತ ಕದ-ತೆರೆದಿದ್ದಿಲ್ಲ.
ಕೃಷ್ಣ = ಕ್ರಿಶ್ಣ, ನಾವು ಕೃ ಅನ್ನು ಕ್ರು ಅನ್ನೋದಿಲ್ಲ ಅಲ್ವಾ!! ನೋಡೋಣ.
ಮೃಗ = ಮಿಗ
ಋಷಿ = ರಿಸಿ
ಹೀಗೆ ನೋಡಿದ್ರೆ, ಕೃಷ್ಣ = ಕಿಣ್ಣ/ಕಣ್ಣ ಆಗಬೇಕು.
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ನಾವು ಕೃಷ್ಣಂಗೆ 'ಕಿಟ್ಟಿ' ಅಂತಾನೆ ಹೇಳದು.
ಕಿಲಾಡಿ ಕಿಟ್ಟು, ಕಿಟ್ಟು-ಪುಟ್ಟು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಅಂಕಿತಕ್ಕೆ ದೂರುಲಿ ಮಾಡಿ ನೋಡಿದೆ ... ಅಲ್ಲೂ ಇಲ್ಲ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ದೂರುಲಿ ಅಲ್ಲ...
ದೂರದುಲಿ
( ಸುನಿಲಂನ ನೆನೆದು )
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ನನ್ನಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಈ ಹೊತ್ತಗೆ ಚೆನ್ನಾಗಿ ಓಡುತ್ತಿರುವ ಹೊತ್ತಗೆಗಳಲ್ಲಿ ೨ನೇ ಇಕ್ಕೆ ಪಡೆದಿದೆ
http://vijaykarnatakaepaper.com/pdf/2007/11/04/20071104a_027101004.jpg
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಈ ಹೊತ್ತಗೆಯನ್ನು ನಾನು ಓದಿಲ್ಲ, ಆದರೆ ಡಿ.ಎನ್. ಶಂಕರಭಟ್ಟರ "ಭಾಷೆಯ ಬಗೆಗೆ ನೀವೇನು ಬಲ್ಲಿರಿ" ಓದಿದ್ದೇನೆ. ಮು೦ಬದಿಯಲ್ಲಿ ಹೀಗೆ ಅಚ್ಚಾಗಿತ್ತು...'ತೃತೀಯ ಪರಿಷ್ಕೃತ ಮುದ್ರಣ'.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಶಹಬ್ಬಾಸ್ ! ಭಾಪು , ಭಳಿರೆ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಅಣ್ಣ
ನಾನಿದ್ನೋದಿ ಮುಗಿಸಾಯ್ತು... ಚನ್ನಾಗಿದೆ....
ನಮ್ಮ ಕನ್ನಡದೊಳನುಡಿಗಳು ಹೇಗೇಗೆ ಬೇರೆ ಬೇರೆ ಬಗೆಗಳಲ್ಲಲಿಗಳನ್ನು ತೋರುವುವು..
ಹೇಗೆ ಪೞಗನ್ನಡದಿಂದ ಹೊಸಗನ್ನಡಕ್ಕೆ ಮಾರ್ಪುಗಳಾಗಿರುವುವು...
ತಮಿಳು-ತೆಲುಗು-ತುಳುಗಳ ಕೂಡೇ ಹೋಲಿಕೆ
ಇವೆಲ್ಲ ಬಲು ಚನ್ನಾಗಿದೆ....
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ನಾನು ಈ ಹೊತ್ತಿಗೆ ಓದಿದೆ. ಕನ್ನಡದ ತುಂಬಾ ತಿಳುವಳಿಕೆ ಮೂಡಿತು.
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಕೃಷ್ಣ ನನ್ನು ಕ್ರಿಶ್ಣ ಆಗಬೇಕಾಗಿತ್ತು ಎಂಬುದಾಗಿ ಭಾವಿಸುವ ಮಹೇಶರು ಕ್ರುಶ್ಣಾ ಕುಶ್ಣಾ ಕ್ರಿಸ್ನಾ ಕ್ರಿಸ್ಣಾ ಕ್ರಿಸ್ನಾ ಕುಟ್ಣಾ ಕಿಟ್ಟಾ ಕಿಟ್ಟೀ ಮುಂತಾದವುಗಳ ಬಗ್ಗೆ ಏಕೆ ಮಾತನಾಡಿಲ್ಲವೋ ಅರ್ಥವಾಗುತ್ತಿಲ್ಲ.
ನನಗೆ ಅರ್ಥವಾದಂತೆ ಕೆಳಗಿನ ಲಿಂಕಿನಲ್ಲಿ ಬರೆದಿದ್ದೇನೆ
http://sampada.net/blog/ishwarshastri/06/10/2008/12394
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಆ ಲಿಂಕಂನು ಓಡಿದೆ
ನಿಮಗೆ ಸಂಗತಿ ಸರಿಯಾಗಿ ಅರಿವಾಗಿಲ್ಲ
ದಿಟವಾಗಲು ಆ ಹೊತ್ತಗೆಯನ್ನು ಓದಲಾಯಿತೆ?
