ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ತುಂಗೆ ಮತ್ತು ಕನ್ನಡ ಸಾಹಿತ್ಯ

October 28, 2007 - 10:52pm — Sunil Jayaprakash

ಪ್ರಕೃತಿ ಎಂದಾಕ್ಷಣ ನಮ್ಮ ಕಣ್ಣಮುಂದೆ ನಿಲ್ಲುವುದು ಹಸಿರು. ಹಾಗು, ಇದರ ಸುತ್ತವೇ ಆ ಹಚ್ಚ ಹಸಿರಿಗೆ ಕಾರಣವಾದ ಸೂರ್ಯ, ನೀರು, ಮಣ್ಣಿನ ವಾಸನೆ, ಮಳೆ, ಕಾಡು..ಹೀಗೆ ಏನೇನೆಲ್ಲಾ ನೆನಪಾಗುತ್ತದೆ ಅಲ್ಲವೇ. ಪ್ರಕೃತಿ ಮತ್ತು ಕಲೆಗೆ ಊಕಾಲದಿಂದಲೂ ಸಂಗ್ಯಾ ಬಾಳ್ಯ ರೀತಿಯ ಬೆಸುಗೆ. ನಿಸರ್ಗ ನಮಗೆ ಕಾಲಕಾಲಕ್ಕೂ ಅವಕಾಶಗಳನ್ನು ನೀಡುತ್ತಾ ಸಾಗಿದರೆ, ಮನುಷ್ಯ ಆಯಾ ಸೌಲಭ್ಯಗಳನ್ನು ಬಳಸುತ್ತಾ ಕಲಾತ್ಮಕೆಯನ್ನು ರೂಪಿಸಿಕೊಳ್ಳುತ್ತಿರುತ್ತಾನೆ. ನಮ್ಮ ಬೇಲೂರು, ಹಳೇಬೀಡು, ಹಂಪೆಯ ಇತಿಹಾಸ, ಸೋಮನಾಥಪುರ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಅಜಂತಾ, ಎಲ್ಲೋರಾ ಇವೆಲ್ಲವನ್ನೂ ನೋಡಿದರೆ ನಾವು ಕನ್ನಡಿಗರು ಎಂತಹ ಉತ್ಕೃಷ್ಟ ನಾಗರೀಕತೆಯ ಪ್ರತಿನಿಧಿಗಳು ಎಂಬುದನ್ನು ಮನಗಾಣುತ್ತೇವೆ. ಈ ಹಿನ್ನೆಲೆಯೊಂದಿಗೆ ಪ್ರಕೃತಿಗೆ ನನ್ನಿಗಳನ್ನು ತಿಳಿಸುತ್ತಾ, "ಕನ್ನಡ ಸಂಸ್ಕೃತಿ ಹಾಗು ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ವಿಚಾರವನ್ನು ಎಲ್ಲರೂ ಚರ್ಚಿಸೋಣ, ಅದುವೇ "ತುಂಗೆ ಮತ್ತು ಕನ್ನಡ ಸಾಹಿತ್ಯ".

ನಾವು ಕನ್ನಡಿಗರು ಒಂದು ವಿಷಯದಲ್ಲಿ ನಿಜಕ್ಕೂ ಸ್ವಲ್ಪ ಹೆಚ್ಚಾಗಿಯೇ ಪುಣ್ಯ ಮಾಡಿದ್ದೇವೆ. ಅದು ನಮ್ಮಲ್ಲಿನ ನದಿಗಳು. ಎಲ್ಲ ಕನ್ನಡಿಗರೂ ಹೆಮ್ಮೆ ಪಡಬೇಕಾದ ಪುಸ್ತಕ "ಕವಿರಾಜಮಾರ್ಗಂ"ದ "ಕಾವೇರಿಯಿಂದಮ್ ಆ ಗೋದಾವರಂ ಇರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಳಯ ವಿಲೀನ ವಿಷಯ ವಿಶದ ವಿಶೇಷಂ" ಪದ್ಯ ನಿಜಕ್ಕೂ ರೋಮಾಂಚನ ಉಂಟುಮಾಡುತ್ತಾ, ನಮ್ಮನ್ನು ಹಿನ್ನೆಪ್ಪಾಗಿಸದೆ(nostalgic ಆಗಿಸದೆ) ಎಂದೆಂದಿಗೂ ನಮ್ಮ ಗಟ್ಟಿತನವನ್ನು ಸಾಬೀತು ಪಡಿಸುತ್ತಲೇ ಇರುತ್ತದೆ. ಕರ್ನಾಟಕದಲ್ಲಿ ಕಾವೇರಿಯ ಹಾಗೆ ಇರುವ ಮತ್ತೊಂದು ಜೀವನದಿಯೆಂದರೆ, ತುಂಗೆ. ವಿಜಯನಗರದ ವೀರಪುತ್ರ ಚಿತ್ರದ "ಅಪಾರ ಕೀರ್ತಿಗಳಿಸಿ ಮೆರೆವ ಭವ್ಯ ನಾಡಿದು, ಕರ್ನಾಟವಿದುವೆ, ನಿತ್ಯ ಶಿಲ್ಪ ಕಲೆಯ ಬೀಡಿದು" ಹಾಡು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಈ ಹಾಡಿನಲ್ಲಿ ಬರುವ ಒಂದು ಸಾಲು, "ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ, ಮಾನವನ ಪಾಪವನು ತೊಳೆಯ ಕಲ್ಪವಲ್ಲಿ" ನಿಜಕ್ಕೂ ಅರ್ಥಪೂರ್ಣವೆನಿಸುತ್ತೆ. ಕಾವೇರಿಯನ್ನೇನೋ ಕವಿಗಳು ಅದೆಷ್ಟು ಹಾಡಿ ಹೊಗಳಿರುವರೋ ಮಿತಿಯೇ ಇಲ್ಲ. ಆದರೆ ಇದೇ ರೀತಿ, ತುಂಗೆಯ ಪ್ರಸ್ತಾಪ ನಮ್ಮ ಸಾಹಿತ್ಯದಲ್ಲಿ (ಅಥವಾ ಬೇರೆ ಭಾಷೆಯ ಸಾಹಿತ್ಯದಲ್ಲಿ) ಎಲ್ಲೆಲ್ಲಿ ಹೇಗೆ ಆಗಿದೆ.

"ತುಂಗೆಯ ಪ್ರಸ್ತಾಪ ಸಾಹಿತ್ಯದಲ್ಲಿ, ಶಾಸನಗಳಲ್ಲಿ ಹೇಗೆ ಆಗಿದೆ" ಎಂಬುದರ ಬಗ್ಗೆ ಒಂದಷ್ಟು ಚರ್ಚಿಸುತ್ತಾ ಈ ವಾರದ ಕೆಲಸವನ್ನು ನೆಗಳ್ಚೋಣ.

‹ ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 732 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 29, 2007 - 8:17am — mahesha

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

mahesha's picture

೧)ಶ್ರುಂಗೇರಿ ಶಾರದೆಯ ಹಾಡುಗಳಲ್ಲಿ ತುಂಗೆ ಬಂದಿರ್ತಾಳೆ.

೨)
ವಿಶ್ವವಿನೂತನ ವಿದ್ಯಾ ಚೇತನ
ಸರ್ವ ಹ್ರುದಯ ಸಂಸ್ಕಾರಿ ಜಯ ಬಾರತಿ...
...
ಕ್ರುಶ್ಣೇ ತುಂಗೇ ಕಾವೇರಿ, ಪವಿತ್ರಿತ ತೀರ ಮನೋಹಾರಿ..(?)
( ಈ ಹಾಡಲ್ಲಿ ಬಂದಿದೆ ಅಲ್ವ? )

೩)ಜಯ ಬಾರತ ಜನನಿಯ ತನುಜಾತೆ... ಇದರಲ್ಲಿ

ಕ್ರುಶ್ಣ ಶರಾವತಿ ತುಂಗಾ
ಕಾವೇರಿಯ.....

೪) ನನ್ನ ಬಳ್ಳಾರಿ ಕೆಳೆಯ "ಗಂಗೇ ಚ ಯಮುನೇ " ಶ್ಲೋಕವನ್ನು ಹೀಗೆ ಹೇಳ್ತಾನೆ.