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
http://sampada.net/blog/ishwarshastri/07/09/2008/11509
ಮಹೇಶರವರೇ,
ನನ್ನ ತಪ್ಪುಗಳನ್ನು ಕಂಡುಹಿಡಿಯಲಿಕ್ಕೆ ನನ್ನ ಈ ಮೇಗಣ ಬ್ಲಾಗಿಗೆ ಭೇಟಿಕೊಟ್ಟದ್ದಕ್ಕ್ಕಾಗಿ ಧನ್ಯವಾದಗಳು. ನಿಮ್ಮ ನಗು ಅನವಶ್ಯಕವಾಗಿತ್ತು. ಚರ್ಚೆಯು ವಿಷಯಗತವಾಗದೇ ವ್ಯಕ್ತಿಗತವಾಗಿದೆ. ನಾನು ಯಾವರೀತಿಯಾಗಿ ಬರೆಯಬಾರದೆಂದು ಹೇಳಿದ್ದೆನೋ. ಅದನ್ನೇ ತೋರಿಸಿ ನನ್ನ ವಿರುದ್ಧ ನಗೆಯಾಡಿದ್ದೀರಿ. ನಾನು ಎಂಟನ್ನು ಯೆಂಟು ಎಂಬುದಾಗಿ ಬರೆಯಬಾರದೆಂಬುದನ್ನೇ ಹೇಳುತ್ತೇನೆ.
ಅದು ನಾನು ಬರೆದ ಪತ್ರಿಕೆಯಾಗಿರಲಿಲ್ಲ. ನನ್ನ ಬರವಣಿಗೆಯಲ್ಲೂ ನನೆಗೆ ಹಾಗೆ ತಪ್ಪಾಗಿ ಬರೆಯಲು ಅಧಿಕಾರವಿದೆ. ಏಕೆಂದರೆ ನಾನು ಕನ್ನಡ ಪಂಡಿತನಲ್ಲ. ನಾನು ಹೇಳುತ್ತಿರುವುದು ಪಂಡಿತರು ಮಾಡುವ ಅನವಶ್ಯಕ ಬದಲಾವಣೆಗಳ ಬಗೆಗೆ. ಎಂಟನು ಹೇಳೂವಾಗ ಯೆಂಟು ಎಂಬುದಾಗಿ ಹೇಳಿದರೂ ಬರವಣಿಗೆಯಲ್ಲಿ ಅದು ಯೆಂಟು ಆಗಬಾರದು. ಅದು ಎಂಟು ಆಗಲೇಬೇಕು. - ಇದೇ ನನ್ನ ವಾದ.
ನನ್ನ ಮೇಲೆ ದಾಳಿಮಾಡಲು ಇದು ಸಾಕೆಂದು ಹರಾಬಿರಿಯಲ್ಲಿ ನೀವು ನಿರ್ಧರಿಸಿದ್ದೀರಲ್ಲವೇ?
( ಅದನ್ನು ಬರವಣಿಗೆಯಲ್ಲೂ ತರಬೇಕಾಗಿತ್ತು ಅಂತೀರಾ?)
ಆ ಪತ್ರಿಕೆ ಬರೆದವರ ಮೇಲೆ ನಿಮ್ಮ ಕ್ಷಮೆ ಇರಲಿ. ಏಕೆಂದರೆ ಅದನ್ನು ಬರೆದವರು ಪಂಡಿತರಲ್ಲ. ಹಳ್ಳಿಯ ಸಾಮಾನ್ಯ ಜನರು. ಅವರು ತಪ್ಪನ್ನು ಮಾಡುವುದು ಸಹಜ. ಆದರೆ, ನೀವೂ ಯಾಕೆ ತಪ್ಪನ್ನು ಮಾಡಿದಿರಿ? ಪಾಪ, ಅವರು ಎಂಟನ್ನು ಎಂಟು ಎಂದೇ ಬರೆದಾಗ್ಯೂ ನೀವು ಅದನ್ನು ಯೆಂಟು ಎಂದು ಏಕೆ ಓದಿದಿರಿ? ಸರಿಯಾಗಿ ಇನ್ನೊಮ್ಮೆ ಓದಿ.