ಗಂಗೇ ಚ ಯಮುನೇ ಚೈವ ಗೋದವರೀ ಸರಸ್ವತಿ
ನರ್ಮದೇ ತುಂಗೇ ಕಾವೇರೀ ಪವಿತ್ರಂ ಸನ್ನಿದ್ಧಿಂ ಕುರು..... ( ಸಿಂಧು ಇಂದು ಪಾಕಿಸ್ತಾನಕ್ಕೆ ಹೋದುದಕ್ಕೆ ಇರಬೋದು Smiling )

ಬೇಕಾದಶ್ಟಿವೆ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 30, 2007 - 1:54am — poornimas

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

poornimas's picture

ನನ್ನ ನೆನಪಿಗೆ ಬಂದಿದ್ದು ಇಷ್ಟು...

೧> " ಗಂಗಾ ಸ್ನಾನ, ತುಂಗಾ ಪಾನ" ಅನ್ನೋ ಗಾದೆ.

೨> "ಜೋಗದ ಸಿರಿಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ......" -- ನಿಸಾರ್ ಅಹಮದ್

೩> "ತುಂಗಾ ತೀರದ ಬಲಗಡೆಯಲ್ಲಿ, ಇದ್ದುದ್ದೊಂದು ಬೊಮ್ಮನಹಳ್ಳಿ....." -- ಕುವೆಂಪು

೪> "ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ....ಗಿರಿಸಿರಿ ಬನ ಸಂಚಾರಿಣಿ ತುಂಗಾಜಲ ನೀಲೆ....." -- ಸಾ.ಶಿ.ಮರುಳಯ್ಯ

೫> "ತುಂಗಾತೀರ ವಿರಾಜಂ ಭಜಮನ, ರಾಘವೇಂದ್ರ ಗುರುರಾಜಂ ಭಜಮನ" --- ಯಾರು ಬರೆದದ್ದು ಗೊತ್ತಿಲ್ಲ.

೬> "ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ...." -ದಾಸವಾಣಿಯಲ್ಲಿ ಭೀಮಸೇನ ಜೋಶಿಯವರು ಹಾಡಿರೋದು.

೭> "ಧರಣಿ ಮಂಡಲ ಮಧ್ಯದೊಳಗೆ... ಗಂಗೆ ಬಾರೆ ಗೌರಿ ಬಾರೆ, ತುಂಗಭದ್ರೆ......" ---ಗೋವಿನ ಹಾಡು

೮> "ಗಂಗೆ ಬಾರೆ, ತುಂಗೆ ಬಾರೆ.. ಬಾರೆ ನೀರೇ.. ದಾಹ ತೀರೇ..." ---- ಚಲನಚಿತ್ರದ ಹಾಡು

೯> "ತುಂಗ ಭದ್ರ" ಹೆಸರಿನ ಒಂದು ಕಥೆ/ಕಾದಂಬರಿ ಸುಮಾರು ೧೮/೨೦ ವರ್ಷದ ಕೆಳಗೆ ಪದವಿ ಪಥ್ಯವಾಗಿತ್ತು. ನನ್ನ ಚಿಕ್ಕಮ್ಮನ ಹತ್ತಿರ ಇದ್ದ ನೆನಪು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 30, 2007 - 2:05am — poornimas

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

poornimas's picture

ತುಂಗಭದ್ರ ಬರೆದಿರೋದು ಎಂ.ಕೆ.ಇಂದಿರಾ ಇರಬಹುದು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 30, 2007 - 9:32am — mahesha

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

mahesha's picture

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 10:57pm — Sunil Jayaprakash

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

Sunil Jayaprakash's picture

ತಡವಾಗಿ ಟಿಪ್ಪಣಿ ಸೇರಿಸುತ್ತಿದ್ದೇನೆ. ಎಂಥ ಡೇಟಾಬೇಸ್ ಇಟ್ಟಿದ್ದೀರಾ ರೀ ನೀವು ? ಹೆನ್ನನ್ನಿ (= ತುಂಬಾ ತುಂಬಾ, ತುಂಬಾ thanks) ಕಣ್ರೀ "ಪೂರ್ಣಿಮಾಸ್" ಅವರೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 11:18am — Sunil Jayaprakash

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

Sunil Jayaprakash's picture

ಈ ದಿನ ರಾಘವಾಂಕನ "ಹರೀಶ್ಚಂದ್ರ ಕಾವ್ಯ"ದಲ್ಲಿ ತುಂಗಭದ್ರೆಯ ಪ್ರಸ್ತಾಪವಿರುವ ಒಂದು ಪದ್ಯವು ಸಿಕ್ಕಿತು.