ಅವರೂ ತಪ್ಪು ಮಾಡಿದ್ದಾರೆ. ಅವರು ಎಂಟು ಎಂದು ಬರೆಯುವಲ್ಲಿ ಏ ಎಂದು ಬರೆದಿದ್ದಾರೆ. ಅದಕ್ಕೆ ಕಾರಣವೇನೆಂದರೆ ಮರಾಠಿ ಪ್ರಭಾವದ ಆ ಭಾಗದ ಜನರು ಬಹಳ ಕಡೆಗೆ ದೀರ್ಘಾಕ್ಷರಗಳನ್ನು ಬಳಸುವ ವಾಡಿಕೆ ಹೊಂದಿರುತ್ತಾರೆ.. ಅವರು ಎಂಟನ್ನು ಏಂಟು ಎಂದರೆ ನನದೇನು ಅಭ್ಯಂತರವಿಲ್ಲ. ಆದರೆ ಅದು ಬರೆವಣಿಗೆಗೆ ಬಂದಾಗ ಎಂಟರ ಬದಲು ಬೇರೇ ಇನ್ನೇನೂ ಆಗಬಾರದು. (ಟು ಎಂಬ ಅಕ್ಷರವು ದು ಎಂದು ಮುದ್ರಿತ ಗೊಂಡಿದೆ. ಇದು ಮುದ್ರಾರಾಕ್ಷಸನ ಹಾವಳಿ. ಹುಡುಕುತ್ತ ಹೋದರೆ ಇನ್ನೂ ಕೆಲವು ಮುದ್ರಾರಾಕ್ಷಸನ ಹಾವಳಿ ಸಿಗುತ್ತದೆ.)
ಇನ್ನೋಂದ್ಚೂರು;- ಮರಾಠಿ ಸೇರಿದಂತೆ ಉತ್ತರ ಭಾರತ ಪ್ರದೇಶಗಳಲ್ಲಿ ವೈದ್ಯರು ರೋಗಿಗಳಿಗೆ;- ’ಮಲ ಮೂತ್ರಗಳನ್ನು ಟೆಸ್ಟ್ ಮಾಡಿಕೊಂಡು ಬರ್ರಿ’ ಎಂದು ಹೇಳುವು ಬದಲು ಮಲ ಮೂತ್ರಗಳನ್ನು ಟೇಸ್ಟ್ ಮಾಡಿಕೊಂಡು ಬನ್ನಿ ಎಂದು ಹೇಳುತ್ತಾರೆ! ಹೆದರಬೇಡಿ ಬರೆವಣಿಗೆಯಲ್ಲಿ ಇಲ್ಲ.
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
"ಏಕೆಂದರೆ ಅದನ್ನು ಬರೆದವರು ಪಂಡಿತರಲ್ಲ. ಹಳ್ಳಿಯ ಸಾಮಾನ್ಯ ಜನರು"
ಇದೇ .. ಬರವಣಿಗೆ ಪಂಡಿತರ ಸೊತ್ತಾಗಿದೆ ಇಂದು ಅದು, ಹಳ್ಳಿಗರ ಸಾಮಾನ್ಯರ ಸೊತ್ತಾಗಬೇಕಾದರೆ.. ಆಡುಮಾತಿಗೆ ಹತ್ತಿರವಿರಬೇಕು ಬರಹ...
ಒಂದು ಊರಲ್ಲಿ ಯೆಂಟು ಎಂದು ಉಲಿದರೆ ಅವರು ಯೆಂಟು ಎಂದು ಬರೆಯೋದೇ ಸರಿ..
ಇದು ನಮ್ ಮಾತು...
ಮತ್ತೇ ಹೇಳಿದನ್ನೇ ಹೇಳಿಸಿಕೊಳ್ಳಬೇಡಿ..
ಕಂನಡದ ಯಾವ ಒರೆಯಲ್ಲೂ ಮಹಾಪ್ರಾಣ, ಷ, ಋ, ಅಃ ಇಲ್ಲ.. ಸಾಮಾನ್ಯರು ಸಂಸ್ಕ್ರುತದ ಬಳಕೆ ಮಾಡಲ್ಲ.. !!
ನೀವು ವಿಶಯದ ಬಗ್ಗೆ ಮಾತಾಡದೇ ’beating around the bush' ಮಾಡುತ್ತಿದ್ದೀರಿ.. ಅದೇ ಕಿರಿಕಿರಿ.
ಉತ್ತರ ಬಾರತೀಯರ, ಮರಾಟಿಗಳ ಹರಿಕತೆ ನಮಗೆ ಬೇಕಿಲ್ಲ. ಏಕೆಂದರೆ ಕಂನಡ ಇಂಡೋ-ಆರ್ಯನ್ ನುಡಿಯಲ್ಲ.. ಅದೊಂದು ತೆನ್ನುಡಿ/ದ್ರವೀಡಿಯನ್ ನುಡಿ. ಇವುಗಳ ಬಗ್ಗೆ ಹೆಚ್ಚು ತಿಳಿದು ಇಲ್ಲವೇ ಶಂಕರಬಟ್ಟರ ಹೊತ್ತಗೆಗಳನ್ನು ಸರಿಯಾಗಿ ದಿಟವಾಗಿ ಪೂರ್ತಿಯಾಗಿ ಓದಿ ನುಡಿಯಿರಿ......