ಒಡಲನಾವರಿಸಿದಂಗೋಪಾಂಗಸಂಕಳದ
ನಡುವೆ ನಯನದ್ವಯಂಗಳು ಸಲೆ ನವಗ್ರಹದ
ನಡುವೆ ಚಂದ್ರಾದಿತ್ಯರುರ್ವಿಯಂ ಪರ್ವಿ ಪಸರಿಸಿದ ನಾನಾ ನದಿಗಳ
ನಡುವೆ ಸುರುಚಿರ ಗಂಗೆತುಂಗಭದ್ರೆಗಳೊಪ್ಪ
ವಡೆದು ಮಹಿಮೆಯೊಳೆಸೆವ ತೆಱದಿ ಸುರಪನ ಸಭೆಯ
ನೆಡೆಗೊಂಡ ಮುನಿಕುಲದ ನಡುವಿರ್ದರಧಿಕ ವಿಶ್ವಾಮಿತ್ರ ವಾಸಿಷ್ಠರು

ಕೊಸರು - ಹರೀಶ್ಚಂದ್ರ ಕಾವ್ಯದ ಮೇಲೆ ಒಂದು ಗಮಕ ಕಾರ್ಯಕ್ರಮ ರಾಗಿಗುಡ್ಡದಲ್ಲಿ ನಡೆಯಲಿದೆ ಮೇ, ೧೨ರಿಂದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 1:18pm — rameshbalaganchi

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

rameshbalaganchi's picture

ಲೇಖನ ಮತ್ತು ಪ್ರತಿಕ್ರಿಯೆಗಳೆರಡೂ ಚೆನ್ನಾಗಿವೆ. Smiling

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 9:31pm — hamsanandi

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

hamsanandi's picture

ಹಲವಾರು ಪುರಂದರ ದಾಸರ ರಚನೆಗಳಲ್ಲಿ ತುಂಗೆ, ತುಂಗಭದ್ರೆ ಕಾಣಿಸಿಕೊಳ್ಳುತ್ತಾಳೆ. ಕೆಲವು ಉದಾಹರಣೆಗಳನ್ನು ಕೊಡುವೆ.

೧. ಕಂಡೆನಾ ಕನಸಿನಲಿ ಗೋವಿಂದನ ಅನ್ನುವ ಪದದಲ್ಲಿ "ಮಂಗಳಮಯ ತುಂಗಭದ್ರದಿ ಮೆರೆವನ" ಎಂದು ಬಣ್ಣಿಸಲಾಗಿದೆ. ಹಾಗಾಗಿ ಈ ರಚನೆ (ಈಗ ದೇವಾಲಯದಲ್ಲಿ ಇಲ್ಲದ) ವಿಜಯ ವಿಟ್ಠಲನ ಮೂರುತಿಯ ಬಗ್ಗೆ ಇರಬೇಕೆಂದು ನನ್ನ ಅನಿಸಿಕೆ.

ಪೂರ್ತಿ ಹಾಡನ್ನು ಇಲ್ಲಿ ಓದಿ : http://purandara.wordpress.com/2008/04/22/

೨. ಎಲ್ಲಿ ಶ್ರೀ ತುಳಸಿಯ ವನವು, ಹರಿಯೆಂದು ಮನದಲಿ, ಎನ್ನುವ ರಚನೆಗಳಲ್ಲಿ ಗಂಗೆ ಯಮುನೆ ಕಾವೇರಿ ಮೊದಲಾದ ನದಿಗಳ ಸಾಲಿನಲ್ಲಿ ತುಂಗಭದ್ರೆಯೂ ಬರುತ್ತಾಳೆ.

೩. ತುಂಗೆ ಮಂಗಳ ತರಂಗೆ ಎನ್ನುವ ಇಡೀ ಹಾಡು ತುಂಗಭದ್ರೆಯ ಸ್ತುತಿಯಾಗಿದೆ.

೪. ಕಾರುಣ್ಯ ಮೂರುತಿಯೆ ಎಂದು ಮೊದಲಾಗುವ ಹಂಪೆಯ ವಿರೂಪಾಕ್ಷನ ಸ್ತುತಿತಾದ ದೇವರನಾಮದಲ್ಲಿಯೂ ತುಂಗಭದ್ರೆ ಕಾಣುತ್ತಾಳೆ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 11:05pm — Sunil Jayaprakash

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

Sunil Jayaprakash's picture

ಹಂಸಾನಂದಿಗಳೇ, ತುಂಬಾ ನನ್ನಿ, ಹಾಗಾದರೆ ಹರಿದಾಸರ ಪದಗಳಲ್ಲಿ ತುಂಗೆ ಮೈದುಂಬಿ ಹರಿದಿದ್ದಾಳೆ ಅಂದ ಹಾಗಾಯಿತು.

ಅಲ್ಲ ನನಗೊಂದು ಸಂದೇಹ, ತುಂಗೆಯ ದಡದಲ್ಲಿ ಅನೇಕ ಮಠಗಳು, ಪಟ್ಟಣಗಳು ಇದ್ದುವಲ್ಲವೇ. ಯಾಕೋ ನನಗೆ, ತುಂಗೆಯನ್ನು ಕನ್ನಡದವರು ಕಾವೇರಿಯನ್ನು ಕೊಂಡಾಡಿದಷ್ಟು, ಹೊತ್ತುಮೆರೆಸಿಲ್ಲ ಅಂತ ಅನ್ನಿಸೋಕ್ಕೆ ಶುರುವಾಗಿದೆ. ನನ್ನ ಅನಿಸಿಕೆ ತಪ್ಪಿರಲಿ ಅಂತ ಆಶಿಸುವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 10:53pm — Sunil Jayaprakash

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

Sunil Jayaprakash's picture

ನಲ್ನನ್ನಿ = ಸಂತೋಷ ಸಹಿತ ಧನ್ಯವಾದಗಳು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 11:57pm — Narayana

ಉ: ತುಂಗೆ ಮತ್ತು ಕನ್ನಡ ಸಾಹಿತ್ಯ

Narayana's picture

ಇನ್ನು ಸಾಹಿತ್ಯದಲ್ಲಿ ತುಂಗೆ.....

ಕುವೆಂಪು ಮಹಾ ಕಾದಂಬರಿಗಳಾದ ಕಾನೂರು ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು ಎರಡರಲ್ಲಿಯೂ ತುಂಗಾ ನದಿಯ ಪ್ರಸ್ತಾಪ ಮತ್ತೆ ಮತ್ತೆ ಬರುತ್ತದೆ. ಕಾನೂರು.... ಶುರುವಾಗುವುದೇ ತುಂಗಾನದಿಯ ರಾಮತೀರ್ಥದ ಕಲ್ಲುಸಾರದಿಂದ !!

ಅವರ ಜೀವನ ಚರಿತ್ರೆ ನೆನಪಿನ ದೋಣಿಯಲ್ಲಿ ಪುಸ್ತಕದಲ್ಲಿ ಬಾಲ್ಯದಲ್ಲಿ , ಒಮ್ಮೆ ಮೀನು ಹಿಡಿಯಲು ಹೋಗಿ , ಹೆಮ್ಮಲಗ ಎಂಬ ದುರ್ವಾಸನೆಯ ದೊಡ್ಡ ಮೀನು (?) ಹಿಡಿದು ಹಿರಿಯರಿಂದ ಬೈಸಿಕೊಂಡ ಸ್ವಾರಸ್ಯಕರ ಘಟನೆ ಇದೆ.

ಶಿವಮೊಗ್ಗದ ಕವಿಗಳ ಕಾವ್ಯದಲ್ಲಿ ತುಂಗೆ ಕಾಣುತ್ತಾಳೆ. ಉದಾ ನಿಸಾರ್‍ ಅಹಮದ್ ( ಮೇಲೆ ಹೇಳಿದಂತೆ...). ಇನ್ನು ಲಕ್ಷ್ಮೀನಾರಾಯಣಭಟ್ಟರ ಕವನ (ಶಿವಮೊಗ್ಗದ ಮಳೆ (?) ) ದಲ್ಲಿಯೂ ತುಂಗೆಯ ಪ್ರಸ್ತಾಪ ಇದ್ದಂತೆ ನೆನಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾವೇರಿಯಿಂದಮಾ ಗೋದಾವರಿ.....
  • ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?
  • ಸಾಹಿತ್ಯದಲ್ಲಿ ಎಷ್ಟು ವಿಧ?
  • ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ
  • ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡ ರಸಪ್ರಶ್ನೆ:೯
  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
ಇನ್ನಷ್ಟು


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator